Professional Documents
Culture Documents
Gejjevastra
Gejjevastra
ಸ್ನೇಹಿತರೇ ನೀವು ದೇವಸ್ಥಾನಗಳಲ್ಲಿ ನೋಡಿರಿತಿರಾ ಅಭಿಷೇಕ ನಂತರ , ಶುದ್ಧೋದಕ ಸ್ನಾನ , ನಂತರ ವಸ್ತ್ರ ಧಾರಣೆ ವಸ್ತ್ರ
ಧಾರಣೆ ಅಂದರೆ ಗಂಡು ದೇವರಿಗೆ ಪಂಚೆ ಉಡಿಸಿ ಉತ್ತರಿಯನ್ನು ಹೊದೆಸುತ್ತಾರೆ , ಅದೆ ಹೆಣ್ಣು ದೇವರಿಗೆ ಕಚ್ಛೆ ಸೀರೆ ಅಂದರೆ
ಹದಿನೆಂಟು ಮೊಳದ ಸೀರೆಯನ್ನು ಡಿಸಿ ಖಣವನ್ನು ಹಾಕುತ್ತಾರೆ.. . ವಸ್ತ್ರ ಧಾರಣೆ ಮಾಡಿದ ಮೇಲೂ ಕೂಡಾ ದೇವರಿಗೆ ಗೆಜ್ಜೆ ವಸ್ತ್ರ
ಇನ್ನು ನಾವು ಮನೆಗಳಲ್ಲಿ ಪ್ರತಿ ದಿನ ಪೂಜೆ ಮಾಡಿದಾಗ ..ಸೀರೆ ಪಂಚೆ ಉಡಿಸಲ್ಲ , ಪರ್ಯಾಯವಾಗಿ ಗೆಜ್ಜೆ ವಸ್ತ್ರ ನನ್ನು
ಏರಿಸುತ್ತೇವೆ...
ಹಾಗೇನೂ ಪದ್ದತಿ ಇಲ್ಲ , ಅದು ಅವರವರ ಅನಕೂಲ , ನಾವು ಪ್ರತಿದಿನ ಮನೆ ದೇವರಿಗೆ ಏರಿಸುತ್ತೇವೆ... ಇನ್ನು ಕೆಲವರು ,
ಪ್ರತಿದಿನ ಪೂಜೆಯಲ್ಲಿ ಸ್ನಾನದ ನಂತರ ವಸ್ತ್ರಮ್ ಸಮರ್ಪಯಾಮಿ ಅಂತ ಅಕ್ಷತೆ ಹಾಕಿದರೂ ನಡೆಯುತ್ತೆ.ನಂತರ ಗಂಧ ಅಕ್ಷತೆ
ಆದರೆ ಏನಾದರೂ ಪೂಜೆ ಹೋಮ ,ಹವನ , ಸತ್ಯನಾರಾಯಣ ಪೂಜೆ , ಗೌರಿ ಪೂಜೆ ,ಲಕ್ಷ್ಮೀ ಪೂಜೆ , ಕಲಶವಿಟ್ಟು ಪೂಜೆ
ಮಾಡುವಾಗ , ಹಬ್ಬಹರಿದಿನಗಳಲ್ಲಿ ವ್ರತನೇಮದ ಪೂಜೆ ಇಂತಹ ಪೂಜೆಗಳಲ್ಲಿ ದೇವರಿಗೆ ವಸ್ತ್ರವಿಲ್ಲದ ಪೂಜೆ ಮಾಡಬಾರದು
ಪೂಜೆ ಮಾಡಿದರೆ ಖಂಡಿತಾ ದಾರಿದ್ರ್ಯ ಕಾಡುತ್ತೆ ಅದಕ್ಕೆ ಯಾವುದೇ ವಿಶೇಷ ಪೂಜೆಗೆ ಗೆಜ್ಜೆವಸ್ತ್ರ ಏರಿಸಿಯೇ ಪೂಜೆ
ಮಾಡಬೇಕು ...
ಗೆಜ್ಜೆ ವಸ್ತ್ರ ಎರಿಸುವದರಿಂದ , ಗೆಜ್ಜೆ ವಸ್ತ್ರ ದಾನ ಮಾಡುವುದರಿಂದ ಜನ್ಮಾಂತರ ಗಳಲ್ಲಿ ಎಂದೂ ವಸ್ತ್ರ ದಾರಿದ್ರ್ಯ ಕಾಡುವುದಿಲ್ಲ .
ಕಾಳು ಬಿಡಿಸಿ ಹತ್ತಿಯಿಂದ ನೀವೇ ಮಾಡಿದ ಗೆಜ್ಜೆ ವಸ್ತ್ರ ಬಹಳ ಶ್ರೇಷ್ಠ .... ಬೇಕಾದರೆ ಅಂಗಡಿಯಿಂದ ತಂದ ಗೆಜ್ಜೆ ವಸ್ತ್ರ
ಅಲಂಕಾರಕ್ಕೆ ಏರಿಸಿ ... ಹತ್ತಿಯಿಂದ ಬಿಡಿಸಿದ ಹತ್ತಿಕಾಳುಗಳನ್ನು ಕಸದ ಡಬ್ಬಿಗೆ ಹಾಕಿದೆ ಹಾಗೆ ಕೂಡಿ ಇಟ್ಟು ಒಂದು ತುಂಡು ಬೆಲ್ಲ
ಹೆಣ್ಣು ದೇವರಿಗೆ ಹದಿನೆಂಟು ಗೆಜ್ಜೆ ಜೊತೆಗೆ ಎರಡು ಗೆಜ್ಜೆ ಖಣ (ಖಣ ಅಂದರೆ ಕೆಲವರಿಗೆ ಗೊತ್ತಾಗಲ್ಲ ಬ್ಲೌಸ್ ಪೀಸ) ಅಂತ ,
ಯಾಕೆ ಹದಿನೆಂಟು ಅಂದರೆ ಹೆಣ್ಣು ದೇವರಿಗೆ ಹದಿನೆಂಟು ಮೊಳದ ಸೀರೆಯನ್ನು ಉಡಿಸುತ್ತಾರೆ ಅದೆ ಶ್ರೇಷ್ಠ ..
ಇನ್ನು ಗಂಡು ದೇವರ ಪೂಜೆ ಮಾಡಿದಾಗ ಹದಿನಾರು ಗೆಜ್ಜೆ ಇರುವ ವಸ್ತ್ರ ಜೊತೆಗೆ ಎರಡು ಗೆಜ್ಜೆ ಉತ್ತರಿಯಗೆ
ಯಾಕೆ ಅಂದ್ರೆ ಹದಿನಾರು ಮೊಳದ ಪಂಚೆ ಗಂಡು ದೇವರಿಗೆ ಉಡಿಸುತ್ತಾರೆ , ಉತ್ತರಿ ಹೆಗಲು ಮೇಲೆ ಹೊದಿಕೆ..
ಇನ್ನೊಂದು ವಿಷಯ ಹೇಳ್ತೇನೆ ಕೇಳಿ ಯಾವತ್ತೂ ದೇವರಿಗೆ ಒಂಟು ಪದರಿನಲ್ಲಿ ಗೆಜ್ಜೆ ವಸ್ತ್ರ ಏರಿಸಬಾರದು ಮತ್ತು ಒಂಟಿ
ಯಾಕೆ ಒಂಟಿ ವಸ್ತ್ರ ಎರಿಸಬಾರದು ಅಂದರೆ ಸತ್ತಮೈಲಿಗೆ ಬಿಡಿಸುವಾಗ ಒಂಟಿ ವಸ್ತ್ರವನ್ನು ಕೊಡುತ್ತೇವೆ ಅವರಿಗೆ ಹೊದೆಯುತ್ತೇವೆ
ಯಾವುದೇ ಬ್ರಾಹ್ಮಣನಿಗೆ ವಸ್ತ್ರ ದಾನ ಮಾಡುವಾಗ ಒಂಟಿ ವಸ್ತ್ರವನ್ನು ಕೊಡಬೇಡಿ ಅಕಸ್ಮಾತ್ತಾಗಿ ಬರೀ ಶರ್ಟ್ ಪೀಸ್
ಕೊಡುವಾಗ ವಿಳೆದೆಲೆ ಮೇಲೆ ಶಕ್ತ್ಯಾನುಸಾರ ದಕ್ಷಿಣೆ ಇಟ್ಟು ಕೊಡಬೇಕು.. ಹಾಗೆ ಕೊಟ್ಟರೆ ನಿಮಗೆ ಖಂಡಿತಾ ಒಳ್ಳೆಯದಾಗಲ್ಲ....
ಇನ್ನು ಕೆಲವರು ಕೇಳುತ್ತಾರೆ ಬರೀ ಹದಿನೆಂಟು ಗೆಜ್ಜೆ ವಸ್ತ್ರ ದೇವರಿಗೆ ಸಾಲಲ್ಲ ಅಂತ , ಆಗ ನೀವು ಹೆಣ್ಣು ದೇವರ ಮತ್ತು ಗಂಡು
ದೇವರಿಗೆ ಶಾಸ್ತ್ರ ಅನುಸಾರ , ಹದಿನೆಂಟು , ಹದಿನಾರು ಏರಿಸಿ ಅಲಂಕಾರಕ್ಕೆ ಮತ್ತೆ ದೊಡ್ಡ ಗೆಜ್ಜೆ ವಸ್ತ್ರ ಏರಿಸಿ ಬಹುದು...
ನಾಗದೇವರ ಪೂಜೆ ಮಾಡುವಾಗ ಗೆಜ್ಜೆವಸ್ತ್ರಕ್ಕೆ ಅರಿಷಿಣ ಹಚ್ಚಿ ಹಳದಿ ಗೆಜ್ಜೆವಸ್ತ್ರ ಏರಿಸಬೇಕು , ಶಿವನಿಗೆ ಬಿಳಿಗಂಧವನ್ನು ಹಚ್ಚಿ
ಏರಿಸಬೇಕು ಉಳಿದ ದೇವರಿಗೆ ಅರಿಷಿಣ ಕುಂಕುಮ ಗಂಧದ ಜೊತೆ ಸೇರಿಸಿ ಹಚ್ಚಿ ಏರಿಸಬೇಕು...
ಇನ್ನೊಂದು ವಿಷಯ ಗೆಜ್ಯೆವಸ್ತ್ರ , ಬತ್ತಿ ಇವುಗಳನ್ನು ಸೋಮವಾರ, ಅಮಾವಾಸ್ಯೆ ಸೂರ್ಯಾಸ್ತದ ನಂತರ ಮಾಡಬಾರದು ,..
ಹತ್ತಿ ಹಿಡಿಯಬಾರದು
ಕೆಲವರು ಲಕ್ಷ ಗೆಜ್ಜೆ ವಸ್ತ್ರವ್ರತ ಹಿಡಿಯುತ್ತಾರಲ್ಲ ಅವರು ಆ ಗೆಜ್ಜೆ ವಸ್ತ್ರ ಎಲ್ಲವನ್ನು ಕೂಡಿ ಇಟ್ಟು ರೆಷ್ಮೆ ವಸ್ತ್ರ ದಿಂದ ಚೀಲ
ಮಾಡಿಸಿ ಆ ಗೆಜ್ಜೆ ವಸ್ತ್ರವನ್ನು ಬಿಡಿಸಿ ಹತ್ತಿಯಿಂದ ಯಾವ ದೇವರಿಗೆ ವ್ರತ ಹಿಡಿದಿರುತ್ತಾರೊ. ಆ ದೇವರ ಪಾಲಿಕೆಗೆ