Professional Documents
Culture Documents
ಪದವನ್ನು ಬಳಸಿರುತ್ತಾರೆ
--------------
ಸುದತಿ ಪುತ್ರ ಮಿತ್ರ ಮಾತೃಪಿತೃರು ಹಿತರು ನಿತ್ಯರೆಂದು ಹದೆದು ಕುದಿದು ಕೋಟಲೆಗೊಂಬನ್ನಕ್ಕರ ಗುರುವೆಂದೇನಯ್ಯ.
ಸುರಚಾಪದಂತೆ ತೋರಿ ಕೆಡುವ ಹೆಣ್ಣು ಹೊನ್ನು ಮಣ್ಣ ನಚ್ಚಿ ಮದಡನಾಗಿಪ್ಪನ್ನಕ್ಕರ ಲಿಂಗವೆಂದೇನಯ್ಯ. ಈ ಕಷ್ಟ
ಸಂಸೃತಿಯ ಕೂಪತಾಪದೊಳಗೆ ಬಿದ್ದುರುಳುವ ನಾಮನಷ್ಟರಿಗೆ ಜಂಗಮಲಿಂಗವೆಂದೇನಯ್ಯ. ಈ ದುಷ್ಟದುರ್ಮಲತ್ರಯದ
ಅಂಧಕಾರ ಘೋರತರವಿಕಾರ ಸರ್ಪದಷ್ಟರಾದ ದುಷ್ಟರಿಗೆ ಶಿವಸತ್ವಥವೆಂದೇನು ಹೇಳಾ, ಮಹಾಲಿಂಗಗುರು ಶಿವಸಿದ್ಧೇಶ್ವರ
ಪ್ರಭುವೇ. ಭಕ್ತನ ಮಾಹೇಶ್ವರ
--------------
--------------
--------------
ಜಂಗಮವೇನು ಕಾಮಿಯೇ? ಕ್ರೋದ್ಥಿಯೇ? ಲೋಬ್ಥಿಯೇ? ಅಲ್ಲ ಕಾಣಿರಣ್ಣ. ಮೋಹಿಯೇ? ಮದಡನೇ? ಮತ್ಸರನೇ? ಅಲ್ಲ
ಕಾಣಿರಣ್ಣ. ಅಹಂಕಾರಿಯೇ ಮಮಕಾರಿಯೇ ಪ್ರಪಂಚಿಯೇ? ಇಂತೀ ಪ್ರಕೃತಿರೂಪನಲ್ಲ ಕಾಣಿರಣ್ಣ. ನಿಃಕಾಮಿ, ನಿಃಕ್ರೋದ್ಥಿ,
ನಿರ್ಲೋಬ್ಥಿ, ನಿರ್ಮೋಹಿ, ನಿರ್ಮದ, ನಿರ್ಮತ್ಸರನಯ್ಯ. ನಿರಹಂಕಾರಿ, ನಿರ್ಮಮಕಾರಿ, ನಿಃಪ್ರಪಂಚಿ, ನಿರ್ಲೇಪಕನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿರೋ.
--------------
--------------
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗ ಗುಣವಳಿದು ಲಿಂಗ ಗುಣ ಉಳಿಯಿತ್ತಯ್ಯ. ಆವರಿಸಿತ್ತಯ್ಯ ಪರಮ ಅನುಪಮ ಭಕ್ತಿಸುಖ. ಲಿಂಗಾಂಗವೆಂಬ
ಎರಡನರಿಯೆನಯ್ಯ. ಶುದ್ಧ ಸುಜ್ಞಾನ ಜಂಗಮಲಿಂಗ ಗ್ರಾಹಕನಾಗಿ ಪ್ರಾಣಲಿಂಗವೆಂಬ ಎರಡನರಿಯೆನಯ್ಯ. ಎರಡೆರಡೆಂದು
ಈ ಹುಸಿಯನೇಕೆ ನುಡಿವರಯ್ಯ. ಇನ್ನೆರಡು ಒಂದಾಯಿತ್ತಾಗಿ ಲೋಕಚಾತುರ್ಯ, ಲೋಕವ್ಯವಹರಣೆ. ಲೋಕಭ್ರಾಂತಿಯ
ಮರೆದೆನಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನಿಮ್ಮಲ್ಲಿ ನಿಬ್ಬೆರಗಾದೆನಯ್ಯಾ.
--------------
ಶುದ್ಧ ಸತ್ಕುಲಜಂಗೆ ಅಃಕ್ಕುಲಿಜೆಯ ಸಂಗದಿಂದ ಸತ್ಕುಲ ಕೆಟ್ಟು ಅಃಕ್ಕುಲಜನಾಗಿ ಹುಟ್ಟುತ್ತ ಹೊಂದುತ್ತಿಹುದ- ನಿದನಾರು
ಮಾಡಿದರೋ ಎಂದು ಆರೈದು ನೋಡಿ ಮಾರಾರಿಯ ಕೃತಕವೆಂದರಿಯಲಾ ಸತ್ಕುಲಜನ ತಾಯಿ ಅಃಕ್ಕುಲಿಜೆಯ ಕೊಂದು
ಸುಪುತ್ರನ ನುಂಗಿ ತತ್ತ್ವಮಸಿವಾಕ್ಯದಿಂದತ್ತತ್ತಲಾದವನ ನೆತ್ತಿಯಲ್ಲಿ ಹೊತ್ತು ನೆರೆಯಲು ಭಕ್ತಿ ನಿಃಪತಿಯಾಯಿತ್ತು. ಸತ್ಯವಿಲ್ಲ,
ಎನಗೊಂದು ಸಹಜವಿಲ್ಲ. ಗುರು ಲಿಂಗ ಜಂಗಮವೆಂಬ ಮಿಥ್ಯದ ಮಾತೆಲ್ಲಿಯದೋ ಮೂರೊಂದಾಗಿ ಬೆರೆದ ನಿರಾಳಕ್ಕೆ?.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ ನಾಮವೆಲ್ಲಿಯದೋ ನಿರ್ನಾಮಂಗೆ? ಬಿಡಾ ಮರುಳೆ.
--------------
ನಿತ್ಯನಿರಂಜನನಾದ ಪರಶಿವನು ಲಿಂಗ ಜಂಗಮ ಭಕ್ತನೆಂದು ಮೂರು ತೆರನಾದನು ನೋಡಿರೇ. ಸದ್ರೂಪು ಲಿಂಗ, ಚಿದ್ರೂಪು
ಭಕ್ತ, ಆನಂದ ಸ್ವರೂಪವೇ ಜಂಗಮ ನೋಡಾ. ಆ ಚಿತ್ಸ್ವರೂಪವಪ್ಪ ಭಕ್ತಂಗೆ ಸತ್ಸ್ವರೂಪವಪ್ಪ ಲಿಂಗವೇ ಅಂಗ;
ಆನಂದಸ್ವರೂಪವಪ್ಪ ಜಂಗಮವೇ ಪ್ರಾಣ. ಇದುಕಾರಣ, ಲಿಂಗವೆ ಅಂಗ, ಜಂಗಮವೆ ಪ್ರಾಣಗ್ರಾಹಕನಾದ ಚಿನ್ಮಯನಯ್ಯ
ಭಕ್ತನು. ಲಿಂಗ ಜಂಗಮ ಭಕ್ತ ಮೂರುವೊಂದಾಗಿ ಪರಶಿವತತ್ತ್ವದಲ್ಲಡಗಿದ ಅದ್ವೆ ೈತ ಪರಬ್ರಹ್ಮವು ತಾನೇ ಪರಮಭಕ್ತ
ನೋಡಾ, ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ.
--------------
ಓಂಕಾರವೇ ಶಿವ, ಯಕಾರವೇ ಸದಾಶಿವ, ವಾಕಾರವೇ ಈಶ್ವರ, ಶಿಕಾರವೇ ಮಹೇಶ್ವರ, ಮಃಕಾರವೇ ಈಶ್ವರ, ನಕಾರವೇ
ಈಶಾನ. ಈ ಷಡಕ್ಷರವೆ ಷಡ್ವಿಧಮಂತ್ರಮೂರ್ತಿಯಾಗಿ ಒಪ್ಪುತಿಪ್ಪುದಯ್ಯ, ಮತ್ತೆ-ನಕಾರವೇ ಮೂರ್ತಿಬ್ರಹ್ಮ, ಮಃಕಾರವೇ
ಪಿಂಡಬ್ರಹ್ಮ, ಶಿಕಾರವೇ ಕಲಾಬ್ರಹ್ಮ, ವಾಕಾರವೇ ಆನಂದಬ್ರಹ್ಮ, ಯಕಾರವೇ ವಿಜ್ಞಾನಬ್ರಹ್ಮ, ಓಂಕಾರವೇ ಪರಬ್ರಹ್ಮ, ಈ
ಷಡಕ್ಷರವೆ ಷಡ್ವಿಧಬ್ರಹ್ಮವೆಂದು ಹೇಳಲ್ಪಟ್ಟಿತ್ತು ನೋಡಾ. ಮತ್ತೆ-ನಕಾರವೇ ಕ್ರಿಯಾಶಕ್ತಿ:ಮಕಾರವೇ ಜ್ಞಾನಶಕ್ತಿ, ಶಿಕಾರವೇ
ಇಚ್ಛಾಶಕ್ತಿ, ವಾಕಾರವೇ ಆದಿಶಕ್ತಿ, ಯಕಾರವೇ ಪರಶಕ್ತಿ, ಓಂಕಾರವೇ ಚಿಚ್ಛಕ್ತಿ, ಇಂತಿವು ಮಂತ್ರಶಕ್ತಿಸ್ವರೂಪೆಂದರಿವುದು
ನೋಡಾ. ಮತ್ತೆ-ನಕಾರವೇ ಕರ್ಮಸಾದಾಖ್ಯ, ಮಃಕಾರವೇ ಕರ್ತೃಸಾದಾಖ್ಯ, ಶಿಕಾರವೇ ಮೂರ್ತಿಸಾದಾಖ್ಯ, ವಾಕಾರವೇ
ಅಮೂರ್ತಿಸಾದಾಖ್ಯ; ಯಕಾರವೇ ಶಿವಸಾದಾಖ್ಯ, ಓಂಕಾರವೇ ಮಹಾಸಾದಾಖ್ಯ ನೋಡ. ಮತ್ತೆ-ನಕಾರವೇ ಪೀತವರ್ಣ,
ಮಃಕಾರವೇ ನೀಲವರ್ಣ, ಶಿಕಾರವೇ ಕುಂಕುಮವರ್ಣ, ವಾಕಾರವೇ ಶ್ವೇತವರ್ಣ, ಯಕಾರವೇ ಸ್ಫಟಿಕವರ್ಣ, ಓಂಕಾರವೇ
ಜ್ಯೋತಿರ್ಮಯಸ್ವರೂಪು ನೋಡಾ. ಇಂತಿವು ಮಂತ್ರಮೂರ್ತಿಯ ವರ್ಣಭೇದವೆಂದರಿವುದಯ್ಯ. ಮತ್ತೆ-ನಕಾರವೇ
ಸದ್ಯೋಜಾತಮಂತ್ರಮೂರ್ತಿ. ಮಃಕಾರವೇ ವಾಮದೇವಮಂತ್ರಮೂರ್ತಿ. ಶಿಕಾರವೇ ಅಘೋರಮಂತ್ರಮೂರ್ತಿ. ವಾಕಾರವೇ
ತತ್ಪುರುಷಮಂತ್ರಮೂರ್ತಿ. ಯಕಾರವೇ ಈಶಾನ್ಯಮಂತ್ರಮೂರ್ತಿ. ಓಂಕಾರವೇ ಮಹಾಮಂತ್ರಮೂರ್ತಿ. ಇಂತಿವು
ಮಂತ್ರಮೂರ್ತಿಯ ವದನಭೇದವೆಂದರಿವುದು ನೋಡಾ. ಮತ್ತೆ-ನಕಾರವೇ ಸತ್ತು, ಮಃಕಾರವೇ ಚಿತ್ತು, ಶಿಕಾರವೇ ಆನಂದ
ವಾಕಾರವೇ ನಿತ್ಯ, ಯಕಾರವೇ ಪರಿಪೂರ್ಣ, ಓಂಕಾರವೇ ನಿರಂಜನಸ್ವರೂಪವೆಂದರಿವುದಯ್ಯ. ಮತ್ತೆ-ನಕಾರವೇ
ಆಚಾರಲಿಂಗ, ಮಃಕಾರವೇ ಗುರುಲಿಂಗ, ಶಿಕಾರವೇ ಶಿವಲಿಂಗ, ವಾಕಾರವೇ ಜಂಗಮಲಿಂಗ, ಯಕಾರವೇ ಪ್ರಸಾದಲಿಂಗ,
ಓಂಕಾರವೇ ಮಹಾಲಿಂಗ ಇಂತಿವು ಷಡಕ್ಷರ ಮಂತ್ರಲಿಂಗವೆಂದರಿವುದಯ್ಯ. ಇಂತಿವು ಲಿಂಗಷಡಕ್ಷರವೆಂದು ಹೇಳಲ್ಪಟ್ಟವು
ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ಪ್ರಣವವೇ ಪರಬ್ರಹ್ಮವು. ಪ್ರಣವವೇ ಪರಾಪರವಸ್ತು. ಪ್ರಣವವೇ ಪರತತ್ವವು ಪ್ರಣವವೇ ಪರಂಜ್ಯೋತಿ ಪ್ರಕಾಶವು. ಪ್ರಣವವೇ
ಪರಶಿವ. ಪ್ರಣವವೇ ಶುದ್ಧಪ್ರಸಾದ. ಪ್ರಣವವೇ ಪರಮಪದ. ಪ್ರಣವವೇ. ವೇದಶಾಸ್ತ್ರ ಪುರಾಣಾಗಮಂಗಳುತ್ಪತ್ತಿಗೆ ಕಾರಣ
ನೋಡಾ. ಪ್ರಣವವೇ ಸಪ್ತಕೋಟಿ ಮಹಾಮಂತ್ರ, ಅನೇಕಕೋಟಿ ಉಪಮಂತ್ರಂಗಳಿಗೆ ಮಾತೃಸ್ಥಾನ ನೋಡಾ. ಇಂತಪ್ಪ
ಶಿವಸ್ವರೂಪವಪ್ಪ ಪ್ರಣವಮಂತ್ರವನೇ ಶುದ್ಧಮಾಯಾಸಂಬಂಧವೆಂಬ ಅಬದ್ಧರ ಎನಗೊಮ್ಮೆ ತೋರದಿರಯ್ಯ. ಮಂತ್ರ
ಜಡವಾದಲ್ಲಿಯೆ ಗುರು ಜಡ. ಗುರು ಜಡವಾದಲ್ಲಿಯೆ ಲಿಂಗವು ಜಡ. ಲಿಂಗವು ಜಡವಾದಲ್ಲಿಯೆ ಜಂಗಮವು ಜಡ. ಜಂಗಮವು
ಜಡವಾದಲ್ಲಿಯೇ ಪ್ರಸಾದವು ಜಡ. ಪ್ರಸಾದವು ಜಡಯೆಂಬುವರಿಗೆ ಮುಕ್ತಿಯೆಂಬುದು ಎಂದೂ ಇಲ್ಲ. ಮಂತ್ರ ಗುರು ಲಿಂಗ
ಜಂಗಮ ಪ್ರಸಾದ ಮುಕ್ತಿ ಈ ಆರು ಸಾಕ್ಷಾತ್ ಶಿವ ತಾನೆಯಲ್ಲದೆ ಬೇರಿಲ್ಲ. ಶಿವ ಬೇರೆ ಇವು ಬೇರೆಯೆಂಬ ಅಜ್ಞಾನ
ಕರ್ಮಕಾಂಡಿಗಳ ಪಶುಮತ(ದ)ವರಯೆನಗೊಮ್ಮೆ ತೋರದಿರು. ಇದು ಕಾರಣ, ಪ್ರಣವವೇ ಪರವಸ್ತು. ಪಂಚಾಕ್ಷರವೇ
ಪಂಚಮುಖವನ್ನುಳ್ಳ ಪರಮೇಶ್ವರ ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
ಅಗ್ನಿಯೆ ಅಂಗವಾದ ಪ್ರಸಾದಿಯಲ್ಲಿ ಪ್ರಾಣಲಿಂಗ ಶರಣ ಐಕ್ಯ ಭಕ್ತ ಮಾಹೇಶ್ವರನಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ
ಪ್ರಸಾದಿಯಲ್ಲಿ ಶಿವಲಿಂಗ ಸಂಬಂಧವಾಗಿ ಆ ಶಿವಲಿಂಗದಲ್ಲಿಯೆ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ
ಗುರುಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಶಿವಲಿಂಗವೆ ಸರ್ವಾಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ
ಬೇರಿಲ್ಲದಿರಬಲ್ಲರೆ ಪ್ರಸಾದಿಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಲವೆ ಅಂಗವಾದ ಮಾಹೇಶ್ವರನಲ್ಲಿ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಭಕ್ತನಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ
ಮಾಹೇಶ್ವರಂಗೆ ಗುರುಲಿಂಗ ಸಂಬಂಧವಾಗಿ ಆ ಗುರುಲಿಂಗದಲ್ಲಿಯೆ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ
ಆಚಾರಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಗುರುಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿಯೆ ಬೆರಸಿ
ಬೇರಿಲ್ಲದರಿಬಲ್ಲರೆ ಮಾಹೇಶ್ವರನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
ತನುವಿನಲ್ಲಿ ಗುರು ಭರಿತವಾದುದೇ ಭರಿತಬೋನ. ಮನದಲ್ಲಿ ಲಿಂಗ ಭರಿತವಾದುದೇ ಭರಿತಬೋನ. ಧನದಲ್ಲಿ ಜಂಗಮ
ಭರಿತವಾದುದೇ ಭರಿಬೋನ. ಪ್ರಾಣದಲ್ಲಿ ಪ್ರಸಾದ ಭರಿತವಾದುದೇ ಭರಿತಬೋನ. ಅಂತರಂಗ ಬಹಿರಂಗದಲ್ಲಿ
ಪರಿಪೂರ್ಣವಸ್ತು ಭರಿತವಾಗಿ ಎಡೆ ಕಡೆಯಿಲ್ಲದ ವಸ್ತುವಿನಲ್ಲಿ ತಾ ಭರಿತವಾದುದೇ ಭರಿತಬೋನ. ಹೀಂಗಲ್ಲದೆ:
ಪುರುಷಾಹಾರಪ್ರಮಾಣಿನಿಂದ ಓಗರವ ಗಡಣಿಸಿಕೊಂಡು ಲಿಂಗಾರ್ಪಿತಮಾಡಿ ಪ್ರಸಾದವೆಂದು ಕೊಂಡು ಎಂಜಲುಯೆಂದು
ಕಳೆದು ಬಂದ ಪದಾರ್ಥವ ಮುಟ್ಟಿ ಲಿಂಗಾರ್ಪಿತವ ಮಾಡಲಮ್ಮದವರಿಗೆ ಲಿಂಗಾರ್ಪಿತವಿಲ್ಲ. ಲಿಂಗಾರ್ಪಿತವಿಲ್ಲವಾಗಿ
ಪ್ರಸಾದವಿಲ್ಲ. ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು ಇಲ್ಲ. ಇವರ ಲಿಂಗಾಂಗಸಂಬಂಧಿಗಳೆಂತೆಂಬೆನಯ್ಯ? ಲಿಂಗಾಂಗಿಯ
ಅಂಗದಲ್ಲಿ ಸಂದೇಹ ಸೂತಕ ಉಂಟೇ? ಈ ಭಂಗಿತರ ಮುಖವ ನೋಡಲಾಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ
ಪ್ರಭುವೇ.
--------------
--------------
--------------
ಕೇಡಿಲ್ಲದ ಗುರುವಿಂಗೆ ಕೇಡ ಕಟ್ಟುವರಯ್ಯ. ಕೇಡಿಲ್ಲದ ಲಿಂಗಕ್ಕೆ ಕೇಡ ಕಟ್ಟುವರಯ್ಯ. ಕೇಡಿಲ್ಲದ ಜಂಗಮಕ್ಕೆ ಕೇಡ
ಕಟ್ಟುವರಯ್ಯ. ಕೇಡಿಲ್ಲದ ಮಂತ್ರಕ್ಕೆ ಕೇಡಕಟ್ಟಿ, ಆಹ್ವಾನಿಸಿದಲ್ಲಿ ಇದ್ದಿತ್ತು, ವಿಸರ್ಜಿಸಿದಲ್ಲಿ ಮಂತ್ರ ಭಿನ್ನವಾಯಿತ್ತೆಂದು,
ಸಂದೇಹದಲ್ಲಿ ಮುಳುಗಿ ಮೂಡುತ್ತಿಪ್ಪರಯ್ಯ. ತನು ಮನ ಭಾವದಲ್ಲಿ ವಜ್ರಲೇಪದಂತೆ ಲೇಪಿಸಿಕೊಂಡು ಒಳಹೊರಗೆ
ಓಂನಮಶ್ಯಿವಾಯಯೆನುತ ಸದಾ ಸನ್ನಿಹಿತನಾಗಿಪ್ಪುದನರಿಯದೆ, ಕೆಟ್ಟಿತ್ತು ಇದ್ದಿತ್ತು ಎನ್ನಲೇಕೆ? ಕೆಡುವಾಗ ಹಾಲಂಬಿಲವೇ?
ಬಳಸುವಾಗ ಹಾಲೋಗರವೇ? ಅದು ಕೆಡುವುದು ಅಲ್ಲ; ಅಳಿವುದೂ ಅಲ್ಲ. ನಿಮ್ಮ ಸಂಕಲ್ಪ ವಿಕಲ್ಪವೆಂಬ ಸಂದೇಹವೇ
ಕೆಡಿಸುತ್ತ ಅಳಿಸುತ್ತ ನಿಮ್ಮ ಕಾಡುತ್ತಿಪ್ಪವು ಕಾಣಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
--------------
--------------
ಸೂರ್ಯನ ಬೆಳಗಿಂಗೆ ಕೊಳ್ಳಿಯ ಬೆಳಗ ಹಿಡಿಯಲುಂಟೇ ಮರುಳೆ? ತನ್ನ ಮುಖವ ತಾ ಬಲ್ಲವಂಗೆ ಕನ್ನಡಿಯ ಹಿಡಿದು
ನೋಡಲುಂಟೇ ಹೇಳಾ. ತನ್ನ ಸುಳುಹಿನ ಸೂಕ್ಷ ್ಮವ ತಾನರಿದ ಸ್ವಯಜ್ಞಾನಿಗೆ ಇನ್ನಾವ ಆಗಮಬೋಧೆಯೇಕೆ ಹೇಳ?
ಆಗಮಶಿಕ್ಷೆಯೆಂಬುದು, ಲೋಗರಿಗಲ್ಲದೆ, ಆದಿಯಲ್ಲಿ ಶಿವಬೀಜವಾದ ಮಹಾಮಹಿಮರಿಗುಂಟೇ? ಸ್ವಾನುಭಾವಜ್ಞಾನ ಎಲ್ಲರಿಗೂ
ಇಲ್ಲವಲ್ಲ. ಇಲ್ಲದಿರ್ದಡೆ ಮಾಣಲಿ, ಅದಕ್ಕೇನು ಕೊರತೆಯಿಲ್ಲ. ಮತಾಂತರ ಶಾಸ್ತ್ರಾಗಮಂಗಳ ಮುಟ್ಟಲಾಗದು. ಅದೇನು
ಕಾರಣವೆಂದಡೆ: ಅವರಂಗದ ಮೇಲೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವಿಲ್ಲದ ಕಾರಣ. ಆ ಆಗಮದಲ್ಲಿ
ಜಂಗಮಪ್ರಸಾದವ ಲಿಂಗಕ್ಕರ್ಪಿಸಿ, ಕೊಟ್ಟು ಕೊಳಬೇಕೆಂಬ ಪ್ರಮಾಣವ ಹೇಳವಾಗಿ. ಛಿಃ, ಅವೆಲ್ಲಿಯ ಆಗಮ, ಅವು ಅಂಗಲಿಂಗ
ಸಂಬಂಧಿಗಳಿಗೆ ಮತವೇ? ಅಲ್ಲ. ಸದ್ಗುರುವಿನ ವಚನ ಪ್ರಮಾಣೇ? ಅಲ್ಲ. ಗುರುವಚನ ಪ್ರಮಾಣವಲ್ಲದ ಮಾರ್ಗವ ಹಿಡಿದು
ಆಚರಿಸುವರೆಲ್ಲರು ಗುರುದ್ರೋಹಿಗಳು. ಎಲೆ ಶಿವನೇ, ನೀ ಸಾಕ್ಷಿಯಾಗಿ ಅಂಗಲಿಂಗ ಸಂಬಂಧಿಗಳಿಗೆ ಪರಮ
ವೀರಶೈವಾಗಮವೇ ಪ್ರಮಾಣು. ಪುರಾತನರ ಮಹಾವಾಕ್ಯವೇ ಪ್ರಮಾಣು. ಉಳಿದುವೆಲ್ಲ ಹುಸಿ ಕಾಣಾ, ಮಹಾಲಿಂಗಗುರು
ಶಿವಸಿದ್ಧೇಶ್ವರ ಪ್ರಭುವೇ.
--------------
ತನುವಿಡಿದು ಕಾಬುದು ಗುರುವಿನ ಭೇದ. ಮನವಿಡಿದು ಕಾಬುದು ಲಿಂಗದ ಭೇದ. ಜ್ಞಾನವಿಡಿದು ಕಾಬುದು ಜಂಗಮದ ಭೇದ.
ಈ ತ್ರಿವಿಧವಿಡಿದು ಕಾಬುದು ಮಹಾ ಪ್ರಕಾಶ. ಆ ಮಹಾಪ್ರಕಾಶದೊಳಗೆ ಮಹವ ಕಂಡು ಮಹಕ್ಕೆ ಮಹನಾಗಿರ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
--------------
ಆಚಾರವಿಲ್ಲದ ಗುರು ಭೂತಪ್ರಾಣಿ ಆಚಾರವಿಲ್ಲದ ಲಿಂಗ ಶಿಲೆ. ಆಚಾರವಿಲ್ಲದ ಜಂಗಮ ಮಾನವ. ಆಚಾರವಿಲ್ಲದ ಪಾದೋದಕ
ನೀರು. ಆಚಾರವಿಲ್ಲದ ಪ್ರಸಾದ ಎಂಜಲು. ಆಚಾರವಿಲ್ಲದ ಭಕ್ತ ದುಃಕರ್ಮಿ. ಇದು ಕಾರಣ, ಅಟ್ಟವನೇರುವುದಕ್ಕೆ ನಿಚ್ಚಣಿಗೆಯೆ
ಸೋಪಾನವಯ್ಯ. ಹರಪದವನೆಯ್ದುವರೆ ಶ್ರೀ ಗುರು ಹೇಳಿದ ಸದಾಚಾರವೆ ಸೋಪಾನವಯ್ಯ. ಗುರುಪದೇಶವ ಮೀರಿ, ಮನಕ್ಕೆ
ಬಂದಂತೆ ವರ್ತಿಸುವ ಪಾಪಿಗಳ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ಕಾಯಕ್ಕಾಧಾರ ಭಕ್ತ. ಜೀವಕ್ಕಾಧಾರ ಭಕ್ತ. ಕರಣಕ್ಕಾಧಾರ ಭಕ್ತ. ಲಿಂಗಕ್ಕಾಧಾರ ಭಕ್ತ. ಜಂಗಮಕ್ಕಾಧಾರ ಭಕ್ತ.
ಪ್ರಸಾದಕ್ಕಾಧಾರ ಭಕ್ತ. ಶಕ್ತಿಗಾಧಾರ ಭಕ್ತ. ಭಕ್ತಿಗಾಧಾರ ಭಕ್ತ. ಎನಗಾಧಾರ ಭಕ್ತ. ನಿನಗಾಧಾರ ಭಕ್ತ. ನಾನು ನೀನೆನ್ನದೆ
ನಿರವಯ ನಿರ್ಮಾಯನಯ್ಯ ಭಕ್ತನು. ಇಂತಪ್ಪ ಭಕ್ತ ಸಂಗನಬಸವಣ್ಣನ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ಆಕಾಶವೇ ಅಂಗವಾದ ಶರಣನಲ್ಲಿಯೆ ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿಯಪ್ಪ ಅಂಗಪಂಚಕವು ಗರ್ಭೀಕೃತವಾಗಿ
ಆ ಶರಣಂಗೆ ಪ್ರಸಾದಲಿಂಗವೆ ಸ್ವಾಯತವಾಗಿ ಆ ಪ್ರಸಾದಿಲಿಂಗದಲ್ಲಿಯೆ ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಪ್ರಸಾದಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ
ಬೇರಿಲ್ಲದಿರಬಲ್ಲರೆ ಶರಣನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
ಆ ಭಕ್ತಂಗೆ ಲಿಂಗವೇ ಪ್ರಾಣ; ಆ ಲಿಂಗಕ್ಕೆ ಗುರುವೇ ಪ್ರಾಣ; ಆ ಗುರುವಿಂಗೆ ಜಂಗಮವೇ ಪ್ರಾಣ ನೋಡಾ.
ಅದೇನುಕಾರಣವೆಂದರೆ: ಆ ನಿತ್ಯ ನಿರಂಜನ ಪರವಸ್ತುವೆ ಘನ ಚೈತನ್ಯವೆಂಬ ಜಂಗಮವು ನೋಡಾ. ಆ ಪರಮ
ಜಂಗಮದಿಂದ ನಿಃಕಲ ಗುರುಮೂರ್ತಿ ಉದಯವಾದನು ನೋಡಾ. ಆ ನಿಃಕಲ ಗುರುಮೂರ್ತಿಯಿಂದ ಆದಿಮಹಾಲಿಂಗವು
ಉದಯವಾಯಿತ್ತು ನೋಡಾ. ಆ ಆದಿಮಹಾಲಿಂಗದಿಂದ ಮೂರ್ತಿಗೊಂಡನು ಭಕ್ತನು. ಆ ಗುರುವಿಂಗೆ ಆ ಲಿಂಗಕ್ಕೆ ಆ ಭಕ್ತಂಗೆ
ಆ ಜಂಗಮ ಪ್ರಸಾದವೇ ಪ್ರಾಣ ನೋಡಾ. ಇದು ಕಾರಣ: ಭಕ್ತನಾದರೂ ಲಿಂಗವಾದರೂ ಗುರುವಾದರೂ ಜಂಗಮ ಪ್ರಸಾದವ
ಕೊಳ್ಳಲೇಬೇಕು. ಜಂಗಮ ಪ್ರಸಾದವ ಕೊಳ್ಳದಿದ್ದರೆ ಆತ ಗುರುವಲ್ಲ, ಅದು ಲಿಂಗವಲ್ಲ; ಆತ ಭಕ್ತನಲ್ಲ ನೋಡಾ. ಆ ಶೈವ
ಪಾಷಂಡಿಯ ಕೈಯ ಪಡೆದುದು ಉಪದೇಶವಲ್ಲ; ಆತನಿಂದ ಪಡೆದುದು ಲಿಂಗವಲ್ಲ. ಆ ಲಿಂಗವ ಧರಿಸಿಪ್ಪಾತ ಭಕ್ತನಲ್ಲ. ಅವ
ಭೂತಪ್ರಾಣಿ ನೋಡಾ. ಇದುಕಾರಣ: ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬಾತನೆ ಶಿವಭಕ್ತನು. ಆ ಜಂಗಮ
ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳ್ಳದಿದ್ದರೆ ಅವ ಭವಿಗಿಂದಲು ಕರಕಷ್ಟ ನೋಡಾ. ಆ ಭವಭಾರಿಯ ಮುಖ ನೋಡಲಾಗದು
ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ವಾಚಾತೀತ, ಮನೋತೀತ ಅಗೋಚರ ನಿರ್ನಾಮ ನಿರ್ಗುಣ ನಿತ್ಯ ನಿರಂಜನ ನಿರವಯ ನಿರಾಮಯ ನಿರ್ಮಲ ನಿಃಕಲ
ಜ್ಞಾನನಿರ್ಭೇದ್ಯ ನಿರುಪಾಧಿಕ ನಿರವಸ್ಥ ನಿರಾವರಣ ಅದ್ವೆ ೈತಾನಂದ ಸಂಪೂರ್ಣವನ್ನುಳ್ಳ ಪರಶಿವ, ತಾನೆ
ಪರಮೇಶ್ವರನಾದನು. ಆ ಪರಮೇಶ್ವರನಿಂದ ಸದಾಶಿವನಾದನು. ಸದಾಶಿವನಿಂದ ಈಶ್ವರನಾದನು. ಈಶ್ವರನಿಂದ
ಮಹೇಶ್ವರನಾದನು. ಮಹೇಶ್ವರನಿಂದ ರುದ್ರನಾದನು. ರುದ್ರನಿಂದ ವಿಷ್ಣು ಹುಟ್ಟಿದನು. ವಿಷ್ಣುವಿನಿಂದ ಬ್ರಹ್ಮ ಹುಟ್ಟಿದನು.
ಬ್ರಹ್ಮನಿಂದ ಸಕಲ ಜಗತ್ತೆಲ್ಲಾ ಆಯಿತು. ಆಧಾರಚಕ್ರಕ್ಕೆ ಬ್ರಹ್ಮನಧಿದೇವತೆ; ಸ್ವಾಧಿಷಾ*ನಚಕ್ರಕ್ಕೆ ವಿಷ್ಣುವಧಿದೇವತೆ;
ಮಣಿಪೂರಕಚಕ್ರಕ್ಕೆ ರುದ್ರನಧಿದೇವತೆ; ಅನಾಹತಚಕ್ರಕ್ಕೆ ಈಶ್ವರನಧೀದೇವತೆ ವಿಶುದ್ಧಿಚಕ್ರಕ್ಕೆ ಸದಾಶಿವನಧಿದೇವತೆ;
ಆಜ್ಞಾಚಕ್ರಕ್ಕೆ ಪರಮೇಶ್ವರನಧಿದೇವತೆ. ಆಧಾರಸ್ಥಾನದ ಬ್ರಹ್ಮತತ್ವಕ್ಕೆ ಆಚಾರಲಿಂಗವ ಸ್ವಾಯತವ ಮಾಡಿ ಸ್ವಾಧಿಷಾ*ನದ
ವಿಷ್ಣುತತ್ವಕ್ಕೆ ಗುರುಲಿಂಗವ ಸ್ವಾಯತವ ಮಾಡಿ ಮಣಿಪೂರಕಸ್ಥಾನದ ರುದ್ರತತ್ವಕ್ಕೆ ಶಿವಲಿಂಗವ ಸ್ವಾಯತವ ಮಾಡಿ
ಅನಾಹತಸ್ಥಾನದ ಈಶ್ವರತತ್ವಕ್ಕೆ ಜಂಗಮಲಿಂಗವ ಸ್ವಾಯತವ ಮಾಡಿ ವಿಶುದ್ಧಿಸ್ಥಾನದ ಸದಾಶಿವತತ್ವಕ್ಕೆ ಪ್ರಸಾದಲಿಂಗವ
ಸ್ವಾಯತವ ಮಾಡಿ ಆಜ್ಞಾಸ್ಥಾನದ ಪರಮೇಶ್ವರನೆಂಬ ತತ್ವಕ್ಕೆ ಮಹಾಲಿಂಗವ ಸ್ವಾಯತವ ಮಾಡಿ ಪರಿಪೂರ್ಣಲಿಂಗವು ತಾನೆ
ಸರ್ವಾಂಗದಲ್ಲಿ ಸ್ವಾಯತವಾಗಲು, ಆ ಶರಣನ ಸರ್ವಾಂಗವು ನಿರುಪಮ ಲಿಂಗಸ್ವಾಯತವಾಗಿ ನಿರವಯಸ್ಥಲ
ವೇದ್ಯವಾಯಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ಆದಿಯಾಧಾರವ ಮುಟ್ಟದ ನಾದ ಬಿಂದು ಕಳಾತೀತನ ಕಂಡೆನು, ಅದು ಆದಿ ಮಹಾಘನಲಿಂಗ ನೋಡಾ. ಅದು ಎನ್ನಂಗ,
ಪ್ರಾಣದಲ್ಲಿ ನಿಂದು ಲಿಂಗ ಜಂಗಮವಾಯಿತ್ತು ನೋಡಾ. ಲಿಂಗವೆ ಅಂಗವಾಗಿ, ಜಂಗಮವೆ ಪ್ರಾಣವಾಗಿ ಪರಶಿವಕಳೆಯೆ
ಕಾರಣವಾಗಿಪ್ಪ ಲಿಂಗಾಂಗಿಯ ಮಾಹೇಶ್ವರನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
ಭಕ್ತಾದ್ಯೆ ೈಕ್ಯಾಂತವಹ ಷಡಂಗಕ್ಕೆ ಭಕ್ತನಂಗವೇ ಆದಿಯಾಗಿ ಆ ಭಕ್ತಂಗೆ ಪೃಥ್ವಿಯೆ ಅಂಗವಾಗಿ ಆ ಪೃಥ್ವಿಯ ಅಂಗವನುಳ್ಳ
ಭಕ್ತನಲ್ಲಿಯೇ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಭಕ್ತನಂಗದಲ್ಲಿಯೇ
ಆಚಾರಲಿಂಗಸ್ವಾಯತವಾಗಿ ಆ ಆಚಾರಲಿಂಗದಲ್ಲಿಯೇ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ
ಮಹಾಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಆಚಾರಲಿಂಗವೇ ಸರ್ವಕಾರಣವಾಗಿ ಇಂತೀ ಷಡ್ವಿಧಲಿಂಗದಲ್ಲಿಯೇ
ಬೆರಸಿ ಬೇರಿಲ್ಲದಿರಬಲ್ಲರೆ ಭಕ್ತನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ಲಿಂಗ ಜಂಗಮ ಭಕ್ತನೆಂದು ಈ ಮೂರಾದುದು ಒಂದೇ ವಸ್ತು ನೋಡ. ಚಿನ್ನಾದ ಸ್ವರೂಪವೇ ಜಂಗಮ. ಚಿದ್ಬಿಂದು ಸ್ವರೂಪವೇ
ಲಿಂಗ. ಈ ನಾದ ಬಿಂದುವಿಂಗೆ ಆಧಾರವಾದ ಚಿತ್ಕಲಾ ಸ್ವರೂಪವೇ ಚಿನ್ಮಯ ಭಕ್ತನು ನೋಡ. ಶಿವಂಗೂ ಭಕ್ತಂಗೂ
ಭಿನ್ನಮುಂಟೆ? ಆ ಭಕ್ತಿಗೂ ಭಕ್ತಂಗೂ ಭೇದವುಂಟೆ? ಇಲ್ಲವಾಗಿ- ದೇವ ಬೇರೆ ಭಕ್ತ ಬೇರೆ ಎಂಬ ಕರ್ಮಕಾಂಡಿಗಳ
ಮತವಂತಿರಲಿ. ನಿಮ್ಮ ಶರಣರಿಗೆ ನಿಮಗೆ ಭಿನ್ನವಿಲ್ಲವೆಂದೆನು ಕಾಣ. ಶರಣನೇ ಸಾಕ್ಷಾತ್ ಶಿವ ತಾನೇ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
ಪ್ರಾಣನ ಪೂರ್ವಾಶ್ರಯವಳಿದು ಲಿಂಗ ನೆನಹು ಸಂಬಂಧಿಸಿದ ಪ್ರಾಣಲಿಂಗಿಯ ಅಂಗವು ಹೇಂಗಿಹುದಯ್ಯ ಎಂದರೆ: ಲಿಂಗ
ನೆನಹೆ ಹಿಂಚಾಗಿ ಲಿಂಗ ನೆನಹೆ ಮುಂಚಾಗಿಹುದಯ್ಯ. ಅಂಗವಿಷಯಂಗಳೆ ಹಿಂಚಾಗಿ ಲಿಂಗವಿಷಯಂಗಳೆ
ಮುಂಚಾಗಿಪ್ಪುದಯ್ಯ. ಆವಾಗಲು ಲಿಂಗಸಹಿತವಾಗಿಯೆ ಇಂದ್ರಿಯಂಗಳ ಭೋಗವ ಭೋಗಿಸುತಿಪ್ಪುದಯ್ಯ. ಭೋಗಿಸುವ
ಕ್ರಮವೆಂತುಟಯ್ಯ ಎಂದಡೆ: ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರವೆಂಬ ಮುಖದ್ವಾರಂಗಳಲ್ಲಿ ಆಚಾರಲಿಂಗ ಗುರುಲಿಂಗ
ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗವೆಂಬ ಲಿಂಗಸ್ಥಲಂಗಳ ಮೂರ್ತಿಗೊಳಿಸಿ ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಈ
ಪದಾರ್ಥಂಗಳ ಲಿಂಗಮುಖಕ್ಕೆ ನಿವೇದಿಸಿ ಆ ಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತಿಪ್ಪಾತನೇ ಪ್ರಾಣಲಿಂಗಿ
ಲಿಂಗಪ್ರಾಣಿಯಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
ಆಕಾಶದೊಳಗಣ ಆಕಾಶ, ಜ್ಞಾನ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಆಕಾಶದೊಳಗಣ ವಾಯು, ಮನಸ್ಸು; ಅಲ್ಲಿ ಜಂಗಮಲಿಂಗ
ಸ್ವಾಯತ. ಆಕಾಶದೊಳಗಣ ಅಗ್ನಿ, ಅಹಂಕಾರ; ಅಲ್ಲಿ ಶಿವಲಿಂಗ ಸ್ವಾಯತ. ಆಕಾಶದೊಳಗಣ ಅಪ್ಪು, ಚಿತ್ತ; ಅಲ್ಲಿ ಗುರುಲಿಂಗ
ಸ್ವಾಯತ. ಆಕಾಶದೊಳಗಣ ಪೃಥ್ವಿ, ಬುದ್ಧಿ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಪಂಚಕರಣಂಗಳಲ್ಲಿಯೂ ಲಿಂಗವೇ
ಸ್ವಾಯತವಾಗಿಪ್ಪುದಯ್ಯ. ವಾಯುವಿನೊಳಗಣ ಆಕಾಶ, ಸಮಾನವಾಯು; ಅಲ್ಲಿ ಪ್ರಸಾದಲಿಂಗ ಸ್ವಾಯತ,
ವಾಯುವಿನೊಳಗಣ ಅಗ್ನಿ, ಸಮಾನವಾಯು; ಅಲ್ಲಿ ಪ್ರಸಾದಲಿಂಗ ಸ್ವಾಯತ. ವಾಯುವಿನೊಳಗಣ ಅಗ್ನಿ, ಉದಾನವಾಯು;
ಅಲ್ಲಿ ಶಿವಲಿಂಗ ಸ್ವಾಯತ. ವಾಯುವಿನೊಳಗಣ ಅಪ್ಪು, ಅಪಾನವಾಯು; ಅಲ್ಲಿ ಗುರುಲಿಂಗ ಸ್ವಾಯತ. ವಾಯುವಿನೊಳಗಣ
ಪೃಥ್ವಿ, ಪ್ರಾಣವಾಯು; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ವಾಯುಪಂಚಕದಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ.
ಅಗ್ನಿಯೊಳಗಣ ಅಗ್ನಿ, ನೇತ್ರೇಂದ್ರಿಯ; ಅಲ್ಲಿ ಶಿವಲಿಂಗ ಸ್ವಾಯತ. ಅಗ್ನಿಯೊಳಗಣ ಆಕಾಶ, ಶ್ರೋತ್ರೇಂದ್ರಿಯ; ಅಲ್ಲಿ
ಪ್ರಸಾದಲಿಂಗ ಸ್ವಾಯತ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ; ಅಲ್ಲಿ ಜಂಗಮಲಿಂಗ ಸ್ವಾಯತ. ಅಗ್ನಿಯೊಳಗಣ ಅಪ್ಪು,
ಜಿಹ್ವೇಂದ್ರಿಯ; ಅಲ್ಲಿ ಗುರುಲಿಂಗ ಸ್ವಾಯತ. ಅಗ್ನಿಯೊಳಗಣ ಪೃಥ್ವಿ, ಘ್ರಾಣೇಂದ್ರಿಯ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ
ಬುದ್ಧೀಂದ್ರಿಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಅಪ್ಪುವಿನೊಳಗಣ ಅಪ್ಪು, ರಸ; ಅಲ್ಲಿ ಗುರುಲಿಂಗ ಸ್ವಾಯತ.
ಅಪ್ಪುವಿನೊಳಗಣ ಆಕಾಶ, ಶಬ್ದ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಅಪ್ಪುವಿನೊಳಗಣ ವಾಯು, ಸ್ಪರ್ಶನ; ಅಲ್ಲಿ ಜಂಗಮಲಿಂಗ
ಸ್ವಾಯತ. ಅಪ್ಪುವಿನೊಳಗಣ ಅಗ್ನಿ ರೂಪು; ಅಲ್ಲಿ ಶಿವಲಿಂಗ ಸ್ವಾಯತ. ಅಪ್ಪುವಿನೊಳಗಣ ಪೃಥ್ವಿ ಗಂಧ; ಅಲ್ಲಿ ಆಚಾರಲಿಂಗ
ಸ್ವಾಯತ. ಹೀಂಗೆ ಪಂಚವಿಷಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಪೃಥ್ವಿಯೊಳಗಣ ಪೃಥ್ವಿ, ಪಾಯ್ವಿಂದ್ರಿಯ;
ಅಲ್ಲಿ ಆಚಾರಲಿಂಗ ಸ್ವಾಯತ. ಪೃಥ್ವಿಯೊಳಗಣ ಆಕಾಶ, ವಾಗಿಂದ್ರಿಯ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಪೃಥ್ವಿಯೊಳಗಣ
ವಾಯು, ಪಾಣೀಂದ್ರಿಯ; ಅಲ್ಲಿ ಜಂಗಮಲಿಂಗ ಸ್ವಾಯತ. ಪೃಥ್ವಿಯೊಳಗಣ ಅಗ್ನಿ, ಪಾದೇಂದ್ರಿಯ; ಅಲ್ಲಿ ಶಿವಲಿಂಗ ಸ್ವಾಯತ.
ಪೃಥ್ವಿಯೊಳಗಣ ಅಪ್ಪು, ಗುಹ್ವೇಂದ್ರಿಯ; ಅಲ್ಲಿ ಗುರುಲಿಂಗ ಸ್ವಾಯತ. ಹೀಂಗೆ ಪಂಚಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೇ
ಸ್ವಾಯತವಾಗಿಪ್ಪುದಯ್ಯ. ಆತ್ಮನೊಳಗಣ ಆತ್ಮ,ಶುದ್ಧಾತ್ಮ; ಅಲ್ಲಿ ಮಹಾಲಿಂಗ ಸ್ವಾಯತ. ಆತ್ಮನೊಳಗಣ ಆಕಾಶ, ಸುಜ್ಞಾನ;
ಅಲ್ಲಿ ಪ್ರಸಾದಲಿಂಗ ಸ್ವಾಯತ. ಆತ್ಮನೊಳಗಣ ವಾಯು, ಸುಮನ; ಅಲ್ಲಿ ಜಂಗಮಲಿಂಗ ಸ್ವಾಯತ. ಆತ್ಮನೊಳಗಣ ಅಗ್ನಿ,
ನಿರಹಂಕಾರ; ಅಲ್ಲಿ ಶಿವಲಿಂಗ ಸ್ವಾಯತ. ಆತ್ಮನೊಳಗಣ ಅಪ್ಪು, ಸುಬುದ್ಧಿ; ಅಲ್ಲಿ ಗುರುಲಿಂಗ ಸ್ವಾಯತ. ಆತ್ಮನೊಳಗಣ ಪೃಥ್ವಿ,
ಸುಚಿತ್ತ; ಅಲ್ಲಿ ಆಚಾರಲಿಂಗ ಸ್ವಾಯತ. ಇಂತೀ ಪ್ರಾಣಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಇಂತೀ ಅಂಗ
ಪ್ರಾಣಂಗಳಲ್ಲಿಯು ಲಿಂಗವೇ ಎಡೆಕಡೆಯಿಲ್ಲದ ಪ್ರಭೇದವನರಿದಾತನೆ ಸರ್ವಾಂಗಲಿಂಗಿ ಕಾಣಾ, ಮಹಾಲಿಂಗಗುರು
ಶಿವಸಿದ್ಧೇಶ್ವರ ಪ್ರಭುವೇ.
--------------
ವಾಯುವೇ ಅಂಗವಾದ ಪ್ರಾಣಲಿಂಗಿಯಲ್ಲಿಯೆ ಶರಣ ಐಕ್ಯ ಭಕ್ತ ಮಹೇಶ್ವರ ಪ್ರಸಾದಿಯಪ್ಪ ಅಂಗಪಂಚಕವು ಗರ್ಭೀಕೃತವಾಗಿ
ಆ ಪ್ರಾಣಲಿಂಗಿಗೆ ಜಂಗಮಲಿಂಗ ಸ್ವಾಯತವಾಗಿ ಆ ಜಂಗಮಲಿಂಗದಲ್ಲಿಯೇ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ
ಗುರುಲಿಂಗ ಶಿವಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಜಂಗಮಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ
ಬೆರಸಿ ಬೇರಿಲ್ಲದಿರಬಲ್ಲರೆ ಪ್ರಾಣಲಿಂಗಿಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
--------------
--------------
--------------
--------------
ಆತ್ಮನೇ ಅಂಗವಾದ ಐಕ್ಯನಲ್ಲಿ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನಪ್ಪ ಅಂಗಪಂಚಕವು ಗರ್ಭೀಕೃತವಾಗಿ, ಆ
ಐಕ್ಯಂಗೆ ಮಹಾಲಿಂಗ ಸಂಬಂಧವಾಗಿ ಆ ಮಹಾಲಿಂಗದಲ್ಲಿಯೇ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ, ಮಹಾಲಿಂಗವೇ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ
ಬೇರಿಲ್ಲದಿರಬಲ್ಲರೆ ಐಕ್ಯನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ಅಂಗಕ್ಕೆ ಆಚಾರವೆ ಆಶ್ರಯ. ಆಚಾರಕ್ಕೆ ಪ್ರಾಣವೆ ಆಶ್ರಯ. ಪ್ರಾಣಕ್ಕೆ ಜ್ಞಾನವೆ ಆಶ್ರಯ. ಜ್ಞಾನಕ್ಕೆ ಲಿಂಗವೆ ಆಶ್ರಯ. ಲಿಂಗಕ್ಕೆ
ಜಂಗಮವೆ ಆಶ್ರಯ. ಇಂತೀ ಪಂಚಲಕ್ಷಣ ಪರಿಪೂರ್ಣವಾಗಿರಬಲ್ಲಡೆ ಸದ್ಭಕ್ತನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ
ಪ್ರಭುವೇ.
--------------
ಲಿಂಗಕ್ಕೆ ನಾದವಿಲ್ಲ. ಅದೇನು ಕಾರಣ? ನಿಃಶಬ್ದಮಯವಾದ ಕಾರಣ. ಜಂಗಮಕ್ಕೆ ಬಿಂದುವಿಲ್ಲ. ಅದೇನು ಕಾರಣ? ಅದು
ಶಬ್ದಮಂತ್ರೋಪದೇಶವನುಳ್ಳುದಾದ ಕಾರಣ. ಅದುಕಾರಣ, ನಾದ ಸ್ವರೂಪವೇ ಜಂಗಮ; ಬಿಂದುಸ್ವರೂಪವೇ ಲಿಂಗ.
ಇದುಕಾರಣ, ಲಿಂಗವೇ ಜಂಗಮದ ಲಿಂಗ; ಆ ಜಂಗಮವೇ ಲಿಂಗದ ಪ್ರಾಣ. ಆ ನಾದ ಬಿಂದು ಸ್ವರೂಪ ಲಿಂಗವಪ್ಪ ಜಂಗಮಕ್ಕೆ
ಆಧಾರವಪ್ಪ ಚಿತ್ಕಲಾ ಸ್ವರೂಪನೇ ಭಕ್ತನು. ಈ ನಾದ ಬಿಂದು ಕಳೆಗಳ ಕೂಡಿಕೊಂಡಿಪ್ಪ ಶಿವತತ್ವವು, ತಾನೇ ಲಿಂಗ ಜಂಗಮ
ಭಕ್ತನೆಂದು ಮೂರುತೆರನಾದನು ನೋಡಾ. ಈ ಮೂರು ಒಂದೆಯೆಂದು ಅರಿದೆನು ನೋಡಾ. ಎನ್ನ ಶರಣತ್ವದ ಆದಿಯನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
--------------
ಗುರು ಲಿಂಗ ಜಂಗಮದ ಭಕ್ತರೆಂದು ಗುಣಕಥನವ ನುಡಿದುಕೊಂಡು ಎಮಗೆ ಅನ್ಯದೈವವಿಲ್ಲವೆಂಬ ಸೋರೆಯ ಬಣ್ಣದ
ಅಣ್ಣಗಳು ನೀವು ಕೇಳಿಭೋ. ನೀವರಿಯದಿದ್ದರೆ ನಾ ಹೇಳಿಹೆ ಕೇಳಿಭೋ. ಹೆಣ್ಣೊಂದು ಭೂತ; ಮಣ್ಣೊಂದು ಭೂತ; ಹೊನ್ನೊಂದು
ಭೂತ. ಹೆಣ್ಣು ನಿಮ್ಮದೆಂಬಿರಿ; ಮಣ್ಣು ನಿಮ್ಮದೆಂಬಿರಿ; ಹೊನ್ನು ನಿಮ್ಮದೆಂಬಿರಿ. ಅವೇ ಪ್ರಾಣವಾಗಿ ಸಾವುತ್ತ ಹುಟ್ಟುತ್ತಿಪ್ಪಿರಿ. ಆ
ಭೂತ ನಿಮ್ಮಹಿಡಿದು, ಹಿಸಿಕಿ ಕೊಂದು ಕೂಗಿ, ತಿಂದು ತೇಗಿ, ಹೀರಿ ಹಿಪ್ಪೆಯ ಮಾಡಿ ಗಾರುಮಾಡುತಿಪ್ಪವು ಕಾಣಿಭೋ. ಅ[ವ]
ನೀವು ಹಿಡಿದು ಕೀರ್ತಿಸುತಿರ್ದು ಎಮಗೆ ಅನ್ಯದೈವವಿಲ್ಲೆಂಬ ಕುನ್ನಿಮನುಜರ ಮೆಚ್ಚುವನೇ? ಮಹಾಲಿಂಗಗುರು ಶಿವಸಿದ್ಧೇಶ್ವರ
ಪ್ರಭುವೇ.
--------------
--------------
ಗುರು ಅಳಿದನು ಉಳಿದನು ಎಂದೆಂಬರಿ ಗುರು ಅಳಿದರೆ ಜಗ ಉಳಿಯಬಲ್ಲುದೆ? `ಸ್ಥಾವರಂ ಜಂಗಮಾಧಾರಂ ನಿರ್ಮಲಂ
ಸ್ಥಿರಮೇವ ಚ| ಜಗದ್ವಂದಿತಪಾದಾಯ ತಸ್ಮೆ ೈಶ್ರೀ ಗುರುವೇ ನಮಃ||' ಎಂದುದಾಗಿ, ಗುರು ಅಳಿವನೂ ಅಲ್ಲ; ಉಳಿವನೂ
ಅಲ್ಲ. ನಿಮ್ಮ ಭ್ರಾಂತಿಯೇ ಅಳಿದನು ಉಳಿದನು ಎಂದು ಕುತ್ತಗೊಳಿಸುತ್ತಿದೆಯಲ್ಲ. ಈ ವಿಕಾರದಲ್ಲಿ ಮುಳುಗಿದವನ
ಶಿಷ್ಯನೆಂದೆಂಬೆನೆ? ಎನ್ನೆನಯ್ಯ. ಗುರು ಸತ್ತನೆಂದು ಬಸುರ ಹೊಯಿಕೊಂಡು ಬಾಯಿಬಡಿಕೊಡು ಅಳುತ್ತಿಪ್ಪ ದುಃಖಜೀವಿಗಳಿಗೆ
ಗುರುವಿಲ್ಲ; ಗುರುವಿಲ್ಲವಾಗಿ ಲಿಂಗವಿಲ್ಲ; ಲಿಂಗವಿಲ್ಲವಾಗಿ ಜಂಗಮವಿಲ್ಲವಯ್ಯಾ. ಈ ತ್ರಿವಿಧವೂ ಇಲ್ಲವಾಗಿ, ಪಾದೋದಕ
ಪ್ರಸಾದವೂ ಇಲ್ಲವಯ್ಯ. ಪಾದೋದಕ ಪ್ರಸಾದವಿಲ್ಲವಾಗಿ, ಮುಕ್ತಿಯೆಂಬುದು ಎಂದೆಂದಿಗೂ ಇಲ್ಲವಯ್ಯಾ, ಮಹಾಲಿಂಗಗುರು
ಶಿವಸಿದ್ಧೇಶ್ವರ ಪ್ರಭುವೇ.
--------------
--------------
ಮಣ್ಣ ಮಚ್ಚಿ ಮನೆಯ ಮಚ್ಚಿದವಂಗೆ ಗುರುವಿನ ಮಚ್ಚೆಲ್ಲಿಯದೋ? ಹೆಣ್ಣ ನಚ್ಚಿ ಹೊನ್ನ ನಚ್ಚಿದವಂಗೆ ಲಿಂಗದ ಮಚ್ಚೆಲ್ಲಿಯದೋ?
ಹೆಂಡತಿ ಮಕ್ಕಳು ಬಂಧುಗಳು ಹಿತರೆಂದು ಮಚ್ಚಿದವರಿಗೆ ಜಂಗಮದ ಮಚ್ಚೆಲ್ಲಿಯದೋ? ಗುರು ಲಿಂಗ ಜಂಗಮವ
ನಂಬದವರಿಗೆ ಮುಕ್ತಿಯೆಂಬುದು ಕನಸಿನಲ್ಲಿಯೂ ಇಲ್ಲವಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನಿಮ್ಮ ನಂಬದ
ಪಾಪಿಗಳಿಗೆ.
--------------
--------------
--------------
--------------
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
--------------
--------------
--------------
--------------
ಸದ್ರೂಪವೇ ಸಂಗನಬಸವಣ್ಣ ನೋಡ. ಚಿದ್ರೂಪವೇ ಚೆನ್ನಬಸವಣ್ಣ ನೋಡ. ಆನಂದ ಸ್ವರೂಪವೇ ಪ್ರಭುದೇವರು ನೋಡ.
ಇದು ಕಾರಣ, ಸದ್ರೂಪವಾದ ಸಂಗನ ಬಸವಣ್ಣನೇ ಗುರು; ಚಿದ್ರೂಪವಾದ ಚೆನ್ನಬಸವಣ್ಣನೇ ಲಿಂಗ; ಆನಂದಸ್ವರೂಪವಾದ
ಪ್ರಭುದೇವರೇ ಜಂಗಮವು ನೋಡ. ನಿತ್ಯ ನಿರಂಜನ ಪರತತ್ವ ತಾನೆ ಮೂರು ತೆರನಾಯಿತ್ತು ನೋಡಾ, ಮಹಾಲಿಂಗಗುರು
ಶಿವಸಿದ್ಧೇಶ್ವರ ಪ್ರಭುವೇ.
--------------
--------------
ಕೈಯಲ್ಲಿ ಹಣ್ಣಿದ್ದಂತೆ ಮರನನೇರಿ, ಕೊಂಬ ಬಾಗಿಸಿ ಕಾಯ ಕೊಯಿವ ಅರೆಮರುಳನಂತೆ ಅನಾದಿಮೂಲದೊಡೆಯ ತನ್ನ
ಕರಸ್ಥಲ ಮನಸ್ಥಲದಲ್ಲಿಪ್ಪುದ ತಾನರಿಯದೆ ಬೇರೆ ಲಿಂಗವುಂಟು, ಬೇರೆ ಕ್ಷೇತ್ರವುಂಟು ಎಂದು ಹಲವು ಲಿಂಗಕ್ಕೆ ಹರಿದು
ಹಂಬಲಿಸುವ ಈ ಸೂಳೆಗೆ ಹುಟ್ಟಿದವರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪ್ರಸಾದವಿಲ್ಲ ಮುಕ್ತಿಯೆಂಬುದು ಎಂದೆಂದಿಗೂ
ಇಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
--------------
ಅರ್ಥಪ್ರಾಣಾಭಿಮಾನವನು ಗುರು ಲಿಂಗ ಜಂಗಮದ ಮುಖಕ್ಕೆ ಸಮರ್ಪಿಸಿ, ಆ ಗುರು ಲಿಂಗ ಜಂಗಮವೆ ತನು ಮನ
ಪ್ರಾಣವಾಗಿರಬಲ್ಲರೆ, ಭಕ್ತನ ಸ್ಥಲವಿದೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
--------------
--------------
--------------
ಆಚಾರಲಿಂಗ ಗುರುಲಿಂಗ ಶಿವಲಿಂಗ ಇವು ಮೂರು ಇಷ್ಟಲಿಂಗ. ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಇವು ಮೂರು
ಪ್ರಾಣಲಿಂಗ. ಇಷ್ಟಲಿಂಗವು ಸತ್ಕಿ ್ರಯಾ ಸ್ವರೂಪು. ಪ್ರಾಣಲಿಂಗವು ಸುಜ್ಞಾನ ಸ್ವರೂಪು. ಮತ್ತೆ ಕ್ರಿಯಾ ಸ್ವರೂಪವೇ ಲಿಂಗವು.
ಸುಜ್ಞಾನ ಸ್ವರೂಪವೇ ಜಂಗಮವು. ಇದು ಕಾರಣ, ಆಕಾರ ಸ್ವರೂಪವೇ ಲಿಂಗವು; ನಿರಾಕಾರ ಸ್ವರೂಪವೇ ಜಂಗಮವು.
ಆದಿಯೆ ಲಿಂಗವು/; ಅನಾದಿಯೇ ಜಂಗಮವು. ಇದು ಕಾರಣ, ಜಂಗಮ ಪ್ರಸಾದ ಲಿಂಗಕ್ಕಲ್ಲದೆ ಲಿಂಗ ಪ್ರಸಾದ
ಜಂಗಮಕ್ಕೆಂಬುದು ಅದು ಅಜ್ಞಾನ ನೋಡಾ. ಆದಿಲಿಂಗ ಅನಾದಿಜಂಗಮ ಇವೆರಡು ಒಂದಾಗಿ ನಿಂದ ನಿಲುವು ನಿರಾಕಾರ
ಪರವಸ್ತು. ಆ ನಿರಾಕಾರ ಪರವಸ್ತುವನೊಡಗೂಡಿ ನಾನು ನಿರಾಳನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ
ಪ್ರಭುವೇ.
--------------
--------------
--------------
--------------
ಕಲ್ಲ ಶರೀರವ ಧರಿಸಿ ಶಿಲಾಭೋಗಕ್ಕೆ ಬಂದವರು ಕೆಲಬರು: ಕಾಯಕಂಥೆಯ ತೊಟ್ಟು ಕರ್ಮಭೋಗಕ್ಕೆ ಬಂದವರು ಕೆಲಬರು.
ಕಲ್ಲಕಂಥೆಯ ತೊಟ್ಟು ಲಿಂಗವೆನಿಸಿಕೊಂಡು ಕಾಯಕಂಥೆಯ ತೊಟ್ಟು ಜಂಗಮವೆನಿಸಿಕೊಂಡು ಲೋಗರ ಉಪಚಾರಕ್ಕೆ ಬಂದ
ಭೋಗರುದ್ರರೆಲ್ಲ ಆಗು ಹೋಗಿಂಗೆ ಗುರಿ ನೋಡಾ. ಅದೇನು ಕಾರಣವೆಂದರೆ: ತಮ್ಮಾದಿಯ ಶಿವತತ್ವವ ಭೇದಿಸಿ
ಘನಲಿಂಗಪದಸ್ಥರು ತಾವೆಂದೆರಿಯದೆ, ಶಿವಪದಕ್ಕೆ ಅನ್ಯವಾದ ಗಣೇಶ್ವರಪದವೆಂಬ ಗರ್ವಪರ್ವತವಡರಿ ಕೆಟ್ಟರು ನೋಡ,
ತಮ್ಮ ನಿಜಪದವನರಿಯದೆ. ಇದು ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೆಂಬ ನಿಜಲಿಂಗಜಂಗಮವೊಂದಾದ
ಪದವು [ಈ] ಒಂದರ ಹಾದಿಯದಲ್ಲ ಬಿಡಾ, ಮರುಳೇ.
--------------
ಸಕಲ ಗುರು, ಸಕಲ ನಿಃಕಲ ಜಂಗಮ, ನಿಃಕಲ ಲಿಂಗ ಇಂತೀ ತ್ರಿವಿಧಲಿಂಗಕ್ಕೆ ಮಾಡುವ ಭಕ್ತಿಯ ಕ್ರಮವೆಂತೆಂದೆಡೆ: ಲಿಂಗವು
ಜಂಗಮವು ಗುರುವಿನಲ್ಲಿ ಉಂಟೆಂದು ತನು ಮನ ಧನವ ಸವೆದು ಮಾಡುವುದು ಗುರುಭಕ್ತಿ. ಗುರುವು ಜಂಗಮವು ಲಿಂಗದಲ್ಲಿ
ಉಂಟೆಂದು ಮನ ಧನ ತನು ಮುಟ್ಟಿ ಮಾಡುವುದು ಲಿಂಗಭಕ್ತಿ. ಗುರುವು ಲಿಂಗವು ಜಂಗಮದಲ್ಲಿ ಉಂಟೆಂದು ಧನ ಮನ
ತನುವ ಸವೆದು ಮಾಡುವುದು ಜಂಗಮಭಕ್ತಿ. ಈ ತ್ರಿವಿಧಲಿಂಗಕ್ಕೆ ತ್ರಿವಿಧ ಪ್ರಕಾರದಲ್ಲಿ ಮಾಡಿ ಕೂಡಿ ವಿರಾಜಿಸುವಾತನೆ
ಶಿವಭಕ್ತನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------