You are on page 1of 5

ಶ್ರೀ ಭಾಗವತ ಮಹಿಮೆ ಬಣ್ಣಿಸಲಳವೇ ||pa||

ಈ ಭವಶರಧಿಗೆ ಸುನಾವೆಯಂತಿಹುದಯ್ಯ||a.pa||

ವೇದ ಶಾಸ್ತ್ರಾದಿ ಅನೇಕ ಧರ್ಮಗಳಲ್ಲಿ ಈ ದೇಹ ಸಾಧನವಾದ ಸದ್ಧರ್ಮಗಳು

ಆ ಪರಾಶರ ಸೂನು ಶ್ರೀ ಮನ್ನಾರಾಯಣ

ಆಪದ್ಬಾಂಧವನಲ್ಲದಿನ್ನಿಲ್ಲವೆಂಬುವಾ||1||

ಪ್ರಥಮ ಸ್ಕಂದದಲಿ ಶ್ರೀ ಪರಮಾತ್ಮನ ಸುಜ್ಞಾನಕೆ ಪಥವೆ ಭಕ್ತಿ ವೈರಾಗ್ಯದ

ವಿವರಣೆಯು ಮತ್ತೆ ಶಾಪದಲಿ ನಾರದನ ವಿಷಯವ ಪೇಳ್ವ ||2||

ದ್ವಿತೀಯ ಸ್ಕಂದ À ದಿ ಪರೀಕ್ಷಿತ ಶುಕ ಸಂವಾದ ಶ್ರೀಹರಿಯ ಅವತಾರಗಳ

ವರ್ಣನೆಗಳು ಮತ್ತೆ ಮಹದಾದಿ ತತ್ವ ಸೃಷ್ಟಿಕ್ರಮ ಇತ್ಯಾದಿ ಪುಣ್ಯಚರಿತಗಳನು

ಪೇಳ್ವ ||3||

ಆ ಬೊಮ್ಮಂಡದಿಂದೆ ಚತುರ್ಮುಖನ ಸೃಷ್ಟಿಯು ವಿಭಾಗವ ಪೇಳ್ವ ಸೂಕ್ಷ್ಮ

ಪರಮಾಣು ಅಬ್ದಾದಿ ಕಾಲಗಳು ವ್ಯಷ್ಟಿ ಭೂತೋತ್ಪತ್ತಿ ಶ್ರೀ ವರಹ ರೂಪದಿ

ತೋರಿದ ಮಹಿಮೆಯಾ ||4||

ವರಹಾವತಾರದೀ ಧರಣೀಯ ತಂದಂಥ ಪುರುಷ ಸ್ತ್ರೀಯರ ಸೃಷ್ಟಿ

ಸರ್ವಸೃಷ್ಟಿಯು ಮತ್ತೆ ಸ್ವಾಯಂಭುಮನು ಶತರೂಪೆಯರ ಚರಿತೆ ಶ್ರೀ ಕಪಿಲ

ದೇವಹೂತಿಯ ಸಂವಾದವ ಪೇಳ್ವ ||5||


ಚತುರ ಸ್ಕಂದದಿ ನವಬ್ರಹ್ಮರ ಉತ್ಪತ್ತಿ ದಕ್ಷಾಧ್ವರಭಂಗ ಭಕ್ತಧ್ರುವಚರಿತೆ

ಉಚಿತವಾದ ಪೃಥು ಸಾರ್ವಭೌಮರಿಂದ ಪ್ರಾಚೀನ ಬರ್ಹಿಷರ ವೃತ್ತಾಂತವನು

ಪೇಳ್ವ ||6||

ಪಂಚಮ ಸ್ಕಂದದಿ ಪ್ರಿಯವ್ರತ ನಾಭಿ ನೃಪರ ಋಷಭ ಚರಿತೆಗಳು ಪುತ್ರ

ಭರತನ ಕಥೆಯು ಅಚಲಲೋಕ ದ್ವೀಪಾದ್ರಿ ನದ ನದಿಗಳ ಸೃಷ್ಟಿ ಜ್ಯೋತಿಶ್ಚಕ್ರ

ನರಕ ಪಾತಾಳಗಳ ಪೇಳ್ವ ||7||

ಷಷ್ಠ ಸ್ಕಂದದೊಳು ದಕ್ಷ ಜನ್ಮವು ಅವರ ಕನ್ಯೆಯರಿಂದ ದೇವ ಮಾನವ

ದಾನವ ದುಷ್ಟಮೃಗ ಪಕ್ಷೀ ಪನ್ನಗಾದಿ ಜನನವು ವೃತ್ರನ ಜನನ ಮರಣಗಳೆಲ್ಲ

ಪೇಳ್ವ ||8||

ಸಪ್ತಮ ಸ್ಕಂದದಿ ದಿತಿಪುತ್ರರ ಜನನ ಹಿರಣ್ಯಕಶಿಪುವಿನ ದುರುಳತನವು ಮತ್ತೆ

ಧೀವರನಾದ ಪ್ರಹ್ಲಾದರಾಯನಿಂ ವ- ರ್ಣಿತಮಾದ ಶ್ರೀಹರಿಯ ಮಹಿಮೆಯ

ಪೇಳ್ವ ||9||

ಅಷ್ಟಮ ಸ್ಕಂದದಿ ಮನ್ವಂತರ ವಿವರವು ಗಜರಾಜನಿಗೆ ಮೋಕ್ಷ ಮನ್ವಂತರ

ಅವತಾರ ದಿಟ್ಟ ಕಮಠ ಮತ್ಸ್ಯನರಹರಿ ವಾಮನ ಹಯವದನನವತಾರ

ಸುಧೆಯಿತ್ತ ಮಹಿಮೆಯ||10||
ನವಮ ಸ್ಕಂದದಿ ನೃಪವಂಶಾನು ಚರಿತವು ಇಕ್ಷಾ ್ವಕುಸುತ ಸುದ್ಯುಮ್ನರಾಜನ

ಜನನ ದಿವಾಕರ ವಂಶಾನು ಕಥನಗಳು ಇಳೋಪಾಖ್ಯಾನವ

ತಾರೋಪಾಖ್ಯಾನವ ಪೇಳ್ವ ||11||

ಸೂರ್ಯವಂಶ ಶಶಾದರಾಜನ ವೃತ್ತ ಸುಕನ್ಯ ಶರ್ಯಾತಿ ಕಾಕುಸ್ಥ ಖಟ್ವಾಂಗ

ಧೀರ ಮಾಂ- ಧಾತೃ ಸೌಭರಿ ಸಗರರ ಚರಿತೆ ಪರಮಾತ್ಮ ರಘುರಾಮನ

ಚರಿತೆಗಳನು ಪೇಳ್ವ||12||

ಮತ್ತೆ ನಿಮಿಯ ದೇಹತ್ಯಾಗದ ವಿಷಯವು ಜನಕನೃಪ ಭೃಗುರಾಮನ ಚರಿತವು

ಉತ್ತಮ ಚಂದ್ರವಂಶದ ನಹುಷಾಸುತ ಯ- ಯಾತಿ ಶಂತನುಯದು

ಚರಿತೆಗಳುಳ್ಳ ||13||

ದಶಮ ಸ್ಕಂದದಿ ಹರಿ ಯದುವಂಶದಿ ಜನಿಸಿ ಶಿಶುಲೀಲೆಗಳ ತೋರಿ ಅಸುರಿ

ಪೂತನಿ ಕೊಂದು ಅಸುರ ಶಕಟ ತೃಣ ಬಕ ವತ್ಸ ಮೊದಲಾದ ಅಸುರಭಂಜಕ

ಹರಿಯು ಮೆರೆದ ಮಹಿಮೆಯ ಪೇಳ್ವ ||14||

ಮಾಯಾ ಮಹಿಮಧೇನು ಪ್ರಲಂಬಕರಾ ಕೊಂದು ಕಾಡುಕಿಚ್ಚಿನಿಂದ

ಗೋಪಾಲರ ಕಾಯ್ದ ನೋಯಿಸಿ ಕಾಳಿಯ ಬಾಯ ಬಿಡಿಸಿ ಕಾಳಿಮರ್ದನ ಕೃಷ್ಣ

ನಾಡಿದ||15||
ಗೋಪಸ್ತ್ರೀಯರ ಚರಿತ ಗೋವರ್ಧನೋದ್ಧಾರಣ ಶಂಖಚೂಡವಧೆ

ಅರಿಷ್ಟಕೇಶಿಯ ನಿಧನ ಭೂಪನೆದುರಿನಲ್ಲಿ ಜಟ್ಟಿಮುಷ್ಟಿಕರ ಕೊಂದು

ಕಂಸವಧೆಯ ಮಾಡಿ ಗುರುಸುತನನು ತೋರ್ದ ||16||

ಜರೆಯ ಸೇನೆಯ ಜಯಿಸಿ ಕಾಲಯವನರ ಕೊಂದು ಪಾರಿಜಾತವ ತಂದು ಸಿರಿ

ರುಕ್ಮಿಣಿಯ ಪಡೆದು ಹರಿಸಿ ಬಾಣನ ತೋಳ ನರಕಾಸುರನ ಗೆದ್ದು ಸೆರೆಯ

ಬಿಡಿಸಿ ರಾಜಕನ್ಯೆಯರನು ಕಾಯ್ದ ||17||

ಶಿಶುಪಾಲ ದಂತವಕ್ತ್ರ ಪೌಂಡ್ರಕ ಸಾಲ್ವ ಶಂಬರ ದ್ವಿವಿಧ ಮುರಾಸುರರೆಲ್ಲರ

ನಾಶಪಡಿಸಿ ಕಾಶೀಪುರವ ದಹನ ಮಾಡಿ ಪಾಂಡವರನ್ನು ಕಾಯ್ದ ಪರಮ

ಮಹಿಮೆಯ ಪೇಳ್ವ ||18||

ಭೂಭಾರನಿಳುಹಲು ಕುರು ಪಾಂಡವರೊಳು ಕ್ರೂರಯುದ್ಧವ ಕುರುಕ್ಷೇತ್ರದಿ

ಮಾಡಿಸಿ ಅಭಯದಾಯಕ ಪಾಂಡುನಂದನರಿಂದ ಸದ್ಧವರ್i ಸ್ಥಾಪಿಸಿದ

ಶ್ರೀಕೃಷ್ಣಚರಿತೆಯ ಪೇಳ್ವ ||19||

ಏಕಾದಶ ಸ್ಕಂದ À ದಿ ಯಾದವರೆಲ್ಲರು ಭೂಸುರ ಶಾಪದಿ ಯುದ್ಧವನೆ ಮಾಡಿ

ಏಕನಾಗಿದ್ದ ಉದ್ಧವನಿಗೆ ಬೋಧಿಸಿ ಲೋಕಾವನೈದು ನಿಜಧಾಮಕ್ಕೆ ತೆರಳಿದ


||20||
ದ್ವಾದಶಸ್ಕಂದದೊಳು ಯುಗಭೇದ ಪ್ರಳಯಗಳು ನಿತ್ಯನೈಮಿತ್ತಿಕ ಪ್ರಾಕೃತಗಳ

ಸೃಷ್ಟಿ ವೇದ ವಿಭಾಗವು ಹರಿರಾತನ ಅಂತ್ಯ ಮಾರ್ಕಂಡೇಯ ಚರಿತ

ಸೂರ್ಯಗಣಗಳ ಪೇಳ್ವ ||21||

ಹರಿಲೀಲೆ ಅವತಾರಚರಿತೆಯ ಕೇಳುತ ಮರೆ ವೆಯಿಂದಾಗಲಿ

ರುಜೆಯಿಂದಾಗಲಿ ಹರಿಯೇನಮಃ ಎಂದುಚ್ಚರಿಸಿದ ಮಾತ್ರದಿ ದುರಿತಪಾಪವು

ನಾಶವಾಗಿ ಪೋಗುವುದಯ್ಯ ||22||

ಹರಿಯ ಸ್ಮರಣೆಯ ಮಾಡಿದರು ಕೇಳಿದರು ಬಿರುಗಾಳಿಗೆ ಸಿಕ್ಕು ಮೋಡ

ಓಡುವಂತೆ ದುರಿತವ್ಯಾಧಿಗಳು ತ್ವರಿತದಿ ಓಡುವುವು ಹರಿಸಂಬಂಧವಲ್ಲದ

ಮಾತೆಲ್ಲವೂ ವ್ಯರ್ಥವೋ ||23||

ಯಾಮ ಯಾಮಕೆ ಈ ಭಾಗವತವ ಪಠಿಸೆ ಭಾಗವತದ ಸಪ್ತಾಹದ

ಪುಣ್ಯಫಲವು ಭಾವ ಭಕುತಿಯು ಹುಟ್ಟಿ ಶ್ರೀ ವೇಂಕಟೇಶನ ಪಾವನವಾದ

ಶ್ರೀಪಾದವ ಸೇರುವ||24||

You might also like