You are on page 1of 8

04. ಪರಿಸರ ಸಮತೋಲನ ನೋಟ್ಸ್ - KannadaPdf.

com

ತರಗತಿ: 7ನೇ ತರಗತಿ


ವಿಷಯ : ಕನ್ನಡ
ಪಾಠದ ಹೆಸರು : ಪರಿಸರ ಸಮತೋಲನ

ಲೇಖಕರ ಪರಿಚಯ
ಡಾ . ಕೃಪಾನಂದ ಕಾಮತ್‌ರವರು 29.9.1934 ರಲ್ಲಿ ಉತ್ತರ ಕನ್ನಡ ಜಿಲ್ಲೆಯ
ಹೊನ್ನಾವರದಲ್ಲಿ ಜನಿಸಿದರು . ಡಾಕ್ಟರೇಟ್ ದವಿಯನ್ನು ಪಡೆದು , ಉದಯಪುರ ಮತ್ತು
ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್‌ವೆಲ್ತ್ ಇನ್ಸ್ಟೂಟ್ ಆಫ್ ಬಯಲಾಜಿಕಲ್
ಕಂಟ್ರೋಲ್ ಸಂಸ್ಥೆಯ ಕೀಟ ಸಂಶೋಧನಾಧಿಕಾರಿ ಮತ್ತು ಸೇವೆ ಸಲ್ಲಿಸಿದರು .
ಬೆಂಗಳೂರಿನಲ್ಲಿ ವೈಜ್ಞಾನಿಕ ಛಾಯಾಗ್ರಹಣ :ಲ್ಯಾಬೊರೇಟರಿ ಪ್ರಾರಂಭಿಸಿ ಸುಮಾರು
ಒಂದು ಹೆಚ್ಚು ಚಿತ್ರಗಳ ಛಾಯಾಗ್ರಹಣ ಮಾಡಿದ್ದಾರೆ . , “ ಪ್ರಾಣಿ ಪರಿಸರ ” , ” ಕೀಟ
ಜಗತ್ತು ” . ಸಸ್ಯ ಪರಿಸರ ” , ” ಇರುವೆಯ ಇರವು ‘ , ‘ ಸರ್ಪ ಸಂಕುಲ ” ಮತ್ತು ”
ಕಾವಿ ಕಲೆ ” ಇತ್ಯಾದಿ ಇವರ ಪುಮುಖ ಕೃತಿಗಳು . ಇವರಿಗೆ ರಾಜ್ಯ ಸಾಹಿತ್ಯ ಪ್ರಶಸ್ತಿ
ಲಭಿಸಿದೆ .

ಶಬ್ದಾರ್ಥ
ಆಚ್ಛಾದನ = ಬಟ್ಟೆ ವಸ್ತ್ರ ,

ಪರ್ಣ = ಎಲೆ

ಗೊಣು = ಕುತ್ತಿಗೆ

ಪಿತೃ = ತಂದೆ

ವೀಳ್ಯ = ತಾಂಬೂಲ ( ಎಲೆ , ಅಡಿಕೆ )

ಚರ್ವಣ = ಅಗಿದು ತಿನ್ನುವುದು

ಶತಮಾನ = ನೂರು ವರ್ಷಗಳು

Download: KannadaPDF.com https://KannadaPdf.com/


04. ಪರಿಸರ ಸಮತೋಲನ ನೋಟ್ಸ್ - KannadaPdf.com
ಕ್ರೋಮೋಜೋಮು = ವರ್ಣತಂತು

ವಿಪುಲ = ಹೆಚ್ಚು ಜಾಸ್ತಿ

ಆದ್ರತೆ = ನೀರಿನ ಅಂಶ , ತೇವಾಂಶ

ಪಾಶ್ಚಾತ್ಯ = ಪಶ್ಚಿಮ

ದೇಶ ಕಿಸೆ = ಜೇಬು

ತಾಣ = ಜಾಗ , ಸ್ಥಳ

ಚಿಗರೆ = ಜಿಂಕೆ

ಅವಿತು = ಬಚ್ಚಿಟ್ಟುಕೊಳ್ಳುವುದು

ಕಣ್ಣು ಕಪ್ಪಡಿ = ಬಾವಲಿ

ವಿಧಾಯಕ = ರಚನಾತ್ಮಕ

ಹತ್ಯೆ = ಕೊಲ್ಲು

ಹೌ ಹಾರು = ದಿಗ್ಬ್ರಮೆ

ಅಭ್ಯಾಸ ಪ್ರಶ್ನೆಗಳು :
ಅ . ಕೊಟ್ಟಿರುವ ಪ್ರಶ್ನೆಗಳಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಆನೆ ಎಷ್ಟು ವರ್ಷಕ್ಕೊಮ್ಮೆ ಮರಿ ಹಾಕುತ್ತದೆ ?

ಉತ್ತರ : ಆನೆ ಐದು ವರ್ಷಕ್ಕೊಮ್ಮೆ ಮರಿ ಹಾಕುತ್ತದೆ .

2. ಪ್ರಾಣಿ – ಪ್ರಾಣಿಗಳ ನಡುವೆ ಯಾವುದಕ್ಕಾಗಿ ಸ್ಪರ್ಧೆ ನಡೆಯುತ್ತದೆ ?

ಉತ್ತರ : ಪ್ರಾಣಿ – ಪ್ರಾಣಿಗಳ ನಡುವೆ ಆಹಾರ , ಅಚ್ಚಾದನಗಳಿಗಾಗಿ ( ವಸತಿ , ಬಟ್ಟೆ


, ವಸ್ತ್ರ ) ಸ್ಪರ್ಧೆ ನಡೆಯುತ್ತದೆ

Download: KannadaPDF.com https://KannadaPdf.com/


04. ಪರಿಸರ ಸಮತೋಲನ ನೋಟ್ಸ್ - KannadaPdf.com
3. ಬೀಜ ಪ್ರಸರಣ ಯಾವುದರ ಮೂಲಕ ನಡೆಯುತ್ತದೆ ?

ಉತ್ತರ : ಬೀಜ ಪ್ರಸರಣ ಕೀಟ , ವಾಯು , ನೀರು ಮೊದಲಾದವುಗಳ ಮೂಲಕ


ನಡೆಯುತ್ತದೆ .

4. ದಟ್ಟವಾದ ಕಾಡು ಎಲ್ಲಿ ಬೆಳೆಯುತ್ತದೆ ?

ಉತ್ತರ : ವಿಪುಲವಾದ ನೀರು , ಆರ್ದತೆ ಇರುವಲ್ಲಿ ದಟ್ಟವಾದ ಕಾಡುಗಳು


ಬೆಳೆಯುತ್ತದೆ .

5. ಎಲ್ಲಿ ಬಿದ್ದ ಬೀಜಗಳು ನಾಶವಾಗುತ್ತವೆ ?

ಉತ್ತರ : ಮರುಭೂಮಿ , ರಸ್ತೆ ಮತ್ತು ಕಟ್ಟಡಗಳ ಮೇಲೆ ಬಿದ್ದ ಬೀಜಗಳು


ನಾಶವಾಗುತ್ತವೆ .

6. ಪ್ರಾಣಿಗಳಲ್ಲಿಯೇ ದೊಡ್ಡ ಪ್ರಾಣಿ ಯಾವುದು ?

ಉತ್ತರ : ಪ್ರಾಣಿಗಳಲ್ಲಿಯೇ ದೊಡ್ಡ ಪ್ರಾಣಿ ತಿಮಿಂಗಿಲ

ಆ . ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.


1. ಜಿರಾಫೆ ಹೇಗೆ ಆಹಾರ ಸ್ಪರ್ಧೆಯಲ್ಲಿ ಯಶಸ್ವಿಯಾಗುತ್ತದೆ ?

ಉತ್ತರ : ಜಿರಾಫೆ ಹನ್ನೆರಡು ಅಡಿಗೂ ಎತ್ತರದವಲ್ಲಿದ್ದ ಪರ್ಣ ( ಎಲೆ) ತಿನ್ನುವಷ್ಟು


ಉದ್ದ ಕಾಲು , ಉದ್ದಗೋಣು ಪಡೆದದ್ದರಿಂದ,ಆಹಾರ ಸ್ಪರ್ಧೆಯಲ್ಲಿ ಯಶಸ್ವಿಯಾಗುತ್ತದೆ

2. ವನ್ಯಜೀವಿ ಸಂರಕ್ಷಣೆಯನ್ನು ಹೇಗೆ ಮಾಡುತ್ತಿದ್ದಾರೆ ?

ಉತ್ತರ : ವನ್ಯಜೀವಿಗಳ ಸಂರಕ್ಷಣೆಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು


ಹಮ್ಮಿಕೊಂಡು ಮಾಡುತ್ತಾ ಬಂದಿದ್ದಾರೆ . ಮೊಸಳೆಗಳಿಗಾಗಿ ಕರ್ನಾಟಕದ
ಬೆಂಗಳೂರಿನ ಹತ್ತಿರವಿರುವ ಬನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಒಂದು
ಆಲಯವನ್ನು ಸ್ಥಾಪಿಸಿ ಪೋಪಿಸುತ್ತಿದ್ದಾರೆ .ವಿಷಕಾರಿ ಹಾವುಗಳನ್ನು ಸಾಕುವ
ಕೇಂದ್ರಗಳನ್ನು ಮುಂಬಯಿ , ಮದ್ರಾಸಿನಲ್ಲಿ ಪ್ರಾರಂಭಿಸಿದ್ದಾರೆ .

3. ಸರೋವರ , ಕೆರೆ ಮತ್ತು ಹೊಂಡಗಳು ಬೇರೆ ಕೆಲಸಕ್ಕೆ ಬಳಕೆಯಾಗುತ್ತಿವೆ , ಏಕೆ ?

Download: KannadaPDF.com https://KannadaPdf.com/


04. ಪರಿಸರ ಸಮತೋಲನ ನೋಟ್ಸ್ - KannadaPdf.com
ಉತ್ತರ : ಸರೋವರ , ಕೆರೆ ಮತ್ತು ಹೊಂಡಗಳು ಬೇರೆ ಕೆಲಸಕ್ಕೆ
ಬಳಕೆಯಾಗುತ್ತಿರುವುದಕ್ಕೆ ಕಾರಣ ವಿಮಾನ , ರೈಲ್ವೆ ಮತ್ತು ನಿರ್ಮಾಣಕ್ಕಾಗಿ
ಅವುಗಳನ್ನು ಮುಚ್ಚುತ್ತಿದ್ದಾರೆ . ಆದರೆ ಇದರಿಂದ ಆಗುವ ಅಸಮತೋಲನದ ಅರಿವಿಲ್ಲ
.

4. ಯೋಜನೆ ತಯಾರಿಸುವ ವಿಜ್ಞಾನಿಗಳು ಯಾವ ರೀತಿಯ ಮುನ್ನಚ್ಚರಿಕೆ


ವಹಿಸಬೇಕು?

ಉತ್ತರ : ಮುಂದಿನ ಪೀಳಿಗೆಗಾಗಿ ಇಂದೇ ಯೋಜನೆಯನ್ನು ತಯಾರಿಸುವ


ವಿಜ್ಞಾನಿಗಳು ನಿಸರ್ಗದ ಆಗುಹೋಗುಗಳನ್ನು ವಿವರವಾಗಿ ಅಭ್ಯಸಿಸಿ ಮಾನವನ
ಚಟುವಟಿಕೆ ಮಾನವನಿಗೆ ಕಂಟಕಪ್ರಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ , ವಿವಿಧ
ಕ್ರಮಗಳನ್ನು ಕೈಗೊಳ್ಳಬೇಕು .

ಇ . ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ.


1. ಮೊಸಳೆ , ಹಾವುಗಳ ಸಂರಕ್ಷಣಾ ಕ್ರಮಗಳನ್ನು ತಿಳಿಸಿ.

ಉತ್ತರ : ಮೊಸಳೆಗಳ ಚರ್ಮಕ್ಕೆ ಪಾಶ್ಚಾತ್ಯರು ಮನ ಸೋತಿದ್ದಾರೆ ಮತ್ತು ಅದರಿಂದ


ಅಪಾರವಾದ ಹಣವನ್ನು ಪಡೆಯಲು ಅತಿಯಾಗಿ ಅವುಗಳು ವಿನಾಶದ ಅಂಚನ್ನು
ತಲುಪುವ ಸ್ಥಿತಿಗೆ ಬಂದಿತು. ಬನೇರುಘಟ್ಟದ ರಾಷ್ಟ್ರೀಯ ಉದ್ಯಾನದಲ್ಲಿ . ಅವುಗಳನ್ನು
ಹೆಚ್ಚಿನ ದಕ್ಷತೆಯಿಂದ ಪಾಲನೆ ಪೋಷಣೆಯನ್ನು ಮಾಡುತ್ತಿದ್ದಾರೆ . ಅದೇ ರೀತಿ
ಹಾವುಗಳನ್ನು ಕಂಡ ಕಂಡ ಕಡೆಯಲ್ಲೆಲ್ಲ ಕೊಂದು , ಕೆಲವು ಜಾತಿಯ ಹಾವುಗಳು
ನಶಿಸಿ ಹೋಗಿರುವುದರಿಂದ ವಿಷಕಾರಿ ಹಾವುಗಳನ್ನು ಸಾಕುವ ಕೇಂದ್ರಗಳನ್ನು
ಮುಂಬಯಿ ಮತ್ತು ಮದ್ರಾಸಿನಲ್ಲಿ ಪ್ರಾರಂಭಿಸಿದ್ಯಾರೆ .

2. ಕಾಡನ್ನು ನಾಶ ಮಾಡುವುದರಿಂದ ಆಗುವ ದುಪ್ಪರಿಣಾಮಗಳೇನು ?

ಉತ್ತರ : ಕಾಡನ್ನು ನಾಶ ಮಾಡುವುದರಿಂದ ಅಲ್ಲಿದ್ದ ಹಕ್ಕಿ ‘ ಪಕ್ಷಿಗಳು ಬೇರೆ ತಾಣಕ್ಕೆ


ಹೋಗಬೇಕಾಗುತ್ತದೆ . ಮೇವು ಇಲ್ಲದ್ದರಿಂದ ಮಾಯವಾಗುತ್ತವೆ . ಈ ಚಿಗರೆಗಳನ್ನು
ಬೇಟೆಯಾಡಿ ಹುಲಿ , ಚಿರತೆ ಮತ್ತು ಸಿಂಹಗಳ ನಾಶವಾಗುತ್ತದೆ . ಅಲ್ಲಿ ಮರೆ
ಇಲ್ಲದ್ದರಿಂದ ತೋಳ ಕರಡಿಗಳು ಓಡಿ ಹೋಗುತ್ತವೆ . ಹಣ್ಣುಹಂಪಲುಗಳು
ಸಿಗದಿರುವುದರಿಂದ ಇಣಚಿ – ಕಣ್ಮು ಕಪ್ಪಡಿಗಳು ಬೇರೆ ಕಡೆಗೆ ಪ್ರಯಾಣ, ಬೆಳೆ ಕಾಡು
– ಪ್ರಾಣಿಗಳಿಗೆ ಆಹಾರ ವಸತಿಯ ಕೊರತೆಯಿಂದ ವಿನಾಶವಾಗುತ್ತದೆ . ಕಾಡುಗಳ
ಅಲಭ್ಯತೆಯಿಂದ ಮಳ ಕಡಿಮೆಯಾಗಿ ಬೆ ಜಲ ಅಂತ ರ್ಜಲ ) ಕಡಿಮೆಯಾಗುತ್ತದೆ .

Download: KannadaPDF.com https://KannadaPdf.com/


04. ಪರಿಸರ ಸಮತೋಲನ ನೋಟ್ಸ್ - KannadaPdf.com
ಆಮಜನಕದ ಕೊರತೆ ಮತ್ತು ಇಂಗಾಲದ ಡೈ ಆಕ್ಸಿಡ್ ಹೆಚ್ಚಿ ವಾಯುಮಾಲಿನ್ಯ
ಉಂಟಾಗುತ್ತದೆ . ಪ್ರಕೃತಿಯ ಸಮತೋಲನ ತಪ್ಪಿ , ಅಸಮತೋಲನದಿಂದ ಅನೇಕ
ದುಪ್ಪರಿಣಾಮಗಳಾಗುತ್ತದೆ .

ಈ , ಕೊಟ್ಟಿರುವ ಪದಗಳನ್ನು ಬಳಸಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸಿ.


ನಿರ್ಮಾಣು, ಶತಮಾನ, ಮನಸೋಲು, ಹಿಂಬಾಲಿಸು

ನದಿಗಳಿಗೆ ಸೇತುವೆಯ ನಿರ್ಮಾಣ ಅಗತ್ಯ

ಶತಮಾನಗಳಿಂದ ಬಂದಿರುವ ಅಂಧಶ್ರದ್ದೆ ತೊಲಗಬೇಕು .

ಸುಂದರವಾದ ನಿಸರ್ಗದ ಚೆಲುವಿಗೆ ಎಲ್ಲರೂ ಮನ ಸೋಲುವರು .

ಕರು ಹಸುವನ್ನು ಹಿಂಬಾಲಿಸುತ್ತದೆ .

ಭಾಷಾಭ್ಯಾಸ
ಅ , ಬಿಟ್ಟಿರುವ ಪದಗಳನ್ನು ಸೂಕ್ತ ಪದಗಳಿಂದ ತುಂಬಿ , ಈ ಕೆಳಗಿನ ಗಾದೆ
ಮಾತುಗಳನ್ನು ಪೂರ್ಣಗೊಳಿಸಿ .
1. ದೂರದ ಬೆಟ್ಟ
2. ಹಿತ್ತಲ ಗಿಡ
3. ತಾಯಿಗಿಂತ ದೇವರಿಲ್ಲ ಉಪ್ಪಿಗಿಂತ
4. ಕೂತು ಉಣ್ಣುವವನಿಗೆ .
5. ಹಸು ಕಪ್ಪಾದರೆ

ಉತ್ತರಗಳು :

1 ) ಕಣ್ಣಿಗೆ , ನುಣ್ಣಗೆ

2 ) ಮದ್ದಲ್ಲ

3 ) ರುಚಿಯಿಲ್ಲ

Download: KannadaPDF.com https://KannadaPdf.com/


04. ಪರಿಸರ ಸಮತೋಲನ ನೋಟ್ಸ್ - KannadaPdf.com
4 ) ಕುಡಿಕೆ ಹೊನ್ನು ಸಾಲುವುದಿಲ್ಲ

5 ) ಹಾಲು ಕಪ್ಪೇ ?

ಆ . ಪ್ರಾಣಿಗಳ ಹೆಸರುಗಳನ್ನು ಆವರಣದಲ್ಲಿ ನೀಡಲಾಗಿದೆ . ಇವುಗಳಲ್ಲಿ ಸಸ್ಯಾಹಾರಿ


ಪ್ರಾಣಿಗಳು ಮಾಂಸಾಹಾರಿ ಪ್ರಾಣಿಗಳು ಹಾಗು ಮಿಶ್ರಾಹಾರಿ ಪ್ರಾಣಿಗಳನ್ನು ವರ್ಗಿಕರಿಸಿ
ಬರೆಯಿರಿ .
( ಹುಲಿ , ನಾಯಿ , ಚಿರತೆ , ಆನೆ , ಮೊಲ , ಸಿಂಹ , ಜಿಂಕೆ , ತೋಳ , ಹಸು , ಒಂಟೆ
, ಬೆಕ್ಕು , ಕುದುರೆ , ಮಾನವ , ಮೊಸಳೆ )

ಸಸ್ಯಾಹಾರಿ ಮಾಂಸಾಹಾರಿ : ಮಿಶ್ರಾಹಾರಿ

ಪ್ರಾಣಿಗಳು ಪ್ರಾಣಿಗಳು ಪ್ರಾಣಿಗಳು

ಆನೆ ಹುಲಿ ನಾಯಿ

ಮೊಲ ನಾಯಿ ಮೊಸಳೆ

ಜಿಂಕೆ ಚಿರತೆ ಮಾನವ

ಹಸು ಸಿಂಹ ಒಂಟೆ

ಕುದುರೆ ತೋಳ

ಇ , ಕೆಳಗಿನ ಸಸ್ಯಗಳಿಗೆ ಸಂಬಂಧಿಸಿದ ಮತ್ತು ನೀರಿಗೆ ಸಂಬಂಧಿಸಿದ ಪದಗಳನ್ನು


ನೀಡಲಾಗಿದೆ . ಸಸ್ಯಗಳಿಗೆ ಸಂಬಂಧಿಸಿದ ಪದಗಳಿಗೆ ನೀಲಿ ಶಾಂಯಿಯಲ್ಲೂ ನೀರಿಗೆ
ಸಂಬಂಧಿಸಿದ ಪದಗಳಿಗೆ ಕೆಂಪು ಶಾಂಯಿಯಲ್ಲೂ ವೃತ್ತ ಹಾಕಿ , ಎರಡು ಗುಂಪಿನ
ಪದಗಳನ್ನು ಪ್ರತೇಕವಾಗಿ ಅಕಾರಾದಿ ಕ್ರಮದಲ್ಲಿ ಜೋಡಿಸಿ ,

ಚಿಗುರು ಬಳ್ಳಿ ಪ್ರವಾಹ ತೆಂಗು ಜಲಪಾತ ಭತ್ತ

ಬಾವಿ ಬೇರು ನದಿ ಸೊಪ್ಪು ಹೊಲ ಕಡಲು

Download: KannadaPDF.com https://KannadaPdf.com/


04. ಪರಿಸರ ಸಮತೋಲನ ನೋಟ್ಸ್ - KannadaPdf.com
ಗದ್ದೆ ಗರಿಕೆ ನಲ್ಲಿ ರಂಬೆ ಸರೋವರ ಕೊಂಬೆ

ತಳಿರು ಕೊಳ ಗರಿಕೆ ಬಳ್ಳಿ ಹೊಳೆ ಕಾಂಡ

ಹಳ್ಳ ,ಆಣೆಕಟ್ಟು ಪತ್ರೆ ಆಣೆಕಟ್ಟು ಮಲ್ಲಿಗೆ ಹೋಂಡ ಕಣಿವೆ

ಕಣಿವೆ , ಕಾಂಡ , ಕೊಂಬೆ , ಗದೆ , ಗರಿಕೆ , ಚಿಗುರು , ತಳಿರು , ತೆಂಗು ,

ಪತ್ರೆ , ಬಳ್ಳಿ , ಬೇರು , ಭತ್ತ , ಮಲ್ಲಿಗೆ , ರೆಂಬೆ , ಸೊಪ್ಪು ,

ಭಾಷಾ ಚಟುವಟಿಕೆ
1. ಕಾಡು ನಾಶವಾಗುವುದರಿಂದ ಉಂಟಾಗುವ ತೊಂದರೆಗಳನ್ನು ಪಟ್ಟಿ ಮಾಡಿ .

ಉತ್ತರ : ಕಾಡು ನಾಶವಾಗುವುದರಿಂದ ಉಂಟಾಗುವ ತೊಂದರೆಗಳು :

● ಕಾಡು ಪ್ರಾಣಿಗಳ ಸಂತತಿಯ ನಾಶ


● ಮಳೆಯ ಪುಮಾಣ ಕಡಿಮೆ
● ಭೂಮಿಯ ಅಂತರ್ಜಲದ ಕೊರತೆ
● ವಾಯು ಮಾಲಿನ್ಯ
● ಕಾಡು ಪ್ರಾಣಿಗಳಿಗೆ ಆಹಾರವಸತಿಯ ಕೊರತೆ
● ಆಮ್ಲಜನಕದ ಕೊರತೆ
● ಪರಿಸರದ ಅಸಮತೋಲನ

2 . ಗಿಡ – ಮರ ಸೂರ್ಯೋದಯ , ಪ್ರಾಣಿ ಪಕ್ಷಿಗಳು ಇರುವಂತೆ ಕಲ್ಪಿಸಿಕೊಂಡು


ಪ್ರಕೃತಿ ಚಿತ್ರವನ್ನು ಬರೆಯಿರಿ .

( ವಿದ್ಯಾರ್ಥಿಗಳೇ ಸ್ವತಃ ಮಾಡುವುದು )

3 . ಪರಿಸರ ಸಂರಕ್ಷಣೆಯ ಅವಶ್ಯಕತೆ ಕುರಿತು ಒಂದು ಪ್ರಬಂಧವನ್ನು ಬರೆಯಿರಿ .

Download: KannadaPDF.com https://KannadaPdf.com/


04. ಪರಿಸರ ಸಮತೋಲನ ನೋಟ್ಸ್ - KannadaPdf.com
ಉತ್ತರ : ಇಂದಿನ ಬಹುಮುಖ್ಯ ಅವಶ್ಯಕತೆ ಎಂದರೆ ಪರಿಸರ ಸಂರಕ್ಷಣೆ , ನಮ್ಮ
ಸುತ್ತಮುತ್ತಲಿನ ಪರಿಸರ ಅಗತ್ಯ . ಮನುಷ್ಯನ ಮತ್ತು ಯಾವುದೇ ಜೀವಿಗಳ
ಮೂಲಭೂತ ಅವಶ್ಯಕತೆಗಳಾದ ನೀರು , ಗಾಳಿ , ಆಹಾರ , ಉಡುಪು ಮತ್ತು
ವಸತಿಗಳು ಲಭ್ಯವಾಗುವುದೇ ಪರಿಸರದಿಂದ ಇವುಗಳು ನಮಗೆ ಸರಿಯಾದ
ಪ್ರಮಾಣದಲ್ಲಿ ಶುದ್ಧವಾಗಿ ದೊರಕದಿದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತದೆ .
ಪ್ರಕೃತಿಯು ಸಹಜವಾಗಿ ಸಸ್ಯ ಮತ್ತು ಪ್ರಾಣಿಗಳನ್ನು ಸಮತೋಲನ ಮಾಡಿರುತ್ತದೆ .
ಈ ಸಮತೋಲನ ಹಾಗೆಯೇ ಮುಂದುವರಿದರೆ ಆಗ ಎಲ್ಲಾ ಜೀವಿಗಳೂ
ಆರೋಗ್ಯದಿಂದ ನೆಮ್ಮದಿಯಿಂದ ಬದುಕಬಹುದು . ಪ್ರಕೃತಿ ನಮಗೆ
ಅವಶ್ಯಕವಾಗಿರುವಪ್ನನ್ನು ಖಂಡಿತವಾಗಿಯೂ ಪೂರೈಸುತ್ತದೆ . ಆದರೆ ಮಾನವನು
ತನ್ನ ದುರಾಸೆಗಾಗಿ ಈ ಸಮತೋಲನವನ್ನು ಹಾಳು ಮಾಡಿದರೆ ತನ್ನ ಕಾಲ ಮೇಲೆ
ತಾನೇ ಕಲ್ಲನ್ನು ಹಾಕಿಕೊಂಡಂತೆ . ಪರಿಸರದಲ್ಲಿ ಎಲ್ಲವೂ ಅಗತ್ಯ . ಸಸ್ಯಗಳು ,
ನೀರಿನ ಆಕರಗಳು , ಪ್ರಾಣಿಗಳು ಇವೆಲ್ಲವೂ ಸೂಕ್ತ ಪ್ರಮಾಣದಲ್ಲಿದ್ದರೆ ಮನುಷ್ಯನೂ
ಸಹ ನೆಮ್ಮದಿಯಾಗಿರಬಹುದು . ಈಗಾಗಲೇ ಸಾಕಷ್ಟು ಪರಿಸರವನ್ನು ಹಾಳು
ಮಾಡಿರುವ ನಾವು ಇನ್ನು ಮುಂದಾದರೂ ಎಚ್ಚೆತ್ತುಕೊಂಡು
ಪರಿಸರವನ್ನುಸಂರಕ್ಷಿಸಬೇಕು . ಆದಷ್ಟು ಗಿಡ ಮರಗಳನ್ನು ಅಂತರ್ಜಲವನ್ನು .
ಪರಿಸರಮಾಲಿನ್ಯವನ್ನು ಪ್ರತಿಯೊಬ್ಬರೂ ಕೈಗೂಡಿಸಿ , ಶುಚಿಗೊಳಿಸಬೇಕು .
ಜೀವನದಲ್ಲಿ ಪರಿಸರ ಸಂರಕ್ಷಣೆ ಎಂಬ ಇದು ನಮ್ಮೆಲ್ಲರ ಕರ್ತವ್ಯ

ಅಭ್ಯಾಸ
ಆ . ಕೆಳಗಿನ ವಾಕ್ಯಗಳಲ್ಲಿ ಸಂಧಿಯಾಗಿರುವ ಪದಗಳನ್ನು ಗುರುತಿಸಿ
ನೀನೇಕೆ ನಮ್ಮೊಡನೆ ಊರಿಗೆ ಬರುವುದಿಲ್ಲ ? ”

ನೀನೇಕೆ , ನಮ್ಮೊಡನೆ , ಊರಿಗೆ – ಲೋಪಸಂಧಿ

ಹಾಸಿಗೆಯಿದ್ದಷ್ಟು ಕಾಲು ಚಾಚು .

ಹಾಸಿಗೆಯಿದ್ದಷ್ಟು ‘ ಯ ‘ ಕಾರಾಗಮ ಸಂಧಿ

ಕಾಲನ್ನು – ಲೋಪಸಂಧಿ

Download: KannadaPDF.com https://KannadaPdf.com/

You might also like