ಅಮೃತಃ ಮಹಾ ಮೃತ್ಯುಂಜಯ ಮಂತ್ರದ ಅರ್ಥ ಎಲ್ಲಾ ಮೂರು ಲೋಕಗಳಲ್ಲಿ ಮೂರು ಕಣ್ಣಿನ ದೇವ, ಸಕಲ ಜೀವಿಗಳನ್ನು ಪೋಷಿಸುವವನು, ಮಾಗಿದ ಸೌತೆಕಾಯಿ ಬಳ್ಳಿಯಿಂದ ಬಿಡುಗಡೆ ಆಗುವಂತೆ ನನ್ನನ್ನು ಸಾವಿನಿಂದ ಅಮರತ್ವವು ಬಿಡಿಸಲಿ. ಒತ್ತಡ ಮತ್ತು ಭೀತಿಯಿಂದ ಮನಸ್ಸನ್ನು ಮುಕ್ತಗೊಳಿಸುವುದು ಮಹಾ ಮೃತ್ಯುಂಜಯ ಮಂತ್ರವು ಸೂಕ್ಷ್ಮ ಮನಸ್ಸಿನ ಮೇಲೆ ಕೆಲಸ ಮಾಡುವಲ್ಲಿ ಒಂದು ಅದ್ಭುತವಾದ ಗುಣವನ್ನು ಹೊಂದಿದೆ. ಇದು ಭೀತಿಯನ್ನು ಹೋಗಲಾಡಿವುದು ಮತ್ತು ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸುವುದು. ಈ ಮಂತ್ರವನ್ನು ನೀವು ಪಠಿಸಬಹುದು. ಇದನ್ನು ಪಠಿಸಲು ಸರಿಯಾದ ಸಮಯ ಮುಂಜಾನೆ 4 ಗಂಟೆಯಿಂದ 6 ಗಂಟೆ ತನಕ. ಮುಂಜಾನೆ 108 ಸಲ ಮಂತ್ರ ಪಠಿಸಿ ಮುಂಜಾನೆ ಎದ್ದು ಸ್ನಾನ ಮಾಡಿ, ಇದರ ಬಳಿಕ ಶಿವ ಚಿತ್ರವಿರುವತ್ತ ಮುಖ ಮಾಡಿ ಮತ್ತು 108 ಸಲ ಇದನ್ನು ಪಠಿಸಿ. ನೀವು 40 ದಿನಗಳ ಹೀಗೆ ಮಾಡಿದರೆ ಆಗ ಖಂಡಿತವಾಗಿಯೂ ಪರಿಹಾರ ಸಿಗುವುದು ಮತ್ತು ಆತ್ಮವಿಶ್ವಾಸವು ಹೆಚ್ಚಾಗುವುದು. ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಲು ಮಹಾಮೃತ್ಯಂಜಯ ಮಂತ್ರವನ್ನು ಪಠಿಸಿದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯಲು ಸಾಧ್ಯವಾಗುವುದು. ಇದು ಪರೀಕ್ಷೆ ಭೀತಿ ನಿವಾರಿಸುವುದು ಮತ್ತು ಪರೀಕ್ಷೆಯನ್ನು ತುಂಬಾ ಧೈರ್ಯವಾಗಿ ಎದುರಿಸಲು ನೆರವಾಗುವುದು. ಇದು ಏಕಾಗ್ರತೆ, ಗಮನ ಮತ್ತು ದೃಷ್ಟಿಕೋನ ಹೆಚ್ಚಿಸುವುದು. ಮನಸ್ಸಿನಲ್ಲಿ ಇರುವ ಎಲ್ಲಾ ಅಸ್ಥಿರವನ್ನು ನಿವಾರಣೆ ಮಾಡುವುದು. ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಲು ಮುಂಜಾನೆ ಎದ್ದು ಸ್ನಾನ ಮಾಡಿದ ಬಳಿಕ ಶಿವನ ಮೂರ್ತಿ ಅಥವಾ ಫೋಟೊದ ಮುಂದೆ ಕುಳಿತು ಈ ಮಂತ್ರವನ್ನು 21 ಬಾರಿ ಪಠಿಸಬೇಕು. ಓದುವುದರಲ್ಲಿ ನಿಮಗೆ ಯಾವುದೇ ಸಮಸ್ಯೆಯಾಗುತ್ತಲಿದ್ದರೆ ಅದು ನಿವಾರಣೆ ಆಗುವುದು. ಶಾಲೆಗೆ ಹೋಗುವ ಮೊದಲು ಮೂರು ಸಲ ಈ ಮಂತ್ರ ಪಠಿಸಿ ಮತ್ತು ಉತ್ತಮ ಫಲಿತಾಂಶಕ್ಕಾಗಿ ಮಲಗುವ ಮೊದಲು ಇದನ್ನು ಮೂರು ಸಲ ಪಠಿಸಿ. ಸಾಲದಿಂದ ಮುಕ್ತರಾಗಲು ಮತ್ತು ಹಣ ಮರಳಿ ಬರಲು ಜೀವನದಲ್ಲಿ ಹಣ ಎನ್ನುವುದು ಅತೀ ಪ್ರಾಮುಖ್ಯತೆ ಪಡೆದಿದೆ. ಸಾಲದಿಂದಾಗಿ ನಿಮ್ಮ ಮನಸ್ಸಿನ ಶಾಂತಿ ಕೆಡಬಹುದು ಮತ್ತು ಒತ್ತಡಕ್ಕೆ ಸಿಲುಕಬಹುದು. ನಿದ್ರೆ ಇಲ್ಲದೆ ಇರುವುದು, ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಆತ್ಮಹತ್ಯೆಗೆ ಮುಂದಾಗುವುದು, ಜೀವನದ ಧನಾತ್ಮಕ ಅಂಶದ ಬಗ್ಗೆ ಗಮನ ಕೇಂದ್ರೀಕರಿಸಲು ವಿಫಲವಾಗುವುದು ಸಾಲದ ಕೆಲವೊಂದು ಪರಿಣಾಮಗಳು. ಸಾಲ ತೀರಲು ಮತ್ತು ಹಣ ಮರಳಿ ಬರಲು ಸಾಲವು ನಿಮ್ಮನ್ನು ಖಂಡಿತವಾಗಿಯೂ ಚಿಂತೆಗೀಡು ಮಾಡುವುದು. ಅದೇ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಸಾಲದಿಂದ ಮುಕ್ತಿ ಪಡೆದು, ನಿಮ್ಮ ಹಣವು ಮರಳಿ ಬರುವುದು. ಬೆಳಗ್ಗೆ ನೀವು 108 ಸಲ ನೀವು ಈ ಮಂತ್ರವನ್ನು ಪಠಿಸಬೇಕು ಮತ್ತು ಅದೇ ರೀತಿ ಸಂಜೆ ಕೂಡ. ಈ ರೀತಿ ಮಾಡಿದರೆ ಆಗ ನಿಮ್ಮ ಆರ್ಥಿಕ ಪರಿಸ್ಥಿತಿಯು ಖಂಡಿತವಾಗಿಯೂ ಸುಧಾರಣೆ ಆಗುವುದು. ನಿಮ್ಮ ಆದಾಯ ಹೆಚ್ಚುವುದು ಮತ್ತು ಆತ್ಮವಿಶ್ವಾಸವು ಮರಳಿ ಬರುವುದು. ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಲು ಪ್ರತಿಯೊಬ್ಬರ ವೃತ್ತಿ ಬದುಕಿನಲ್ಲಿ ಏನಾದರೊಂದು ತೊಂದರೆಯು ಇದ್ದೇ ಇರುತ್ತದೆ. ಆದರೂ ಕಚೇರಿಗಳಲ್ಲಿ ಕೆಲವೊಂದು ಸಲ ವೃತ್ತಿಪರ ವೈಷಮ್ಯಗಳು ಇದ್ದೇ ಇರುತ್ತದೆ. ಇದರಿಂದಾಗಿ ನಿಮಗೆ ಭಡ್ತಿ ಹಾಗೂ ಸಂಬಳ ಹೆಚ್ಚಳಕ್ಕೆ ತೊಂದರೆ ಆಗುತ್ತಲಿರಬಹುದು. ನಿಮ್ಮ ಹಾದಿಗೆ ತೊಂದರೆ ಆಗುವುತ್ತಿರುವುದನ್ನು ತಪ್ಪಿಸಲು ಮೃತ್ಯುಂಜಯ ಮಂತ್ರ ಪಠಿಸಿ ಮತ್ತು ನಿಮ್ಮ ಗುರಿಯನ್ನು ಸಾಧಿಸಿ. ವೃತ್ತಿಪರ ಜೀವನದಲ್ಲಿ ಯಶಸ್ವಿಯಾಗಲು… ನಿಮ್ಮ ವೃತ್ತಿಪರ ಯಶಸ್ಸು ಮತ್ತು ಪ್ರಗತಿಯನ್ನು ಸಹಿಸದೆ ಇರುವಂತಹ ಹಲವಾರು ಜನರು ಇರಬಹುದು. ಇದರಿಂದ ನಿಮ್ಮ ಸಾಧನೆಗೆ ಅಡ್ಡಿಯಾಗುತ್ತಿರಬಹುದು. ಪ್ರತಿನಿತ್ಯವೂ ನೀವು ಬೆಳಗ್ಗೆ 54 ಸಲ ಮತ್ತು ಸಂಜೆ ವೇಳೆ 54 ಸಲ ಈ ಮಂತ್ರವನ್ನು ಪಠಿಸಬೇಕು. ನಿಮ್ಮ ದೈನಂದಿನ ಕೆಲಸಗಳನ್ನು ಆರಂಭಿಸುವ ಮೊದಲು ಈ ಮಂತ್ರವನ್ನು ಮೂರು ಸಲ ಪಠಿಸಿ. ನಿಮ್ಮ ಶತ್ರುಗಳು ಸೂರ್ಯನ ಬೆಳಕಿನಡಿಯಲ್ಲಿ ಮಂಜು ಕರಗುವಂತೆ ನಾಶವಾಗುವರು. ॐ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್. ಮಂತ್ರದ ಅರ್ಥ ಓ ಮೃತ್ಯುಂಜಯನೇ, ಬಳ್ಳಿಯಿಂದ ತಾನಾಗಿ ಕಳಚಿಕೊಳ್ಳುವ ಹಣ್ಣಿನಂತೆ ನಾನು ನಶ್ವರವಾದ ಸಂಸಾರದಿಂದ ಕಳಚಿಕೊಳ್ಳುವಂತೆ ನನ್ನಲ್ಲಿ ಪುಷ್ಟಿಯನ್ನು ತಂದು ನಾನು ಪಕ್ವವಾಗುವಂತೆ ಮಾಡು. ಸ್ಥಿರವಾದುದು, ಶಾಶ್ವತವಾದುದು, ಅನಂತವಾದುದರ ಕಡೆಗೆ ಹೋಗುವ ನನ್ನ ಯತ್ನದಿಂದ ನನ್ನನ್ನು ಬಿಡಿಸಬೇಡ. ಶಿವನನ್ನು ಮಹಾಜ್ಞಾನಿ, ಕೈಲಾಸವಾಸಿ ಎಂದು ಕರೆಯುತ್ತಾರೆ. ತ್ರಿಕಾಲ ಜ್ಞಾನಿಯಾಗಿರುವ ಈ ಭಗವಂತ ಎಲ್ಲವನ್ನೂ ತಿಳಿದಿರುವ ಮಹಾ ಮಹಿಮನಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರ ಶಿವನನ್ನು ಪ್ರಳಯಾಂತಕ, ವಿಧ್ವಂಸಕ ಎಂದು ಕರೆಯಲಾಗಿದೆ. ಭಗವಂತ ಶಿವನ ಹೆಸರು ಕೇಳುತ್ತಿದ್ದಂತೆಯೇ ಮನದಲ್ಲಿ ಮೂಡುವ ಚಿತ್ರವೆಂದರೆ ಹಿಮಪರ್ವತದ ಮೇಲೆ ಕುಳಿತು ಶಿಖದಲ್ಲಿ ಚಂದ್ರನನ್ನೂ, ಕೊರಳಲ್ಲಿ ನಾಗನನ್ನೂ, ರುದ್ರಾಕ್ಷಿಮಾಲೆಗಳನ್ನೂ, ಕೈಯಲ್ಲೊಂದು ತ್ರಿಶೂಲ, ಡಮರುಗ ಮತ್ತು ತಲೆಯಿಂದ ಚಿಮ್ಮುತ್ತಿರುವ ಗಂಗೆ, ಹೀಗೆ ಅನೇಕ ರೀತಿಯ ಕಲ್ಪನೆಗಳು ಮನದಲ್ಲಿ ಮೂಡುತ್ತದೆ. ಹಿಂದೂ ಧರ್ಮದಲ್ಲಿ ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ. ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾನೆ....ಬೇರೆ ಬೇರೆ ಕಾರಣಗಳಿಗಾಗಿ ಶಿವನಿಗೆ ಭಕ್ತರ ಸಂಖ್ಯೆ ಕೂಡ ಅಧಿಕವಿದೆ. ಸಾಧನ, ವೃತ ಮತ್ತು ಪೂಜೆಯಿಂದ ಭಗವಂತನನ್ನು ಒಲಿಸುತ್ತಾರೆ. ಇಂದಿನ ಲೇಖನದಲ್ಲಿ ಅತಿ ಶಕ್ತಿಶಾಲಿ ಮತ್ತು ಶಿವನನ್ನು ಒಲಿಸಿಕೊಳ್ಳವ ಮಹಾ ಮೃತ್ಯುಂಜಯ ಮಂತ್ರವನ್ನು ತಿಳಿಸುತ್ತಿದ್ದೇವೆ. ಇದನ್ನು ನಿತ್ಯವೂ ಜಪಿಸುವುದರಿಂದ ನೀವು ಫಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಅದ್ಭುತವಾದ ಮಂತ್ರವನ್ನು ಪಠಿಸುವುದು ಮತ್ತು ಅದನ್ನು ಪಠಿಸಿ ಪಡೆದುಕೊಳ್ಳಬಹುದಾದ ಫಲವನ್ನು ಕುರಿತು ಅರಿತುಕೊಳ್ಳೋಣ..... Sponsored India's Top Data Science & Analytics PG Program GreatLearning Sponsored Check out How to Shed Pounds Naturally without… lifestyle ಮಂತ್ರ ಓಂ ತ್ರ್ಯಯಂಬಕಂ ಯಜ್ಮಹೇ ಸುಗಂಧಿ ಪುಷ್ಠಿ ವರ್ಧನಂ ಉರ್ವಾರುಕಮೀವ ಬಂಧನಾತ್ ಮೃತ್ಯುರೊರ್ಮುಕ್ಶಯ ಮಮ್ರಿತಾತ್ ಅರ್ಥ ತ್ರ್ಯಯಂಬಕಮ್: ಓ ಶಿವನೇ ನೀವು ಮೂರು ಕಣ್ಣುಗಳನ್ನು ಹೊಂದಿದ್ದೀರಿ ಯಜ್ಮಹೇ : ನಿರಂತರವಾಗಿ ಪೂಜಿಸಲ್ಪಡುತ್ತೀರಿ ಸುಗಂಧಿನ್: ಪರಿಮಳವನ್ನು ಆಸ್ವಾದಿಸುವವರು ಪುಷ್ಠಿ ವರ್ಧನಂ: ಭಕ್ತಿಯನ್ನು ಹೆಚ್ಚಿಸುವವರು ಉರ್ವಾರುಕಮೀವ ಬಂಧನಾತ್: ಮುಕ್ತಿದಾತ ಮೃತ್ಯು: ಮರಣ ಮೋಕ್ಷ: ಜನನ ಮರಣ ಚಕ್ರದಿಂದ ಬಿಡುಗಡೆ ಮಮ್ರಿತಾತ್: ಅಮರ ಅಲ್ಲ Sponsored Deepika Padukone Has Literally Done It All And Here's How SocialGoat Sponsored Why pay rent when you can buy a 2/3 BHK at Rs 37.99L? Square Yards ಸಾರಾಂಶ ನಾವು ನಿನ್ನನ್ನು ಧ್ಯಾನಿಸುತ್ತೇವೆ ಓಹ್ ಶಿವ. ಸಾವಿನ ಬಂಧಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಹಾಯ ಮಾಡಿ ಮತ್ತು ಅಮರತ್ವವು ಸಾಧ್ಯವಾಗದಿದ್ದರೂ, ದಯವಿಟ್ಟು ಮೋಕ್ಷವನ್ನು ಸಾಧಿಸಲು ನಮಗೆ ಸಹಾಯ ಮಾಡಿ. ಮಂತ್ರವನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಜನರಿಗೆ ದೀರ್ಘಕಾಲ ಬದುಕಲು ಸಹಾಯ ಮಾಡುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ ಆದರೆ ಅನಿವಾರ್ಯ ಸಾವು ಬಂದಾಗ ಜನರು ಮರಣದ ಭಯವಿಲ್ಲದೆ ಬದುಕಲು ಸಹಾಯ ಮಾಡುತ್ತಾದೆ ಮತ್ತು ಮೋಕ್ಷವನ್ನು ತಲುಪುತ್ತಾರೆ ಎಂದು ಮತ್ತೊಂದು ವಿವರಣೆಯು ಹೇಳುತ್ತದೆ. ಮೃತ್ಯುಂಜಯ ಮಂತ್ರದ ದಂತಕಥೆ ಮೃತ್ಯುಂಜಯ ಮಂತ್ರ ಅಥವಾ ಮಹಾ ಮೃತ್ಯುಂಜಯ ಮಂತ್ರ ಹಿಂದೂ ಧರ್ಮದಲ್ಲಿನ ಅತ್ಯಂತ ಪ್ರಮುಖ ಮಂತ್ರಗಳಲ್ಲಿ ಒಂದಾಗಿದೆ. ಇದು ಅತ್ಯಂತ ಹಳೆಯದು ಮತ್ತು ಅತ್ಯಂತ ಜನಪ್ರಿಯವಾಗಿದೆ. ಇದನ್ನು ಸೇಜ್ ಮಾರ್ಕೆಂಡೇಯನಿಂದ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಚಂದ್ರನು ಒಮ್ಮೆ ರಾಜ ದಕ್ಷನಿಂದ ಶಾಪಗೊಂಡಿದ್ದಾರು ಎಂದು ಕಥೆ ಹೇಳುತ್ತದೆ. ಚಂದ್ರ ದೇವರಿಗೆ ಈ ಮಂತ್ರವನ್ನು ನೀಡಲು ಋಷಿ ಮಾರ್ಕಂಡೇಯನು ದಕ್ಷನ ಮಗಳಾದ ಸತಿಗೆ ಈ ಮಂತ್ರವನ್ನು ಉಪದೇಶಿಸಿದ್ದರು. ಇನ್ನೊಂದು ಕಥೆಯು ಭಗವಾನ್ ಶಿವನು ಈ ಮಂತ್ರವನ್ನು ಋಷಿ ಶುಕ್ರಾಚಾರ್ಯನಿಗೆ ಕೊಟ್ಟಿದ್ದಾರೆಂದು ಹೇಳುತ್ತಾನೆ. ಶುಕ್ರಾ ಚಾರ್ಯರು ಅದನ್ನು ದೀದಿಚಿಗೆ ಉಪದೇಶಿಸಿದರು. ಅವನು ಇದನ್ನು ಪ್ರತಿಯಾಗಿ ರಾಜ ಕ್ಶುವಾಗೆ ಕೊಟ್ಟರು ಮತ್ತು ಅದು ಶಿವ ಪುರಾಣವನ್ನು ಪ್ರವೇಶಿಸಿತು. Sponsored Proven Easy Formula to Control Asthma Completely. amoksa ayurveda Sponsored How to Use Kiwi https://livingfoodz.com ಮಹಾ ಮೃತ್ಯುಂಜಯ ಮಂತ್ರದ ಮಹತ್ವ ಮಹಾ ಮೃತ್ಯುಂಜಯ ಮಂತ್ರ ಮರಣವನ್ನು ನಿವಾರಿಸುವುದಾಗಿ ಹೇಳಲಾಗಿದೆ. ರಾಜ ದಕ್ಷನು ಚಂದ್ರನನ್ನು ನಿಧಾನ ಮತ್ತು ಭಯಾನಕ ಸಾವು ಬರಲಿ ಎಂದು ಶಪಿಸಿದನು ಎಂದು ಹೇಳಲಾಗುತ್ತದೆ. ಇದರ ಪರಿಣಾಮವಾಗಿ, ಅವರು ಅಮಾವಾಸ್ಯೆಯಲ್ಲಿ ಕ್ಷೀಣಿಸಿ ನಂತರ ಕೊನೆಗೊಳ್ಳುತ್ತಾರೆ. ಸತಿ ದೇವತೆ ಚಂದ್ರ ದೇವರಿಗೆ ಈ ಮಂತ್ರವನ್ನು ನೀಡಿದರು. ಈ ಮಂತ್ರವನ್ನು ಓದಿದ ನಂತರ ಶಿವನು ಚಂದ್ರ ದೇವರನ್ನು ಅವರ ತಲೆಯ ಮೇಲೆ ಇಟ್ಟುಕೊಂಡರು ಮತ್ತು ಇದು ಅವರ ನಿಧಾನವಾದ ಮರಣವನ್ನು ಬದಲಾಯಿಸಿತು ಮತ್ತು ಇದು ಪೂರ್ಣಿಮಾ ಅಥವಾ ಹುಣ್ಣಿಮೆಯ ದಿನದಲ್ಲಿ ಕೊನೆಗೊಳ್ಳುತ್ತದೆ. PG program on data science and business analytics Great Learning These Tv Shows And Movies Should Get An Oscar And Here's Why SocialGoat Five Foods to Fight Hormonal Imbalance https://livingfoodz.com ಮಂತ್ರವನ್ನು ಬಳಸುವುದು ಹೇಗೆ ನಿತ್ಯವೂ ಈ ಮಂತ್ರವನ್ನು 108 ಬಾರಿ ಜಪಿಸಬೇಕು. Sponsored #AskUsAnything: Is Breastfeeding Good for Both… https://livingfoodz.com Sponsored Artist recreates iconic Raja Ravi Varma paintings with… India Today 1000 ಬಾರಿ ಪಠಿಸಲು ಪೂಜಾರಿಯನ್ನು ಕರೆಯಿಸಿಕೊಳ್ಳಿ ನೀವು ಇದನ್ನು 1000 ಬಾರಿ ಪಠಿಸಬೇಕೆಂದು ಬಯಸಿದಲ್ಲಿ ಪೂಜಾರಿಯನ್ನು ಕರೆಯಿಸಿ ಈ ಮಂತ್ರವನ್ನು ಪಠಿಸುವಂತೆ ಹೇಳಿ ನೀವು ಕಡಿಮೆ ಸಮಯವನ್ನು ಹೊಂದಿದ್ದರೆ ನೀವು ಅತಿ ಕಡಿಮೆ ಸಮಯವನ್ನು ಹೊಂದಿದ್ದು ಮಂತ್ರದ ಪೂರ್ಣ ಫಲವನ್ನು ಪಡೆದುಕೊಳ್ಳುವ ಇಚ್ಛೆಯನ್ನು ಹೊಂದಿದ್ದಲ್ಲಿ ಹತ್ತಿರದ ಶಿವ ದೇವಾಲಯಕ್ಕೆ ಹೋಗಿ. ನೀರಿನಿಂದ ಶಿವಲಿಂಗವನ್ನು ತೊಳೆಯುತ್ತಿರುವಾಗ ಈ ಮಂತ್ರವನ್ನು ಪಠಿಸಿ. ಭಗವಂತನಿಗೆ ಬಿಲ್ವ ಎಲೆಯನ್ನು ಅರ್ಪಿಸಿ. ಇದನ್ನು ಸೋಮವಾರ ಆರಂಭಿಸಿ ಮತ್ತು 15 ದಿನಗಳ ಕಾಲ ಅನುಸರಿಸಿ. Sponsored The Chamundeshwari Temple - View All Episodes https://livingfoodz.com Sponsored Here's What Your Goa Trip Will Be Like With Your Friends SocialGoat ಮಂತ್ರವನ್ನು ಪಠಿಸಲು ಅಸಾಧ್ಯವಾದ ಸಮಯದಲ್ಲಿ ನಿಮ್ಮ ಮನೆಯ ಸದಸ್ಯರು ಅನಾರೋಗ್ಯವನ್ನು ಹೊಂದಿದ್ದರೆ ಅವರಿಗೆ ಮಂತ್ರ ಪಠಿಸಲು ಸಾಧ್ಯವಾಗದೇ ಇದ್ದಲ್ಲಿ ನೀವು ಅವರ ಪರವಾಗಿ ಈ ಮಂತ್ರವನ್ನು ಪಠಿಸಬಹುದಾಗಿದೆ. ಈ ಮಂತ್ರದಿಂದ ಹೊರಬರುವ ಶಕ್ತಿಯು ನಿಮ್ಮ ಪ್ರೀತಿಪಾತ್ರರನ್ನು ತಲುಪಿ ಭಗವಂತನ ಅನುಗ್ರಹ ಅವರಿಗೆ ದೊರಕುವಂತೆ ಆಗುತ್ತದೆ. ಮಂತ್ರವನ್ನು ನಿತ್ಯವೂ ಪಠಿಸುವುದರ ಫಲ ನೀವು ನಿತ್ಯವೂ ಮಂತ್ರವನ್ನು ಪಠಿಸುವುದರಿಂದ ನಿಮಗೆ ಹಠಾತ್ ಮರಣ, ದುರಾದೃಷ್ಟ ಮತ್ತು ವಿಕೋಪಗಳ ಉಂಟಾಗುವುದಿಲ್ಲ. Sponsored Neena Gupta wears edgy one- shoulder kurta and skirt by… India Today Sponsored How to Make Rasmalai at Home https://livingfoodz.com ಮಂತ್ರದ ಪ್ರಯೋಜನ ಮಹಾ ಮೃತ್ಯುಂಜಯ ಮಂತ್ರ ಎಂಬುದು ಮಂತ್ರವಾಗಿದ್ದು, ಅದು ಪೋಷಣೆ ಮತ್ತು ಪುನರುಜ್ಜೀವನಗೊಳ್ಳುತ್ತದೆ. ಇದು ನಿಮಗೆ ಶಾಂತಿ, ಸಮೃದ್ಧಿ, ಆರೋಗ್ಯ, ಸಂಪತ್ತು ಮತ್ತು ಸಂತೋಷದ ದೀರ್ಘಾವಧಿಯೊಂದಿಗೆ ಆಶೀರ್ವಾದ ನೀಡುತ್ತದೆ. ಒಳ್ಳೆಯ ಆಲೋಚನೆಗಳನ್ನು ಮತ್ತು ಸಕಾರಾತ್ಮಕ ಭಾವನೆಗಳನ್ನು ಉತ್ತೇಜಿಸುವ ಮೂಲಕ ನಿಮ್ಮನ್ನು ಗುಣಪಡಿಸುವ ಅಧಿಕಾರಗಳನ್ನು ಇದು ಹೊಂದಿದೆ. ನೀವು ಹೊಂದಿರುವ ಯಾವುದೇ ಕಾಯಿಲೆಯಿಂದ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವಲ್ಲಿ ನೀವು ಹೆಚ್ಚು ಪರಿಣಾಮಕಾರಿಯಾದ ಆಹಾರ ಮತ್ತು ಔಷಧದಂತೆ ಇದು ಕೆಲಸ ಮಾಡುತ್ತದೆ. ಮಂತ್ರ ಸಕಾರಾತ್ಮಕತೆ ಮತ್ತು ಬ್ರಹ್ಮಾಂಡದ ವೈಬ್ಗಳನ್ನು ಆಕರ್ಷಿಸುತ್ತದೆ, ಇದು ನಿಮ್ಮ ಸುತ್ತಮುತ್ತಲಿನ ಶುದ್ಧತೆಯನ್ನು ಮತ್ತು ಯಾವುದೇ ರೀತಿಯ ಋಣಾತ್ಮಕತೆಯನ್ನು ನಾಶಪಡಿಸುತ್ತದೆ. ಶುಭಕಾರ್ಯಕ್ಕೆ ಅಥವಾ ಅಗತ್ಯ ಕೆಲಸಕ್ಕೆ ಮನೆಯಿಂದ ಹೊರಡುವ ಮುನ್ನ ಪ್ರತಿದಿನ ನಿಮ್ಮ ಉದ್ಯೋಗಗಳಿಗೆ ಅಥವಾ ವೃತ್ತಿನಿಮಿತ್ತ ಮನೆಯಿಂದ ಹೊರಡುವ ಮುನ್ನ, ಯಾವುದಾದರೂ ಶುಭಕಾರ್ಯಕ್ಕೆ ಅಥವಾ ಅಗತ್ಯ ಕೆಲಸಕ್ಕೆ ಮನೆಯಿಂದ ಹೊರಡುವ ಮುನ್ನ, ರಾತ್ರಿ ಮಲಗುವ ಮುನ್ನ, ಯಾವುದೇ ಔಷಧಿ ಸೇವಿಸುವ ಮುನ್ನ ಈ ಮಂತ್ರವನ್ನು ಕನಿಷ್ಟ ಒಂಭತ್ತು ಬಾರಿ ಪಠಿಸಬೇಕು. ನಿಮ್ಮ ವಾಹನವನ್ನು ಚಲಾಯಿಸಲು ತೊಡಗುವ ಮುನ್ನ ಅಥವಾ ಪ್ರಯಾಣದ ವಾಹನ ಚಾಲನೆಗೂ ಮುನ್ನ ಈ ಮಂತ್ರವನ್ನು ಮೂರು ಬಾರಿ ಪಠಿಸಬೇಕು. Sponsored How to Make the Perfectly Round Chapati https://livingfoodz.com Sponsored Armaan Jain wedding reception: Isha Ambani is… India Today ಬಿಡುವಿನ ವೇಳೆಯಲ್ಲಿ ದಿನದ ಇತರ ಯಾವುದೇ ಬಿಡುವಿನ ವೇಳೆಯಲ್ಲಿ ನೂರಾಎಂಟು ಬಾರಿ ಪ್ರತಿದಿನ ಪಠಿಸುವ ಮೂಲಕ ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ಸ್ನಾನದ ಬಳಿಕ ದೇಹಕ್ಕೆ ಹಚ್ಚಿಕೊಳ್ಳುವ ವಿಭೂತಿ, ಭಸ್ಮ, ಪವಿತ್ರ ಬೂದಿ, ಚಂದನ ಅಥವಾ ಕುಂಕುಮವನ್ನು ಹಚ್ಚಿಕೊಳ್ಳುವಾಗಲೂ ಈ ಮಂತ್ರವನ್ನು ಪಠಿಸಬೇಕು. ಹೀಗೆ ಮಾಡಿ ಇನ್ನೊಂದು ವಿಧಾನವೆಂದರೆ ಒಂದು ಲೋಟದಲ್ಲಿ ತಣ್ಣೀರು ತುಂಬಿ ಪೂರ್ವಾಭಿಮುಖವಾಗಿ, ಸಾಧ್ಯವಾದರೆ ಪದ್ಮಾಸನದಲ್ಲಿ ಅಥವಾ ಚಕ್ಕಲಮಕ್ಕಲ ಬೆನ್ನು ನೆಟ್ಟಗಿರುವಂತೆ ಕುಳಿತು ಬಲಹಸ್ತದಿಂದ ಲೋಟವನ್ನು ಮುಚ್ಚಿ ಈ ಮಂತ್ರವನ್ನು 1008 ಬಾರಿ ಪಠಿಸಿ ಈ ನೀರನ್ನು ಮನೆಯ ಒಳಗೆಲ್ಲಾ ಪ್ರೋಕ್ಷಳಿಸಿ, ಚಿಕ್ಕ ಚಮಚ ಅಥವಾ ಪ್ರಸಾದದ ಮಿಳ್ಳೆಯನ್ನು ಉಪಯೋಗಿಸಿ ಇತರ ಭಕ್ತರಿಗೂ ವಿತರಿಸಿ. ಇದರಿಂದ ಶಿವನ ಅಪಾರ ಶಕ್ತಿಯ ಒಂದು ಅಂಶ ಈ ನೀರಿಗೆ ಲಭ್ಯವಾಗಿ ಮನೆಯನ್ನು ಬೆಳಗುತ್ತದೆ ಹಾಗೂ ಭಕ್ತರಿಗೂ ಒಳ್ಳೆಯದಾಗುತ್ತದೆ
Read more at: https://kannada.boldsky.com/inspiration/short-story/maha-mrityunjaya-