Professional Documents
Culture Documents
ಸಮಯ ರಾಮಾಯಣ
ಸಮಯ ರಾಮಾಯಣ
ಶ್ರೀಗುರುಭ್ಯೋನ್ನಮ: ಹರಿ:
~~~~~ ಸಮಯ ರಾಮಾಯಣ ಭಾಗ ೧ ~~~~~
ಭಾವಾರ್ಥ :
ಜನಕನ ಮನೆಯಲ್ಲಿ ಈಶ್ವರನ ಧನುಸ್ಸನ್ನು ಮುರಿದನು. ರಾಮನ ಹದಿನೈದನೆಯ ವರ್ಷದಲ್ಲಿ ಆರುವರ್ಷ ವಯಸ್ಸುಳ್ಳ ಅಯೋನಿಜಳಾದ
ಸೀತೆಯನ್ನು ಮದುವೆಯಾದನು. ಸೀತೆಯನ್ನು ಹೊಂದಿ ಕೃತಕೃತ್ಯನಾದನು.
ಭಾವಾರ್ಥ :
ಅನಂತರ ಹನ್ನೆರಡು ವರ್ಷಗಳ ವರೆಗೂ ರಾಮನು ಅವಳೊಡನೆ ಇದ್ದನು. ರಾಮನ ಇಪ್ಪತ್ತೇಳನೆಯ ವರ್ಷದಲ್ಲಿ ಯುವರಾಜ ಪಟ್ಟವನ್ನು
ಕಟ್ಟಿದನು.
ಭಾವಾರ್ಥ :
ಆ ಯುವರಾಜ ಪಟ್ತವನ್ನು ಕಟ್ಟುವ ಕಾಲದಲ್ಲಿ ಕೈಕೇಯಿಯು ರಾಜನನ್ನು ಎರಡು ವರಗಳನ್ನು ಕೇಳಿಕೊಂಡಳು. ಒಂದು ವರದಿಂದ ರಾಮನು
ಜಟಾಧಾರಿಯಾಗಿ ಸೀತೆ ಲಕ್ಷ್ಮಣರೊಂದಿಗೆ ಹದಿನಾಲ್ಕು ವರ್ಷಗಳು ಕಾಡಿಗೆ ಹೋಗುವಂತೆಯೂ, ಮತ್ತೊಂದು ವರದಿಂದ ಭರತನಿಗೆ
ಯೌವರಾಜ್ಯವನ್ನು ಕಟ್ಟುವಂತೆಯೂ ಕೇಳಿಕೊಂಡಳು.
ಭಾವಾರ್ಥ :
ರಾಜನು ಸೀತಾಲಕ್ಷ್ಮಣರೊಡನೆ ರಾಮನನ್ನು ಕಾಡಿಗೆ ಕಳುಹಿಸಿದನು. ರಾಮನು ಮೂರು ದಿನಗಳು ಹಾಲನ್ನು ಕುಡಿದಿದ್ದುಕೊಂಡು ನಾಲ್ಕನೆಯ
ದಿನ ಫಲವನ್ನು ತಿಂದು ಐದನೆಯ ದಿನ ಚಿತ್ರಕೂಟದಲ್ಲಿ ಆಶ್ರಮವನ್ನು ಮಾಡಿಕೊಂಡನು.
ಸಶೇಷ ...
🙏🙇 ಓಂ ತತ್ ಸತ್ 🙇🙏
... ಮುದ್ರಾರಾಕ್ಷಸನ ಹಾವಳಿಗಾಗಿ ( Typographical errors) ಕ್ಷಮೆ ಕೋರುತ್ತೇನೆ ...
ಶ್ರೀಹರಿ ಪ್ರೀಯತಾಂ | ಶ್ರೀಮನ್ಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು {
-------------------------------------------
೦೧ ನವಂಬರ್ ೨೦೨೨
ಶ್ರೀಗುರುಭ್ಯೋನ್ನಮ: ಹರಿ:
~~~~~ ಸಮಯ ರಾಮಾಯಣ ಭಾಗ ೨ ~~~~~
ಭಾವಾರ್ಥ :
ಅನಂತರ ಮಾಘ ಬಹುಳ ಅಷ್ಟಮಿಯ ದಿನ ವೃಂದ ಎನ್ನುವ ಒಂದು ಮುಹೂರ್ತದಲ್ಲಿ ರಾಮಲಕ್ಷ್ಮಣರಿಲ್ಲದಿರುವಾಗ ದಶಕಂಧರನು ಆಕೆಯನ್ನು
ಕದ್ದನು. ಅವನು ಕದ್ದುಕೊಂಡು ಹೋಗುತ್ತಿರುವಾಗ ಹುಲ್ಲೆಯು ಅಳುವಂತೆ ಅವಳು ಅಳುತ್ತಾ ಹೋದಳು.
ಭಾವಾರ್ಥ :
ರಾಮ ರಾಮ, ನನ್ನನ್ನು ಕಾಪಾಡು, ನನ್ನನ್ನು ಕಾಪಾಡು, ರಾಕ್ಷಸನು ಕದ್ದುಕೊಂಡು ಹೋಗುತ್ತಿದ್ದಾನೆ, ಕಾಪಾಡು ಎಂದು ಹಸಿದ ಗಿಡುಗನು,
ದು:ಖಪಡುತ್ತಿರುವ ಕುರವಕಹಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರುವಾಗ ಹೇಗೆ ಅಳುವುದೋ ಹಾಗೆ ಆಳುತ್ತಿದ್ದಳು.
ಸಶೇಷ ...
🙏🙇 ಓಂ ತತ್ ಸತ್ 🙇🙏
... ಮುದ್ರಾರಾಕ್ಷಸನ ಹಾವಳಿಗಾಗಿ ( Typographical errors) ಕ್ಷಮೆ ಕೋರುತ್ತೇನೆ ...
ಶ್ರೀಹರಿ ಪ್ರೀಯತಾಂ | ಶ್ರೀಮನ್ಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು {
---------------------------------------------------------
೧೪ ನವೆಂಬರ್ ೨೦೨೩
ಶ್ರೀಗುರುಭ್ಯೋನ್ನಮ: ಹರಿ:
~~~~~ ಸಮಯ ರಾಮಾಯಣ ಭಾಗ ೧ ~~~~~
ಮಾಘಶುಕ್ಲದ್ವಿತೀಯಾಯಾಶ್ಚೈತ್ರಕೃಷ್ಣಚತುರ್ಧಶೀ |
ಸಪ್ತಾಶೀತಿದಿನಾನ್ಯೇವ ಮಧ್ಯಂ ಪಂಚದಶಾಹಕಂ || ೬೮ ||
ಯುದ್ಧಾವಹಾರಸ್ಸಂಗ್ರಾಮೋ ದ್ವಾಸಪತ್ತಿದಿನಾನ್ಯಭೂತ್ |
ಸಂಸ್ಕಾರೋ ರಾವಣಾದೀನಾಮಮಾವಾಸ್ಯಾದಿನೇs ಭವೇತ್ || ೬೯ ||
ಭವಾರ್ಥ :
ಮಾಘಶುದ್ಧ ದ್ವಿತೀಯೆಯಿಂದ ಚೈತ್ರ ಕೃಷ್ಣ ಚತುರ್ದಶಿಯ ವರೆಗೆ ಇಪ್ಪತ್ತೇಳು ದಿನಗಳ ವರೆಗೆ ಯುದ್ಧಕಾಲವು. ಹದಿನೈದು ದಿನಗಳು
ಯುದ್ಧವನ್ನು ಮಧ್ಯದಲ್ಲಿ ನಿಲ್ಲಿಸಿದರು. ಅನಂತರ ಇಪ್ಪತ್ತೆರಡು ದಿನಗಳು ಮತ್ತೆ ಯುದ್ಧ ನಡೆಯಿತು. ಚೈತ್ರ ಬಹುಳ ಅಮಾವಾಸ್ಯೆಯ ದಿನ
ರಾವಣನ ಅಂತ್ಯಸಂಸ್ಕಾರವು ನಡೆಯಿತು.
ಭಾವಾರ್ಥ :
ವೈಶಾಖ ಶುದ್ಧ ಚತುರ್ಥಿಯ ದಿನ ರಾಮನು ಪುಷ್ಪಕವಿಮಾನವನ್ನೇರಿ ಆಕಾಶಮಾರ್ಗದಲ್ಲಿ ಹೊರಟು ಅಯೋಧ್ಯೆಗೆ ಹಿಂತಿರುಗಿದನು.
ಭಾವಾರ್ಥ :
ವೈಶಾಖ ಶುದ್ಧ ಷಷ್ಠಿಯ ದಿನ ನಂದಿಗ್ರಾಮದಲ್ಲಿ ಭರತನೊಡನೆ ಸೇರಿದನು. ಸಪ್ತಮೀ ದಿನ ಅಯೋದ್ಯೆಯಲ್ಲಿ ರಾಮನು ಅಭಿಷಿಕ್ತನಾದನು.
ಸಶೇಷ ...
🙏🙇 ಓಂ ತತ್ ಸತ್ 🙇🙏
... ಮುದ್ರಾರಾಕ್ಷಸನ ಹಾವಳಿಗಾಗಿ ( Typographical errors) ಕ್ಷಮೆ ಕೋರುತ್ತೇನೆ ...
ಶ್ರೀಹರಿ ಪ್ರೀಯತಾಂ | ಶ್ರೀಮನ್ಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು {