Professional Documents
Culture Documents
12. ಒಮ್ಮೆ ನಗುತ್ತೇವೆ Notes
12. ಒಮ್ಮೆ ನಗುತ್ತೇವೆ Notes
com
ಕವಿ ಪರಿಚಯ :
ಧಾರವಾಡದ ಜೆ.ಎಸ್.ಎಸ್ . ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಪ್ರೊ . ಬಿ . ಸುಕನ್ಯಾ ಮಾರುತಿ
( ಜನನ : ೧.೩.೧೯೫೬ ) ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರಿನವರು .
ಬಂಡಾಯ ಸಾಹಿತ್ಯ – ಸಂಘಟನೆ , ಮಹಿಳಾ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ . ಇದುವರೆಗೆ ಪರಿಸರದಲ್ಲಿ
, ಪಂಚಾಗ್ನಿ ಮಧ್ಯೆ , ನಾನು ನನ್ನವರು , ತಾಜಮಹಲಿನ ಹಾಡು , ಬಿಂಬದೊಳಗಣ ಮಾತು , ಎಂಬ ಕವನ
ಸಂಕಲನಗಳನ್ನು ಪ್ರಕಟಿಸಿದ್ದಾರೆ . ‘ ನಾನೆಂಬ ಮಾಯೆ ‘ ಎಂಬ ಸಮಗ್ರ ಕಾವ್ಯ ೨೦೦೭ ರಲ್ಲಿ
ಪ್ರಕಟವಾಗಿದೆ . ಪ್ರಣಯಿನಿ , ಸಂಕೃತಿ , ಪ್ರಶಾಂತ ಎಂಬ ಕೃತಿಗಳನ್ನು ಇತರರೊಂದಿಗೆ ಸಂಪಾದಿಸಿದ್ದಾರೆ
.
ಕರ್ನಾಟಕ ವಿ.ವಿ. ಸಿಂಡಿಕೇಟ್ ಸದಸ್ಯೆ , ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ , ಕನ್ನಡ ಅಭಿವೃದ್ಧಿ
ಪ್ರಾಧಿಕಾರದ ಸದಸ್ಯೆಯಾಗಿ ಕೆಲಸ ನಿರ್ವಹಿಸಿರುವ ಇವರು ಗೋಕಾಕ್ ಚಳುವಳಿ , ದಲಿತ ಬಂಡಾಯ
ಚಳುವಳಿ , ಕುಲಕಸುಬು ದೇಶೀಕಲೆಗಳ ಅಭಿವೃದ್ಧಿಗಾಗಿ ಸಂಸ್ಕೃತಿ ಸಂಗ್ರಾಮ ಪ್ರತಿಷ್ಠಾನದ ಸ್ಥಾಪನೆ –
ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡವರು .
ಇವರ ಸಾಹಿತ್ಯ ಸಾಧನೆಗಾಗಿ ನಾಲ್ಕನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ‘ ಗೌರವ ಪ್ರಶಸ್ತಿ
, ‘ ಅಂಬೇಡ್ಕರ್ ‘ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ . – ಹೊಟ್ಟೆಗೆ ಅನ್ನವಿಲ್ಲದೆ ಬಳಲುವವರಲ್ಲಿ
ನಗು ಎಲ್ಲಿಂದ ಬಂದೀತು ? ಸಾಮಾಜಿಕ ಅಸಮಾನತೆಯು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ
ನರಳಿಸುತ್ತಿದೆ . ಅವರ ಮೊಗದಲ್ಲಿ ನಗೆ ಅರಳಬೇಕಾದರೆ ಮೂಲಭೂತ ಸೌಕರ್ಯಗಳನ್ನು ಮೊದಲು
ಒದಗಿಸಬೇಕು. ಆ ಮೂಲಕ ಹೊಗೆಯಾಗಿರುವ ಅವರ ಬದುಕಿನಲ್ಲಿ ನಗೆ ಮೂಡಿಸಬೇಕು ಎಂಬ ಕಳಕಳಿ
ಇಲ್ಲಿದೆ. ಕವಯಿತ್ರಿ ಶೋಷಿತರ ಪರವಾಗಿ ಹೊಮ್ಮಿಸಿರುವ ಪ್ರತಿಭಟನೆಯ ಧ್ವನಿ ಇಲ್ಲಿ ಸಶಕ್ತವಾಗಿ
ಮೂಡಿಬಂದಿದೆ.
ಕಾವ್ಯದ ಹಿನ್ನೆಲೆ :
ನಮ್ಮದು ಸಮೃದ್ಧ ದೇಶವಾದರೂ ಸಮಾನತೆಗಾಗಿ ಸಮೃದ್ಧತೆಯ ಬದುಕಿಗಾಗಿ ನಿರಂತರ ಹೋರಾಟ
ನಡದೇ ಇದೆ . ಶತಶತಮಾನಗಳಿಂದ ಶೋಷಣೆಗೆ ಒಳಗಾದ ಜನ ಸಮಪಾಲು – ಸಮಬಾಳು ಪಡೆಯಲು
ಅವಿರತ ಪ್ರಯತ್ನದಲ್ಲಿದ್ದಾರೆ . ಆದರೂ ಇಲ್ಲಿ ಎಲ್ಲ ಇದ್ದರೂ ‘ ಯಾರಿಗುಂಟು ಯಾರಿಗಿಲ್ಲ ‘ ಎನ್ನುವ
ವಾತಾವರಣ ಇದೆ . ಬಡವರ , ನಿರ್ಗತಿಕರ ಬದುಕಿನ ಆರ್ತ ನೋವಿಗೆ ಮನಮಿಡಿಯುವ ಅಂಶ ಇಲ್ಲಿದೆ .
ತಿನ್ನಲು ತುತ್ತನ್ನವೂ ಸಿಗದ ಜನಸಮುದಾಯದಲ್ಲಿ ನಗೆ ಎಲ್ಲಿಂದ ಬರಬೇಕು ? ಅವರ ದುಗುಡ ದುಮ್ಮಾನ
ಶಬ್ದಾರ್ಥ :
ಕುದಿ – ಬೇಯು ; ಮೊರೆಯಿಡು – ಬೇಡು , ಯಾಚಿಸು ; ಕಂಬನಿ ಕಣ್ಣೀರು ; ಲಾವಾರಸ – ಭೂಮಿಯಿಂದ
ಹೊರಬರುವ ಜ್ವಾಲಾಮುಖಿ ; ಧಗೆ – ಹೊಗೆ ; ಹೊಳೆ – ಕಾಂತಿ ; ಆಪೋಶನ – ಊಟದ ಮೊದಲು ಮತ್ತು
ನಂತರ ಅಂಗೈಯಲ್ಲಿ ಹಾಕಿಕೊಂಡು ಕುಡಿಯುವ ನೀರು / ಹಾಲು .
5 ) ದನಗಳಿಗೆ ಏನಿಲ್ಲ ?
ದನಗಳಿಗೆ ಮೇವಿಲ್ಲ .
ಕವಯಿತಿಗೆ ಏನು ಮಾಡಲಾಗದೆ , ಅವರ ಸ್ಥಿತಿ ನೋಡಲಾಗದೆ ಅವರಿಗಾಗಿ ಕವಯಿತ್ರಿ ಮುಗಿಲತ್ತ ಕೈಚಾಚಿ
ನಿಂತಿದ್ದಾರೆ .
ದನಗಳಿಗೆ ಮೇವಿಲ್ಲ . ಜನಗಳಿಗೆ ನೀರಿಲ್ಲ , ಗಂಜಿಗೂ ಗತಿಯಿಲ್ಲ . ತಿನ್ನಲು ತುತ್ತನ್ನ ಇಲ್ಲದ ಜನರಲ್ಲಿ
ನಗುವಂತು ಇಲ್ಲವೇ ಇಲ್ಲ .
ಶ್ರೀಮತಿ ಸುಕನ್ಯಾ ಮಾರುತಿ ಅವರ ` ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಲ್ಲಿ ಕವಯಿತ್ರಿ ಈ ಮೇಲಿನ
ವಾಕ್ಯವನ್ನು ಹೇಳಿದ್ದಾರೆ . ಭೀಕರವಾದ ಬರಗಾಲದಲ್ಲಿ ದನಕರುಗಳು , ಜನರು ತಿನ್ನಲು ಆಹಾರವಿಲ್ಲದೆ ,
ಕುಡಿಯಲು ನೀರಿಲ್ಲದೆ ಸಾಯುತ್ತಿದ್ದಾರೆ . ಈಗ ಮಳೆ ಬಂದರೆ ಮಾತ್ರವೇ ಅವರ ಉಳಿಗಾಲ . ಇಂತಹ
ಸಂದರ್ಭದಲ್ಲಿ ಅವರ ದೀನ ಸ್ಥಿತಿ ನೋಡಲಾರದೆ ಕವಯಿತಿ ಮಳೆಗಾಗಿ ಮುಗಿಲತ್ತ ಕೈಚಾಚಿ ನಿಂತಿದ್ದಾರೆ .
ಮಳೆಗಾಗಿ ಬೇಡುತ್ತಿದ್ದರೂ ಮನದೊಳಗೆ ಧಗಧಗಿಸಿ ಉರಿಯುವ ಜ್ವಾಲಾಮುಖಿಯಾಗಿದ್ದೇನೆಂದು ಈ
ಸಂದರ್ಭದಲ್ಲಿ ಕವಯಿತ್ರಿ ಹೇಳಿರುವರು .
3 ) “ ದೀನದಲಿತತನಕ್ಕೆ ಧಿಕ್ಕಾರವಿರಲಿ ! ”
4 ) “ ಗಂಜಿಗೂ ಗತಿಯಿಲ್ಲ ”