ಉತ್ತರ : ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಭತ್ತ ಬೆಳೆಯುವ ನಾಡಿನಲ್ಲಿ ಹೋಗಿ ಬೀಳುತ್ತದೆ.
೨. ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಯಾರಿಗೆ ಸಿಗುತ್ತದೆ?
ಉತ್ತರ : ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಮೀನಿನ ಬಾಯಿಗೆ ಸಿಗುತ್ತದೆ.
೩. ದೇಹ ಏಕೆ ವ್ಯ ರ್ಥವಾಗಿದೆ?
ಉತ್ತರ : ತನ್ನ ದೇಹ ಸ್ವಾರ್ಥವ ನೆನೆದು ವ್ಯ ರ್ಥವಾಗಿದೆ.
೪. ಬೂದಿಯನ್ನು ಕೊಳದಲ್ಲಿ ಬಿಡುವುದರಿಂದ ಬದುಕು ಧನ್ಯ ವಾಗುವುದು ಹೇಗೆ? – ವಿವರಿಸಿ.
ಉತ್ತರ : ನಮ್ಮ ಹೆಣದ ಬೂದಿಯನ್ನು ನೀರಿನಲ್ಲಿ ಬಿಡುವುದರಿಂದ ಅದು ಕೆಸರಿನೊಡನೆ ಕೂಡಿ ಫಲವತ್ತಾದ ಮಣ್ಣಾಗುತ್ತದೆ. ಅದರಲ್ಲಿ ಕಮಲ ಅರಳಿದಾಗ ನಾವು ಹುಟ್ಟು ಸಾವಿನಿಂದ ಮುಕ್ತರಾಗಿ ನಮ್ಮ ಬದುಕು ಧನ್ಯ ವಾಗುತ್ತದೆ.
೫. ಸಾರ್ಥಕ ಪದ್ಯ ದ ಯಾವ ಅಂಶಗಳನ್ನು ನೀವು ಮೆಚ್ಚು ವಿರಿ?
ಉತ್ತರ : ಮಾನವನು ತನ್ನ ಸ್ವಾರ್ಥ ಗುಣಗಳನ್ನು ತೊರೆದು ಪರೋಪಕಾರಿಯಾದಾಗ ಬದುಕು ಸಾರ್ಥಕ ಎಂಬ ಅಂಶವನ್ನು ನಾನು ಮೆಚ್ಚು ತ್ತೇನೆ.
೩. ಆಹುತಿ – ಕೊಡಗಿನ ಗೌರಮ್ಮ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. .
೧. ರೈಲಿನಲ್ಲಿ ಸಿಕ್ಕಿ ದ ಮುದುಕನ ಉದ್ಯೋಗವೇನು?
ಉತ್ತರ : ರೈಲಿನಲ್ಲಿ ಸಿಕ್ಕಿ ದ ಮುದುಕನು ಒಬ್ಬ ರತ್ನ ದ ವ್ಯಾಪಾರಿ ಆಗಿದ್ದ ನು. ೨. ಯುವಕನು ರೈಲಿನಲ್ಲಿ ಸಿಕ್ಕಿ ದ ಮುದುಕನ ಮನೆಗೆ ಏಕೆ ಬಂದನು? ಉತ್ತರ : ಯುವಕನು ರೈಲಿನಲ್ಲಿ ಸಿಕ್ಕಿ ದ ಮುದುಕನ ಮಗಳು ಮತ್ತು ಸೊಸೆಗೆ ಪಾಠ ಹೇಳಿಕೊಡುವ ಕೆಲಸಕ್ಕಾಗಿ ಮುದುಕನ ಮನೆಗೆ ಬಂದನು.
೩. ಮುದುಕನ ಮಗಳು ಮತ್ತು ಸೊಸೆಯ ಹೆಸರೇನು?
ಉತ್ತರ : ಮುದುಕನ ಮಗಳ ಹೆಸರು ಸೀತೆ, ಸೊಸೆಯ ಹೆಸರು ಶಾಂತಿ.
೪. ವರದಕ್ಷಿಣೆಯ ಪಿಶಾಚಿ ಯಾರನ್ನು ಬಲಿ ತೆಗೆದುಕೊಂಡಿದೆ?
ಉತ್ತರ : ವರದಕ್ಷಿಣೆಯ ಪಿಶಾಚಿ ಅನೇಕ ಸುಕುಮಾರಿ ಹೆಣ್ಣು ಮಕ್ಕ ಳನ್ನು ಬಲಿ ತೆಗೆದುಕೊಂಡಿದೆ.