Professional Documents
Culture Documents
PP Deepavali
PP Deepavali
ದೀಪಾವಳಿ
ಸನಾತನ ಭಾರತೀಯರ ಅತ್ಯಂತ ಜನಪ್ರಿಯ ಪರ್ವವೆಂದರೆ ಅದು "ದೀಪಾವಳಿ". ಭಾರತದ ಎಲ್ಲ ರಾಜ್ಯ ನಗರಗಳಲ್ಲಿ
ಸಂಭ್ರಮ, ಸಡಗರಗಳಿಂದ ಆಚರಿಸುವ ರಾಷ್ಟ್ರೀಯ ಹಬ್ಬ. ಆಶ್ವಯುಜ ಕೃಷ್ಣ ದ್ವಾದಶಿಯಂದು ಆರಂಭಿಸಿ ಬಲಿಪಾಡ್ಯದ ತನಕ
ಪ್ರತಿದಿನ ಸಾಯಂಕಾಲ ದೇವರಿಗೆ ದೀಪಮಾಲೆಯನ್ನು ಸಮರ್ಪಿಸಬೇಕು. ಆದ್ದರಿಂದ ಇದಕ್ಕೆ ದೀಪಾವಲೀ ಎಂದು ಹೆಸರು. ದೀಪ-
ಆವಲೀ ಎಂದರೆ ಸಾಲು ದೀಪಗಳ ಸಾಲು ದೀಪಗಳ ಮಾಲೆ ಎಂದರ್ಥ. ದೇವರಿಗೆ ಸಮರ್ಪಿಸುವ ಒಂದು ವಿಶೇಷ ಉಪಚಾರ
"ಭಕ್ತ್ಯಾ ದೀಪಂ ಪ್ರಯಚ್ಛಾಮಿ" ಎಂದು ಭಕ್ತಿಯಿಂದ ದೀಪವನ್ನು ಸಮರ್ಪಿಸಬೇಕು. ಈ ಹಬ್ಬದ ಹಿನ್ನೆಲೆ ಬಹಳ ಸುಂದರ. ಸ್ನಾನದ
ಕೋಣೆಯಿಂದ ಮನೆಯ ಎಲ್ಲ ಪರಿಸರಗಳನ್ನು ಸ್ವಚ್ಛಗೊಳಿಸುವ ಸುಂದರವಾಗಿಸುವ ಪರಿಕಲ್ಪನೆ ಅತ್ಯದ್ಭುತ.
ಆಶ್ವೀನ ಕೃಷ್ಣ ತ್ರಯೋದಶೀ ನೀರು ತುಂಬುವ ಹಬ್ಬ, ಇಂದು ಸಾಯಂಕಾಲ ಸೂರ್ಯಾಸ್ತವಾದೊಡನೆ ಮನೆಯ ಹೊರಗೆ
ದಕ್ಷಿಣಾಭಿಮುಖವಾಗಿ ಎಳ್ಳೆಣ್ಣೆಯಿಂದ ಯಮದೀಪವನ್ನು ಬೆಳಗಿಸುವುದರಿಂದ ಅಪಮೃತ್ಯು ಪರಿಹಾರವಾಗುವುದು . ಕಂಚಿನ ದೀಪ,
ಬಾಳೆದಿಂಡಿನ ದೀಪ, ಮಣ್ಣಿನ ದೊಡ್ಡ ಹಣತೆಯಲ್ಲಿ ದೀಪ ಹಚ್ಚಿ ಗಂಧ ಪುಷ್ಪ ಮಾಲೆಗಳಿಂದ ಅಲಂಕರಿಸಿ ಪ್ರಾರ್ಥಿಸಬೇಕು.
www.purnapramati.in
ಯಮದೀಪದಾನಾಖ್ಯಂ ಕರ್ಮ ಕರಿಷ್ಯೇ ' ಎಂದು ಸಂಕಲ್ಪಿಸಿ ದಕ್ಷಿಣಾಭಿಮುಖವಾಗಿ ದೀಪವನ್ನು ಹಚ್ಚಬೇಕು.
ಪ್ರಾರ್ಥನಾಮಂತ್ರ
ಗಂಗಾಪೂಜೆ
ಪಾರಾಯಣ
ಭಾಗೀರಥೀದೇವಿ
ಗಂಗೆ ಭಾಗೀರಥೀ
ನರಕಚತುರ್ದಶೀ
ಹಿನ್ನೆಲೆ
www.purnapramati.in
ಮಾಡಿಸಿದರು. ಇದರ ಸ್ಮರಣೆಗಾಗಿ ಈಗಲೂ ಕೂಡ ಈ ದಿನದಲ್ಲಿ ಮನೆ ಮಂದಿಯೆಲ್ಲ ಸೇರಿ ಸಂತಸದಿಂದ ಅಭ್ಯಂಗವನ್ನು
ಮಾಡುತ್ತಾರೆ. ಈ ದಿನ ಅಭ್ಯಂಗವನ್ನು ಮಾಡಲೇಬೇಕು ಎಂದು ಶಾಸ್ತ್ರ ಹೇಳುತ್ತದೆ.
ಆಚರಣೆ
ಪ್ರಾತ: 4.30 ರ ಅರುಣೋದಯ ಕಾಲದಲ್ಲಿ ಎದ್ದು ಕೈಕಾಲು ಮುಖ ತೊಳೆದು ಮಂತ್ರಸ್ನಾನದಿಂದ ಶುದ್ಧರಾಗಿ
ವಸ್ತ್ರಾಂತರ ಮಾಡಿ (ಹೊಸ ಬಟ್ಟೆ ಧರಿಸುವ ಸಂಪ್ರದಾಯವೂ ಹಲವೆಡೆ ಇದೆ) ದೇವರ ಮುಂದೆ ಕುಳಿತು ಸಂಕಲ್ಪ ಮಾಡಬೇಕು.
ಸಂಕಲ್ಪ
……ಚತುರ್ದಶ್ಯಾಂ ಶುಭತಿಥೌ ಚಂದ್ರೋದಯಕಾಲೇ ನರಕಾಂತಕ ಶ್ರೀಗೋಪಾಲಕೃಷ್ಣ ಪ್ರೇರಣಯಾ ಶ್ರೀಗೋಪಾಲಕೃಷ್ಣ
ಪ್ರೀತ್ಯರ್ಥಂ ಸಪರಿವಾರಾಯ ಶ್ರೀಗೋಪಾಲಕೃಷ್ಣಾಯ ಸುಗಂಧಿತೈಲಾಭ್ಯಂಗಸಮರ್ಪಣಪೂಜಾಂ ಕರಿಷ್ಯೇ.
ಎಣ್ಣೆಶಾಸ್ತ್ರ
ಗುರುಗಳು ಇದ್ದಲ್ಲಿ ಗುರುಗಳ ಬಳಿ ಎಣ್ಣೆ ಶಾಸ್ತ್ರ
ಮಾಡಿಸಿಕೊಂಡು ನಂತರ ಮನೆಯಲ್ಲಿ ಶಾಸ್ತ್ರ ಮಾಡಿಸಿಕೊಳ್ಳಬೇಕು .
ಮನೆಯ ಗೃಹಿಣಿ ಎಣ್ಣೆಶಾಸ್ತ್ರ ಮಾಡಬೇಕು. ಮನೆಯ ಹಿರಿಯರಿಂದ
ಆರಂಭಿಸಿ ಪುಟ್ಟ ಮಕ್ಕಳವರೆಗೆ ಎಲ್ಲರಿಗೂ 7 ಗರಿಕೆಗಳನ್ನು ಹಿಡಿದು
ಭಗವಂತನಿಗೆ ಸಮರ್ಪಿಸಿದ ಸುಗಂಧಿತ ಎಣ್ಣೆಯನ್ನು ಭಗವಂತನ
ಸ್ಮರಣೆಯೊಂದಿಗೆ, ದಾಸರಪದಗಳಿಂದ, ಸಾಂಪ್ರದಾಯಿಕ ಹಾಡುಗಳನ್ನು
ಹೇಳುತ್ತಾ ಭೂಮಿಗೆ ಗರಿಕೆ 7 ಬಾರಿ ಸ್ಪರ್ಶಿಸಿ 3 ಬಾರಿ ನೆತ್ತಿಗೆ ಹಚ್ಚಿ
ಎಣ್ಣೆಶಾಸ್ತ್ರ ಮಾಡಬೇಕು.
ಆಶೀರ್ವಾದದ ಹಾಡು
www.purnapramati.in
ಆನಂದ ನೀನಾಗು ಅಚ್ಯುತ ನೀನಾಗು/
ದಾನವಾಂತಕನಾಗು ದಯವಾಗು//
ಶ್ರೀನಿವಾಸನಾಗು ಶ್ರೀನಿಧಿ ನೀನಾಗು/
ಜ್ಞಾನಿ ಪುರಂದರವಿಠಲನಾಗೆನುತಲಿ//3//
ವಿಶೇಷ ಸೂಚನೆ
ಸೀತಾಲೋಷ್ಠಸಮಾಯುಕ್ತ ಸಕಂಟಕದಲಾನ್ವಿತ।
ಹರ ಪಾಪಮಪಾಮಾರ್ಗ ಭ್ರಾಮ್ಯಮಾಣ ಪುನಃಪುನಃ ।।
- - ಭವಿಷ್ಯೋತ್ತರ ಪುರಾಣ
ಹೀಗೆ ಹೇಳಿ ಸ್ನಾನ ಮಾಡಿದವನ ಶಿರಸ್ಸಿಗೆ ಮೂರು ಬಾರಿ ನಿವಾಳಿಸಿ, ನೈಋತ್ಯದಡೆಗೆ ಎಸೆಯಬೇಕು. ಇದರಿಂದ ಪಾಪ
ಪರಿಹಾರವಾಗಿ ದೃಷ್ಟಿ ನಿವಾರಣೆಯಾಗುತ್ತದೆ.
ಉಲ್ಕಾ ಪ್ರದರ್ಶನ
ಇಂದು ಸಂಜೆ ಅಥವಾ ಅಮಾವಾಸ್ಯೆಯ ರಾತ್ರಿ ಬೆಂಕಿಯ ಕೊಳ್ಳಿಯನ್ನು ದಕ್ಷಿಣ ಮುಖವಾಗಿ ಪ್ರದರ್ಶಿಸುವ ಉಲ್ಕಾ
ಪ್ರದರ್ಶನವೆಂಬ ವಿಧಿ ಧರ್ಮಶಾಸ್ತ್ರಗಳಲ್ಲಿದೆ. "ಉಲ್ಕಾಹಸ್ತಾ: ನರಾ: ಕುರ್ಯು: ಪಿತೃಣಾಂ ಮಾರ್ಗದರ್ಶನಂ" ಪಿತೃಗಳ
ಪ್ರೀತಿಗಾಗಿ ಇದನ್ನು ಮಾಡಬೇಕು.
www.purnapramati.in
ಬಲಿಪಾಡ್ಯ
ಸಂಕಲ್ಪ
ಬಲೀಂದ್ರ ಪ್ರಾರ್ಥನೆ
ತುಲಸೀಸಂಕೀರ್ತನೆ
ಗೋಪೂಜೆ
www.purnapramati.in
ಗೋವುಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ, ಅವುಗಳಿಗೆ ಅರಿಷಿಣ, ಕುಂಕುಮ, ಸುಣ್ಣ, ಮೊದಲಾದವುಗಳಿಂದ ಅಲಂಕರಿಸಿ,
ತಿನ್ನುವುದಕ್ಕೆ ಆಹಾರವನ್ನಿತ್ತು ಮಂಗಳಾರತಿ ಮಾಡಬೇಕು.
ಗೋವರ್ಧನಪೂಜೆ
ಗೋವರ್ಧನಾಚಲಾಧಾರ ಗೋಕುಲತ್ರಾಣಕಾರಕ ।
ಬಹುಬಾಹುಕೃತಚ್ಛಾಯ ಗವಾಮ್ ಕೋಟಿಪ್ರದೋ ಭವ ।।
ಯಮದ್ವೀತೀಯ
ಕಾರ್ತಿಕ ಶುದ್ಧ ದ್ವಿತೀಯ ದಿನದಂದು ಯಮದೇವರು ತಾನಾಗಿಯೇ ತನ್ನ ತಂಗಿಯಾದ ಯಮುನೆಯ ಮನೆಗೆ ಹೋಗಿ
ಔತಣವನ್ನು ಸ್ವೀಕರಿಸಿ, ತಂಗಿ ಯಮುನೆಗೆ ಉಡುಗೊರೆಯನಿತ್ತು ಬಂದರಂತೆ. ಆದ್ದರಿಂದ ಅಂದು ಮಧ್ಯಾಹ್ನ ಪುರುಷರು
ಸೋದರಿಯರ ಮನೆಗೆ ಹೋಗಿ ಅವರ ಕೈಯಿಂದ ಪ್ರೀತಿಯ ಭೋಜನವನ್ನು ಔತಣವನ್ನು ಸ್ವೀಕರಿಸಬೇಕು. ಸೋದರಿಗೆ ಪ್ರೀತಿಯ
ಉಡುಗೊರೆಯನ್ನು ಕೊಟ್ಟು ಗೌರವಿಸಬೇಕು.
www.purnapramati.in
ಚಿಕ್ಕಪ್ಪನ ಮಗಳು ದೊಡ್ಡಪ್ಪನ ಮಗಳು ಸ್ನೇಹಿತನ ಮಗಳು ಮುಂತಾದವರ ಮನೆಯಲ್ಲಿ ಪ್ರೀತಿಯ ಭೋಜನವನ್ನು
ಸ್ವೀಕರಿಸಬೇಕು.
ಭಗಿನಿ ತೃತೀಯ
ಇದು ಸಂಪ್ರದಾಯವಾಗಿ ಆಚರಣೆಗೆ ಬಂದ ಪದ್ಧತಿ. ಇಂದು ಅಕ್ಕ ತಂಗಿಯರನ್ನು ಮನೆಗೆ ಕರೆದು ಆತಿಥ್ಯವನ್ನು ನೀಡಬೇಕು.
ಭಾರತದ ಎಲ್ಲಾ ಪರ್ವಗಳು ಸಂಬಂಧವನ್ನು ಗಟ್ಟಿಗೊಳಿಸುವ ನಿಲುವನ್ನು ಹೊಂದಿರುವುದನ್ನು ಇಲ್ಲಿ ಕಾಣಬಹುದು.
ಅಮ್ಮನ ಚೌತಿ
ಮನೆಯ ಶ್ರೇಯಸ್ಸಿಗಾಗಿ ಹಗಲಿರಲು ಬೇಸರವಿಲ್ಲದೆ ಪ್ರೀತಿಯಿಂದ ದುಡಿಯುವ ತಾಯಿಯನ್ನು ಇಂದು ಕೂಡಿಸಿ ಉಪಚರಿಸಬೇಕು.
ಇದು ಹಲವು ಪ್ರಾಂತ್ಯಗಳಲ್ಲಿ ಸಂಪ್ರದಾಯವಾಗಿ ಆಚರಣೆಯಲ್ಲಿದೆ ಹಾಗೂ ಅರ್ಥಗರ್ಭಿತವಾಗಿದೆ.
ಕಡೆಪಂಚಮೀ
ಈ ಹಬ್ಬದ ಪ್ರತಿಯೊಂದು ಕೆಲಸಗಳನ್ನು ನಿಮ್ಮ ಮಕ್ಕಳನ್ನು ಸೇರಿಸಿಕೊಂಡು ಹಬ್ಬದ ಆಚರಣೆಯನ್ನು ನಡೆಸಿ, ಮಕ್ಕಳಿಗೆ ಆಚರಣೆಯ
ಮಹತ್ವವನ್ನು ತಿಳಿಸಿ ಕೊಡಿ. ಆಹಾರ ಪದಾರ್ಥಗಳನ್ನು ಮಕ್ಕಳೊಂದಿಗೆ ಸಿದ್ಧಪಡಿಸಿ. ಇದರಿಂದ ಮಕ್ಕಳಿಗೆ ಪದಾರ್ಥಗಳ ಹಿಂದಿನ
ಶ್ರಮ,ರುಚಿ, ಶುಚಿಯ ಮಹತ್ವ ತಿಳಿಯಲು ಸಹಾಯವಾಗುತ್ತದೆ.
ಪ್ರತಿಯೊಂದು ಮಗು ತಾವು ತಿಳಿದ ವಿಷಯವನ್ನು ಅಧ್ಯಾಪಕರೊಂದಿಗೆ ಹಂಚಿಕೊಳ್ಳುವಂತೆ ಆಗಲಿ.
ಸೂಚನೆ
ಈ ಲೇಖನ ಒಂದು ಮಾದರಿ ಮಾತ್ರ. ನಿಮ್ಮ ಕುಲದ ಸಂಪ್ರದಾಯವನ್ನು ಕುಟುಂಬದ ಹಿರಿಯರಿಂದ ತಿಳಿದು
ಅದರಂತೆ ಆಚರಿಸುವುದು ಬಹಳ ಉತ್ತಮ. ಇದಕ್ಕೆ ಅವಕಾಶ ಇಲ್ಲದ ಪಕ್ಷದಲ್ಲಿ ಈ ಲೇಖನ ಉಪಕಾರಿಯಾದೀತು.
।। ಶ್ರೀಕೃಷ್ಣಾರ್ಪಣಮಸ್ತು ।।
www.purnapramati.in