Professional Documents
Culture Documents
ಶಾಂತಿ ಪರ್ವ
ಶಾಂತಿ ಪರ್ವ
ಈ ವಿಷಯದಲ್ಲಿ ನನ್ನ ಹೃದಯದಲ್ಲಿ ತೀವ್ರ ಸಂಶಯವುಂಟಾಗಿದೆ. ಕುರುನಂದನ! ಇಂಥಹ ಸ್ತ್ರೀಯರೊಂದಿಗೆ ನರರು ಹೇಗೆ
ಕೂಡುತ್ತಾರೆ? ಸ್ತ್ರೀಯರು ಎಂಥಹ ಪುರುಷರಲ್ಲಿ ಅನುರಕ್ತರೂ ಅಥವಾ ಪುನಃ ವಿರಕ್ತರೂ ಆಗುತ್ತಾರೆ?
ಪುರುಷವ್ಯಾಘ್ರ! ಯೌವನದಿಂದ ಉನ್ಮತ್ತಳಾಗಿರುವ ಸ್ತ್ರೀಯನ್ನು ಪುರುಷನು ಹೇಗೆ ತಾನೇ ರಕ್ಷಿಸಬಲ್ಲನು? ಇದನ್ನು ನನಗೆ
ಗೋವುಗಳು ಹೊಸ ಹುಲ್ಲುಗಳನ್ನು ಹೇಗೋ ಹಾಗೆ ಸ್ತ್ರೀಯರು ಹೊಸ ಹೊಸ ಪುರುಷರನ್ನು ಹುಡುಕುತ್ತಲೇ ಇರುತ್ತಾರೆ.
ಸ್ವೇಚ್ಛಾಚಾರೀ ಸ್ತ್ರೀಯರು ಹೀಗೆ ಪತಿಯನ್ನು ವಂಚಿಸುತ್ತಲೇ ಇರುತ್ತಾರೆ. ಅಂಥವರ ಕೈಗೆ ಸಿಲುಕಿದ ಪುರುಷನಿಗೆ
ಬಿಡುಗಡೆಯೆನ್ನುವುದೇ ಇರುವುದಿಲ್ಲ.
ಮಾಯಾವಿಗಳಾಗಿದ್ದ ಶಂಬರ, ನಮುಚಿ, ಬಲಿ, ಕುಂಭೀನಸ ಇವರು ತಿಳಿದಿದ್ದ ಎಲ್ಲ ಮಾಯೆಗಳನ್ನೂ ಸ್ತ್ರೀಯರು
ತಿಳಿದುಕೊಂಡಿರುತ್ತಾರೆ.
ಸ್ತ್ರೀಯರ ಬುದ್ಧಿಯು ಇಂತಹುದೇ ಎಂದು ನಿಷ್ಕರ್ಷಿಸಿ ಬೃಹಸ್ಪತಿ ಮೊದಲಾದ ಸತ್ಪುರುಷರು ಅದಕ್ಕೆ ತಕ್ಕುದಾದ
ನೀತಿಶಾಸ್ತ್ರಗಳನ್ನು ರಚಿಸಿರಬಹುದು.
೨೫೧
ಯುಧಿಷ್ಠಿರ ಉವಾಚ|
ಭೀಷ್ಮ ಉವಾಚ|
ಭೀಷ್ಮನು ಹೇಳಿದನು”: “ಸದಾಚಾರ, ಸ್ಮೃತಿ ಮತ್ತು ವೇದಗಳು – ಇವು ಮೂರು ಧರ್ಮದ ಲಕ್ಷಣಗಳು. ವಿದ್ವಾಂಸರು
ಅರ್ಥವೂ ಧರ್ಮದ ನಾಲ್ಕನೆಯ ಲಕ್ಷಣವೆಂದು ಹೇಳುತ್ತಾರೆ.
ಆದರೆ ಕಳ್ಳನ ಧನವನ್ನೇ ಬೇರೆ ಯಾರಾದರೂ ಅಪಹರಿಸಿದರೆ ಆ ಕಳ್ಳನೇ ರಕ್ಷಣೆಗಾಗಿ ರಾಜನನ್ನು ಅಪೇಕ್ಷಿಸುತ್ತಾನೆ. ಆಗ
ಅವನು ತನ್ನ ಧನದಿಂದಲೇ ತುಷ್ಟರಾಗಿರುವವರನ್ನು ಬಯಸುತ್ತಾನೆ.
ಶುಚಿಯಾಗಿದ್ದವನು ಭಯವಿಲ್ಲದೇ ಶಂಕೆಗಳಿಲ್ಲದೇ ರಾಜದ್ವಾರಕ್ಕೆ ಹೋಗುತ್ತಾನೆ. ಏಕೆಂದರೆ ಅವನು ತನ್ನ
ಅಂತರಾತ್ಮನಲ್ಲಿ ಕಿಂಚಿತ್ತಾದರೂ ದೋಷವನ್ನು ಕಾಣುವುದಿಲ್ಲ.
ಪರರ ಧನವನ್ನು ಅಪಹರಿಸಬಾರದು ಎನ್ನುವುದು ಸನಾತನ ಧರ್ಮವು. ಬಲವಂತರು ಕೆಲವರು ಧರ್ಮವು ಕೇವಲ
ದುರ್ಬಲರು ಅನುಸರಿಸುವುದು ಎಂದು ತಿಳಿದಿರುತ್ತಾರೆ. ಆದರೆ ದೈವಬಲದಿಂದ ಅವರು ದುರ್ಬಲರಾದರೆ ಆಗ ಅವರಿಗೆ
ಧರ್ಮವನ್ನು ಪಾಲಿಸುವುದೇ ರುಚಿಸುತ್ತದೆ.
ಭೂತಹಿತರತರು ದಾನಮಾಡಬೇಕು ಮತ್ತು ಅದೇ ಧರ್ಮ ಎಂದು ಹೇಳಿದ್ದಾರೆ. ಆದರೆ ಧನಯುತರು ಈ ಧರ್ಮವನ್ನು
ದರಿದ್ರರು ಪ್ರಾರಂಭಿಸಿದ್ದಾರೆ ಎನ್ನುತ್ತಾರೆ.
ಆದರೆ ದೈವವಶಾತ್ ಅವರೇ ದರಿದ್ರರಾಗಿಬಿಟ್ಟರೆ ಆಗ ಅವರಿಗೆ ದಾನಧರ್ಮವೇ ಚೆನ್ನಾಗಿ ಕಾಣುತ್ತದೆ. ಮೇಲಾಗಿ ಅತ್ಯಂತ
ಧನವಂತರೂ ಸುಖಿಗಳೂ ಆಗಿರುವುದಿಲ್ಲ.
೨೫೨
ತುಲಾಧಾರ-ಜಾಜಲಿ ಸಂವಾದ
ಯುಧಿಷ್ಠಿರನು ಹೇಳಿದನು: “ಸೂಕ್ಷ್ಮವಾದ ಧರ್ಮಲಕ್ಷಣವನ್ನು ನೀನು ಚೆನ್ನಾಗಿಯೇ ಉಪದೇಶಿಸಿರುವೆ. ಆದರೆ ನನ್ನ ಚಿತ್ತಕ್ಕೆ
ಇನ್ನೂ ಕೆಲವು ವಿಷಯಗಳು ಹೊಳೆಯುತ್ತಿವೆ. ಅನುಮಾನದಿಂದ ನಾನು ಅದನ್ನು ಹೇಳುತ್ತೇನೆ.
ರಾಜನ್! ನನ್ನ ಹೃದಯದಲ್ಲಿದ್ದ ಇನ್ನೂ ಅನೇಕ ಪ್ರಶ್ನೆಗಳನ್ನು ನೀನು ಹೋಗಲಾಡಿಸಿದ್ದೀಯೆ. ಅದರೆ ಈ ಪ್ರಶ್ನೆಯನ್ನು
ತಿಳಿಯಬೇಕೆಂದು ಕೇಳುತ್ತಿದ್ದೇನೆಯೇ ಹೊರತು ವಾದಿಸಬೇಕೆಂದು ಕೇಳುತ್ತಿಲ್ಲ.
ಕೃತಯುಗದಲ್ಲಿ ಅನ್ಯ ಧರ್ಮಗಳಿವೆ. ತ್ರೇತಾಯುಗದಲ್ಲಿ ಬೇರೆ ಮತ್ತು ದ್ವಾಪರಯುಗದಲ್ಲಿ ಬೇರೆ ಧರ್ಮಗಳಿವೆ. ಮತ್ತು
ಕಲಿಯುಗದ ಧರ್ಮಗಳೇ ಬೇರೆ. ಹೀಗೆ ಮನುಷ್ಯರ ಶಕ್ತಿಗನುಸಾರವಾಗಿ ಧರ್ಮಗಳನ್ನು ಮಾಡಿರುವಂತಿದೆ.
ಕೆಲವರು ಸಂಪೂರ್ಣ ವೇದವನ್ನೇ ಪ್ರಮಾಣವೆಂದು ಹೇಳುತ್ತಾರೆ. ಆದರೆ ವೇದಗಳಲ್ಲಿ ಪರಸ್ಪರ ವಿರುದ್ಧ ವಾಕ್ಯಗಳೂ
ಕಂಡುಬರುತ್ತವೆ. ಅವುಗಳಲ್ಲಿ ಒಂದರ ದೃಷ್ಟಿಯಿಂದ ಮತ್ತೊಂದು ಅಪ್ರಮಾಣವಾಗುತ್ತದೆ. ಆಗ ಅಪ್ರಮಾಣ ವಾಕ್ಯಗಳು
ಪ್ರಮಾಣವನ್ನು ಬಾಧಿಸಿದಂತಾಗುತ್ತದೆ. ಹಾಗಾದರೆ ವೇದಕ್ಕೆ ಶಾಸ್ತ್ರತ್ವವು[5] ಹೇಗೆ ಉಂಟಾಗುತ್ತದೆ?
ಧರ್ಮವನ್ನು ನಾವು ತಿಳಿದಿರುವೆವೋ ಇಲ್ಲವೋ ಅಥವಾ ಧರ್ಮವನ್ನು ತಿಳಿದುಕೊಳ್ಳಲು ಶಕ್ಯವೋ ಇಲ್ಲವೋ, ಇಷ್ಟು
ಮಾತ್ರ ಹೇಳಬಹುದಾಗಿದೆ: ಧರ್ಮವು ಕತ್ತಿಯ ಅಲುಗಿಗಿಂತಲೂ ಸೂಕ್ಷ್ಮವಾದುದು ಮತ್ತು ಪರ್ವತಕ್ಕಿಂತಲೂ
ದೊಡ್ಡದಾದುದು.
ಭಾರತ! ಹಸುಗಳು ನೀರು ಕುಡಿಯುವ ತೊಟ್ಟಿ ಮತ್ತು ಗದ್ದೆಗಳಿಗೆ ನೀರು ಹಾಯಿಸುವ ಕಾಲುವೆಯು ಹೇಗೆ ಒಂದೇ
ಸಮನಾಗಿರುವುದಿಲ್ಲವೋ ಹಾಗೆ ಸ್ಮೃತಿಯೂ ಕೂಡ ಒಂದೇ ರೀತಿಯಾಗಿರದೇ ಕಾಲಕಾಲಕ್ಕೆ
ವ್ಯತ್ಯಾಸವಾಗುತ್ತಿರುತ್ತದೆ[8]. ಆದುದರಿಂದ ನಾಶಹೊಂದದೇ ಇರುವ ಶಾಶ್ವತ ಧರ್ಮವೇ ಇಲ್ಲ.
ಕೆಲವರು ಕಾಮಕ್ಕಾಗಿ, ಕೆಲವರು ಇಚ್ಛೆಗಳಿಗಾಗಿ ಮತ್ತು ಅನ್ಯರು ಇತರ ಅನೇಕ ಕಾರಣಗಳಿಗಾಗಿ ಧರ್ಮಾಚರಣೆಯನ್ನು
ಮಾಡುತ್ತಾರೆ. ಕೆಲವು ಅಸಾಧು ಪುರುಷರು ಕೇವಲ ತೋರಿಕೆಗಾಗಿ ವ್ಯರ್ಥ ಧರ್ಮಾಚರಣೆಯನ್ನು ಮಾಡುತ್ತಾರೆ.
ಇಂತಹ ಧರ್ಮದ ಆಚರಣೆಯಿಂದಲೇ ಕೆಲವರು[10] ಔನ್ನತ್ಯವನ್ನು ಹೊಂದಿದರು. ಅದೇ ರೀತಿ ಇತರರು ಧರ್ಮದ
ಬಲದಿಂದಲೇ ಇತರರನ್ನು ಪೀಡಿಸಿದರು[11]. ಇತರರು ಈಶ್ವರೇಚ್ಛೆಯಿಂದ ಧರ್ಮದ ಮೂಲಕವಾಗಿಯೇ ಸಮತ್ವವನ್ನು
ಪಡೆದುಕೊಂಡಿರುವುದೂ ಕಂಡು ಬರುತ್ತದೆ.
12252019a ಯೇನೈವಾನ್ಯಃ ಪ್ರಭವತಿ ಸೋಽಪರಾನಪಿ ಬಾಧತೇ|
ಒಬ್ಬನು ಧರ್ಮವನ್ನು ಆಚರಿಸಿ ಔನ್ನತ್ಯವನ್ನು ಹೊಂದುತ್ತಾನೆ. ಮತ್ತೊಬ್ಬನು ಅದೇ ಧರ್ಮವನ್ನು ಆಶ್ರಯಿಸಿ ಇತರರನ್ನು
ಪೀಡಿಸುತ್ತಾನೆ. ಆದುದರಿಂದ ಧರ್ಮಾಚರಣೆಯನ್ನು ಮಾಡಿದರೂ ಎಲ್ಲರಲ್ಲಿಯೂ ಆಚಾರವ್ಯವಹಾರಗಳು ಒಂದೇ
ಆಗಿರುವುದಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ.
ಹಿಂದೆ ವಿದ್ವಾಂಸರು ಬಹಳ ಕಾಲದಿಂದ ಆಚರಿಸುತ್ತಿದ್ದ ಧರ್ಮದ ಕುರಿತು ನೀನು ಹೇಳಿರುವೆ. ಇದರ ಆಚರಣೆಯ
ಮೂಲಕವಾಗಿಯೇ ಸಮಾಜವು ಬಹಳ ಕಾಲದವರೆಗೆ ಸುಸ್ಥಿರವಾಗಿರುತ್ತದೆ.”
ಕೃತಘ್ನಗೌತಮೋಪಾಖ್ಯಾನ
ಮಿತ್ರನಾಗಲು ಯೋಗ್ಯನಾದ ಪುರುಷನ ಲಕ್ಷಣಗಳು ಮತ್ತು ಕೃತಘ್ನ ಗೌತಮನ ಕಥೆಯ ಪ್ರಾರಂಭ (೧-೪೯).
ಸೌಮ್ಯ ಸ್ವಭಾವದ ಮನುಷ್ಯರು ಹೇಗಿರುತ್ತಾರೆ? ಯಾರೊಂದಿಗೆ ಪರಮ ಪ್ರೀತಿಯಿಂದಿರಬೇಕು? ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ
ಎಂಥಹ ಮನುಷ್ಯರು ಉಪಕಾರ ಮಾಡಲು ಸಮರ್ಥರಾಗಿರುತ್ತಾರೆ? ಅದರ ಕುರಿತು ನನಗೆ ಹೇಳು.
ಸುಹೃದರ ಸ್ಥಾನವನ್ನು ಸಮೃದ್ಧ ಧನವಾಗಲೀ ಮತ್ತು ಸಂಬಂಧಿ ಬಾಂಧವರಾಗಲೀ ತುಂಬಲಾರರು ಎಂದು ನನ್ನ ಅಭಿಪ್ರಾಯ.
ಶಾಸ್ತ್ರಗಳನ್ನು ತಿಳಿದಿರುವ ಸ್ನೇಹಿತನು ದುರ್ಲಭನು ಮತ್ತು ಹಿತಕಾರೀ ಸ್ನೇಹಿತನೂ ದುರ್ಲಭನೇ. ಧರ್ಮಭೃತರಲ್ಲಿ ಶ್ರೇಷ್ಠ! ಈ ಎಲ್ಲ
ಪ್ರಶ್ನೆಗಳಿಗೂ ವ್ಯಾಖ್ಯಾನಮಾಡಬೇಕು.”
ಭೀಷ್ಮನು ಹೇಳಿದನು: “ರಾಜನ್! ಯುಧಿಷ್ಠಿರ! ಯಾರೊಡನೆ ಮೈತ್ರಿಯನ್ನು ಮಾಡಿಕೊಳ್ಳಬೇಕು ಮತ್ತು ಯಾರನ್ನು ಮಿತ್ರನನ್ನಾಗಿ
ನರರ್ಷಭ! ಲೋಭಿ, ಕ್ರೂರ, ಅಧರ್ಮಿ, ಕಪಟಿ, ಶಠ, ಕ್ಷುದ್ರ, ಪಾಪಾಚಾರೀ, ಎಲ್ಲರನ್ನೂ ಶಂಕಿಸುವ, ಆಲಸಿ, ದೀರ್ಘಸೂತ್ರೀ, ಕುಟಿಲ,
ಕಷ್ಟಕರ, ಗುರುಪತ್ನಿಯನ್ನು ಉಲ್ಲಂಘಿಸಿದ, ಸಂಕಟದ ಸಮಯದಲ್ಲಿ ಬಿಟ್ಟು ಹೋಗುವ, ದುರಾತ್ಮ, ನಿರ್ಲಜ್ಜ, ಎಲ್ಲ ಕಡೆ
ಸಂಚರಿಸುವ, ಅಸತ್ಯ, ಎಲ್ಲರ ದ್ವೇಷಕ್ಕೂ ಪಾತ್ರನಾದ, ತನ್ನ ಪ್ರತಿಜ್ಞೆಯಂತೆ ನಡೆದುಕೊಳ್ಳದೇ ಇರುವ, ಚಾಡಿಹೇಳುವ, ಅಪವಿತ್ರ
ಮಿತ್ರನನ್ನೂ ತ್ಯಜಿಸುವ, ಕುಡುಕ, ದ್ವೇಷೀ, ಕ್ರೋಧೀ, ನಿರ್ದಯೀ, ಕ್ರೂರ, ಇತರರನ್ನು ಪೀಡಿಸುವ, ಮಿತ್ರದ್ರೋಹೀ, ಪ್ರಾಣಿಗಳನ್ನು
ಕುರಿತು ಕೇಳು.
ಮಿತ್ರತ್ವವನ್ನು ಕಲ್ಪಿಸಿಕೊಳ್ಳಬೇಕು.
ತಾವೇ ಕಷ್ಟದಲ್ಲಿ ಬಿದ್ದು ಹಿತೈಷಿಯ ಕಾರ್ಯಸಿದ್ಧಿಯನ್ನು ಮಾಡುವ, ಕೆಂಪುಬಣ್ಣದ ವಸ್ತ್ರವು ಹೇಗೆ ತನ್ನ ಬಣ್ಣವನ್ನು ಬಿಡುವುದಿಲ್ಲವೋ
ಅನಘ! ನಾನು ಯಾವ ದೋಷಸಮಾಯುಕ್ತ ನರರ ಕುರಿತು ಹೇಳಿದೆನೋ ಅವರಲ್ಲಿಯೇ ಅತ್ಯಂತ ಅಧಮನು ಕೃತಘ್ನ ಮತ್ತು
.”ಯುಧಿಷ್ಠಿರನು ಹೇಳಿದನು: “ಪಾರ್ಥಿವ! ಮಿತ್ರದ್ರೋಹೀ ಮತ್ತು ಕೃತಘ್ನ ಎಂದು ನೀನು ಹೇಳಿದೆಯಲ್ಲ ಅದರ ಯಥಾರ್ಥ
ಇತಿಹಾಸವೇನು? ಇದರ ಅರ್ಥಸಂಬಂಧವನ್ನು ವಿಸ್ತಾರದಿಂದ ಕೇಳಬೇಕೆಂದು ಬಯಸುತ್ತೇನೆ. ಅದರ ಕುರಿತು ನನಗೆ ಹೇಳು.”