You are on page 1of 5

4/20/24, 10:33 PM ಅಲ್ಲ ಮ ಪ್ರ ಭು - ವಿಕಿಪೀಡಿಯ

ಅಲ್ಲ ಮ ಪ್ರ ಭು
https://kn.wikipedia.org/s/5vg
ಅಲ್ಲ ಮಪ್ರ ಭು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರ ಸಿದ್ಧ ನಾದವರು. ಅತ್ಯಂತ ನೇರ ನಿಷ್ಠು ರವಾದಿ.
ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ -ವೈರಾಗ್ಯ ವನ್ನು ಬೋಧಿಸಿದರು. ತನ್ನ ವಚನಗಳ ಮೂಲಕ
ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿ ಸಿದರು.

ಅಲ್ಲ ಮಪ್ರ ಭುವಿನ ಸಂಕ್ಷಿ ಪ್ತ ಪರಿಚಯ


೧೨ನೆಯ ಶತಮಾನದ ಶಿವಶರಣರಲ್ಲಿ ಅಲ್ಲ ಮಪ್ರ ಭು ಉಚ್ಚ ಸ್ಥಾ ನದಲ್ಲಿ ದ್ದಾ ನೆ. ಈತನು ಅರಸು
ಮನೆತನದಲ್ಲಿ ಯೆ ಹುಟ್ಟಿ ಬೆಳೆದವನಾದರೂ, ಮನೆ ಬಿಟ್ಟು ತೆರಳಿ ಅಧ್ಯಾ ತ್ಮ ಸಾಧಕನಾದನೆಂದು
ಹೇಳಲಾಗುತ್ತಿ ದೆ. ಬಸವಣ್ಣ ನ ಕಲ್ಯಾ ಣಕ್ಕೆ ಬಂದ ಅಲ್ಲ ಮಪ್ರ ಭು ಅಲ್ಲಿ ಅನುಭವಮಂಟಪದ
ಶೂನ್ಯ ಸಿಂಹಾಸನದ ಅಧ್ಯ ಕ್ಷನಾಗುತ್ತಾ ನೆ. ಅಲ್ಲ ಮನ ವಚನಚಂದ್ರಿ ಕೆಯಲ್ಲಿ ೧೨೯೪ ವಚನಗಳು
ಲಭ್ಯ ವಾಗಿವೆ. ಅಲ್ಲ ಮಪ್ರ ಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲಕ್ಕೆ ಹೋಗಿ ಅಲ್ಲಿ ಯ ವನದಲ್ಲಿ
ಶಿವೈಕ್ಯ ನಾದನೆಂದು ಪ್ರ ತೀತಿ. ಬಸವಣ್ಣ ನವರ ಸಮಕಾಲೀನನಾದ ಅಲ್ಲ ಮಪ್ರ ಭುವಿನ ವಚನಗಳ ಅಂಕಿತ
'ಗುಹೇಶ್ವ ರ' ಅಥವಾ 'ಗೊಹೇಶ್ವ ರ'. ಈತನ ವಚನಗಳಲ್ಲಿ ಗಹನವಾದ ಆಧ್ಯಾ ತ್ಮ ಹಾಗೂ ತಾತ್ವಿ ಕ
ವಿಚಾರಗಳಿವೆ. ಅಲ್ಲ ಮನ ಆಧ್ಯಾ ತ್ಮಿ ಕ ಅನುಭವಗಳ ಅಸಾಮಾನ್ಯ ತೆಯಿಂದ ಅವನ ವಚನಗಳನ್ನು
ಅರ್ಥಮಾಡಿಕೊಳ್ಳು ವುದು ಕಷ್ಟ . ಅವನದು ಬಹುಮಟ್ಟಿ ಗೆ ರೂಪಕ ಭಾಷೆ. ಈ ಭಾಷೆ ಅವನ ವೈಶಿಷ್ಟ್ಯ ವೂ
ಹೌದು. ಚಾಮರಸನು ತನ್ನ ಪ್ರ ಭುಲಿಂಗಲೀಲೆ ಎನ್ನು ವ ಕಾವ್ಯ ದಲ್ಲಿ ಅಲ್ಲ ಮಪ್ರ ಭುವಿನ ಐತಿಹ್ಯ ವನ್ನು
ವರ್ಣಿಸಿದ್ದಾ ನೆ.

ಹುಟ್ಟು
ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂ ಕಿನ ಬಳ್ಳಿ ಗಾವೆಯಲ್ಲಿ ಜನಿಸಿದರು. ಸುಮಾರು(೧೨ನೇ ಶತಮಾನ)

🙏🙏
ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸಿ-೧೨೦೦೦ ಎಂಬ ಪ್ರಾಂತ್ಯ ದ ಒಂದು
ಹಳ್ಳಿ . ಇದೇ ಬಳ್ಳಿ ಗಾವೆಯ ಹತ್ತಿ ರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರ ಮುಖ ಕೇಂದ್ರ .

ಜೀವನ ಚರಿತ್ರೆ
ಅಲ್ಲ ಮನ ಜೀವನ ಚರಿತ್ರೆ ಯನ್ನು ನಿಖರವಾಗಿ ನಿರೂಪಿಸಲು ಸಾಧ್ಯ ವಾಗಲಾರದೊಷ್ಟು ಐತಿಹ್ಯ ಗಳು ಆ
ವ್ಯ ಕ್ತಿ ತ್ವ ವನ್ನು ಸುತ್ತು ವರಿದಿವೆ. ಅಲ್ಲ ಮನ ಬಗ್ಗೆ ಹದಿಮೂರನೇ ಶತಮಾನದ ಹರಿಹರಮಹಾಕವಿಯು,
ಪ್ರ ಭುದೇವರ ರಗಳೆಯಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಿರುವನಾದರೂ, ಅಲ್ಲ ಮನ ಪ್ರ ಭಾವಲಯದಿಂದ
ಪೂರ್ಣವಾಗಿ ಹೊರ ಬಂದು , ಒಂದು ಸಹಜ ಚಿತ್ರ ಣವನ್ನು ಕೊಡುವಲ್ಲಿ ಹರಿಹರನಂತಹ ವಾಸ್ತ ವವಾದಿ
ಕವಿ ಸಹ ಸೋಲುತ್ತಾ ನೆ. ಇನ್ನು ಚಾಮರಸನು ಅಲ್ಲ ಮಪ್ರ ಭುದೇವನನ್ನು ಈ ಲೋಕದ ಮಾನವ
ಚೇತನವೆಂದು ಒಪ್ಪಿ ಕೊಳ್ಳು ವುದೇ ಇಲ್ಲ . ಅವನು ಕೈಲಾಸದಿಂದ ಬಂದ ಶಿವನ ಚಿತ್ಕ ಳೆ, ಎಂದೇ ಚಿತ್ರಿ ಸುತ್ತಾ ನೆ.
ಇವರಿಬ್ಬ ರಲ್ಲ ದೆ ಎಳಂದೂರು ಹರಿಹರೇಶ್ವ ರನೆಂಬ ಮತ್ತೊ ಬ್ಬ ಕವಿಯೂ ಅಲ್ಲ ಮಪ್ರ ಭುವಿನ ಬಗ್ಗೆ ಕಾವ್ಯ
ರಚನೆ ಮಾಡಿದ್ದಾ ನೆ. ಇನ್ನು ಚಾಮರಸನು ರಚಿಸಿರುವ ಪ್ರ ಭುಲಿಂಗಲೀಲೆಯು ತಮಿಳು, ಮರಾಠಿ ಮುಂತಾದ
ಭಾಷೆಗಳಿಗೆ ಬಲು ಹಿಂದೆಯೇ ಅನುವಾದಗೊಂಡು ಪ್ರ ಖ್ಯಾ ತವಾಗಿದ್ದಿ ತು .ಈ ಮಹಾಕವಿಗಳಲ್ಲ ದೆ
,ಅಲ್ಲ ಮಪ್ರ ಭುವಿನ ಬಗ್ಗೆ ಪ್ರಾ ಸಂಗಿಕವಾಗಿ ಬರೆಯದ ವೀರಶೈವ ಸಾಹಿತ್ಯ ವೇ ಇಲ್ಲ ವೆನ್ನ ಬಹುದು.
ಇದೆಲ್ಲ ಕ್ಕಿಂತಲೂ ಮುಖ್ಯ ವಾಗಿ, ಸ್ವ ತಃ ಅಲ್ಲ ಮಪ್ರ ಭುವೇ ಅತನ ಕಾಲದ ಬಲು ದೊಡ್ಡ
ಸಾಹಿತ್ಯ ಚೇತನವಾಗಿದ್ದ ನೆನ್ನು ವುದು, ಮತ್ತು ಅವನವೇ ಆದ ಅನೇಕ ವಚನಗಳು ಉಪಲಬ್ಧ ವಿರುವುದು

https://kn.wikipedia.org/wiki/ಅಲ್ಲ ಮ_ಪ್ರ ಭು 1/5


4/20/24, 10:33 PM ಅಲ್ಲ ಮ ಪ್ರ ಭು - ವಿಕಿಪೀಡಿಯ

,ಅವನ ವ್ಯ ಕ್ತಿ ತ್ವ ವನ್ನು ಗ್ರ ಹಿಸಲು ತುಂಬಾ ಉಪಯುಕ್ತ ಮಾರ್ಗವಾಗಿದೆ .ಇಡಿಯ ವಚನ ಸಾಹಿತ್ಯ ದಲ್ಲಿ ಯೇ ,
ಸಾಹಿತ್ಯ ದ ಪರಿಭಾಷೆಯನ್ನು ಸರಿಯಾದ ಮಾರ್ಗದಲ್ಲಿ ದುಡಿಸಿಕೊಂಡವರಲ್ಲಿ ಅಕ್ಕ ಮಹಾದೇವಿ ಮತ್ತು
ಅಲ್ಲ ಮಪ್ರ ಭು ಇಬ್ಬ ರೂ ಅಪ್ರ ತಿಮರು .

ಚಾಮರಸನ ಪ್ರ ಭುಲಿಂಗಲೀಲೆ


ಚಾಮರಸನು ಅಲ್ಲ ಮನ ತಂದೆ ತಾಯಿಗಳನ್ನು ನಿರಹಂಕಾರ-ಸುಜ್ಞಾ ನಿಗಳೆಂದು ಕರೆಯುತ್ತಾ ನೆ. ನಂತರ
ಮಾಯಾದೇವಿಯ ತಂದೆ ತಾಯಿಗಳನ್ನು ಮಮಕಾರ-ಮೋಹಿನಿಯರೆಂದು ಕರೆಯುವುದನ್ನು ಕಂಡಾಗ
ಇವೆಲ್ಲ ವೂ ವಾಸ್ತ ವವಲ್ಲ ದ, ಕವಿಯ ಭಾವನಾತ್ಮ ಕ ರೂಪಕಗಳೆನಿಸದೆ ಇರದು.
ಹರಿಹರ ಮಹಾಕವಿಯು ಅಲ್ಲ ಮನ ತಂದೆ ತಾಯಿಗಳ ಹೆಸರುಗಳನ್ನೆ ಪ್ರ ಸ್ತಾ ಪಿಸದೆ ಅಲ್ಲ ಮನ ತಂದೆಯು
ಬಳ್ಳಿ ಗಾವಿಯ ನಾಗವಾಸಾಧಿಪನಾಗಿದ್ದ ನೆಂದು ವಿವರಿಸುವನು. ನಾಗವಾಸಾಧಿಪನೆಂದರೆ ಅರಮನೆಯ
ಅಂತಃಪುರದ ಸಂಗೀತ, ನರ್ತನಗಳ ವಲಯದ ಅಧಿಕಾರಿಯೆಂದೇ ಅರ್ಥ ಬರುವುದರಿಂದ, ಅಲ್ಲ ಮನು
ಒಬ್ಬ ಕಲಾವಿದನ ಮಗನಾಗಿದ್ದ ನೆಂದು ಭಾವಿಸಬಹುದು ಮತ್ತು ಅಂದಿನ ಕಾಲಮಾನದಲ್ಲಿ ನಟರಿಗೆ,
ನಟುವಾಂಗದ ವೃತ್ತಿ ಯವರಿಗೆ ಸಾಮಾಜಿಕ ಮನ್ನ ಣೆಯೂ ಇರಲಿಲ್ಲ ವೆಂಬುದು ಗಮನಾರ್ಹವಾದುದು.
ಅಲ್ಲ ಮನ ಯೌವ್ವ ನ ಕಾಲದ ಪ್ರೇಮ, ಕಾಮ, ವ್ಯಾ ಮೋಹಗಳ ಚಿತ್ರ ಗಳನ್ನು ಹರಿಹರಮಹಾಕವಿಯೂ ,
ಚಾಮರಸನೂ ಕಟ್ಟಿ ಕೊಡುವ ರೀತಿಗಳು ತುಂಬಾ ವಿಭಿನ್ನ ವಾಗಿವೆ. ಅಲ್ಲ ಮನು ಸಾಕ್ಷಾ ತ್ ಶಿವಾಂಶ
ಸಂಭೂತನಾದುದರಿಂದ, ಕಾಮಾದಿ ಅರಿಷಡ್ವ ರ್ಗಗಳು ಅವನನ್ನು ಸೋಂಕುವುದೇ ಇಲ್ಲ . ಬನವಾಸೆಯ
ಮಧುಕೇಶ್ವ ರ ಮಂದಿರದಲ್ಲಿ ಶಿವನೆದುರಿನಲ್ಲಿ ಮದ್ದ ಳೆಯ ಮಹಾ ಯೋಗದಲ್ಲಿ ತಲ್ಲೀನನಾಗಿದ್ದ
ಅಲ್ಲ ಮನನ್ನು ಆ ಊರಿನ ರಾಜನ ಮಗಳು, ಮಾಯಾದೇವಿ ಕಂಡು ವಿಭ್ರಾಂತಿಗೊಳಗಾಗುತ್ತಾ ಳೆ.
ಅವನನ್ನು ಮೋಹಿಸಿ, ಕಾಮಿಸುತ್ತಾ ಳೆ. ಇಲ್ಲಿ ಚಾಮರಸನ ಪ್ರ ಕಾರ ಪಾರ್ವತೀ ದೇವಿಯ ಮಾಯೆಯ
ಅಂಶವೇ ಅಲ್ಲ ಮನನ್ನು ಜಯಿಸಲು ಭೂಲೋಕದಲ್ಲಿ ಮಾಯಾದೇವಿಯಾಗಿ, ಮಮಕಾರ,
ಮೋಹಿನಿಯರ ಮಗಳಾಗಿ ಜನಿಸಿರುತ್ತಾ ಳೆ. ಇದನ್ನು ಅರಿತ ಅಲ್ಲ ಮನು, ಅಂತರ್ಧಾನನಾಗಿ,
ಅರಣ್ಯ ವನ್ನು ಸೇರುತ್ತಾ ನೆ. ಹಿಂಬಾಲಿಸಿದ ಮಾಯೆಗೆ, ಪರವಶನಾಗದೆ ಶಾಶ್ವ ತ ನಿಲುವನ್ನು
ವಿವರಿಸುತ್ತಾ ನೆ. ಹೀಗೆ ಇಬ್ಬ ರು ಮಹಾ ಕವಿಗಳು ಅಲ್ಲ ಮನನ್ನು ವಿಭಿನ್ನ ವಾಗಿ ಕಟ್ಟಿ ಕೊಡುತ್ತಾ ರೆ.
ಹರಿಹರ, ಚಾಮರಸರ ಕಾವ್ಯ ಗಳ ನಾಯಕನಾಗಿ ತೋರಿ ಬರುವ ಅಲ್ಲ ಮಪ್ರ ಭುವು, ನಂತರ ಶೂನ್ಯ
ಸಂಪಾದನೆಕಾರರ ಕೃತಿಯಲ್ಲಿ ಅಸಾಮಾನ್ಯ ವ್ಯ ಕ್ತಿ ತ್ವ ದವನಾಗಿ ಚಿತ್ರಿ ತನಾಗಿದ್ದಾ ನೆ.
ಅಲ್ಲ ಮನ ವಚನಗಳು ಮತ್ತು ಸಮಕಾಲೀನ ಶರಣರ ವಚನಗಳನ್ನೇ, ರತ್ನ ಮಾಲೆಯಂತೆ ಕೋದು
,ಸಂದರ್ಭಕ್ಕೆ ಅನುಗುಣವಾಗಿ ಕೆಲವು ವಚನಗಳನ್ನು ಸೇರಿಸಿ, ಶಿವಗಣ ಪ್ರ ಸಾದಿ ಮಹದೇವಯ್ಯ ಗಳು
ಮೊದಲ ಶೂನ್ಯ ಸಂಪಾದನೆಯನ್ನು ರಚಿಸಿದರು.
ನಂತರ ಗೂಳೂರು ಸಿದ್ದ ವೀರಣ್ಣೊ ಡೆಯರುಮೂರನೆಯದಾಗಿ ಗುಮ್ಮ ಳಾಪುರದ ಸಿದ್ದ ಲಿಂಗದೇವರು
ಅಂತಿಮವಾಗಿ ಕೆಂಚವೀರಣ್ಣೊ ಡೆಯರುಹೀಗೆ ನಾಲ್ಕು ಶೂನ್ಯ ಸಂಪಾದನೆಗಳು ಅಲ್ಲ ಮ ಪ್ರ ಭುವಿನ
ಜೀವನ ಚಿತ್ರ ಣ ನೀಡುವಲ್ಲಿ ಇಂದು ನೆರವಾಗಿವೆ.

ಹರಿಹರ ಮಹಾಕವಿಯ ಪ್ರ ಭುದೇವರ ರಗಳೆ


ಅತ್ಯಂತ ಸುಂದರನೂ, ಅಪ್ರ ತಿಮ ಮದ್ದ ಲಿಗನೂ, ಆಕರ್ಷಕ ಯುವಕನೂ ಆಗಿದ್ದ ಅಲ್ಲ ಮನನ್ನು ಶಿವ
ದೇವಾಲಯದಲ್ಲಿ , ಮದ್ದ ಳೆ ಬಾರಿಸುತ್ತಿ ರುವ ಸಮಯದಲ್ಲಿ ಕಾಮಲತೆಯು ಆಕಸ್ಮಿ ಕವಾಗಿ
ಸಂಧಿಸುತ್ತಾ ಳೆ. ಅವನನ್ನು ಕಂಡ ಕೂಡಲೇ ಅವನಲ್ಲಿ ಅನುರಕ್ತ ಳಾಗಿ ; ಕಾಮವಶಳಾಗಿ
ಮೂರ್ಛಿತಳಾಗುತ್ತಾ ಳೆ. ಅಲ್ಲ ಮನ ಅವಸ್ಥೆ ಯೂ ಸಹ ಅದೇ ಪರಿಯಾಗುತ್ತ ದೆ .ಕಾಮಲತೆಯಂತಹ
ಮಿಂಚಿನ ಮೋಹನಾಂಗಿಯನ್ನು ಕಂಡು, ಅಲ್ಲ ಮನು ವಿವಶನಾಗುತ್ತಾ ನೆ. ಇವರಿಬ್ಬ ರ ಸ್ಥಿ ತಿಯನ್ನು
ಮನಗಂಡ ಸಖಿಯರು ಇವರ ಮಿಲನಕ್ಕೆ ಅವಕಾಶ ಕಲ್ಪಿ ಸುತ್ತಾ ರೆ . ಅಲ್ಲಿಂದ ಅಲ್ಲ ಮ ಮತ್ತು
ಕಾಮಲತೆಯರು ಇಹದ ಸಮಸ್ತ ವನ್ನೂ ಮರೆತು, ಏಕ ದೇಹಿಗಳಂತೆ, ಕಾಲ ದೇಶಾತೀತರಾಗಿ, ಲೋಕದ
ಮರವೆಯಲ್ಲಿ ಕಾಲ ಕಳೆಯುತ್ತಿ ರುವಾಗ, ಕಾಮಲತೆಯು ಜ್ವ ರ ಪೀಡಿತೆಯಾಗಿ ಆಕಸ್ಮಿ ಕವಾಗಿ ಮರಣ
ಹೊಂದುತ್ತಾ ಳೆ. ಇದರಿಂದ ವಿಚಲಿತನಾದ ಅಲ್ಲ ಮನು ವಿರಹ ಜ್ವಾ ಲೆಯಲ್ಲಿ ಬೇಯುತ್ತಾ , ಮರುಳನಂತೆ
ಅಲೆಯುತ್ತಾ , ತಿರುಗುತ್ತಿ ರುವಾಗ, ಊರ ಹೊರಗೆ ಹೂತು ಹೋದ ಪ್ರಾ ಚೀನ ಶಿವಾಲಯವೊಂದರ
ಶಿಖರದ ತುದಿಯು, ಕಾಲಬೆರಳ ತುದಿಗೆ ತಗುಲಿ, ಕುತೂಹಲಗೊಂಡು ಅಗೆಯ ತೊಡಗಿದಾಗ ಇಡಿ
ಶಿವಾಲಯ ಗೋಚರವಾಗುತ್ತ ದೆ. ಅದರೊಳಗೆ ಪ್ರ ವೇಶಿಸಿ ದಾಗ ಅಲ್ಲಿ ಶಿವಯೋಗದಲ್ಲಿ ದ್ದ ಅನಿಮಿಷ
ದೇವನ ದರ್ಶನವಾಗಿ, ಅವನ ಕೈಯ್ಯ ಲ್ಲಿ ದ್ದ ಅತ್ಮ ಲಿಂಗವು ಅಲ್ಲ ಮಪ್ರ ಭುವಿನ ಕೈಗೆ ಬಂದು ಸೇರುತ್ತ ದೆ.
https://kn.wikipedia.org/wiki/ಅಲ್ಲ ಮ_ಪ್ರ ಭು 2/5
4/20/24, 10:33 PM ಅಲ್ಲ ಮ ಪ್ರ ಭು - ವಿಕಿಪೀಡಿಯ

ಇದರಿಂದಾಗಿ ಇಬ್ಬ ರ ನಡುವೆ ಗುರು ಶಿಷ್ಯ ಸಂಬಂಧವೇರ್ಪಡುತ್ತ ದೆ. ತಕ್ಷಣ ಅನಿಮಿಷದೇವನು


ಶಿವಾಧೀನನಾಗುತ್ತಾ ನೆ. ನಂತರ ಅಲ್ಲ ಮನ ಎಲ್ಲ ಮೋಹ ಮಮತೆಗಳು ಅಳಿದು, ಜಗತ್ತಿ ನ ನಶ್ವ ರತೆ;
ವಿಶ್ವ ಕಾರಣದ ಶಾಶ್ವ ತತೆ ಅರಿವಿಗೆ ಬಂದು ಅನಂತ ಜ್ಞಾ ನಿಯಾಗುತ್ತಾ ನೆ. ಇದು ಹರಿಹರ ಮಹಾಕವಿಯು
ಕಟ್ಟಿ ಕೊಡುವ ಅಲ್ಲ ಮನ ಪರಿವರ್ತನೆಯ ಚಿತ್ರ ಣ.

ಎಚ್.ತಿಪ್ಪೇರುದ್ರ ಸ್ವಾ ಮಿಯವರ ಪರಿಪೂರ್ಣದೆಡೆಗೆ

ಇಪ್ಪ ತ್ತ ನೆಯ ಶತಮಾನದಲ್ಲಿ ಅಲ್ಲ ಮಪ್ರ ಭುವಿನ ಚಿತ್ರ ಣವನ್ನು ಪುನರ್ರೂ ಪಿಸುವಲ್ಲಿ
ಎಚ್.ತಿಪ್ಪೇರುದ್ರ ಸ್ವಾ ಮಿಯವರು ಪರಿಪೂರ್ಣದೆಡೆಗೆ ಕಾದಂಬರಿಯ ಮೂಲಕ ಅನನ್ಯ ವಾಗಿ
ಪ್ರ ಯತ್ನಿ ಸಿದ್ದಾ ರೆ.
ಬಿ.ಪುಟ್ಟ ಸ್ವಾ ಮಯ್ಯ ನವರು ಅಲ್ಲ ಮಪ್ರ ಭುವಿನ ಬಗೆಗೆ ಅದೇ ಹೆಸರಿನ ಕಾದಂಬರಿಯನ್ನು
ರಚಿಸಿರುವುದಲ್ಲ ದೆ, ಹನ್ನೆ ರಡನೆಯ ಶತಮಾನದ, ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ,ಹೀಗೆ
ಸಮಸ್ತ ಮುಖಗಳನ್ನೊ ಳಗೊಂಡ ಆರು ಕಾದಂಬರಿಗಳಲ್ಲಿ , ಅಲ್ಲ ಮನನ್ನು ಅತ್ಯಂತ ವಿಶಿಷ್ಟ ವಾಗಿ
ಚಿತ್ರಿ ಸುತ್ತಾ ರೆ.
ಹೀಗೆ ಎಷ್ಟೆ ಲ್ಲಾ ಮಹನೀಯರಿಂದ ಪೂಜನೀಯನಾದ ಅಲ್ಲ ಮಪ್ರ ಭುವಿನ ವ್ಯ ಕ್ತಿ ತ್ವ ಮತ್ತು ಜೀವನ
ವಿವರವು ಕಡೆಗೂ ನಿಗೂಢವೇ ಆಗಿ ಉಳಿತ್ತ ದೆ . ಲಭ್ಯ ವಿರುವ ಅವನ ವಚನಗಳಂತೆ, ಅವನ ವ್ಯ ಕ್ತಿ ತ್ವ
ಎಂದು ಊಹಿಸಬಹುದು.[೧][೨][೩]

ವಚನಗಳು
ಹೆಣ್ಣಿ ಗಾಗಿ ಸತ್ತ ವರು ಕೋಟಿ
ಮಣ್ಣಿ ಗಾಗಿ ಸತ್ತ ವರು ಕೋಟಿ
ಹೊನ್ನಿ ಗಾಗಿ ಸತ್ತ ವರು ಕೋಟಿ
ಗುಹೇಶ್ವ ರಾ
ನಿಮಗಾಗಿ ಸತ್ತ ವರನಾರನೂ ಕಾಣೆ
ಇಲ್ಲಿ ಅಲ್ಲ ಮ ಪ್ರ ಭುಗಳು, ಹೆಣ್ಣಿ ಗಾಗಿ ನಡೆದ ರಾಮ-ರಾವಣರ ಯುದ್ಧ , ಮಣ್ಣಿ ಗಾಗಿ ನೆಡೆದ ಕುರುಕ್ಷೇತ್ರ
ಯುದ್ಧ , ಹೊನ್ನಿ ಗಾಗಿ ನೆಡೆದ ಅಶೋಕನ ಕಳಿಂಗ ಯುದ್ಧ ವನ್ನು ಉದಾಹರಣೆ ನೀಡಿ, ದೇವರಿಗಾಗಿ ಯಾರೂ
ಜೀವ ನೀಡಲು ಸಿದ್ಧ ರಿಲ್ಲ ದ, ಮಾನವನ ಸ್ವಾ ರ್ಥವನ್ನು ಎತ್ತಿ ತೋರಿಸಿದ್ದಾ ರೆ.

"ಏನೂ ಏನೂ ಇಲ್ಲ ದ ಬಯಲೊಳಗೊಂದು


ಬಗೆಗೊಳಗಾದ ಬಣ್ಣ ತಲೆದೋರಿತ್ತು .
ಆ ಬಯಲನಾ ಬಣ್ಣ ಶೃಂಗರಿಸಲು ಬಯಲು ಸ್ವ ರೂಪುಗೊಂಡಿತ್ತು .
ಅಂತಪ್ಪ ಸ್ವ ರೂಪಿನ ಬೆಡಗು ತಾನೆ
ನಮ್ಮ ಗುಹೇಶ್ವ ರ ಲಿಂಗದ ಪ್ರ ಥಮಭಿತ್ತಿ ."
ಎಂದು ಅಲ್ಲ ಮಪ್ರ ಭುದೇವರು ಹೇಳುವಲ್ಲಿ ವಿಶ್ವ ದ ವಿರಾಟ್ ಸ್ವ ರೂಪದ ಕಲ್ಪ ನೆ ಇದೆ. ಚೈತನ್ಯ ವು ವಸ್ತು ವಾಗಿ
ರೂಪುಗೊಳ್ಳು ವ ಕ್ರ ಮವಿದೆ. ಇದೇ ವಸ್ತು ರಹಸ್ಯ .

ಆದಿಯಾಧಾರವಿಲ್ಲ ದಂದು
ಹಮ್ಮು ಬಿಮ್ಮು ಗಳಿಲ್ಲ ದಂದು
ಸುರಾಳನಿರಾಳವಿಲ್ಲ ದಂದು
ಸಚರಾಚರವೆಲ್ಲ ರಚನೆಗೆ ಬಾರದಂದು
ಗುಹೇಶ್ವ ರ, ನಿಮ್ಮ ಶರಣನುದಯಿಸಿದನಂದು

ಕಲ್ಲ ಮನೆಯ ಮಾಡಿ


ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ

https://kn.wikipedia.org/wiki/ಅಲ್ಲ ಮ_ಪ್ರ ಭು 3/5


4/20/24, 10:33 PM ಅಲ್ಲ ಮ ಪ್ರ ಭು - ವಿಕಿಪೀಡಿಯ

ದೇವರೆತ್ತ ಹೋದರೋ?
ಲಿಂಗಪ್ರ ತಿಷ್ಠೆ ಯ ಮಾಡಿದವಂಗೆ
ನಾಕನರಕ ಗುಹೇಶ್ವ ರ.

ಹೊನ್ನು ಮಾಯೆಯೆಂಬರು
ಹೊನ್ನು ಮಾಯೆಯಲ್ಲ .
ಹೆಣ್ಣು ಮಾಯೆಯೆಂಬರು
ಹೆಣ್ಣು ಮಾಯೆಯಲ್ಲ .
ಮಣ್ಣು ಮಾಯೆಯೆಂಬರು
ಮಣ್ಣು ಮಾಯೆಯಲ್ಲ .
ಮನದ ಮುಂದಣ ಆಶೆಯೇ ಮಾಯೆ ಕಾಣಾ
ಗುಹೇಶ್ವ ರ

ಅಲ್ಲ ಮನ ತತ್ತ್ವ ದೃಷ್ಠಿ

ಅಲ್ಲ ಮ ತನ್ನ ಬೆಡಗಿನ ವಚನದಲ್ಲಿ ತತ್ತ್ವ ಜ್ಞಾ ನದ ಒಳಗುಟ್ಟ ನ್ನು ಹೀಗೆ ಹೇಳಿದ್ದಾ ನೆ:
ಊರದ ಚೇಳಿನ ಏರದ ಬೇನೆಯಲ್ಲಿ , ಮೂರುಲೋಕವೆಲ್ಲಾ ನರಳಿತ್ತು !
ಹುಟ್ಟ ದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟ ದೆ ಹೂಸಲು;
ಮಾಬುದು ಗುಹೇಶ್ವ ರಾ.
ಅರ್ಥ:- ಕಚ್ಚ ದಿರುವ (ಇಲ್ಲ ದ)ಚೇಳಿನ ಆಗದೇ ಇರುವ ನೋವಿನಿಂದ (ಇಲ್ಲ ದ ನೋವಿನಿಂದ) ಮೂರು
ಲೋಕವೂ ನರಳಿತು! ಹುಟ್ಟ ದೇ ಇರುವ ಗಿಡದ ಎಲೆಯನ್ನು ತಂದು, ಅದನ್ನು ಮುಟ್ಟ ದೆ ಹಚ್ಚ ಲು
ಗಾಯ/ನೋವು ಮಾಯಿತು(ವಾಸಿಯಾಯಿತು). ಅಂದರೆ, ಚೇಳೇ ಇರಲಿಲ್ಲ , ಆದರೆ ಕಚ್ಚಿ ತೆಂಬ
ಬ್ರ ಮೆ.ಭ್ರ ಮೆಯಿಂದ ನೋವಿಲ್ಲ ದಿದ್ದ ರೂ ಭ್ರ ಮೆಯಿಂದ ನೋವು; ಈ ನೋವಿಗೆ 'ಇಲ್ಲ ಇಲ್ಲ ' ಎಂಬುದೇ
ಮದ್ದು ! (ಅದ್ವೈತ ಸಿದ್ಧಾಂತದ ಸಂಕ್ಷಿ ಪ್ತ ನಿರೂಪಣೆ)[೪] (ಅದಕ್ಕೇ ಅಲ್ಲ ಮ ಪ್ರ ಭು ತನ್ನ ಹೆಸರನ್ನೇ
"ಅಲ್ಲ - ಮ" ಎಂದು ಇಟ್ಟು ಕೊಂಡಿದ್ದಾ ನೆ)

ಬೆಡಗಿನ ವಚನಗಳು
:ಅಜ್ಞಾ ನವೆಂಬ ತೊಟ್ಟಿ ಲೊಳಗೆ

ಜ್ಞಾ ನವೆಂಬ ಶಿಶುವ ಮಲಗಿಸಿ ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ ಜೋಗುಳವಾಡುತ್ತಿ ದ್ದಾ ಳೆ
ಭ್ರಾಂತಿಯೆಂಬ ತಾಯಿ ! ತೊಟ್ಟಿ ಲು ಮುರಿದು ನೇಣು ಹರಿದು ಜೋಗುಳ ನಿಂದಲ್ಲ ದೆ ಗುಹೇಶ್ವ ರನೆಂಬ
ಲಿಂಗವ ಕಾಣಬಾರದು

https://archive.org/stream/Bedagina-Vachanagalu-1900/Bedagina-
Vachanagalu#page/n353/mode/2up

https://archive.org/details/Bedagina-Vachanagalu-1900

ಗ್ರಂಥ ನೆರವು
ಹರಿಹರಮಹಾಕವಿಯ- "ಪ್ರ ಭುದೇವರ ರಗಳೆ"
ಚಾಮರಸನ - "ಪ್ರ ಭುಲಿಂಗಲೀಲೆ"

https://kn.wikipedia.org/wiki/ಅಲ್ಲ ಮ_ಪ್ರ ಭು 4/5


4/20/24, 10:33 PM ಅಲ್ಲ ಮ ಪ್ರ ಭು - ವಿಕಿಪೀಡಿಯ

ಎಚ್.ತಿಪ್ಪೇರುದ್ರ ಸ್ವಾ ಮಿ - "ಪರಿಪೂರ್ಣದೆಡೆಗೆ"

ಇದನ್ನೂ ನೋಡಿ
ಮೈಸೂರು ವಿಶ್ವ ವಿದ್ಯಾ ಲಯದ ವಿಶ್ವ ಕೋಶದಲ್ಲಿ ನ ಲೇಖನ (https://kn.wikisource.org/wiki/%E0%B2%
AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%
BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%
8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B
2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B
2%B6/%E0%B2%85%E0%B2%B2%E0%B3%8D%E0%B2%B2%E0%B2%AE%E0%B2%AA%E0%
B3%8D%E0%B2%B0%E0%B2%AD%E0%B3%81)

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ


ಸಂಬಂಧಪಟ್ಟ ಮೂಲಕೃತಿಗಳು ಇವೆ:
ಅಲ್ಲ ಮಪ್ರ ಭು

v·t·e ಲಿಂಗಾಯತ ವಿಷಯಗಳು [ಕುಸಿತ]

ಇತಿಹಾಸ ಲಿಂಗಾಯತ ಇತಿಹಾಸ


ಬಸವೇಶ್ವ ರ · ಅಲ್ಲ ಮ ಪ್ರ ಭು · ಅಕ್ಕ ಮಹಾದೇವಿ · ಸಿದ್ಧ ರಾಮ ·
ಶರಣರು
ಚನ್ನ ಬಸವಣ್ಣ · ಪಲ್ಕು ರಿಕಿ ಸೋಮನಾಥ · ಸರ್ವಜ್ಞ
ಅಷ್ಟಾ ವರಣ · ಷಟ್ ಸ್ಥ ಲ · ಪಂಚಾಚಾರಾ · ಇಷ್ಟ ಲಿಂಗ · ಕಾಯಕ
ನಂಬಿಕೆಗಳು ಮತ್ತು ಆಚರಣೆಗಳು
· ದಾಸೋಹ
ಶೂನ್ಯ ಸಂಪಾದನ · ವಚನ ಸಾಹಿತ್ಯ · ಆಗಮ · ಬಸವ ಪುರಾಣ ·
ಧಾರ್ಮಿಕ ಪಠ್ಯ
ಬಸವರಾಜ ವಿಜಯ · ಚನ್ನ ಬಸವ ಪುರಾಣ
ಕೂಡಲ ಸಂಗಮ · ಬಸವಕಲ್ಯಾ ಣ · ಇಂಗಳೇಶ್ವ ರ · ಉಳವಿ ·
ಸ್ಥ ಳಗಳು
ಯೆಡಿಯೂರು · ಬಸವನ ಬಾಗೇವಾಡಿ · ಸೋಲಾಪುರ
ಓಂ ನಮಃ ಶಿವಾಯ · ವಿಭೂತಿ · ಲಿಂಗಾಯತ ·
ಸಂಬಂಧಿಸಿದ ವಿಷಯಗಳು
ಅನುಭವ ಮಂಟಪ

Category · Hinduism portal

ಉಲ್ಲೇಖ
೧. ಹರಿಹರಮಹಾಕವಿಯ- "ಪ್ರ ಭುದೇವರ ರಗಳೆ"
೨. ಚಾಮರಸನ - "ಪ್ರ ಭುಲಿಂಗಲೀಲೆ"
೩. ಎಚ್.ತಿಪ್ಪೇರುದ್ರ ಸ್ವಾ ಮಿ - "ಪರಿಪೂರ್ಣದೆಡೆಗೆ"
೪. ತತ್ವ ಶಾಸ್ತ್ರದಿಂದ ಏನು ಪ್ರ ಯೋಜನ? ರಘು ಕೆ. ಸಿ.d: 19 ಅಕ್ಟೋಬರ್ 2019 (https://www.prajavani.ne
t/community/religion/what-are-benifits-philosophy-674568.html)

"https://kn.wikipedia.org/w/index.php?title=ಅಲ್ಲ ಮ_ಪ್ರ ಭು&oldid=1159041" ಇಂದ ಪಡೆಯಲ್ಪ ಟ್ಟಿ ದೆ

https://kn.wikipedia.org/wiki/ಅಲ್ಲ ಮ_ಪ್ರ ಭು 5/5

You might also like