Professional Documents
Culture Documents
Script Drama Kannada 123
Script Drama Kannada 123
(Affiliated to CBSE)
No.10/1, Hosahalli, Gollarapalya, Magadi main road, Kempegowdanagar Bengaluru,
Karnataka - 560091.
ದಿನಾಂಕ:- 31/08/2023
ಎಲ್ಲರಿಗೂ ಶುಭೋದಯ
ಪಾತ್ರವನ್ನು ನಿರ್ವಹಿಸುತ್ತಿದ್ದೇನೆ
ನಿರ್ದೇಶಕಿ:- ಒಬ್ಬ ವಿದ್ಯಾರ್ಥಿ ಅಮ್ಮನು ಮಾಡಿದ ಶುಚಿಯಾಗಿರುವ ಮತ್ತು ಶಕ್ತಿಯುತವಾದ ಆರೋಗ್ಯ ಪೂರ್ಣವಾದ
ಆಹಾರವನ್ನು ತಂದಿರುತ್ತಾನೆ. (ಕಲಾವಿದ 1 ನಾಟಕ)
ನಿರ್ದೇಶಕಿ:- ಇನ್ನೊಬ್ಬ ವಿದ್ಯಾರ್ಥಿಯು ಬಣ್ಣ ಬಣ್ಣದ ಟಿಫನ್ ಬಾಕ್ಸ್ಅಲ್ಲಿ ಪಿಜ್ಜಾ ,ಬರ್ಗರ್ ,ಬ್ರೆಡ್ ಮತ್ತಿತರ ಆರೋಗ್ಯಕ್ಕೆ
ಹಾನಿಕಾರಕವಾದ ಆಹಾರವನ್ನು ತಂದಿರುತ್ತಾನೆ .[ ಕಲಾವಿದ 2 ನಾಟಕ)]
ಕಲಾವಿದ 2:- ಜಂಕ್ ಫುಡ್ ತಿಂದ ವಿದ್ಯಾರ್ಥಿಯು ದಪ್ಪವಾದ ಕಾರಣ ಔಷಧಿ ಖರೀದಿಸಲು ಮುಂದಾಗುತ್ತಾನೆ
ಮತ್ತು ಎಲ್ಲಾ ತರಹದ ಪ್ರೋಟೀನ್ ಮಿಲ್ಕ್ ಶೇಕ್ ಅನ್ನು ಸೇವಿಸಿ
ವಿದ್ಯಾರ್ಥಿಯು ಇನ್ನಷ್ಟು ತೂಕವನ್ನು ಹೆಚ್ಚಿಸಿ ಕೊನೆಗೆ ಔಷಧಿಯ ಅಡ್ಡ ಪರಿಣಾಮದಿಂದ ಸತ್ತು ಹೋಗುತ್ತಾನೆ.
ನಿರ್ದೇಶಕಿ:- ಮನೆಯಲ್ಲಿ ಸ್ವಚ್ಛತೆಯಿಂದ ತಯಾರಿಸಿದ ಆಹಾರವನ್ನು ತಿಂದ ವಿದ್ಯಾರ್ಥಿಯು ಎಲ್ಲಾ ಕಾರ್ಯ ಶೀಲ
ಚಟುವಟಿಕೆಯಲ್ಲಿ ತೊಡಗಿಸಿಕೊಂಡು.
ರೈತ ( ಪಾತ್ರ ಉದ್ಭವ) :- ನಾವು ರೈತರು ಬೆಳೆಯುವ ಬೆಳೆಗೆ ಮತ್ತು ರೈತರಿಗೆ ಗೌರವವನ್ನು ಕೊಡಬೇಕು. ಜನರು ಕೆಲಸದ
ನಿಮಿತ್ಯವಾಗಿ ಹಳ್ಳಿಯನ್ನು ಬಿಟ್ಟು ವಲಸೆ ಹೋಗುತ್ತಿದ್ದಾರೆ .ನಗರಗಳಲ್ಲಿ ಕೆಲಸಗಳನ್ನು ಮಾಡುತ್ತಾ , ಅಲ್ಲಿನ ಸುಂದರ ಜೀವನಕ್ಕೆ
ಆಕರ್ಷಿತರಾಗಿ. ಹಳ್ಳಿಯಲ್ಲಿರುವ ಹೊಲಗದ್ದೆಗಳನ್ನು ಮಾರಾಟ ಮಾಡುತ್ತಿದ್ದಾರೆ.
ಇದರಿಂದಾಗಿ ರೈತನಿಗೆ ಬೆಳೆಯಲು ಭೂಮಿಯೂ ಇಲ್ಲ ರೈತನು ಬೆಳೆ ಬೆಳೆಯದಿದ್ದರೆ ಮುಂದೊಂದು ದಿನ ಮುಂದಿನ
ಪೀಳಿಗೆಯ ಆಹಾರ ಧಾನ್ಯಕ್ಕಾಗಿ ಪರಿತಪಿಸುವ ಪರಿಸ್ಥಿತಿಯು ಉಂಟಾದರೂ ಆಗಬಹುದು.
ಮಾಣಿ ಬಂದು
ಕಲಾವಿದ 4 & ಕಲಾವಿದ 5:- ಅಮ್ಮ ಮಗ ನಮಗೆ ಮೊದಲು ಕುಡಿಯಲು ನೀರು ಕುಡಿಯು ಎಂದು ಕೇಳುತ್ತಾರೆ.
ಕಲಾವಿದ 3:- ಆಗ waiter ಬಂದು ಮಿನರಲ್ ವಾಟರ್ ಅಥವಾ ನಾರ್ಮಲ್ ವಾಟರ್ ಯಾವ ನೀರು ಕೊಡಲಿ ಎಂದು
ಕೇಳುತ್ತಾನೆ.
ಕಲಾವಿದ 4:- ನಮಗೆ ಸಾಧಾರಣ ನೀರು ಕುಡಿ ಸಾಕು ಎಂದು ಅಮ್ಮ ಮಾಡುವ ಹೇಳುತ್ತಾರೆ.
ನಿರ್ದೇಶಕಿ:- ಆಗ waiter ಚಿಕ್ಕ ಬಾಟ್ಲುಗಳಲ್ಲಿ ನಾರ್ಮಲ್ ನೀರನ್ನು ತಂದು ಕೊಡುತ್ತಾನೆ. [ ಕಲಾವಿದ 3 ನಾಟಕ)]
ನಿರ್ದೇಶಕಿ:- ಕುಡಿದು ನೋಡಿದರೆ ಅದರಲ್ಲಿಯೂ ಕೂಡ ಸ್ವಲ್ಪ ಸೋಡಾ ಮಿಕ್ಸ್ ಆಗಿರುತ್ತದೆ. ಆಗ ಅಮ್ಮ ಮತ್ತು ಮಗಳು ದುಡ್ಡು
ಕೊಟ್ಟು ಮಿನರಲ್ ವಾಟರ್ ಅನ್ನು ತೆಗೆದುಕೊಂಡು ಕುಡಿದರು. (ಕಲಾವಿದ 4&5 ನಾಟಕ)
ನೀರು:-
ಹಿಂದಿನ ಕಾಲದಲ್ಲಿ ಮನೆಗೆ ಬಂದರೆ ಮೊದಲು ನೀರನ್ನು ಕೊಟ್ಟು ಉಪಚರಿಸುತ್ತಿದ್ದರು ಮತ್ತು ಹೋಟೆಲ್ಗಳಲ್ಲಿ ಡಾಬಾ ಗಳಲ್ಲಿ
ಊಟಕ್ಕೆ ಮುಂಚೆ ನೀರು ಕೊಡುವ ಪದ್ಧತಿ ಇತ್ತು.
ಭೂಮಿ:- ಇದೇ ರೀತಿಯಾಗಿ ನಾವೆಲ್ಲರೂ ನೀರು ಮತ್ತು ಆಹಾರದ ನಾಶವನ್ನು ಮಾಡಿದರೆ, ಮುಂದೊಂದು ದಿನ ನೀರಿಗಾಗಿ
ಆಹಾರಕ್ಕಾಗಿ ಪರಿತಪಿಸುವ ಪರಿಸ್ಥಿತಿ ಬಂದರೂ ಬರಬಹುದು.
ರೈತ:- ಈ ವರ್ಷ ಒಳ್ಳೆ ಬೆಳೆ ಬಂದಿದೆ ಎರಡು ತಿಂಗಳಿನಲ್ಲಿ ಭತ್ತ ಬೆಳೆದಿದೆ, ಎಲ್ಲಾ ಈ ರಾಸಾಯನಿಕ ಮತ್ತು ಕೀಟಗಳ ಪ್ರಭಾವ .
ಈ ಸಲ ಒಳ್ಳೆಯ ಲಾಭ ಬರುತ್ತದೆ.
ಕಲಾವಿದ 5:- ಡಾಕ್ರೆ ನನ್ನ ಮಗುವಿಗೆ ಏನಾಗಿದೆ? ಬೆಳಗ್ಗೆ ತಾನೇ ಚೆನ್ನಾಗಿದ್ದ ಆಟ ಆಡ್ಕೊಂಡು ಆರಾಮಾಗಿದ್ದ ಈಗ ಏನಾಯ್ತು
ಡಾಕ್ಟ್ರೇ?
ಕಲಾವಿದ 7:- ನೋಡಿ ಈಗ ಮಾರುಕಟ್ಟೆಗೆ ಬರುತ್ತಿರುವ ಆಹಾರ ಪದಾರ್ಥಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ
.ಅದರಿಂದ ಮಕ್ಕಳು ಇನ್ನಿತರ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಇದೆಲ್ಲಕ್ಕೂ ಕಾರಣ ರಾಸಾಯನಿಕ .ಗೊಬ್ಬರಗಳ
ಬಳಕೆಯಿಂದ ಬೆಳೆದ ಬೆಳೆಗಳೇ ಕಾರಣ ಇದನ್ನು ನಿಲ್ಲಿಸಿ. ಸಾವಯವ ಗೊಬ್ಬರಗಳನ್ನು ಬಳಸಿಕೊಂಡು ಮಣ್ಣಿನ
ಫಲವತ್ತತೆಯನ್ನು ಹೆಚ್ಚಿಸಿ ಅದನ್ನು ಸರಿಯಾದ ರೀತಿಯಲ್ಲಿ ಬೆಳೆಸಿ .
ಟಮೊಟೊ ಮಾರ್ಕೆಟ್ ಅಲ್ಲಿ ಬರ್ತಿಲ್ಲ ಅದಕ್ಕೆ ಒಂದು ಕೆಜಿ ಟೊಮಟಿಗೆ 120 ಆಗಿದೆ.
ಹೆಂಡತಿ ಟೊಮೆಟೊ ತಗೊಂಡು ಬರ್ಲಿಲ್ಲ ಅಂದ್ರೆ ಮನೆಗೆ ಬರೋದು ಬೇಡ ಅಂತ ಹೇಳಿದ್ದಾಳೆ. ಟಮೋಟ ಖರೀದಿ
ಮಾಡುವಷ್ಟು ದುಡ್ಡಿಲ್ಲ ಅದಕ್ಕೆ ಹೀಗೆ ತಗೊಂಡು ಹೋಗ್ತಿದ್ದೀನಿ..
ಭೂಮಿ:- ರೈತರು ಬೆಳೆದ ಬೆಳೆಗಳು ಮಾರುಕಟ್ಟೆಗೆ ತಲುಪುವ ಮೊದಲೇ ಮಧ್ಯವರ್ತಿಗಳು ಅದನ್ನು ಖರೀದಿಸಿ ಸ್ಟೋರೇಜ್
ಮಾಡಿ ಬೆಲೆ ಏರಿಕೆ ಆದ ನಂತರ ಅದನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ. ಬೆಲೆಗಳು ಏರಿಕೆಯಿಂದ ಬೆಳೆಗಳ
ಅಭಾವ ಉಂಟಾಗಿ ಜನಸಾಮಾನ್ಯರಿಗೆ ಆಹಾರ ಬೆಳೆಗಳು ಸಿಗುತ್ತಿಲ್ಲ .ಬೆಳೆಯುವ ಮಕ್ಕಳಿಗೆ ಸಮತೋಲನ ಆಹಾರದ
ಕೊರತೆಯಿಂದ ಮಕ್ಕಳ ರೋಗ ನಿರೋಧಕ ಶಕ್ತಿ ಕಡಿಮೆ ಆ ಕಡಿಮೆ ಆಗುತಿದೆ. .
ನಿರ್ದೇಶಕಿ:-
ಈ ನಾಟಕದ ಸಾರಾಂಶ ಏನೆಂದರೆ ಆದಷ್ಟು ಆರೋಗ್ಯಕರವಾದ ಊಟವನ್ನು ಸೇವಿಸುವುದು ಮತ್ತು ರಾಸಾಯನಿಕ
ಗೊಬ್ಬರವನ್ನು ಕಡಿಮೆ ಮಾಡಬೇಕು
ಮತ್ತು ವ್ಯಾಪಾರಿಗಳು ತರಕಾರಿಗಳ ಬೆಲೆ ಹೆಚ್ಚಾದಾಗ ಮಾತ್ರ ಮಾರುಕಟ್ಟೆಗೆ ತರನು ಅನ್ನುವುದು ಸರಿಯಲ್ಲ
ಇದರಿಂದ ಅದನ್ನು ಖರೀದಿಸುವುದು ಕೆಲವರಿಗೆ ಕಷ್ಟವಾಗುತ್ತದೆ
ಧನ್ಯ ವಾದಗಳು