Professional Documents
Culture Documents
ಸಂಧ್ಯಾವಂದನ ಪೂರ್ಣಪಾಠ - ವಿಕಿಪೀಡಿಯ
ಸಂಧ್ಯಾವಂದನ ಪೂರ್ಣಪಾಠ - ವಿಕಿಪೀಡಿಯ
ಪೂರ್ಣಪಾಠ
ಸಂಧ್ಯಾವಂದನೆ ಎಂಬುದು ಉಪನಯನವಾದ ಹಿಂದೂಗಳು ಆಚರಿಸುವ ಒಂದು ದೈನಂದಿನ ಕ್ರಿಯೆ. ಮೂರು ಸಂಧ್ಯಾ
ಕಾಲಗಳಾದ ಪ್ರಾತಃ ಸಂಧ್ಯೆ, ಮಧ್ಯಾಹ್ನಿಕ, ಸಾಯಂ ಸಂಧ್ಯೆ ಎಂಬ ತ್ರಿಸಂಧ್ಯೆಗಳ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ.
ಹಿನ್ನೆಲೆ
ಸಂಧ್ಯಾವಂದನೆ ಮಾಡುವ ಸಂಪ್ರದಾಯ ಬಹಳ ಪ್ರಾಚೀನ ಕಾಲದಿಂದಲೂ ಇದ್ದಂತೆ ಕಾಣುತ್ತದೆ. ರಾಮಾಯಣ
ಮಹಾಕಾವ್ಯದಲ್ಲಿ ವಿಶ್ವಾಮಿತ್ರ ಋಷಿಯು ಶ್ರೀ ರಾಮನಿಗೆ ಬೆಳಗಾಯಿತು ಏಳು ಸಂಧ್ಯಾ ವಿಧಿಗಳನ್ನು ಮಾಡು ಎಂದು
ಎಚ್ಚರಿಸುತ್ತಾನೆ. ಸಂಧ್ಯಾವಂದನೆಗೆ ತ್ರಿಕಾಲವನ್ನು ಅಥವಾ ತ್ರಿಸಂಧ್ಯೆಯನ್ನು ಹೇಳಿದೆ; ಬೆಳಿಗ್ಗೆ, ಮದ್ಯಾಹ್ನ ಮತ್ತು ಸಂಜೆ.
ಅದಕ್ಕೆ ತಕ್ಕಂತೆ ಮಂತ್ರಗಳನ್ನೂ ಜೋಡಿಸಿದೆ. ಸಧ್ಯದಲ್ಲಿ ಎರಡು ಕಾಲದಲ್ಲಿ ಮಾತ್ರ ಆಚರಣೆ ಮಾಡುವುದು
ರೂಢಿಯಲ್ಲಿರುವುದು - ಬೆಳಗಿನ ಮತ್ತು ಮದ್ಯಾಹ್ನದ ಕ್ರಿಯೆಗಳನ್ನು ಒಟ್ಟಿಗೆ ಸೇರಿಸಿ ಬೆಳಗಿನಲ್ಲಿ ಅಥವಾ ಮಧ್ಯಾಹ್ನ
ಆಚರಿಸುವುದು. ಸಂಜೆ ಸೂರ್ಯಾಸ್ತ ಸಮಯದಲ್ಲಿ ಒಮ್ಮೆ ಸಂಧ್ಯಾವಂದನೆ ಮಾಡುವುದು. ಶ್ರೌತ ಸ್ಮಾರ್ತ
ಪದ್ದತಿಗಳನ್ನೊಳಗೊಂಡ ಈ ಕ್ರಿಯೆಗಳು ನಿತ್ಯ ಕರ್ಮಗಳಲ್ಲಿ ಸೇರಿದೆ. ಇದನ್ನು ಆಚರಿಸುವುದರಿಂದ ಮನಸ್ಸು ಅಥವಾ ಚಿತ್ತ
ಶುದ್ಧಿಯಗುವುದೆಂಬುದು ಶ್ರೀ ಶಂಕರರ ಅಭಿಪ್ರಾಯ. ಈ ಕ್ರಿಯೆ ಮಾಡುವುದರಿಂದ ಪುಣ್ಯವೂ ಇಲ್ಲ : ಬಿಡುವುದರಿಂದ
ಪಾಪವೂ ಇಲ್ಲ. ಆದರೆ ಬಿಡುವುದರಿಂದ ಕರ್ತವ್ಯ ಲೋಪವಾಗುವುದೆಂದು ಹೇಳಿದೆ. ಈ ಸಂಧ್ಯಾವಂದನಾದಿ ನಿತ್ಯ
ಕ್ರಿಯೆಗಳು ಅದರ ಹೆಸರೇ ಹೇಳುವಂತೆ ಭಗವಂತನಿಗೆ ಧನ್ಯವಾದವನ್ನು ಅರ್ಪಿಸುವ ಕ್ರಿಯೆಗಳಾಗಿವೆ.
ಮಾಡುವ ಕ್ರಮ
ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು. ಮಣೆ ಅಥವಾ ಚಾಪೆಯ ಮೇಲೆ ಕುಳಿತು ಕೈ
ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನದಲ್ಲಿ ಕುಳಿತು
ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು.
2. ಶುದ್ಧೀಕರಣಂ ಮಂತ್ರ
3. ಭಸ್ಮ ಧಾರಣಂ
4. ಮಾರ್ಜನಂ
5. ಪಾಪ ನಿವಾರಣಂ
6. ಪುನರ್ಮಾರ್ಜನಂ
7. ಅರ್ಘ್ಯ ಪ್ರದಾನಂ
8. ಐಕ್ಯಾನುಸಂಧಾನಂ
12. ಅಷ್ಟಾಕ್ಷರೀ
14. ಭಗವದರ್ಪಣಂ
ಉದಾ; ಶ್ರೀ ರಾಮಚಂದ್ರಾಯ ನಮಃ |ಶ್ರೀ ಕೃಷ್ಣಪರಮಾತ್ಮನೇ ನಮಃ || ಶ್ರೀ ಶಂಕರ ಭಗವತ್ಪಾದ ಗುರವೇ ನಮಃ| ಶ್ರೀ
ಶಾರದಾಂಬಾಯೈ ನಮಃ |
ಆಚಮನ
ಓಂ ಋಗ್ವೇದಾಯ ಸ್ವಾಹಾ || ಓಂ ಯಜುರ್ವೇದಾಯ ಸ್ವಾಹಾ || ಓಂ ಸಾಮವೇದಾಯ ಸ್ವಾಹಾ ||
ಬಲಗೈ ಅನಾಮಿಕಕ್ಕೆ ಹೆಬ್ಬೆರಳು ಸೇರಿಸಿ ಅಂಗೈ ಮಧ್ಯಕ್ಕೆ ೧ ಚಮಚ (ಉದ್ಧರಣೆ ) ನೀರು ಹಾಕಿಕೊಂಡು ಪ್ರತಿ ಮಂತ್ರಕ್ಕೂ
೧ ಬಾರಿಯಂತೆ ತುಟಿಗೆ ತಾಗಿಸಿ ಎಂಜಲಾಗದಂತೆ ಕುಡಿಯುವುದು ಸ್ವಲ್ಪವೇ ನೀರನ್ನು ವೇದಗಳ ಹೆಸರಿನಲ್ಲಿ
ಸೇವಿಸುವುದು (ಇದು ಶ್ರೌತ(ಶ್ರುತ?) ಆಚಮನ, ವಿಷ್ಣು ನಾಮದಲ್ಲಿ ಸ್ವೀಕರಿಸುವುದು ಸ್ಮೃತ ಆಚಮನ) (ಸೂಚನೆ:ಶ್ರುತಿ
ಎಂದರೆ ವೇದ, ಅದಕ್ಕೆ ಸಂಬಂಧಪಟ್ಟುದು ಶ್ರೌತ -ಶ್ರುತ ಎಂದರೆ ವೇದವನ್ನು ತಿಳಿದವನು)
ಸ್ಮಾರ್ತ ಸಂಪ್ರದಾಯದಲ್ಲಿ ಆಚಮನಕ್ಕೆ ೧ ಓಂ ಕೇಶವಾಯ ಸ್ವಾಹಾ ೨.ಓಂ ನಾರಾಯಣ ಸ್ವಾಹಾ ೩.ಓಂ ಮಾಧವಾಯ
ಸ್ವಾಹಾ, ಅಥವಾ ೧. ಓಂ ಅಚ್ಯುತಾಯ ನಮಃ,೨. ಓಂ ಅನಂತಾಯ ನಮಃ. ೩. ಓಂ ಗೋವಿಂದಾಯ ನಮಃ. ಎಂದು
ಹೇಳಿ ಆಚಮನ ಮಾಡುವುದು ಸಂಪ್ರದಾಯ.) ಟಿ* : ಸ್ವಲ್ಪವೇ ನೀರನ್ನು ವೇದಗಳ ಹೆಸರಿನಲ್ಲಿ ಸೇವಿಸುವುದು ಆಚಮ್ಯ
-ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮ ವೇದಾಯ ಸ್ವಾಹಾ |
ಇದು ಒಂದು ಸುತ್ತು ಆಚಮನ. ಇದೇ ರೀತಿ ಕೆಲವು ಸಂಪ್ರದಾಯಗಳಲ್ಲಿ ಎರಡು, ಇನ್ನೂ ಕೆಲವು ಸಂಪ್ರದಾಯಗಳಲ್ಲಿ
ಮೂರು ಬಾರಿ ಆಚಮನ ಮಾಡಬೇಕು. ಇದು ಒಂದು ಸುತ್ತು ಆಚಮನ-ತ್ರಿರಾಚಮ್ಯ.
ಶುದ್ಧೀಕರಣಂ
ಆಯಾ ದೇಹದ ಭಾಗಗಳಿಗೆ ಆಯಾ ದೇವತೆಗಳು ಅಧಿಪತಿಗಳೆಂದು ಭಾವಿಸಿ ಆ ಭಾಗಗಳನ್ನು ನೀರು ಚಿಮಕಿಸಿ ಆ
ದೇವತೆಗಳಿಗೆ ನಮಃ ಹೇಳುತ್ತಾ ಶುದ್ಧ ಗೊಳಿಸುವುದು.
|| ಅಥ ಭಸ್ಮ ಧಾರಣಂ ||
ಓಂ ವಾಮದೇವಾಯ ನಮೋ ಜೇಷ್ಠಾಯ ನಮಃ | ಶ್ರೇಷ್ಠಾಯ ನಮೋ ರುದ್ರಾಯ ನಮಃ | ಕಾಲಾಯ ನಮಃ |
ಕಲವಿಕರಣಾಯ ನಮೋ ಬಲವಿಕರಣಯನಮೋ ಬಲಾಯ ನಮೋ ಬಲ ಪ್ರಮಥನಾಯ ನಮಃ|| ಸರ್ವ ಭೂತ
ದಮಯನಾಯ ನಮೋ ಮನೋನ್ಮನಾಯ ನಮಃ ||೨||
ಅಗ್ನಿರಿತಿ ಭಸ್ಮ || ವಾಯುರಿತಿ ಭಸ್ಮ || ಜಲಮಿತಿ ಭಸ್ಮ || ಸ್ಥಲಮಿತಿ ಭಸ್ಮ ||ವ್ಯೋಮೇತಿ ಭಸ್ಮ || ಸರ್ವ ಗುಂ ಹವಾ
ಯಿದಂ ಭಸ್ಮ || ಮನ ಏತಾನಿ ಚಕ್ಷೂ ಗುಂಷಿ ಭಸ್ಮಾನಿ||
ಅಗ್ನಿರಿತಿ ಭಸ್ಮ | (ಹಣೆಗೆ- ಮಧ್ಯ ಬೆರಳು ಅನಾಮಿಕ ಬೆರಳುಗಳಿಂದ ಹಣೆಯ ಎಡ ಭಾಗದಿಂದ ಬಲ ಭಾಗದ ವರೆಗೆ
ಮಧ್ಯ ಸ್ವಲ್ಪ ಜಾಗ ಬಿಟ್ಟು ಬರಳಿನಿಂದ ಎಳೆದು ಹಚ್ಚಿ, ಹೆಬ್ಬೆರಳಿಗೆ ಹಚ್ಚಿರುವ ಭಸ್ಮದಿಂದ ಅವೆರಡರ ಮಧ್ಯದಲ್ಲಿ
ಬಲದಿಂದ ಎಡಕ್ಕೆ ಎಳೆದು ಹಚ್ಚಬೇಕು -ತ್ರಿಪುಂಡ್ರ ಭಸ್ಮ ಧಾರಣ.). ವಾಯುರಿತಿಭಸ್ಮ | (ಎರಡೂ ಭುಜಗಳಿಗೆ, ಮುಂಗೈ
ಮತ್ತು ಮಧ್ಯ ತೋಳಿಗೆ), ಜಲಮಿತಿಭಸ್ಮ | (ಹೊಟ್ಟೆಗೆ ಎರಡೂ ಕೈಗಳಿಂದ), ವ್ಯೋಮೇತಿ ಭಸ್ಮ || (ತೊಡೆ ಕಾಲು, ಬೆನ್ನು)
ಸರ್ವಗುಂ ಹವಾ ಯಿದಂ ಭಸ್ಮ|| (ದೇಹದ ಇತರೆ ಭಾಗಗಳಿಗೆ), ಮನ ಏತಾನಿ ಚಕ್ಷು ಗುಂಷಿ ಭಸ್ಮಾನಿ || (ಕಣ್ಣಿನರೆಪ್ಪೆ
ಮತ್ತು ಇತರೆ ಭಾಗಗಳಿಗೆ ), ಇತಿ ಧಾರಯೇತ್ || (ಧರಿಸಿಯಾಯಿತು)
|ಅಥ ದ್ವಿರಾಚಮ್ಯ||
||ಪ್ರಾಣಾಯಾಮಂ ಕುರ್ಯಾತ್ ||
ಟಿ* : ಪ್ರಾಣಾಯಾಮವನ್ನು ತಿಳಿದವರಿಂದ ಕೇಳಿ ತಿಳಿದು ಮಾಡುವುದು. ಸರಳ ವಿಧಾನ : ವ್ಯಾಹೃತಿಗಳನ್ನು ಹೇಳುವಾಗ
(ಓಂಭೂಃ -ಸತ್ಯಂವರೆಗೆ )ಎಡಮೂಗಿನಿಂದ ಉಸಿರುತೆಗೆದುಕೊಂಡು (ಪೂರಕ), ಗಾಯತ್ರಿ ಹೇಳುವಾಗ ಉಸಿರು ತಡೆ
ಹಿಡಿದು (ಅಂತರ್ ಕುಂಭಕ) ಓಂ ಆಪೋಜ್ಯೋತಿ --ಸ್ಸುವರೋಂ ಹೇಳುವಾಗ ಬಲಮೂಗಿನಿಂದ ಬಿಡುವುದು (ರೇಚಕ).
ಅದೇಕ್ರಮ ಅನುಸರಿಸಿ ಬಲದಿಂದ ಪೂರಕಮಾಡಿ, ಮೂಲ ಗಾಯತ್ರಿಗೆ ಕುಂಭಕ ಮಾಡಿ, ಎಡದಿಂದ ರೇಚಕ; ಪುನಃ
ಎಡದಿಂದ - ಬಲಮೂಗಿನಲ್ಲಿ ಮುಕ್ತಾಯ. ಒಟ್ಟು ಮೂರು ಪ್ರಾಣಾಯಾಮವಾಗುತ್ತೆ. ಎಷ್ಟೇ ಪ್ರಾಣಾಯಾಮವಾಗಲಿ
ಎಡ ಮೂಗಿನಿಂದ ಪ್ರಾರಂಭ, ಬಲ ಮೂಗಿನಲ್ಲಿ ಮುಕ್ತಾಯ. ಆದರೆ ಈ ಮಂತ್ರಕ್ಕೆ ಪ್ರಾಣಾಯಾಮ ಕ್ರಮ ಯಾರೂ
ಹೇಳುವುದೂ ಇಲ್ಲ ; ಯಾರೂ ಮಾಡುವುದೂ ಇಲ್ಲ. ಮೂಗು ಹಿಡಿದುಕೊಂಡು ಮೂರು ಬಾರಿ ಮಂತ್ರ ಹೇಳುವರು.
(ಸೂಚನೆ: ಕೆಳಗಿನ ಮಂತ್ರ ಹೇಳುವಾಗ ಆಯಾ ದೇಹ ಭಾಗವನ್ನು ಮುಟ್ಟಿಕೊಳ್ಳ ಬೇಕು)
ಓಂ ಪ್ರಣವಸ್ಯ ಪರಬ್ರಹ್ಮ ಋಷಿಃ -(ಇತಿ ಶಿರಸಿ) | ಗಾಯತ್ರೀ ಛಂದಃ (ಇತಿ ಮುಖೇ) | ಪರಮಾತ್ಮಾ ದೇವತಾ (ಇತಿ
ಹೃದಯೇ) | ಇತಿ ವಿನ್ಯಸ್ಯ| ಪ್ರಾಣಾಯಾಮೇ ವಿನಿಯೋಗಃ||
ಓಂ ಭೂಃ -ಇತಿ ಪಾದಯೋಃ | ಓಂ ಭುವಃ - ಇತಿ ಜಾನುನೋ | ಓಗ್ಂ ಸುವಃ - ಇತ್ಯೋರ್ವೋಃ | ಓಂ ಮಹಃ - ಇತಿ
ಜಠರೇ | ಓಂ ಜನಃ -ಇತಿ ಕಂಠೇ | ಓಂ ತಪಃ - ಇತಿ ಮುಖೇ | ಓಗ್ ಂ ಸತ್ಯಂ - ಇತಿ ಶಿರಸಿ | ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋSಮೃತಂ ಬ್ರಹ್ಮ
ಭೂರ್ಭುವಸ್ಸುವರೋಂ || ಯಿತಿ ತ್ರಿವಾರಮುಚ್ಚಾರಯೇತ್|| (ಪ್ರಾಣಾಯಾಮ : ಇತ್ಯಂಗುಷ್ಠಕನಿಷ್ಠಾನಾಮಿಕಾಭಿಃ
ನಾಸಿಕಾಂ ಪೀಡಯಿತ್ವಾ ವಾಮ ನಾಸಿಕಾಯಾ ವಾಯುಮಾಪೂರಯನ್ ಗಾಯತ್ರೀಂ ಏವಂ ತ್ರಿರ್ಜಪಿತ್ವಾ ದಕ್ಷಿಣ
ನಾಸಿಕಯಾ ಶನೈರ್ವಾಯುಂ ಬಹಿರ್ನಿಸ್ಸಾರಯೇತ್-
|| ಯಿತಿ ಪ್ರಾಣಾನಾಯಮ್ಯ||
|| ಸಂಕಲ್ಪ ||
ವಿಷ್ಣೋ ವಿಷ್ಣೋ ವಿಷ್ಣೋರಾಜ್ಞಯಾ ಪ್ರವರ್ತ ಮಾನಸ್ಯ ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಹರೇಃ
ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತಖಂಡೇ ಭಾರತವರ್ಷೇ
ಮಹಾಮೇರೋರ್ದಕ್ಷಿಣೇ ಪಾರ್ಷ್ವೇ ಶ್ರೀಮದ್ಗೋದಾವರಿಯಾಂ ದಕ್ಷಣೇತೀರೇ ಗೋಕರ್ಣಮಂಡಲೇ ಗೋರಾಷ್ಟ್ರ ದೇಶೇ
ಭಾಸ್ಕರ ಕ್ಷೇತ್ರೇ ಸಹ್ಯಪರ್ವತೇ ಶಾಲಿವಾಹನ ಶಕಾಬ್ದೇ - ||
ಅಸ್ಮಿನ್ ವರ್ತಮಾನಕಾಲೇ ವ್ಯಾವಹಾರಿಕೇ --ಸಂವತ್ಸರೇ, --ಅಯನೇ, --ಋತೌ , --ಮಾಸೇ, --ಪಕ್ಷೇ, --ತಿಥೌ, --ವಾಸರೇ,
ಮಮೋಪಾತ್ತ ದುರಿತಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾಥಃ / ಮದ್ಯಾಹ್ನ / ಸಾಯಂ / ಸಂಧ್ಯಾ ಮುಪಾಸ್ಯೆ
|| ಯಿತಿ ಸಂಕಲ್ಪ್ಯ ||
ಟಿ*: ಕೊನೆಯ ಎರಡು ಸಾಲು ಹೇಳಿ, ಪ್ರಾತರ್ ಮಧ್ಯಾಹ್ನಹೇಳಿ ಎರಡುಹೊತ್ತಿನ ಸಂದ್ಯಾವಂದನೆಯನ್ನು ಏಕ ಕಾಲಕ್ಕೆ
ಮಾಡುವ ಪದ್ದತಿ ಇದೆ.
|| ಅಥ ನವ ಮಾರ್ಜನಂ ಕುರ್ಯಾತ್ ||
ಯಿತಿ ನವ ಮಾರ್ಜಯಿತ್ವಾ ||
ಎಲೈ ಜಲಾಧಿಷ್ಠಾನ ದೇವತೆಗಳಿರಾ ನೀವು ನಮಗೆ ಸುಖ ಸಾಧಕರಾಗಿ ಅನ್ನಕ್ಕೂ ರಮಣೀಯವಾದ ಜ್ಞಾನಕ್ಕೂ ನಮ್ಮನ್ನು
ಪಾತ್ರರನ್ನಾಗಿಮಾಡಿರಿ. ಜನನಿಯು ಮಗುವಿಗೆ ಅಮೃತವನ್ನು ಕೊಟ್ಟು ಕಾಪಾಡುವಂತೆ ನಿಮ್ಮಲ್ಲಿರುವ ಅಮೃತವನ್ನು
ನಾವು ಹೊಂದುವಂತೆ ಮಾಡಿ. ನಿಮ್ಮನ್ನು ಶರಣು ಹೊಂದಿರುತ್ತೇನೆ. ಪುರುಷ ಸಾಮರ್ಥ್ಯವನ್ನು ನಮಗೆ ಕೊಡಿ.
[೧;೨;೩;ಆಪೋ ಹಿ--ಚ ನಃ :-ಆಪೋ ದೇವತೆಗಳಿರಾ, ನೀವು ಸುಖದಾಯಕರೂ, ಕಲ್ಯಾಣಕಾರಿಗಳೂ
ಆಗಿರುವಿರಾದ್ದರಿಂದ ನೀವು ನಮ್ಮ ಬಲವರ್ಧನೆಗಾಗಿಯೂ, ಸೌಂದರ್ಯದ ಪ್ರಾಪ್ತಿಗಾಗಿಯೂ ನಮ್ಮನ್ನು ಹೃಷ್ಟ-
ಪುಷ್ಟರನ್ನಾಗಿ ಮಾಡಿರಿ (೧); ನಿಮ್ಮ ಯಾವ ಅತ್ಯಂತ ಕಲ್ಯಾಣ ಕಾರಿಯಾದ ರಸವಿರುವುದೋ, ತಮ್ಮ ಸಂತಾನವನ್ನು
ಅತಿಯಾಗಿ ಪ್ರೀತಿಸುವ ತಾಯಂದಿರಂತೆ, ನೀವು ನಿಮ್ಮಲ್ಲಿರುವ ಆ ರಸವನ್ನು ನಮಗಿಲ್ಲಿಯೇ ಅನುಗ್ರಹಿಸಿರಿ.
:ಋಗ್ವೇದಲ್ಲೂ ಇದೆ; ಅಥರ್ವಣವೇದ: ೧-೫-೨೨,೨೩,೨೪]
||ಅಥ ಜಲಮಾಧಾಯ||
ಅಥಃ ಪ್ರಾತಃ||
ಓಂ ಸೂರ್ಯಶ್ಚ ಮಾಮನ್ಯುಶ್ಚ ಮನ್ಯು ಪತಯಶ್ಚ ಮನ್ಯು ಕೃತೇಭ್ಯಃ| ಪಾಪೇಭ್ಯೋ ರಕ್ಷಂತಾಂ |
ಯಿದಮಹಂ ಮಾಮಮೃತಯೋನೌ |
||ಅಥ ಮಧ್ಯಾಹ್ನೇ||
ಓಂ ಆಪೋವಾ ಇದಗುಂ ಸರ್ವಂ |ವಿಶ್ವಾ ಭೂತಾನ್ಯಾಪಃ ಪ್ರಾಣಾವ ಆಪಃ|
ಪಶವ ಆಪೋSನ್ನಮಾಪೋSಮೃತಮಾಪಃ|
ತಾ : ಓಂ ಆಪಃ ಪುನಂತು - ಉದಕಗಳು ಭೂಮಿಯನ್ನು ಪರಿಶುದ್ಧ ಮಾಡಲಿ ; ಭೂಮಿಯು ನನ್ನನ್ನು ಪರಿಶುದ್ಧಮಾಡಲಿ ;
ಪರಮಾತ್ಮನು ಮಂತ್ರವನ್ನು ಪರಿಶುದ್ಧ ಮಾಡಲಿ; ಆ ಮಂತ್ರ ತತ್ವವು ನನ್ನನ್ನು ಶುದ್ಧ ಮಾಡಲಿ; ಎಂಜಲು ಮತ್ತು
ತಿನ್ನಬಾರದ ಪದಾರ್ಥಗಳ ಸೇವನೆಯಿಂದ ಬಂದ ಪಾಪಗಳನ್ನೂ ಮತ್ತು ಎಲ್ಲಾ ವಿಧದ ಪಾಪಗಳನ್ನೂ ಪ್ರತಿಗ್ರಹಿಸಿ ನನ್ನನ್ನು
ಶುದ್ಧನನ್ನಾಗಿ ಮಾಡಲು ಈಉದಕ ಪ್ರಾಶನವನ್ನು (ಪರಮಾತ್ಮನಲ್ಲಿ) ಅರ್ಪಿಸುತ್ತೇನೆ (ಸ್ವಾಹಾ -ಸೇವಿಸುತ್ತೇನೆ)
||ಅಥ ಸಾಯಂಕಾಲೇ ||
ಯಿದಮಹಂ ಮಾಮಮೃತಯೋನೌ |
||ದ್ವಿರಾಚಮ್ಯ ||
ತಾ|| ಓಂ ಅಗ್ನಿಶ್ಚ -- ಬೆಳಿಗ್ಗೆ ಸೂರ್ಯನು ಅಧದೇವತಯಾದರೆ ಸಂಜೆ ಅಗ್ನಿ ಅಧಿದೇವತೆ ಹಗಲು ಮಾಡಿದ ಪಾಪಗಳನ್ನು
ನಿವಾರಿಸಲು ಪ್ರಾರ್ಥನೆ. ಉಳಿದಂತೆ ಅದೇ ಅರ್ಥ.
ಓಂ ಆಪೋಹಿಷ್ಠಾ ಮಯೋಭುವ ಸ್ಥಾನ ಊರ್ಜೇ ದಧಾತನಃ | ಮಹೇರಣಾಯ ಚಕ್ಷಸೇ || ಯಿತಿ ದ್ವಾಭ್ಯಾಂ ಶಿರಸಿ ||೨||
ಅಗ್ನಿಂ ಯಾ ಗರ್ಭಂ ದಧಿರೇ ವಿರೂಪಾಸ್ಥಾನ ಆಪಃ [ಶಗುಸ್ಯೋನಾ**] ಶಗುಶ್ಯೋನಾ ಭವಂತು || ಯಿತಿ ದ್ವಾಭ್ಯಾಂ
ಬಾಹೋ ||೮||
ಯಾ ಪೃಥಿವೀಂ ಪಯಸೋಂದಂತಿ ಶುಕ್ರಾಸ್ತಾನ ಆಪಃ ಶಗುಶ್ಯೋನಾ [ಶಗುಸ್ಯೋನಾ**] ಭವಂತು || ಯಿತಿ ವಕ್ಷಸಿ ದ್ವೇ ||
೧೦||
ಓಂ ಪುನಂತು ಮಾ ದೇವ ಜಿನಾಃ | ಪುನಂತು ಮನವೋ ಧಿಯಾ | ಪುನಂತು ವಿಶ್ವ ಆಯವಃ || ೧೩||
ಓಂ ಜಾತವೇದ ಪವಿತ್ರವತು | ಪವಿತ್ರೇಣ ಪುನಾಹಿ ಮಾ| ಶುಕ್ರೇಣ ದೇವ ದೀದ್ಯತು | ಅಗ್ನೇ ಕ್ರತ್ವಾ ಕ್ರತು ಗುರನು || ಯಿತಿ
ನಾಭಿ ದ್ವೇ ||೧೪ ||
ಓಂ ಯತ್ತೀ ಪವಿತ್ರ ಮರ್ಚಷಿ | ಅಗ್ನೇ ವಿತತ ಮಾತರಾ ಬ್ರಹ್ಮ ತೇನ ಪುನೀಮಹೇ ||೧೫||
ಓಂ ಉಬಾಭ್ಯಾಂ ದೇವ ಸವಿತಃ | ಪವಿತ್ರೇಣ ಸವೇನತ | ಯಿದಂ ಬ್ರಹ್ಮಾ ಪುನೀಮಹೇ || ಯಿತಿ ಪಾರ್ಶ್ವಯೋಃ ||೧೬||
ದ್ಯಾವಾ ಪೃಥಿವೀ ಪಯಸಾಪ ಯೋಭಿಃ || ಋತಾವರೀ ಯಜ್ಞಯೇ ಮಾ ಪುನೀತಾಂ || ಯಿತಿ ಕಟ್ಯಾರಿ ದ್ವೇ ||೧೮||
ಓಂ ಯೇನ ದೇವಾ ಅಪುನತಯೇ ನಾSSಪೋ ದಿವ್ಯಂ ಕಶಃ | ತೇನ ದಿವ್ಯೇನ ಬ್ರಹ್ಮಣೂ | ಯಿದಂ ಬ್ರಹ್ಮ ಪುನೀಮಹೇ ||
ಯಿತಿ ಗುಹ್ಯೇ ದ್ವೇ ||೨೦||
ಓಂ ಯಃ ಪಾವಮಾನಿ ರಧ್ಯೇತಾ ಋಷಿಭಿಃ ಸಂಭತಗು ರಸಂ| ಸರ್ವಗುಂ ಸಪೂತ ಮಶ್ನಾತಾ | ಸ್ವದಿತಯಂ ತಂ ಸ್ವನಾ ||
೨೧||
ಓಂ ಪವಮಾನಿರ್ಯೋ ಅಧ್ಯೇಶಿ ಋಷಿಭಿಃ ಸಂಭೃತ ಗುಂ ಸಂ(ಸರಿ) | ತಸ್ಮೈ ಸರಸ್ವತೀ ದುಹೇ ಕ್ಷೀರಗುಂ
ಸರ್ಪಿರ್ಮಧೂದಕಂ (ಧೂರ್ದಂ) ||ಯಿತ್ಯೂರ್ವೇ ||೨೨|| ಓಂ ಪಾವಮಾನೀಃ ಸ್ವ್ತಸ್ಯಯನೀಃ | ಸುಧುಘಾಹಿ ಪಯಸ್ವತೀಃ |
ಋಷಿಭಿಃ ಸಂಭ್ಯತೋ ರಸಃ | ಬ್ರಾಹ್ಮಣೇಷ್ವಮೃತ ಗುಂ ಹಿತಂ ||೨೩||
ಓಂ ಪವಮಾನೀಃ ಸ್ವಸ್ತೈಯನೀಃ | ಸದುಘಾಹಿ ಘೃತಶ್ಚುತಃ| ಋಷಿಭಿಃ ಸಂಭೃತೋ ರಸಃ | ಬ್ರಾಹ್ಮಣೇಶಮೃತ ಗುಂ ಹಿತಂ ||
೨೫||
ಯಮೋ ರಾಜಾ ಪೃಮ್ವ ಣೂಭಿಃ ಪುನಾತು ಮಾ | ಜಾತವೇದಾ ಮೂರ್ಜಯಂ ತ್ಯಾ ಪುನಾತು || ಪಾದಯೋ ದ್ವೇ||೨೮||
ಓಂ ಭೂಃ ||೨೯|| ಓಂ ಭುವಃ || ಯಿತಿ ದ್ವಾಭ್ಯಾಂ ಪಾದಾಂಗುಲೀ ||೩೦|| ಓಗುಂ ಸುವಃ ||೩೧|| ಓಂ ಭೂರ್ಭುವಸ್ಸುವಃ ||
೩೨||
||ಪ್ರಾತಃ||
ಮಮ ಸೃತ ಸ್ಮಾರ್ಥ ನಿತ್ಯ ಕರ್ಮಾನುಷ್ಠಾನ ಯೋಗ್ಯತಾ ಫಲ ಸಿದ್ಧ್ಯರ್ಥಂ ಮಮೋಪಾತ್ತ ದುರಿತ ಕ್ಷಯ ದ್ವಾರಾ
ಶ್ರೀಪರಮೇಶ್ವರ ಪ್ರೀತ್ಯರ್ಥಂ ಪ್ರಾತಃ (ಮಧ್ಯಾಹ್ನ / ಸಾಯಂ ) ಸಂಧ್ಯಾ ಕಾಲಾತಿಕ್ರಮಣ ದೋಷ ಪರಿಹಾ ರಾರ್ಥಂ
ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಪ್ರಾತರರ್ಘ್ಯ (ಮಧ್ಯಾಹ್ನಸಂಧ್ಯಾರ್ಘ್ಯ / ಸಾಯಂಸಂಧ್ಯಾರ್ಘ್ಯ) ಪ್ರದಾನಮಹಂಕರಿಷ್ಯೆ ||
'
ಓಂ ಭೂಃ | ಓಂ ಭುವಃ | ಓಗುಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ | ಓಗುಂ ಸತ್ಯಂ | ಓಂ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ || ಓಂ ಭೂಃ | ಓಂ ಭುವಃ | ಓಗುಂ ಸುವಃ | ಓಂ
ಮಹಃ | ಓಂ ಜನಃ | ಓಂ ತಪಃ | ಓಗುಂ ಸತ್ಯಂ |ಓಂ ಶ್ರೀ ಭಾಸ್ಕರಾಯ ನಮಃ | ಇದಂವೋ(ಓ) ಅರ್ಘ್ಯಂ || ಯಿತಿ
ಪ್ರಾಯಶ್ಚಿತ್ತಾರ್ಘ್ಯಂ ದತ್ವಾ||
|| ಅಥಾರ್ಘ್ಯಂ ||
|| ಅಥ ಮಧ್ಯಾಹ್ನೆ ||
|| ಪ್ರಧಾನಾರ್ಘ್ಯಂ ||
ಸವಿತಾ ರಥೇನ ದೇವೋಯಾತಿ ಭುವನಾವಿಪಶ್ಯನ್ || ಶ್ರೀ ಭಾಸ್ಕರಾಯ ನಮಃ | ಇದಂ ತೇ ಅರ್ಘ್ಯಂ ||೨||
ತಾ|| ||೧|| ಓಂ ಹಗುಂ ಸಃ ಶ್ಯುಚಿ --ಪರಿಶುದ್ಧವಾದ ಸ್ಥಳ, ಅಂತರಿಕ್ಷ , ಬ್ರಹ್ಮಾಡ ವೆಂಬ ಗೃಹ, ಶ್ರೇಷ್ಠವಾದ ತೀರ್ಥ, ಹೃದಯ
ಕಮಲ, ಯಜ್ಞ, ನೀರು, ಗೋವು, ಪರ್ವತಗಳಲ್ಲಿ ವಾಸಿಸುವ ಅಗ್ನಿರೂಪನಾದ ಸೂರ್ಯನು ಅನುಗ್ರಹಿಸಲಿ. ||೨||
ಆಸತ್ಯೇನ - ಅಂತರಿಕ್ಷಮಂಡಲದಲ್ಲಿ ಸತ್ಯರೂಪವಾದ ಸುವರ್ಣ ರಥವನ್ನೇರಿ ಸಮಸ್ತ ಲೋಕಕ್ಕೂ ಪ್ರಕಾಶ
ಉಂಟುಮಾಡಿ ದೇವತೆಗಳನ್ನೂ ಮನುಷ್ಯರನ್ನೂ ತಮ್ಮ ತಮ್ಮ ಕರ್ಮಗಳಲ್ಲಿ ನಿಯಮಿಸುತ್ತಾ ಸಂಚರಿಸುತ್ತಿರುವ
ಸೂರ್ಯ ಭಗವಾನನೇ - ನಿನಗೆ ಈ ಅರ್ಘ್ಯವನ್ನು ಅರ್ಪಿಸುತ್ತೇನೆ.
|| ಸಾಯಂಕಾಲೇ ||
ಸಾಯಂ ಸಂಧ್ಯಾಕಾಲಾತಿಕ್ರಮಣ ದೋಷ ಪರಿಹಾರಾರ್ಥಂ ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಸಾಯಮರ್ಘ್ಯ ಪ್ರದಾನ
ಮಹಂ ಕರಿಷ್ಯೆ || ||ಉತ್ತಿಷ್ಠ ||ಸೂರ್ಯಾಭಿಮುಖಃ ||
|| ಅಥ ತರ್ಪಣ ||
ಜಲಹಸ್ತಪ್ರದಕ್ಷಿಣಂ ಕೃತ್ವಾ || ಅನೇನ ಪ್ರಾತರ್ ಅರ್ಘ್ಯ ಪ್ರದಾನ ವಿಧಿ ಕರ್ಮಣಃ ಶ್ರೀಪರಮೇಶ್ವರ ಪ್ರೀಯತಾಂ ||
ಪೂರ್ವದಾಚಮ್ಯ ||
ಪ್ರಾತಃ ಸಂಧ್ಯಾ ಕಾಲೇ || ಓಂ ಅಸ್ಯಶ್ರೀ ಅಸ್ತ್ರೋಪಸಂಹಾರ ಮಂತ್ರಸ್ಯ ಬ್ರಹ್ಮಾ ಋಷಿಃ | ಗಾಯತ್ರೀ ಛಂದಃ ಸವಿತಾ
ದೇವತಾ ||
|| ಮಧ್ಯಾಹ್ನೇ || ಓಂ ಅಸ್ಯಶ್ರೀ ಅಸ್ತ್ರೋಪಸಂಹಾರ ಮಂತ್ರಸ್ಯ ಶಿವಾತ್ಮಕ ಋಷಿಃ | ತ್ರಿಷ್ಟುಪ್ ಛಂದಃ ||ಸವಿತಾ ದೇವತಾ||
||ಸಾಯಂಕಾಲೇ || ಓಂ ಅಸ್ಯಶ್ರೀ ಅಸ್ತ್ರೋಪಸಂಹಾರ ಮಂತ್ರಸ್ಯ ವಿಷ್ಣು ಋಷಿಃ | ತ್ರಿಷ್ಟುಪ್ ಛಂದಃ ||ಸವಿತಾ ದೇವತಾ||
||ಅಥ ಧ್ಯಾನಂ ||
ಅರ್ಥ: [ಗಾಯತ್ರಿಗೆ ಐದು ಮುಖಗಳು] ಅವು ಮಂದಾರ ಹೂವಿನಂತೆಬಿಳೀ ಬಣ್ಣದ್ದು, ರೋಚನದಂತೆ ಅರಿಸಿನದ್ದು,
ಅಂಜನದಂತೆ ಕಪ್ಪು ಬಣ್ಣದ್ದು, ಆಕಾಶದಂತೆ ನೀಲಿ ಬಣ್ಣದ್ದು, ಆಗಿವೆ. ಚಂದ್ರಕಲೆಯಿಂದ ಮತ್ತು ವಿವಿಧ ರತ್ನಗಳಿಂದ
ಪ್ರಕಾಶಿಸುವ ಕಿರೀಟವಿದೆ. ಅವುಗಳ ಪ್ರಭೆಯಲ್ಲಿ ಪ್ರಕಾಶಿಸುವ ಗಾಯತ್ರೀ ದೇವಿಯ ದೇಹವು ಗಾಯತ್ರೀ ಮಂತ್ರ (೨೪)
ಅಕ್ಷರಾತ್ಮಕವಾಗಿದೆ. ಅವಳ ಎರಡು ಕೈಗಳಲ್ಲಿ ಕಮಲಗಳು, ಎರಡು ಕೈಗಳಲ್ಲಿ ವರದ ಅಭಯ ಮುದ್ರೆ ಮತ್ತು ಉಳಿದ
ಆರು ಕೈಗಳಲ್ಲಿ ಚಕ್ರ, ಶಂಖ, ಹಗ್ಗ, ಕಪಾಲ ಮತ್ತು ಅಂಕುಶಗಳಿವೆ. ಈಗಾಯತ್ರಿಯು ನಮ್ಮ ಸಂಸಾರ ಭಯವನ್ನು
ನೀಗುವವಳಾಗಲಿ. [ಈ ಧ್ಯಾನ ಶ್ಲೋಕವು ಪ್ರಪಂಚ ಸಾರ ಗ್ರಂಥದಿಂದ ತೆಗೆದುಕೊಂಡಿದೆ] (ವಾ.ಕಾರಂತರ ಗಾಯತ್ರೀ ಜಪ
ಗ್ರಂಥದಿಂದ)
(ಅಥವಾ : )
ಆಯಾತು ವರದಾ ದೇವೀ ಅಕ್ಷರಂ ಬ್ರಹ್ಮ ಸಮ್ಮಿತಂ | ಗಾಯತ್ರೀಂ ಛಂದಸಾಂ ಮಾತೇದಂ ಬ್ರಹ್ಮ ಜುಷಸ್ವ ಮೇ |
|| ತಾತ್ಪರ್ಯ || ಓಂ ಎಂಬ ಏಕಾಕ್ಷರವು ಪರಬ್ರಹ್ಮವು; ಇದಕ್ಕೆ ಅಗ್ನಿಯು ದೇವತೆಯು ; ಚತುರ್ಮುಖ ಬ್ರಹ್ಮ ಋಷಿ;
ಗಾಯತ್ರೀ ಛಂದಸ್ಸು; ಪರಮಾತ್ಮ ಸ್ವರೂಪವು ; ಮೋಕ್ಷದಲ್ಲಿ ವಿನಿಯೋಗವು. ಮೋಕ್ಷವನ್ನು ಕೊಡುವವಳು. ||೧||
[ಗಾಯತ್ರಿಯು ಛಂದಸ್ಸಿಗೆಲ್ಲಾ ಮಾತೃ ಸ್ವರೂಪಳು] ವೇದಮಾತೆ. ನಾಶರಹಿತಳು ಪರಮಾತ್ಮ ಸ್ಡರೂಪಳು. ಹಗಲು ಮತ್ತು
ರಾತ್ರಿ ಮಾಡಿದ ಪಾಪಗಳನ್ನು ನಾಶಮಾಡುವವಳು. ಸರ್ವ ಅಕ್ಷರಗಳ [ಸರ್ವವರ್ಣೇ] ಸ್ವರೂಪಳು. ಸಂಧ್ಯಾವಿದ್ಯೇಯೂ,
ಸರಸ್ವತಿಯೂ ಎಂದರೆ ಮೋಕ್ಷಪ್ರದಾಯಕಳು. ||೨|| [ಅಜರಳು, ಅಮರಳು- ಹುಟ್ಟು ಸಾವು ಇಲ್ಲದವಳು;
ಎಲ್ಲಾದೇವಿಯರನ್ನೂ ಒಳಗೊಂಡವಳು ] ; ವೇದ ಮಾತೆಯಾದ ಗಾಯತ್ರಿಯೇ ನೀನು ಓಜೋಸಿ-ಶಕ್ತಿ ರೂಪಳಾಗಿರುವೆ ;
ಸಹೋಸಿ- ಶತ್ರುನಿಗ್ರಹ ಶಕ್ತಿಯಾಗಿರುವೆ ; ಬಲಮಸಿ -ಇಂದ್ರಿಯಗಳ ಸ್ಥೂಲಶಕ್ತಿ [ಸಾಮರ್ಥ್ಯ] ರೂಪಳಾಗಿರುವೆ;
ಭ್ರಾಜೋಸಿ-ಜ್ಞಾನ ತೇಜೋ ರೂಪಳಾಗಿರುವೆ. ದೇವಾನಾಂ - ಇಂದ್ರಾದಿ ದೇವತೆಗಳಿಗೆ, ಧಾಮನಾಮಾಸಿ
-ನಿವಾಸಸ್ಥಾನವಾಗಿರುವೆ ; ವಿಶ್ವಮಸಿ - ಸರ್ವ ಜಗದ ಸ್ವರೂಪಳಾಗಿರುವೆ; ವಿಶ್ವಾಯುಃ - ವಿಶ್ವಕ್ಕೆ ಆಯುಷ್ಯ (ಸ್ಥಿತಿ)
ಸ್ವರೂಪಳಾಗಿದ್ದೀಯೆ ; ಸರ್ವಮಸಿ ಸರ್ವಾಯುಃ - ಸರ್ವವೂ ನೀನೆ, ಅದರ ಸ್ಥಿತಿರೂಪಳೂ ನೀನೆ ; ಅಭಿಭೂಃ
-ಪ್ರಣವಸ್ವರೂಪಳಾಗಿರುವೆ. ಮುಂದೆ : ಗಾಯತ್ರೀಂ ಆವಾಹಯಾಮಿ -ಗಾಯತ್ರೀದೇವಿಯನ್ನು ಆವಾಹನೆ
ಮಾಡಿಕೊಳ್ಳುತ್ತೇನೆ ;(ನನ್ನಲ್ಲಿ ತುಂಬಿಕೊಳ್ಳುತ್ತೇನೆ) ; ಇದೇ ರೀತಿ ಇತರೆ ಆವಾಹನೆಗಳು.
ಓಂ ಭೂಃ | ಓಂ ಭುವಃ | ಓಗುಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ | ಓಗುಂ ಸತ್ಯಂ ೧ನೇ ಪಾದ;
[ಓಂ ಭೂಃ -ಇತಿ ಪಾದಯೋಃ | ಓಂ ಭುವಃ - ಇತಿ ಜಾನುನೋ | ಓಗ್ಂ ಸುವಃ - ಇತ್ಯೋರ್ವೋಃ | ಓಂ ಮಹಃ - ಇತಿ
ಜಠರೇ | ಓಂ ಜನಃ -ಇತಿ ಕಂಠೇ | ಓಂ ತಪಃ - ಇತಿ ಮುಖೇ | ಓಗ್ ಂ ಸತ್ಯಂ - ಇತಿ ಶಿರಸಿ | ಇತಿ ವಿನ್ಯಸ್ಯ |
||ಅಥ ಮುದ್ರ ||
ಸಾಂ ಬೀಜಂ | ಸೀಂ ಶಕ್ತಿಃ | ಸೂಂ ಕೀಲಕಂ | ಮಮ ಗಾಯತ್ರೀ ಸಾವಿತ್ರೀ ಸರಸ್ವತ್ಯಾದಿ ಸಪ್ತ ಕೋಟಿ ಮಹಾಮಾತ್ರ ಸ್ಥಿತ
ಭವ ಭವ್ಯ ಸಮಸ್ತ ಶಾಪ ವಿಮೋಚನಾರ್ಥೇ ಜಫೇ ವಿನಿಯೋಗಃ ||
ಓಂ ಸ್ರೈಂ ಕವಚಾಯ ಹುಂ | ಓಂ ಸ್ರೌಂ ನೇತ್ರತ್ರಯಾಯೈ ವೌಷಟ್ || ಓಂ ಸ್ರಃ ಅಸ್ತ್ರಾಯ ಫಟ್ || ಯಿತಿ ದಿಗ್ಬಂಧಃ ||
||ಅಥ ಧ್ಯಾನಂ ||
ಓಂ ನಮೋ ಭಗವತೇ ಸರ್ವಸಾಕ್ಷಿಣೀ ಸಕಲ ಮೃತ್ಯುಂಜಿತ ಸ್ಥೂಲ ಸೂಕ್ಷ್ಮ ಕಾರಣ ದೇಹ ತ್ರಯ ಬ್ರಹ್ಮ ನಾರಸಿಂಹ
ತ್ರ್ಯಂಬಕ ಮಹಾರುದ್ರ ಸಮಸ್ತ ವೇದ ಗಾಯತ್ರೀ ಸಾವಿತ್ರೀ ಸರಸ್ವತ್ಯಾದಿ ಸಪ್ತ ಕೋಟಿ ಮಹಾಮಂತ್ರ ಸ್ಥಿತ ಭವ ಭವ್ಯ
ಸಮಸ್ತ ಶಾಪಾನ್ ರಂ ರಂ ಜ್ವಲ ಜ್ವಲ ಪ್ರಜ್ವಲ ಪ್ರಜ್ವಲ ಹನ ಹನ ದಹ ದಹ ಪಚ ಪಚ ಭಸ್ಮೀಕುರು ಕುರು ನಾಶಯ
ನಾಶಯ ಕೃಪಯ ಕೃಪಾಂ ದೇ ಕೃಪಾಂ ಕುರು ಯೇಹಿ ಯೇಹಿ ಸ್ವಾಹಾ ||೧||
ನೃಷದ್ವರ ಸದೃತ ಸದ್ವ್ಯೋಮ ಸದಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತು ||೨||
(ಗಾಯತ್ರೀ ಮಂತ್ರಕ್ಕೆ ಗೌತಮ ಮನಿಗಳ ಶಾಪವಿದ್ದು ಅದರ ಪರಿಹಾರಕ್ಕೆ ಶಾಪ ವಿಮೋಚನಾ ಕ್ರಿಯೆ ಹೇಳಿದೆ )
|| ಅಥ ಜಪಂ (ಗಾಯತ್ರೀ)||
||ಉತ್ತರ ಮುದ್ರೆ ||
|| ಯಿತಿ ಉದ್ವಾಸ್ಯ||
*ಓಂ ಮಿತ್ರಸ್ಯ ಚರ್ಷಣೀ ಧೃತಃ | ಶ್ರವೋ ದೇವಸ್ಯ ಸಾನಸಿಂ | ಸತ್ಯಂ ಚಿತ್ರ ಶ್ರವಸ್ತಮಂ | (೧)
ಎಲೈ ಸೂರ್ಯ ಭಗವಂತನೇ ನಿನ್ನ ಸಂಬಂಧವಾದ ಕರ್ಮಾನಷ್ಠಾನ ಮಾಡಲು ಯಾವನು ಸಮರ್ಥನೋ ಅಂತಹ
ಅಧಿಕಾರಿಯು ನಿನ್ನಿಂದ ರಕ್ಷಿತನಾಗುತ್ತಾನೆ. ಇವನನ್ನು ಯಾರೂ ಸಂಹರಿಸಲಾರರು. ರೋಗಾದಿಗಳು ಪೀಡಿಸಲಾರವು,
ಶತ್ರು ಗಳು ತಿರಸ್ಕರಿಸಲಾರರು, ಪಾಪಗಳು ಸೇರಲೇ ಆರವು.||೩||
|| ಅಥ ಮದ್ಯಾಹ್ನೇ ||
ದಾತಾರಂ ತರ್ಪಯಾಮಿ ||೧|| ಆರ್ಯಮಣಂ ತರ್ಪಯಾಮಿ ||೨|| ಮಿತ್ರ ತರ್ಪಯಾಮಿ ಂ ||೩|| ವರುಣಂ
ತರ್ಪಯಾಮಿ ||೪|| ಅಂಶುಂ ತರ್ಪಯಾಮಿ ||೫|| ಭಗಂ ತರ್ಪಯಾಮಿ ||೬|| ಇಂದ್ರಂ ತರ್ಪಯಾಮಿ ||೭|| ವಿವಸ್ವಂತಂ
ತರ್ಪಯಾಮಿ ||೮|| ಪೂಷಾಣಂ ತರ್ಪಯಾಮಿ ||೯|| ಪರ್ಜನ್ಯಂ ತರ್ಪಯಾಮಿ ||೧೦|| ತ್ವಷ್ಠಾರಂ ತರ್ಪಯಾಮಿ ||೧೧||
ವಿಷ್ಣುಂ ತರ್ಪಯಾಮಿ ||೧೨|| ಯಿತಿ ತರ್ಪಯಿತ್ವಾ ||
ತಾತ್ಪರ್ಯ :- ( ವರುಣನೇ! ನನ್ನ ಆಹ್ವಾನವನ್ನು ಅವಧರಿಸು. ಇಂದು ನನ್ನನ್ನು ಸಂತೋಷ ಗೊಳಿಸು. ನನ್ನ ರಕ್ಷಣೆಗಾಗಿ
ನಾನು ನಿನ್ನನ್ನು ಕರೆಯುತ್ತೇನೆ. ||೧|| ಋಗ್ವೇದ)
ಎಲೈ ವರುಣನೇ, ನಿನ್ನನ್ನು ಶರುಣು ಹೊಂದಿರುವೆನು. ನನ್ನ ಪ್ರಾರ್ಥನೆಯನ್ನು ಲಾಲಿಸಿ, ನನಗೆ ಅಮೃತ
ಸುಖವನ್ನುಂಟುಮಾಡುವವನಾಗು. ಎಲೈ ವರಣನೇ, ನಾನು ವೇದ ಮಂತ್ರದಿಂದ ವಂದಿಸಿ ನಿನ್ನನ್ನು
ಶರಣ್ಯನನ್ನಾಗಿಹೊಂದುವೆನು. ಯಜ್ಞ ಕರ್ತನು ಹವಿದ್ರವ್ಯಗಳಿಂದ ತೃಪ್ತಿಪಡಿಸುತ್ತಾ ಸುಖವನ್ನು ಬಯಸುತ್ತಿರುವನು. ನನ್ನ
ಪ್ರಾರ್ಥನೆಯನ್ನು ಅನಾದರಣೆ ಮಾಡದೆ ಬಹು ಮಂತ್ರಗಳಿಂದ ಹೊಗಳಿಸಿಕೊಳ್ಳುವ ನೀನು ಪೂರ್ಣಾಯು
ರ್ಯೋಗವನ್ನು ಅನುಗ್ರಹಿಸಿ ಕಾಪಾಡು. ||೧/೨||
|| ಪ್ರಾತಃ ||
ಗಂಗಾಯಮುನಯೋರ್ಮುನಿಭ್ಯಶ್ಚ ನಮೋನಮೋ
ತತೋತ್ತರ ಮುಖಃ ||
|| ಅಥ ಮಧ್ಯಾಹ್ನೆ ||
||ಉತ್ತಿಷ್ಠನ್||
ಓಂ ಉದ್ಯನ್ನದ್ಯಮಿತ್ರಮಹ ಆರೋಹದ್ನುತ್ತರಾದಿವಂ ||
ಮೂರ್ಧಾನಂ ಬ್ರಹ್ಮೋತ್ತರಾ
||ಉತ್ತಿಷ್ಠನ್||
ಅಥೋಪವಿಶ್ಯ || ಆಚಮ್ಯ||
* || ಯಿತಿ ಸಂಧ್ಯಾವಂದನಮ್ ||
|| ಅಥ ಅಷ್ಟಾಕ್ಷರೀ ಜಪಂ ||
ಆಚಮ್ಯ
||ಅಥ ಅಷ್ಟಾಕ್ಷರೀ ಜಪಂ ಕರಿಷ್ಯೇ || (ಎಂದು ಹೇಳಿ ಒಂದು ಸ್ವಲ್ಪ ನೀರು ಬಿಡುವುದು -ಸಂಕಲ್ಪ)
ಓಂ ಭೂರ್ಭುವಸ್ಸುವರೋಂ | ಇತಿ ದಿಗ್ಬಂಧಃ || (ಆಯಾ ಬೆರಳ ತುದಿಯನ್ನು ಹೆಬ್ಬೆರಿನಿಂದ ಸ್ಪರ್ಶಿಸಿ ದೇಹದ ಆಯಾ
ಅಂಗಗಳನ್ನು ಸ್ಪರ್ಶಿಸಬೇಕು; ವೌಷಟ್ || ಫಟ್ | ಗಳನ್ನು ಕೇಳಿ ತಿಳಿದುಕೊಂಡು ಮಾಡಬೇಕು)
|| ಅಥ ಧ್ಯಾನಂ ||
|| ಅಥ ಪಂಚಾಕ್ಷರೀ ಜಪಂ ||
|| ಆಚಮ್ಯ ||
||ಅಥ ದ್ಯಾನಂ ||
|| ಯಿತಿ ಧ್ಯಾನಂ ||
||ಓಂ ನಮಃ ಶಿವಾಯ || ಯಿತಿ ಜಪಂ |ಅಷ್ಟಾಕ್ಷರೀ ಜಪಾದ್ವಿಗುಣ ಕುರ್ಯಾತ್ || ದಶಾಂಶ ತರ್ಪಣಂ ||
ಭಗವದರ್ಪಣಂ.
ಯಸ್ಯ ಸ್ಮೃತಿ ಇತಿ ಚ- ನೆನಪಿನ ದೋಷದಿಂದ ಸಂಧ್ಯಾಕ್ರಿಯಾ ದೋಷಗಳಾದಲ್ಲಿ ಅಚ್ಯತನಿಗೆ ನಮಿಸುವುದರಿಂದ ದೋಷ
ಪರಿಹಾರ- ಆದ್ದರಿಂದ ವಂದೇ ತಂ ಅಚ್ಯುತಂ- ಅಚ್ಯುತನೇ ನಿನಗೆ ನಮಸ್ಕರಿಸುತ್ತೇನೆ. ಸಂಧ್ಯಾ ಕ್ರಿಯೆಯು
ಪರಮೇಶ್ವರನಿಗೆ ಪ್ರೀತಿಯಾಗಲಿ- (ವರದ) ಪ್ರೀತಿಯಾಯಿತು! ಅವನಿಗೆ ಸಮರ್ಪಣ)
||ಯಿತಿ ಸಂಧ್ಯಾವಂದನಂ|| (
[೧][೨][೩]
ಆಧಾರ :
೧. ಹಸ್ತ ಪ್ರತಿ : ದಿವಂಗತ.. ತಿಮ್ಮ್ಯೆಯ್ಯ ಕೊಲ್ಲೂರಯ್ಯ ಹೆಗಡೆ | ಬೇಗಡೀಪಾಲು ಇವರು , ೨೬/೧೦/೧೯೪೨ ರಲ್ಲಿ ಬರೆದ
ಹಸ್ತ ಪ್ರತಿ ಯನ್ನು ಬಿ ಎಸ್ ಚಂದ್ರಶೇಖರ ಸಾಗರ ಇವರಿಗೆ ೧೯೪೪-೪೫ರಲ್ಲಿ ಕೊಟ್ಟ ಬೋಧಾಯನೀಯ ಸೂತ್ರದ
ಪೂರ್ಣ ಸಂಧ್ಯಾವಂದನಾ ಕ್ರಿಯಾ ಪಾಠ. [ಇದು ಹಳೆಯ ಹಸ್ತ ಪ್ರತಿಯಲ್ಲಿ ಕೆಲವು ಕಡೆ ಅಸ್ಪಷ್ಟ ವಿದ್ದು, ಅನುಮಾನ
ಬಂದಕಡೆ ಆವರಣದಲ್ಲಿ ಪರ್ಯಾಯ ಪದ ತೋರಿಸಿದೆ, ವಿದ್ವಜ್ಜನರು ಸರಿಯಾದ ಪದವನ್ನು ತುಂಬಿಕೊಳ್ಳ ಬೇಕು]
೨. ಬೋಧಾಯನೀಯ ನಿತ್ಯ ಕರ್ಮ ಪ್ರದೀಪಃ : ಬರಿಗೆ ಗಣೇಶ ಭಟ್ಟರು.- ಹವ್ಯಕ ಸಂಪದಭಿವೃಧ್ಧಿ ಸಮಾಜ ಕೇಡಲೇಸರ
ಭೀಮನಕೋಣೆ ಸಾಗರತಾ||
ನೋಡಿ
ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿ ಟಿಪ್ಪಣಿ ರಹಿತ
ಉಲ್ಲೇಖ
1. ತಿಮ್ಮ್ಯೆಯ್ಯ ಕೊಲ್ಲೂರಯ್ಯ ಹೆಗಡೆ | ಬೇಗಡೀಪಾಲು ಇವರು , ೨೬/೧೦/೧೯೪೨ ರಲ್ಲಿ ಬರೆದ ಹಸ್ತ ಪ್ರತಿ
3. ಬೋಧಾಯನೀಯ ನಿತ್ಯ ಕರ್ಮ ಪ್ರದೀಪಃ : ಬರಿಗೆ ಗಣೇಶ ಭಟ್ಟರು.- ಹವ್ಯಕ ಸಂಪದಭಿವೃಧ್ಧಿ ಸಮಾಜ ಕೇಡಲೇಸರ
ಭೀಮನಕೋಣೆ ಸಾಗರತಾ||
"https://kn.wikipedia.org/w/index.php?
title=ಸಂಧ್ಯಾವಂದನ_ಪೂರ್ಣಪಾಠ&oldid=1012156"
ಇಂದ ಪಡೆಯಲ್ಪಟ್ಟಿದೆ
Last edited ೧ year ago by Bschandrasgr