Professional Documents
Culture Documents
ಅಲ್ಲ ಮ ಪ್ರ ಭು
https://kn.wikipedia.org/s/5vg
ಅಲ್ಲ ಮಪ್ರ ಭು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರ ಸಿದ್ಧ ನಾದವರು. ಅತ್ಯಂತ ನೇರ ನಿಷ್ಠು ರವಾದಿ.
ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ -ವೈರಾಗ್ಯ ವನ್ನು ಬೋಧಿಸಿದರು. ತನ್ನ ವಚನಗಳ ಮೂಲಕ
ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿ ಸಿದರು.
ಹುಟ್ಟು
ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂ ಕಿನ ಬಳ್ಳಿ ಗಾವೆಯಲ್ಲಿ ಜನಿಸಿದರು. ಸುಮಾರು(೧೨ನೇ ಶತಮಾನ)
🙏🙏
ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸಿ-೧೨೦೦೦ ಎಂಬ ಪ್ರಾಂತ್ಯ ದ ಒಂದು
ಹಳ್ಳಿ . ಇದೇ ಬಳ್ಳಿ ಗಾವೆಯ ಹತ್ತಿ ರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರ ಮುಖ ಕೇಂದ್ರ .
ಜೀವನ ಚರಿತ್ರೆ
ಅಲ್ಲ ಮನ ಜೀವನ ಚರಿತ್ರೆ ಯನ್ನು ನಿಖರವಾಗಿ ನಿರೂಪಿಸಲು ಸಾಧ್ಯ ವಾಗಲಾರದೊಷ್ಟು ಐತಿಹ್ಯ ಗಳು ಆ
ವ್ಯ ಕ್ತಿ ತ್ವ ವನ್ನು ಸುತ್ತು ವರಿದಿವೆ. ಅಲ್ಲ ಮನ ಬಗ್ಗೆ ಹದಿಮೂರನೇ ಶತಮಾನದ ಹರಿಹರಮಹಾಕವಿಯು,
ಪ್ರ ಭುದೇವರ ರಗಳೆಯಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಿರುವನಾದರೂ, ಅಲ್ಲ ಮನ ಪ್ರ ಭಾವಲಯದಿಂದ
ಪೂರ್ಣವಾಗಿ ಹೊರ ಬಂದು , ಒಂದು ಸಹಜ ಚಿತ್ರ ಣವನ್ನು ಕೊಡುವಲ್ಲಿ ಹರಿಹರನಂತಹ ವಾಸ್ತ ವವಾದಿ
ಕವಿ ಸಹ ಸೋಲುತ್ತಾ ನೆ. ಇನ್ನು ಚಾಮರಸನು ಅಲ್ಲ ಮಪ್ರ ಭುದೇವನನ್ನು ಈ ಲೋಕದ ಮಾನವ
ಚೇತನವೆಂದು ಒಪ್ಪಿ ಕೊಳ್ಳು ವುದೇ ಇಲ್ಲ . ಅವನು ಕೈಲಾಸದಿಂದ ಬಂದ ಶಿವನ ಚಿತ್ಕ ಳೆ, ಎಂದೇ ಚಿತ್ರಿ ಸುತ್ತಾ ನೆ.
ಇವರಿಬ್ಬ ರಲ್ಲ ದೆ ಎಳಂದೂರು ಹರಿಹರೇಶ್ವ ರನೆಂಬ ಮತ್ತೊ ಬ್ಬ ಕವಿಯೂ ಅಲ್ಲ ಮಪ್ರ ಭುವಿನ ಬಗ್ಗೆ ಕಾವ್ಯ
ರಚನೆ ಮಾಡಿದ್ದಾ ನೆ. ಇನ್ನು ಚಾಮರಸನು ರಚಿಸಿರುವ ಪ್ರ ಭುಲಿಂಗಲೀಲೆಯು ತಮಿಳು, ಮರಾಠಿ ಮುಂತಾದ
ಭಾಷೆಗಳಿಗೆ ಬಲು ಹಿಂದೆಯೇ ಅನುವಾದಗೊಂಡು ಪ್ರ ಖ್ಯಾ ತವಾಗಿದ್ದಿ ತು .ಈ ಮಹಾಕವಿಗಳಲ್ಲ ದೆ
,ಅಲ್ಲ ಮಪ್ರ ಭುವಿನ ಬಗ್ಗೆ ಪ್ರಾ ಸಂಗಿಕವಾಗಿ ಬರೆಯದ ವೀರಶೈವ ಸಾಹಿತ್ಯ ವೇ ಇಲ್ಲ ವೆನ್ನ ಬಹುದು.
ಇದೆಲ್ಲ ಕ್ಕಿಂತಲೂ ಮುಖ್ಯ ವಾಗಿ, ಸ್ವ ತಃ ಅಲ್ಲ ಮಪ್ರ ಭುವೇ ಅತನ ಕಾಲದ ಬಲು ದೊಡ್ಡ
ಸಾಹಿತ್ಯ ಚೇತನವಾಗಿದ್ದ ನೆನ್ನು ವುದು, ಮತ್ತು ಅವನವೇ ಆದ ಅನೇಕ ವಚನಗಳು ಉಪಲಬ್ಧ ವಿರುವುದು
,ಅವನ ವ್ಯ ಕ್ತಿ ತ್ವ ವನ್ನು ಗ್ರ ಹಿಸಲು ತುಂಬಾ ಉಪಯುಕ್ತ ಮಾರ್ಗವಾಗಿದೆ .ಇಡಿಯ ವಚನ ಸಾಹಿತ್ಯ ದಲ್ಲಿ ಯೇ ,
ಸಾಹಿತ್ಯ ದ ಪರಿಭಾಷೆಯನ್ನು ಸರಿಯಾದ ಮಾರ್ಗದಲ್ಲಿ ದುಡಿಸಿಕೊಂಡವರಲ್ಲಿ ಅಕ್ಕ ಮಹಾದೇವಿ ಮತ್ತು
ಅಲ್ಲ ಮಪ್ರ ಭು ಇಬ್ಬ ರೂ ಅಪ್ರ ತಿಮರು .
ಇಪ್ಪ ತ್ತ ನೆಯ ಶತಮಾನದಲ್ಲಿ ಅಲ್ಲ ಮಪ್ರ ಭುವಿನ ಚಿತ್ರ ಣವನ್ನು ಪುನರ್ರೂ ಪಿಸುವಲ್ಲಿ
ಎಚ್.ತಿಪ್ಪೇರುದ್ರ ಸ್ವಾ ಮಿಯವರು ಪರಿಪೂರ್ಣದೆಡೆಗೆ ಕಾದಂಬರಿಯ ಮೂಲಕ ಅನನ್ಯ ವಾಗಿ
ಪ್ರ ಯತ್ನಿ ಸಿದ್ದಾ ರೆ.
ಬಿ.ಪುಟ್ಟ ಸ್ವಾ ಮಯ್ಯ ನವರು ಅಲ್ಲ ಮಪ್ರ ಭುವಿನ ಬಗೆಗೆ ಅದೇ ಹೆಸರಿನ ಕಾದಂಬರಿಯನ್ನು
ರಚಿಸಿರುವುದಲ್ಲ ದೆ, ಹನ್ನೆ ರಡನೆಯ ಶತಮಾನದ, ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ,ಹೀಗೆ
ಸಮಸ್ತ ಮುಖಗಳನ್ನೊ ಳಗೊಂಡ ಆರು ಕಾದಂಬರಿಗಳಲ್ಲಿ , ಅಲ್ಲ ಮನನ್ನು ಅತ್ಯಂತ ವಿಶಿಷ್ಟ ವಾಗಿ
ಚಿತ್ರಿ ಸುತ್ತಾ ರೆ.
ಹೀಗೆ ಎಷ್ಟೆ ಲ್ಲಾ ಮಹನೀಯರಿಂದ ಪೂಜನೀಯನಾದ ಅಲ್ಲ ಮಪ್ರ ಭುವಿನ ವ್ಯ ಕ್ತಿ ತ್ವ ಮತ್ತು ಜೀವನ
ವಿವರವು ಕಡೆಗೂ ನಿಗೂಢವೇ ಆಗಿ ಉಳಿತ್ತ ದೆ . ಲಭ್ಯ ವಿರುವ ಅವನ ವಚನಗಳಂತೆ, ಅವನ ವ್ಯ ಕ್ತಿ ತ್ವ
ಎಂದು ಊಹಿಸಬಹುದು.[೧][೨][೩]
ವಚನಗಳು
ಹೆಣ್ಣಿ ಗಾಗಿ ಸತ್ತ ವರು ಕೋಟಿ
ಮಣ್ಣಿ ಗಾಗಿ ಸತ್ತ ವರು ಕೋಟಿ
ಹೊನ್ನಿ ಗಾಗಿ ಸತ್ತ ವರು ಕೋಟಿ
ಗುಹೇಶ್ವ ರಾ
ನಿಮಗಾಗಿ ಸತ್ತ ವರನಾರನೂ ಕಾಣೆ
ಇಲ್ಲಿ ಅಲ್ಲ ಮ ಪ್ರ ಭುಗಳು, ಹೆಣ್ಣಿ ಗಾಗಿ ನಡೆದ ರಾಮ-ರಾವಣರ ಯುದ್ಧ , ಮಣ್ಣಿ ಗಾಗಿ ನೆಡೆದ ಕುರುಕ್ಷೇತ್ರ
ಯುದ್ಧ , ಹೊನ್ನಿ ಗಾಗಿ ನೆಡೆದ ಅಶೋಕನ ಕಳಿಂಗ ಯುದ್ಧ ವನ್ನು ಉದಾಹರಣೆ ನೀಡಿ, ದೇವರಿಗಾಗಿ ಯಾರೂ
ಜೀವ ನೀಡಲು ಸಿದ್ಧ ರಿಲ್ಲ ದ, ಮಾನವನ ಸ್ವಾ ರ್ಥವನ್ನು ಎತ್ತಿ ತೋರಿಸಿದ್ದಾ ರೆ.
ಆದಿಯಾಧಾರವಿಲ್ಲ ದಂದು
ಹಮ್ಮು ಬಿಮ್ಮು ಗಳಿಲ್ಲ ದಂದು
ಸುರಾಳನಿರಾಳವಿಲ್ಲ ದಂದು
ಸಚರಾಚರವೆಲ್ಲ ರಚನೆಗೆ ಬಾರದಂದು
ಗುಹೇಶ್ವ ರ, ನಿಮ್ಮ ಶರಣನುದಯಿಸಿದನಂದು
ದೇವರೆತ್ತ ಹೋದರೋ?
ಲಿಂಗಪ್ರ ತಿಷ್ಠೆ ಯ ಮಾಡಿದವಂಗೆ
ನಾಕನರಕ ಗುಹೇಶ್ವ ರ.
ಹೊನ್ನು ಮಾಯೆಯೆಂಬರು
ಹೊನ್ನು ಮಾಯೆಯಲ್ಲ .
ಹೆಣ್ಣು ಮಾಯೆಯೆಂಬರು
ಹೆಣ್ಣು ಮಾಯೆಯಲ್ಲ .
ಮಣ್ಣು ಮಾಯೆಯೆಂಬರು
ಮಣ್ಣು ಮಾಯೆಯಲ್ಲ .
ಮನದ ಮುಂದಣ ಆಶೆಯೇ ಮಾಯೆ ಕಾಣಾ
ಗುಹೇಶ್ವ ರ
ಅಲ್ಲ ಮ ತನ್ನ ಬೆಡಗಿನ ವಚನದಲ್ಲಿ ತತ್ತ್ವ ಜ್ಞಾ ನದ ಒಳಗುಟ್ಟ ನ್ನು ಹೀಗೆ ಹೇಳಿದ್ದಾ ನೆ:
ಊರದ ಚೇಳಿನ ಏರದ ಬೇನೆಯಲ್ಲಿ , ಮೂರುಲೋಕವೆಲ್ಲಾ ನರಳಿತ್ತು !
ಹುಟ್ಟ ದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟ ದೆ ಹೂಸಲು;
ಮಾಬುದು ಗುಹೇಶ್ವ ರಾ.
ಅರ್ಥ:- ಕಚ್ಚ ದಿರುವ (ಇಲ್ಲ ದ)ಚೇಳಿನ ಆಗದೇ ಇರುವ ನೋವಿನಿಂದ (ಇಲ್ಲ ದ ನೋವಿನಿಂದ) ಮೂರು
ಲೋಕವೂ ನರಳಿತು! ಹುಟ್ಟ ದೇ ಇರುವ ಗಿಡದ ಎಲೆಯನ್ನು ತಂದು, ಅದನ್ನು ಮುಟ್ಟ ದೆ ಹಚ್ಚ ಲು
ಗಾಯ/ನೋವು ಮಾಯಿತು(ವಾಸಿಯಾಯಿತು). ಅಂದರೆ, ಚೇಳೇ ಇರಲಿಲ್ಲ , ಆದರೆ ಕಚ್ಚಿ ತೆಂಬ
ಬ್ರ ಮೆ.ಭ್ರ ಮೆಯಿಂದ ನೋವಿಲ್ಲ ದಿದ್ದ ರೂ ಭ್ರ ಮೆಯಿಂದ ನೋವು; ಈ ನೋವಿಗೆ 'ಇಲ್ಲ ಇಲ್ಲ ' ಎಂಬುದೇ
ಮದ್ದು ! (ಅದ್ವೈತ ಸಿದ್ಧಾಂತದ ಸಂಕ್ಷಿ ಪ್ತ ನಿರೂಪಣೆ)[೪] (ಅದಕ್ಕೇ ಅಲ್ಲ ಮ ಪ್ರ ಭು ತನ್ನ ಹೆಸರನ್ನೇ
"ಅಲ್ಲ - ಮ" ಎಂದು ಇಟ್ಟು ಕೊಂಡಿದ್ದಾ ನೆ)
ಬೆಡಗಿನ ವಚನಗಳು
:ಅಜ್ಞಾ ನವೆಂಬ ತೊಟ್ಟಿ ಲೊಳಗೆ
ಜ್ಞಾ ನವೆಂಬ ಶಿಶುವ ಮಲಗಿಸಿ ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ ಜೋಗುಳವಾಡುತ್ತಿ ದ್ದಾ ಳೆ
ಭ್ರಾಂತಿಯೆಂಬ ತಾಯಿ ! ತೊಟ್ಟಿ ಲು ಮುರಿದು ನೇಣು ಹರಿದು ಜೋಗುಳ ನಿಂದಲ್ಲ ದೆ ಗುಹೇಶ್ವ ರನೆಂಬ
ಲಿಂಗವ ಕಾಣಬಾರದು
https://archive.org/stream/Bedagina-Vachanagalu-1900/Bedagina-
Vachanagalu#page/n353/mode/2up
https://archive.org/details/Bedagina-Vachanagalu-1900
ಗ್ರಂಥ ನೆರವು
ಹರಿಹರಮಹಾಕವಿಯ- "ಪ್ರ ಭುದೇವರ ರಗಳೆ"
ಚಾಮರಸನ - "ಪ್ರ ಭುಲಿಂಗಲೀಲೆ"
ಇದನ್ನೂ ನೋಡಿ
ಮೈಸೂರು ವಿಶ್ವ ವಿದ್ಯಾ ಲಯದ ವಿಶ್ವ ಕೋಶದಲ್ಲಿ ನ ಲೇಖನ (https://kn.wikisource.org/wiki/%E0%B2%
AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%
BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%
8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B
2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B
2%B6/%E0%B2%85%E0%B2%B2%E0%B3%8D%E0%B2%B2%E0%B2%AE%E0%B2%AA%E0%
B3%8D%E0%B2%B0%E0%B2%AD%E0%B3%81)
ಉಲ್ಲೇಖ
೧. ಹರಿಹರಮಹಾಕವಿಯ- "ಪ್ರ ಭುದೇವರ ರಗಳೆ"
೨. ಚಾಮರಸನ - "ಪ್ರ ಭುಲಿಂಗಲೀಲೆ"
೩. ಎಚ್.ತಿಪ್ಪೇರುದ್ರ ಸ್ವಾ ಮಿ - "ಪರಿಪೂರ್ಣದೆಡೆಗೆ"
೪. ತತ್ವ ಶಾಸ್ತ್ರದಿಂದ ಏನು ಪ್ರ ಯೋಜನ? ರಘು ಕೆ. ಸಿ.d: 19 ಅಕ್ಟೋಬರ್ 2019 (https://www.prajavani.ne
t/community/religion/what-are-benifits-philosophy-674568.html)