Professional Documents
Culture Documents
02. ವಚನಗಳು Notes
02. ವಚನಗಳು Notes
com
ಕವಿ ಪರಿಚಯ :
“ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ” ಎಂಬ ಅಂಕಿತದಲ್ಲಿ ಉರಿಲಿಂಗಪೆದ್ದಿಯ 366 ವಚನಗಳು
ಇದುವರೆಗೂ ದೊರೆತಿವೆ . ಈತ ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಿದ್ದ , ತಂದೆ –
ತಾಯಿಗಳು ಇವನಿಗೆ ಪೆದ್ದಣ್ಣ ಎಂಬ ಹೆಸರಿಟ್ಟರು . ಕಳ್ಳತನ ಮಾಡಿಕೊಂಡು ಜೀವಿಸುತ್ತಿದ್ದ . ಈತ ಒಮ್ಮೆ
ಉರಿಲಿಂಗದೇವರ ಮನೆಗೆ ಕನ್ನ ಹಾಕಿದ . ಆಗ ಉರಿಲಿಂಗದೇವರು ನಂದವಾಡ ಗ್ರಾಮದ ಸೂರಯ್ಯನಿಗೆ
ದೀಕ್ಷೆ ನೀಡುತ್ತಿದ್ದರು . ಇದನ್ನು ಕಂಡು ಮನಃ ಪರಿವರ್ತನೆ ಹೊಂದಿದ ಪೆದ್ದಣ್ಣ ದಿನವೂ ಉರಿಲಿಂಗಪೆದ್ದಿಗಳ
ಮಠಕ್ಕೆ ಒಂದು ಹೊರೆ ಸೌದೆ ತಂದು ಹಾಕುತ್ತಿದ್ದ . ಕೊನೆಗೊಂದು ದಿನ ಗುರುವನ್ನು ಕಾಡಿ ಬೇಡಿ
ದೀಕ್ಷೆಯನ್ನು ಪಡೆದು ‘ ಉರಿಲಿಂಗಪೆದ್ದಿ ‘ ಎಂಬ ಹೆಸರನ್ನು ಧರಿಸಿ ಗುರುವಿಗೆ ತಕ್ಕ ಶಿಷ್ಯನಾದನು .
ಗುರುವಿನ ನಂತರ ಸಕಲಶಾಸ್ತ್ರ ಪಾರಂಗತನಾಗಿ ತಾನೇ ಆ ಪೀಠಕ್ಕೆ ಒಡೆಯನಾದ ಮಹಾನುಭವಿ ಈತ .
ಪದಗಳ ಅರ್ಥ:
ಸಕಲ-ಸಮಗ್ರವಾದುದು . ಪರಿಪೂರ್ಣವುಳ್ಳದ್ದು ( ಸಕಲತತ್ತ್ವವೆಂದರೆ ಪರಶಿವನ ಸ್ವರೂಪವೇ ಆಗಿದೆ .
ಸಕಲ – ನಿಷ್ಕಲವೆಂಬವು ವಚನಕಾರರ ಆಕಾರ ಮತ್ತು ನಿರಾಕಾರ ಸ್ವರೂಪವನ್ನು ಕುರಿತ
ಜಿಜ್ಞಾಸೆಯಾಗಿದೆ ) ; ನಿಷ್ಕಲ – ನಿರಾಕಾರವಾದ , ಅಖಂಡವಾದ , ಕಲಾರಹಿತವಾದ ( ನಿರಾಕಾರ
ಸ್ವರೂಪವಾದ ಪರವಸ್ತು , ಶಿವಲಿಂಗ ) : ಮಹಾಘನ – ಅತಿಶ್ರೇಷ್ಠವಾದ , ಉನ್ನತವಾದ. ನಿರಾಳ –
ಚಿಂತೆಯಿಲ್ಲದ , ಪರುಷ – ಮುಟ್ಟಿದ್ದನ್ನು ಚಿನ್ನವಾಗಿಸುವ ( ಮಣಿ ) ಶಿಲೆ ; ಗೃಹ – ಮನೆ ; ತಿರಿ – ಬೇಡು ;
ತೊರೆ – ನದಿ ; ತೃಷೆ – ಬಾಯಾರಿಕೆ ; ಉದಕ – ನೀರು ; ಲಘು – ಸಣ್ಣದು ; ಗುರು – ದೊಡ್ಡದು ,
ಬೋಧಕ .
3 “ ಪುಷ್ಟವಿಲ್ಲದೆ ಪರಿಮಳವನರಿಯಬಹುದೆ “