Professional Documents
Culture Documents
Ghs Upayukthasopputh0000drva
Ghs Upayukthasopputh0000drva
ಉಪಯುಕ
ಔಷಧೀಯ ಗುಣವುಳ್ಳ
ಉಪಯುಕ್ತ ಸೊಪ್ಪು-ತರಕಾರಿಗಳು
ಲೇಖಕರು:
ಪ್ರಕಾಶಕರು
ದಿವ್ಯಚಂದ್ರ ಪ್ರಕಾಶನ
ೆ,
ನಂ. 45, 1 ನೇ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತ
್ಬೋರ್ಡ್ ಕಾಲೋನಿ
ಪಾಪಣ್ಣ ನ ತೋಟ, ಕರ್ನಾಟಕ ಹೌಸಿಂಗ
ಗಳೂರು-560 079
2ನೇ ಹಂತ, ಬಸವೇಶ್ವ ರನಗರ, ಬೆಂ
“Qushadiya Gunavulla UPAYUKTHA SOPPU-THARAKARIGALU”-
written by Dr. Vasundhara Bhupathi and Published by
Smt. B. M. Komala for M/s. Divyachandra Prakashana, No. 45,
I Main, 2nd Cross, Papanna Garden, KHB Colony, 11 Stage,
Basaveshwaranagar, Bangalore - 560 079. Ph : 3404627
ಹಕ್ಕುಗಳು: ಲೇಖಕಿಯದು
ಪುಟಗಳು : 112
ಸೊಪ್ಪಿನ ಉಪಯುಕ್ತತೆ
ಸೊಪ್ಪುಗಳನ್ನು ಆಹಾರದ ಜೊತೆಗೆ ಅಧಿಕವಾಗಿ ಬಳಸುವುದರಿಂದ
ಪಚನಶಕ್ತಿ ವೃದ್ದಿಯಾಗುತ್ತದೆಯಲ್ಲದೇ ಮಲಬದ್ದತೆಯೂ ನಿವಾರಣೆಯಾಗುತ್ತದೆ.
ಸೊಪ್ಪುಗಳಿಂದ ದೇಹಕ್ಕೆ ಬೇಕಾದ ಖನಿಜಾಂಶಗಳು ದೊರೆಯುತ್ತವೆ. ಸೊಪ್ಪುಗಳು
ಅತೀ ಸುಲಭ ಬೆಲೆಯಲ್ಲಿ ಖನಿಜ ಮತ್ತು ಜೀವಸತ್ವಗಳನ್ನು ಪೂರೈಸುವಂತಹವು
ಗಳಾಗಿವೆ. ಸೊಪ್ಪುಗಳು ಆಹಾರದಲ್ಲಿ ವಿಶೇಷ ಸ್ವಾದವನ್ನುಂಟುಮಾಡುತ್ತವೆ.
ಕೆಲವು ಸೊಪ್ಪುಗಳ ಸೇವನೆಯಿಂದ ನಿದ್ರೆಯು ಚೆನ್ನಾಗಿ ಬರುತ್ತದೆ. ಸೊಪ್ಪಿನ
ಸೇವನೆಯಿಂದ ಶರೀರಕ್ಕೆ ಶಕ್ತಿ ಹಾಗೂ ಉಷ್ಣತೆ ದೊರಕುತ್ತದೆ. ಸೊಪ್ಪುಗಳು
ಆಹಾರವಾಗಿ ಮಾತ್ರವಲ್ಲ ಔಷಧಿಯಾಗಿಯೂ ಉಪಯುಕ್ತವಾಗಿವೆ.
ಸೊಪ್ಪುಗಳನ್ನು ಸಾಧ್ಯವಾದಷ್ಟು ತಾಜಾ ಇರುವಾಗಲೇ ಉಪಯೋಗಿಸ
ಬೇಕು. ಸೊಪ್ಪುಗಳನ್ನು ಕತ್ತರಿಸುವುದಕ್ಕೆ ಮುಂಚೆ ಶುದ್ಧವಾದ ನೀರಿನಲ್ಲಿ ತೊಳೆದು
ಸ್ವಚ್ಛಗೊಳಿಸಬೇಕು. ಸೊಪ್ಪುಗಳನ್ನು ಬೇಯಿಸುವಾಗ ಹೆಚ್ಚು ನೀರು ಹಾಕಬಾರದು.
ಅಕಸ್ಮಾತ್ ನೀರು ಹೆಚ್ಚಾಗಿದ್ದರೂ ಆ ನೀರನ್ನು ಚೆಲ್ಲದೇ ಸಾರಿಗೆ ಉಪಯೋಗಿಸಿ
ಕೊಳ್ಳಬೇಕು. ಸೊಪ್ಪನ್ನು ಬೇಯಿಸುವಾಗ ಪಾತ್ರೆಯ ಮೇಲೆ ಮುಚ್ಚಿರಬೇಕು.
ಒಂದು ದಿನಕ್ಕೆ ಸೊಪ್ಪು ಶೇಖರಿಸಿಡಬೇಕೆಂದರೆ ಅವುಗಳನ್ನು ನೀರಿನಲ್ಲಿ ಅದ್ದಿ
ಹಿಂಡಿದ ಬಟ್ಟೆಯೊಳಗೆ ಸುತ್ತಿ ತಂಪಾದ ಸ್ಥಳದಲ್ಲಿರಿಸಬೇಕು. ಸೊಪ್ಪನ್ನು ಹಬೆಯಲ್ಲಿ
ಬೇಯಿಸುವುದರಿಂದ ಪೌಷ್ಟಕಾಂಶಗಳು ನಷ್ಟವಾಗುವುದಿಲ್ಲ.
3. ಪುದೀನಾ
ಉಪಯೋಗ: ಸ
೧0 ಪ್ರತಿದಿನ ಒಂದು ಚಮಚ ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಅಷ್ಟೇ
ಪ್ರಮಾಣದ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ನೆನಪಿನ ಶಕ್ತಿ
ವೃದ್ದಿಯಾಗುತ್ತದೆ.
[0 ಬಾಯಿಹುಣ್ಣು ಇರುವಾಗ ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಬಾಯಿ
ಮುಕ್ಕಳಿಸಬೇಕು.
50 ಒಂದು ಲೋಟ ಮಜ್ಜಿಗೆಯಲ್ಲಿ ಎರಡು ಚಮಚ ಕೊತ್ತಂಬರಿ ಸೊಪ್ಪಿನ
ತಾಜಾ ರಸವನ್ನು ದಿನಕ್ಕೆ ಎರಡು ಸಲ ಸೇವನೆ ಮಾಡುವುದರಿಂದ ಅಜೀರ್ಣ,
ವಾಂತಿ ಹಾಗೂ ಬಿಕ್ಕಳಿಕೆ ನಿವಾರಣೆಯಾಗುತ್ತದೆ.
೧ ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಹಸಿಯಾಗಿ ತಿನ್ನುವುದರಿಂದ ಹಲ್ಲು
ಹುಳುಕಾಗುವುದಿಲ್ಲ.
26 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು
ಉಪಯೋಗ:
ರ ಈ ಸೊಪ್ಪಿನ ಸೇವನೆಯಿಂದ ಹಸಿವು ಹೆಚ್ಚುತ್ತದೆ. ಮಲಬದ್ಧತೆಯಿಂದ
ಬಳಲುವವರು ಬಸಳೆಸೊಪ್ಪಿನ ಪಲ್ಕ ಸೇವನೆ ಮಾಡಬೇಕು.
0 ದೇಹದ ತೂಕ ಹೆಚ್ಚಿಸಬೇಕೆನ್ನುವವರು ಈ ಸೊಪ್ಪನ್ನು ಸೇವಿಸಬೇಕು.
೧ ಆಮಶಂಕೆಯಾಗುತ್ತಿದ್ದರೆ ಬಸಳೆಸೊಪ್ಪಿನ ರಸ ಸೇವಿಸಬೇಕು. ಸ್ವರ
ಒಡೆದಿದ್ದರೆ ಈ ಸೊಪ್ಪಿನ ರಸ ಸೇವನೆ ಮಾಡಬೇಕು.
೧ ಬಸಳೆಸೊಪ್ಪು ಜ್ವರ ನಿವಾರಕ, ಶಕ್ತಿವರ್ಧಕವಾಗಿಯೂ ಕೆಲಸಮಾಡುತ್ತದೆ.
೧ ಎಲೆಯನ್ನು ಜಜ್ಜಿ ಕುರುಗಳ ಮೇಲೆ ಹಚ್ಚುವುದರಿಂದ ಕುರು ಬೇಗನೆ
ಪಕ್ಚವಾಗುತ್ತವೆ.
[] ಸುಟ್ಟಗಾಯ ಹಾಗೂ ಬೊಬ್ಬೆಗಳಾಗಿರುವಾಗ ಬಸಳೆ ಎಲೆಯ ರಸವನ್ನು
ಬೆಣ್ಣೆಯಲ್ಲಿ ಮಿಶ್ರಮಾಡಿ ಹಚ್ಚಬೇಕು.
೧0 ಮೇಲಿಂದ ಮೇಲೆ ತಲೆನೋವು ಬರುತ್ತಿದ್ದರೆ ಬಸಳೆಯ ಲೋಳೆಯಂತಹ
ರಸವನ್ನು ಹಣೆಯ ಮೇಲೆ ಲೇಪಿಸಿಕೊಳ್ಳಬೇಕು.
ಉಪಯೋಗ:
೧0 ದೀರ್ಥಕಾಲದ ಬಾಯಿಹುಣ್ಣಿನಿಂದ ಬಳಲುವವರು ಹಕ್ಕರಿಕೆ ಸೊಪ್ಪಿನ
ಎಲೆಗಳನ್ನು ಅಗಿದು ತಿನ್ನಬೇಕು.
ರ ರಾತ್ರಿ ಕುರುಡಿನಿಂದ ಬಳಲುವವರು ಈ ಸೊಪ್ಪನ್ನು ಹೆಚ್ಚು
ಉಪಯೋಗಿಸಬೇಕು.
೧ ಬಿಳಿ ಸೆರಗಿನ ಸಮಸ್ಯೆ ಇರುವ ಸ್ತ್ರೀಯರು ಈ ಸೊಪ್ಪನ್ನು ಸೇವಿಸಬೇಕು.
[0 ಮಲಬದ್ಧತೆಯಿರುವವರು ಸೊಪ್ಪಿನ ರಸ ಇಲ್ಲವೇ ಸೊಪ್ಪನ್ನು
ಹಸಿಯಾಗಿಯೇ ತಿನ್ನಬೇಕು.
32 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು
ಉಪಯೋಗ:
೧0 ಈ ಸೊಪ್ಪಿನ ಸೇವನೆಯಿಂದ ಹಸಿವು ಹೆಚ್ಚುತ್ತದೆ. ಮಲಬದ್ಧತೆಯಿಂದ
ಬಳಲುವವರು ಪುಂಡಿ ಸೊಪ್ಪಿನ ಚಟ್ನಿ ಸೇವಿಸುವುದು ಒಳ್ಳೆಯದು.
೧ ಕೆಮ್ಮು ಇರುವಾಗ ಪುಂಡಿ ಸೊಪ್ಪಿನ ಕಷಾಯ ಸೇವನೆ ಮಾಡಬೇಕು.
೧ ವಾಂತಿಯಾಗುತ್ತಿದ್ದರೆ ಪುಂಡಿ ಸೊಪ್ಪಿನ ರಸಕ್ಕೆ ಸಕ್ಕರೆ ಹಾಗೂ ಕರಿ
ಮೆಣಸಿನ ಪುಡಿ ಸೇರಿಸಿ ಕುಡಿಯಬೇಕು.
ಔಷಧೀಯ ಗುಣಗಳು:
೧ ಹೆರಿಗೆಯ ನಂತರಸ್ತಿಸ್ತ್ರೀಯರು ಮುಳ್ಳು ಕೀರೆಸೊಪ್ಪಿನ ತಾಜಾರಸವನ್ನು
ಜೇನುತುಪ್ಪ ಮತ್ತು ಏಲಕ್ಕಿ ಪುಡಿಯೊಂದಿಗೆ ಸೇವಿಸಿದರೆ ಹಾಲಿನ
ಉತ್ಪ ತ್ರಿ
ಹೆಚ್ಚುತ್ತದೆ.
೧ ತಲೆ ಕೂದಲು ಉದುರುತ್ತಿದ್ದರೆ ಮುಳ್ಳು ಕೀರೆ ಸೊಪ್ಪನ್ನು
ಅರೆದು
ತಲೆಗೆ ಹಚ್ಚಿಕೊಂಡು ಸ್ದಾ_ನ ಮಾಡುವುದರಿಂದ ಕೂದಲು
ಸೊಂಪಾಗಿ ಬೆಳೆಯುತತ್ರದೆ.
2 ಮಲಬದ ತೆಯ ತೊಂದರೆಯಿರುವವರು ಮುಳ್ಳು ಕೀರೆ ಸೊಪ್ಪನ್ನು
ಬೇಯಿಸಿ ಚೀನುಕುಪದೊಂದಿಗೆ ಸೇವ
ಿಸಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 43
ಹಧೀಯ ಗುಣಗಳು:
೧0 ಜ್ವರದ ತೊಂದರೆಯಿರುವಾಗ ತುಂಬೆ ಸೊಪ್ಪಿನ ರಸದೊಡನೆ ಒಂದು
ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ ಬೆರೆಸಿ ಸೇವಿಸಬೇಕು.
೧0 ಕೆಮ್ಮು ಹಾಗೂ ದಮ್ಮಿನಿಂದ ಬಳಲುವವರು ತುಂಬೆ ಗಿಡದ
ಪಂಚಾಂಗಗಳ ರಸವನ್ನು ಸೇವಿಸಬೇಕು.
2 ಊತವಿರುವಾಗ ತುಂಬೆ ಸೊಪ್ಪಿನ ಕಷಾಯದಿಂದ ಶಾಖ ಕೊಡಬೇಕು.
2 ಅಜೀರ್ಣವುಂಟಾದಾಗ ಇದರ ಪಂಚಾಂಗದ ಕಷಾಯದಲ್ಲಿ ಸೈಂಧವ
ಲವಣವನ್ನು ಬೆರೆಸಿ ತೆಗೆದುಕೊಳ್ಳಬೇಕು.
ಐ
33.ವೀಳದಲ
ಮಿಲಿ
ಔಷಧೀಯ ಗುಣಗಳು:
೧0ಕಫ ಜ್ವರವಿರುವಾಗ ವೀಳೆದೆಲೆ ಬೇರಿನ ಕಷಾಯ ತಯಾರಿಸಿ ಅದಕ್ಕೆ
ಜೇನುತುಪ್ಪ ಬೆರೆಸಿ ಕೊಡಬೇಕು.
ಡ ಕೀಲು ನೋವಿರುವಾಗ ವೀಳೆದೆಲೆ ರಸವನು ಹಚ್ಚಿಉಜ್ಜಿಕೊಳ
್ಳಬೇಕು.
ನಂತರ ಬಿಸಿ ಶಾಖ ತೆಗೆದುಕೊಳ್ಳ ಬೇಕು.
[] ಕೆಮ್ಮು ಹಾಗೂ ದಮ್ಮಿನ ತೊಂದರೆಯಿರುವವರು
ವೀಳೆದೆಲೆಯ ರಸಕ್ಕೆ
ಜೇನುತುಪ್ಪ ಬೆರೆಸಿ ಸೇವನೆ ಮಾಡಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 47
Moringa Pterygosperma
38. ಬೀಟ್ರೂಟ್
ಉಪಯೋಗ:
2 ಯಕೃತ್ತಿನ ತೊಂದರೆಗಳಿಂದ ಬಳಲುವವರು ಬೀಟ್ರೂಟಿನ ರಸವನ್ನು
ಕುಡಿಯಬೇಕು. ಸುಟ್ಟ ಗಾಯಗಳಾದಾಗ ಬೀಟ್ರೂಟ್ ರಸವನ್ನು ಕೊಬ್ಬರಿ
ಎಣ್ಣೆಯಲ್ಲಿ ಬೆರೆಸಿ ಲೇಪಿಸುವುದರಿಂದ ಉರಿ ಕಡಿಮೆಯಾಗುತ್ತದೆ.
[5 ಮಲಬದ್ದತೆ ಹಾಗೂ ಮೂಲವ್ಮಾಧಿಯಿಂದ ಬಳಲುವವರು ಅರ್ಧ
ಲೋಟ ಬೀಟ್ರೂಟಿನ ಕಷಾಯವನ್ನು ರಾತ್ರಿ ಮಲಗುವ ಮುಂಚೆ ಕುಡಿಯಬೇಕು.
ಔಣ ಗರ್ಭಕೋಶದ ತೊಂದರೆಗಳಿಂದ ಬಳಲುವವರು ಆಹಾರದಲ್ಲಿ
ಬೀಟ್ರೂಟನ್ನು ಹೆಚ್ಚು ಬಳೆಸಬೇಕು.
[೧ ಮೈ ನವೆ ಮತ್ತು ತಲೆಯ ಹೊಟ್ಟಿನಿಂದ ಬಳಲುವವರು ಬೀಟ್ರೂಟಿನ
ಕಷಾಯಕ್ಕೆ ಸ್ವಲ್ಪ ವಿನಿಗರ್ ಬೆರೆಸಿ ಹಚ್ಚಿಕೊಳ್ಳಬೇಕು. ಅರ್ಧ ಗಂಟೆ ಬಿಟ್ಟು
ನಂತರ ಸ್ನಾನ ಮಾಡಬೇಕು. ಇದರ ಕಷಾಯದಿಂದ ವ್ರಣಗಳನ್ನು ತೊಳೆಯುವು
ದರಿಂದ ಬೇಗ ಮಾಯವಾಗುತ್ತದೆ.
2 ಮೂತ್ರಜನಕಾಂಗದ ತೊಂದರೆಗಳಲ್ಲಿಯೂ ಇದು ಉಪಯುಕ್ತ.
ಉಪಯೋಗ:
೧0 ಬಾಣಂತಿಯರು ಕೆಸುವಿನ ಗಡ್ಡೆ ಬೇಯಿಸಿ ಪಲ್ಕ ಇಲ್ಲವೇ ಬಜ್ಜಿ
ತಯಾರಿಸಿಕೊಂಡು ಸೇವನೆ ಮಾಡುವುದರಿಂದ ಎದೆಹಾಲು ಹೆಚ್ಚುತ್ತದೆ.
೧ ಅಶಕ್ತತೆಯಿಂದ ಬಳಲುವವರು ಕೆಸುವಿನ ಗಡ್ಡೆಯನ್ನು ತುರಿದು
ತುಪ್ಪದಲ್ಲಿ ಚೆನ್ನಾಗಿ ಹುರಿದು ಅದರಲ್ಲಿ ಸಮ ಪ್ರಮಾಣ ಸಕ್ಕರೆ ಬೆರೆಸಿಟ್ಟುಕೊಂಡು
ಪ್ರತಿ ದಿನ ಒಂದು ಚಮಚದಷ್ಟು ತಿಂದು ನಂತರ ಹಾಲು ಕುಡಿಯುವುದರಿಂದ
ಶರೀರದಲ್ಲಿ ಬಲವು ಹೆಚ್ಚುತ್ತದೆ. |
52 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳ:
ಉಪಯೋಗ:
2 ಗಡ್ಡೆಕೋಸು ಮೂತ್ರಜನಕಾಂಗದ ಕಾಯಿಲೆಗಳಲ್ಲಿ ಬಹು ಉಪಯುಕ್ತ.
ಕುರುಗಳಾದಾಗ ಗಡ್ಡೆಯನ್ನು ಕುದಿಸಿ ಪೋಲ್ಟೀಸ್ ಹಾಕಬೇಕು.
|
41. ಮೆಣಸಿನ ಕಾಯಿ
|
Cucurbita Pepo
ಇದರ ಮೂಲ ಸ್ಥಾನವು ಅಮೆರಿಕಾವೆಂದು ತಿಳಿದುಬರುತ್ತದೆ. ಭಾರತದಲ್ಲಿ
ಹಲವಾರು ಭಾಗಗಳಲ್ಲಿ ತರಕಾರಿಯಾಗಿ ಬಳಸುತ್ತಾರೆ. ಇದು ಬಳ್ಳಿ ಜಾತಿಗೆ
ಸೇರಿದ್ದು, ಬಳ್ಳಿ ಕಾಂಡದ ದಪ್ಪ ಕಡಿಮೆ ಇದ್ದು ಉದ್ದವಾಗಿ ಬೆಳೆಯುತ್ತದೆ.
ಬಳ್ಳಿಯನ್ನು ನೆಲದಲ್ಲಿ ಹರಡಲು ಬಿಡಬಹುದು. ಇದರ ಎಲೆ, ಚಿಗುರೆಲೆ, ಹೂ
ಇವುಗಳನ್ನೆಲ್ಲ ಪಲ್ಕ ಅಥವಾ ತಿಂಡಿ ತಿನಿಸು ಮಾಡಲು ಉಪಯೋಗಿಸುತ್ತಾರೆ.
ಬೀಜವನ್ನು ಹುರಿದು ತಿನ್ನುತ್ತಾರೆ.
ಉಪಯುಕ್ತ ಭಾಗಗಳು: ಬೇರು, ಎಲೆ, ಹಣ್ಣು, ಬೀಜ
ಬೇರು- ಗರ್ಭಪಾತದಿಂದ ಗರ್ಭಕೋಶದಲ್ಲಿ ರಕ್ತ ಹೆಪ್ಪುಗಟ್ಟಿದುದನ್ನು
ನಿವಾರಿಸಲು ಉಪಯುಕ್ತ. |
ಎಲೆ : ಎಲೆಗಳನ್ನು ಸುಟ್ಟು ಗಾಯಗಳಿಗೆ ಹಚ್ಚಬೇಕು. ಜೀರ್ಣಕಾರಕ
ರಕ್ತವೃದ್ದಿಕರ, ನೋವು ನಿವಾರಕ.
ಹಣ್ಣು : ಬಹಳ ತಂಪುಕಾರಕ, ಹಸಿವೆಯನ್ನು ಹೆಚ್ಚಿಸುತ್ತದೆ. ಕಫ, ವಾತ,
ಬಾಯಾರಿಕೆ, ದಣಿವನ್ನು ನಿವಾರಿಸುತ್ತದೆ. ರಕ್ತ ಶುದ್ಧೀಕರಿಸುತ್ತದೆ. ಸೌಮ್ಮರೇಚಕ.
ಹಲ್ಲು, ಗಂಟಲು ಮತ್ತು ಕಣ್ಣು ಇವುಗಳಿಗೆ ಉತ್ತಮ. ಹಣ್ಣಿನ ಸಿಪ್ಪೆಯು
. ಮೂಲವ್ಯಾಧಿಯಲ್ಲಿ ಉಪಯುಕ್ತ.
ಬೀಜ : ಮೂತ್ರಜನಕ, ಶಕ್ತಿವರ್ಧಕ, ಕೊಬ್ಬನ್ನು ಹೆಚ್ಚಿಸುತ್ತದೆ. ಕಫ,
ಜ್ವರ ನಿವಾರಿಸುತ್ತದೆ. ಮೂತ್ರಪಿಂಡ ಮತ್ತು ಮೆದುಳಿಗೆ ಉತ್ತಮ, ಬೀಜವು
ಜಂತುನಿವಾರಕ ಸಹ ಆಗಿರುತ್ತದೆ. ಮೃದುಕಾರಕ ಗುಣವಿದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 55
Cucumis 92111115
ಉತ್ತರ ಭಾರತವು ಇದರ ಮೂಲಸ್ಥಾನವೆಂದು ತಿಳಿದುಬರುತ್ತದೆ. ಹಸಿಯಾಗಿ
ತಿನ್ನಲು ಉಪಯೋಗಿಸುವಂತಹ ಜನಪ್ರಿಯ ತರಕಾರಿ. ಭಾರತದ ಎಲ್ಲ ಭಾಗಗಳಲ್ಲಿ
ಇದನ್ನು ಬೆಳೆಯುತ್ತಾರೆ. ಅಗಲವಾದ ಹಸಿರು ಎಲೆಯನ್ನು ಹೊಂದಿದ್ದು ಉದ್ದವಾದ
ಬಳ್ಳಿಯಾಗಿರುತ್ತದೆ. ಕಾಯಿಯನ್ನು ಪಲ್ಕ ಮತ್ತು ಚಟ್ನಿ ಮಾಡಲು ಉಪಯೋಗಿಸು
ತ್ತಾರೆ. ಎಳೆಕಾಯಿಯನ್ನು ಉಪ್ಪಿನಕಾಯಿಯಾಗಿ ತಯಾರಿಸುತ್ತಾರೆ. ಸಿಪ್ಪೆ,
ಬೀಜವನ್ನು ಸಹ ಚಟ್ನಿ ತಯಾರಿಸಲು ಉಪಯೋಗಿಸಬಹುದು.
56 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು
Lagenara Sicerasia
ಇದು ಸಹ ಕುಂಬಳ ಜಾತಿಗೆ ಸೇರಿದ ಬಳ್ಳಿ. ಇದರ ಮೂಲವು ಆಫ್ರಿಕಾ
ದೇಶವೆಂದು ತಿಳಿಯುತ್ತದೆ. ಮಾನವನು ಇದನ್ನು 7000 ವರ್ಷಗಳಿಗಿಂತಲೂ
ಮೊದಲು ಉಪಯೋಗಿಸುತ್ತಿದ್ದನೆಂದು ಆಧಾರಗಳಿಂದ ತಿಳಿದುಬಂದಿದೆ. ಇದಕ್ಕೆ
ಕನ್ನಡದಲ್ಲಿ ಹಾಲುಗುಂಬಳ ಎಂದು ಕರೆಯುತ್ತಾರೆ. ಹಸಿರು ಕಾಂಡ, ಅಗಲವಾದ
ಎಲೆ ಹೊಂದಿರುತ್ತದೆ, ಬಿಳಿ ಹೂ ಬಿಡುತ್ತದೆ. ಕಾಯಿ ಹಸಿರಾಗಿದ್ದು ಬೇರೆ ಬೇರೆ
ಗಾತ್ರ, ಆಕಾರಗಳನ್ನು ಕಾಣಬಹುದು. ಎಳೆಯದಿದ್ದಾಗ ಕಾಯಿಯನ್ನು ಸಿಪ್ಪೆಸಮೇತ
ಉಪಯೋಗಿಸಬಹುದು. ಕಾಯಿ, ಎಲೆ, ಚಿಗುರುಗಳಿಂದ ಪಲ್ಕ ಮಾಡುತ್ತಾರೆ.
| ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 57
Raphanus 9೩1೪115
54. ಬೂದಗುಂಬಳಕಾಯಿ
55 `ಮಡಿಹಾಗಲ
56. ಹೀರೆಕಾಯಿ
ಹಧೀಯ ಗುಣಗಳು:
೧0 ದಾಹವಿರುವಾಗ ಹೀರೆಕಾಯಿಯ ತಿರುಳನ್ನು ತುಪ್ಪದಲ್ಲಿ ಬೇಯಿಸಿ
ಮೊಸರು ಕಲೆಸಿ ತಿನ್ನಬೇಕು.
೧0 ಶರೀರದ ಯಾವುದೇ ಭಾಗದಲ್ಲಿ ಉರಿ ಉಂಟಾಗಿದ್ದರೆ ಹೀರೆಕಾಯಿಯ |
ತಿರುಳನ್ನು ಚೆನ್ನಾಗಿ ಅರೆದು ಲೇಪಹಾಕಬೇಕು.
೧ ಮೂತ್ರಕೋಶದ ತೊಂದರೆಯಿಂದ ಬಳಲುವವರಿಗೆ ಹೀರೆಕಾಯಿಯ |
ಬಲಿತ ಬೀಜಗಳನ್ನು ಅರೆದು ಅದಕ್ಕೆ ಕಲ್ಲುಸಕ್ಕರೆ ಹಾಗೂ ಜೀರಿಗೆ ಪುಡಿ ಬೆರೆಸಿ :
ಸೇವಿಸಲು ಹೇಳಬೇಕು.
[0 ರಕ್ತವಾಂತಿಯಾಗುತ್ತಿದ್ದರೆ ಹೀರೆಕಾಯಿಯ ಬಲಿತ ಬೀಜಗಳಲ್ಲಿನ |
ತಿರುಳನ್ನು ಸಮಪ್ರಮಾಣ ನೀರಿನೊಡನೆ ಸೇವಿಸಲು ಹೇಳಬೇಕು.
[0 ಜ್ವರದ ಬಾಧೆಯಿರುವಾಗ ಹೀರೆಕಾಯಿಯ ಎಲೆಗಳ ಕಷಾಯ ತಯಾರಿಸಿ
ಸಕ್ಕರೆ ಬೆರೆಸಿ ಕೊಡಬೇಕು.
60. ಅಡಿಕೆ
64. ಗಸಗಸ
68. ಬಡೇಸೋಪು
ಔಷಧೀಯ ಗುಣಗಳು:
'
೧ ಅರುಚಿಯಿಂದ ಬಳಲುವವರು ರಾತ್ರಿ ಮಲಗುವಾಗ ಬಡೇಸೋಪಿನ
'
ಪುಡಿಯನ್ನು ಬಿಸಿನೀರಿನೊಡನೆ ತೆಗೆದುಕೊಳ್ಳಬೇಕು. |
|
2 ಮೂತ್ರಕೋಶದ ತೊಂದರೆಗಳಿರುವಾಗ ಬಡೇಸೋಪಿನ ಕಷಾಯ
ತಯಾರಿಸಿ ಅದು ತಣ್ಣಗಾದ ಮೇಲೆ ಸಕ್ಕರೆ ಬೆರೆಸಿ ಕುಡಿಯಬೇಕು.
2 ಚಿಕ್ಕಮಕ್ಕಳಲ್ಲಿ ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದರೆ
ಬಡೇಸೋಪಿನ ಕಷಾಯ ತಯಾರಿಸಿ ಹಾಲು ಸಕ್ಕರೆ ಬೆರೆಸಿ ಕುಡಿಸಬೇಕು.
೧0 ಜ್ವರದಿಂದ ಬಳಲುವಾಗ ಬಡೇಸೋಪಿನ ಚೂರ್ಣ ಮತ್ತು ಹಿಪ್ಪಲಿ
ಚೂರ್ಣಗಳನ್ನು ಸಮಪ್ರಮಾಣದಲ್ಲಿ ಜೇನುತುಪ್ಪದೊಡನೆ ಸೇವಿಸಬೇಕು.
೧ ಕಣ್ಣು ನೋವು ಬಂದಾಗ ಬಡೇಸೋಪಿನ ಕಷಾಯ ತಯಾರಿಸಿ ಶುದ್ದ
ವಾದ ಬಟ್ಟೆಯನ್ನು ಕಷಾಯದಲ್ಲಿ ಅದ್ದಿ ಕಣ್ಣಿನ ಮೇಲ್ಭಾಗಕ್ಕೆ ಶಾಖ ಕೊಡಬೇಕು.
69. ಇಂಗು
72 ದಾಲ್ಚಿನ್ನಿ (ಚೆಕ್ಕೆ
ಪ್ರಮುಖವಾದ ಸಂಬಾರ ಪದಾರ್ಥವಾದ ದಾಲ್ಜಿನ್ನಿ ಒಂದು ಮರದ
ತೊಗಟೆ, ಆದುದರಿಂದ ಇದನ್ನು ಚಕ್ಕೆ ಎಂದೂ ಕರೆಯುತ್ತಾರೆ. ಬಹಳ ಪ್ರಾಚೀನ
ಕಾಲದಿಂದಲೂ ಮಸಾಲೆ ಪದಾರ್ಥವಾಗಿ, ಔಷಧಿ ದ್ರವ್ಯವಾಗಿ ಉಪಯೋಗಿಸಲ್ಪಡು
ತ್ತಿರುವ ದಾಲ್ಚಿನ್ನಿಯನ್ನು ದಕ್ಷಿಣ ಭಾರತದ ಕೇರಳ, ಕರ್ನಾಟಕ, ತಮಿಳುನಾಡು
ರಾಜ್ಯಗಳಲ್ಲಿ ವಿಶೇಷವಾಗಿ ಬೆಳೆಯುತ್ತಾರೆ. ಭಾರತದ ವಾಣಿಜ್ಯ ಬೆಳೆಗಳಲ್ಲಿ
ದಾಲ್ಚಿನ್ನಿಗೆ ಒಂದು ವಿಶಿಷ್ಟ ಸ್ಥಾನವಿದೆ. ಆಹಾರ ಪದಾರ್ಥಗಳಿಗೆ ವಾಸನೆ ಮತ್ತು
ರುಚಿಯನ್ನು ಕೊಡುವ ಇದನ್ನು ಅನೇಕ ಸಿಹಿತಿಂಡಿಗಳಲ್ಲಿಯೂ ಹಾಗೂ
ವಿಶೇಷವಾಗಿ ಮಾಂಸಾಹಾರದ ಅಡುಗೆಯಲ್ಲಿ ಉಪಯೋಗಿಸುತ್ತಾರೆ. ಇದರಿಂದ
ತೆಗೆದ ಸುಗಂಧಭರಿತ ತೈಲವನ್ನು ಬೇಕರಿ ಪದಾರ್ಥಗಳು, ಸಾಬೂನು,
ಮದ್ಮಪಾನೀಯಗಳು, ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಎಲೆಗೆ.
ಲವಂಗ ಪತ್ರೆ ಅಥವಾ ತಮಾಲ ಪತ್ರ ಎಂದು ಕರೆಯುತ್ತಾರೆ. ಇದನ್ನು ಸಹ
ಒಂದು ಮಸಾಲೆ ಪದಾರ್ಥವಾಗಿ ಉಪಯೋಗಿಸುತ್ತಾರೆ.
ಆಯುರ್ವೆದ ವೈದ್ಯರು ದಾಲ್ಚಿನ್ನಿಯನ್ನು ತ್ವಕ್, ವನಪ್ರಿಯ, .ವರಾಂಗ
ಮುಂತಾದ ಹೆಸರುಗಳಿಂದ ಕರೆಯುತ್ತ ರೆ. ಇದು ವೀರ್ಯವರ್ಧಕ ಹಾಗೂ
ವಿಷಹರ ಔಷಧಿಯಾಗಿದೆ.
ದಾಲ್ಚಿನ್ನಿಯನ್ನು ಅತಿಯಾಗಿ ಉಪಯೋಗಿಸಿದರೆ ಪಿತ್ತವನ್ನು ಕೆರಳಿಸಿ
ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.
ಏಕಮೂಲಿಕ್ತ ಔಷಧಿಯಾಗಿ ದಾಲ್ಚಿನ್ನಿಯನ್ನು ಹೆಚ್ಚಾಗಿ ಬಳಸುವುದಿಲ್ಲ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 87
ಬೇರು ಮೂಲಿಕೆಗಳ ಜೊತೆಯಲ್ಲಿ ಇದನ್ನು ಬಳಸುತ್ತಾರೆ. ಚೂರ್ಣ, ಲೇಹ,
ಜಾನಾ
73. ದನಿಯ
ಉಪಯೋಗ: |
೧0 ಕೊತ್ತಂಬರಿ ಬೀಜವನ್ನು ಸ್ವಲ್ಪ ಬಿಸಿಮಾಡಿ, ಕುಟ್ಟಿ ಪುಡಿ|
ಮಾಡಿಕೊಳ್ಳಬೇಕು (ಬಹಳ ನುಣ್ಣನೆ ಪುಡಿ ಮಾಡಬಾರದು). ಒಂದು ಲೋಟ!
ಬಿಸಿ ನೀರಿಗೆ ಒಂದು ಚಮಚ ಪುಡಿಯನ್ನು ಹಾಕಿ ಒಂದೆರಡು ಗಂಟೆಗಳ ಕಾಲ!
ಮುಚ್ಚಿ ಇಡಬೇಕು. ಅನಂತರ ಅದನ್ನು ಶೋಧಿಸಿಕೊಂಡು ಸಕ್ಕರೆ ಬೆರೆಸಿ
ಕುಡಿಯಲ ಕೊಟ್ಟರೆ, ಬಾಯಾರೆಕೆ (ದಾಹ) ಕಡಿಮೆಯಾಗುತ್ತದೆ. ಮೇಲೆ
ಹೇಳಿರುವ ಬೀಜದ ಪುಡಿಯ್ದನ್ನು ರಾತ್ರಿ ನೀರಿನಲ್ಲಿ ಹಾಕಿ ಇಟ್ಟು ಬೆಳಿಗ್ಗೆ ಅದನ್ನು
ಶೋಧಿಸಿಕೊಂಡು ಸಕ್ಕರೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ತೆಗೆದುಕೊಂಡರೆ
ಪಿತ್ತದಿಂದಾಗುವಂತಹ ಹುಳಿತೇಗು, ಎದೆ ಉರಿಗಳು, ಕಣ್ಣು, ಕಾಲು ಉರಿಗಳು
ಕಡಿಮೆಯಾಗುತ್ತದೆ.
೧0 ಪಿತ್ತದ ಜ್ವರದಿಂದ ಮತ್ತು ದೀರ್ಥುಕಾಲದ ಕಾಯಿಲೆಗಳಿಂದ
ನರಳುವವರಲ್ಲಿ ಉಂಟಾಗುವ ದಾಹ, ಬಾಯಾರಿಕೆ, ಬಿಕ್ಕಳಿಕೆಗಳಿಗೆ ಇದು ಒಂದು
ಉತ್ತಮ ಔಷಧಿ ಹಾಗೂ ಪೇಯ.
ಧಿ ಕೊತ್ತಂಬರಿ ಬೀಜದ ಕಾಫಿ : ಕೊತ್ತಂಬರಿ ಬೀಜವನ್ನು ಹದವಾಗಿ
ಹುರಿದು, ದಪ್ಪಗಾಗಿ ಪುಡಿಮಾಡಿ ಇಟ್ಟುಕೊಳ್ಳಬೇಕು. ಕಾಫಿಯನ್ನು ತಯಾರಿಸುವ
ರಿಸಿತಿಯಲ್ಲಿ. ನೀರನ್ನು ಕುದಿಸಿ ಅದಕ್ಕೆ ಕೊತ್ತಂಬರಿ ಪುಡಿಯನ್ನು ಹಾಕಿ ಸ್ವಲ್ಪ
ಕುದಿಸಿ. 'ಬೆಂಕಿಯ ಮೇಲಿಗದ ತೆಗೆದು ಕೆಲವು ನಿಮಿಷಗಳ ಕಾಲ ಮುಚ್ಚಿ ಇಡಬೇಕು.
| ಅನಂತರ ಅದನ್ನು ಶೋಧಿಸಿಕೊಂಡು ಸಕ್ಕರೆ ಮತ್ತು ಹಾಲನ್ನು ಬೆರೆಸಿ ಕಾಫಿಯಂತೆ
ಕುಡಿಯಬೆಹುದು. ಇದನ್ನು ಕುಡಿಯುವುದರಿಂದ ದೇಹದ ಹೆಚ್ಚು 'ಉಷ್ಣತೆ
ಕಡಿಮೆಯಾಗಿ ಪಚನಶಕಿ ಕಿಹೆಚ್ಚಿ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
ಮಲಬದ್ಧತೆ ನಿವಾರಣೆಯಾಗುತ್ತದೆ.
೧ ಬೆಳಗಿನ ಹೊತ್ತು ಬೆಡ್ ಕಾಫಿ ಕುಡಿಯುವ ಅಭ್ಯಾಸವಿರುವವರು ಅದಕ್ಕೆ
ಬದಲಾಗಿ ಮೇಲೆ ಹೇಳಿರುವ ಕೊತ್ತಂಬರಿ ಬೀಜದ ಕಾಫಿಯನ್ನು ಪ್ರತಿ ದಿನ
ತೆಗೆದುಕೊಂಡರೆ ಕಾಫಿಯಿಂದಾಗುವ ದುಷ್ಪರಿಣಾಮಗಳು ತಪ್ಪಿ ಆರೋಗ್ಯ
ವೃದ್ದಿಯಾಗುತ್ತದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 89
74, ಈರುಳ್ಳಿ
75. ಬಜೆ
ಉಪಯೋಗಗಳು:
೧. ನೆಗಡಿಯಾದಾಗ ಮೆಣಸಿನ ಕಷಾಯಮಾಡಿ ಅದಕ್ಕೆ ಕಲ್ಲುಸಕ್ಕರೆ ಬೆರೆಸಿ
ಸೇವಿಸಿದರೆ ಶೀತದ ಬಾಧೆ ತಪ್ಪುತ್ತದೆ. ಅಜೀರ್ಣವಾದಾಗ ಕರಿಮೆಣಸಿನ ಪುಡಿಗೆ
ಉಪ್ಪು, ತುಪ್ಪ ಸೇರಿಸಿ ಅನ್ನದೊಂದಿಗೆ ಸೇವಿಸಬೇಕು.
೧ ಕರಿಮೆಣಸಿನ ಪುಡಿಯನ್ನು ಸೈಂಧವ ಲವಣದೊಡನೆ ಮಜ್ಜಿಗೆಯಲ್ಲಿ
ಸೇವಿಸಿದಲ್ಲಿ ಹೊಟ್ಟೆನೋವು ಕಡಿಮೆಯಾಗುತ್ತದೆ.
[] ಕೆಮ್ಮು ಇರುವಾಗ ಮೆಣಸಿನಪುಡಿಯನ್ನು ಜೇನುತುಪ್ಪದೊಡನೆ
ಸೇವಿಸಬೇಕು. ಆಮವಾತದಲ್ಲಿ ಮೆಣಸಿನ ಕಷಾಯದಲ್ಲಿ ತುಪ್ಪ ಬೆರೆಸಿ
ಸೇವಿಸಬೇಕು.
[0 ಮೆಣಸನ್ನು ನೀರಲ್ಲಿ ತೇಯ್ದು ಲೇಪಿಸುವುದು ಮುಖದಲ್ಲಿನ
ಮೊಡವೆಗಳಿಗೆ ಪರಿಣಾಮಕಾರಿ ಮದ್ದು.
2 ಮಲಬದ್ಧತೆಯಿಂದ ಬಳಲುವವರು ಬಿಳಿಮೆಣಸಿನ ಪುಡಿಯನ್ನು ಬಿಸಿ
ನೀರಿನೊಂದಿಗೆ ಸೇವನೆಮಾಡಿದರೆ ಮಲಬದ್ದತೆ ಸಮಸ್ಯೆಪರಿಹಾರವಾಗುವುದು.
[0 ಧ್ವನಿ ಒಡೆದಿದ್ದರೆ ಮೆಣಸಿನ ಕಷಾಯಕ್ಕೆ ಹಾಲು ಸೇರಿಸಿ ಸೇವಿಸಬೇಕು. '
೧ ಹೃದ್ರೋಗ, ಮೂಲವ್ಮಾಧಿ, ಶೂಲ, ಕ್ರಿಮಿರೋಗಗಳಲ್ಲಿಯೂ ಇದು
ಉಪಯುಕ್ತ ಔಷಧಿ ದ್ರವ್ಯ.
ಉಪಯೋಗಗಳು:
ಶುಂಠಿಯ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಕೊಟ್ಟರೆ ಜ್ವರ ನಿಲ್ಲುವುದು.
೧ ಅರುಚಿ, ಅಗ್ನಿಮಾಂದ್ಕಗಳಿರುವಾಗ ಶುಂಠಿಪುಡಿಯನ್ನು ನಿಂಬೆರಸ
ಹಾಗೂ ಸೈಂಧವ ಲವಣದೊಡನೆ ಸೇರಿಸಿ ಸೇವಿಸಬೇಕು.
೧ ಶುಂಠಿಯನ್ನು ಹಾಲಿನಲ್ಲಿ ಕುದಿಸಿ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಅಶಕ್ತತೆ
ದೂರವಾಗುತ್ತದೆ.
೧ ಕೆಮ್ಮು, ದಮ್ಮುಗಳಿರುವಾಗಲೂ ಶುಂಠಿಯ ಪುಡಿಯನ್ನು ಜೇನುತುಪ್ಪ
ದೊಂದಿಗೆ ಸೇವಿಸುವುದೊಳಿತು.
೧ ಪಿತ್ತವಿಕಾರವಿದ್ದಾಗ ಶುಂಠಿಯ ಪುಡಿಯೊಂದಿಗೆ ತುಪ್ಪ, ಸಕ್ಕರೆ ಸೇರಿಸಿ
ಸೇವಿಸಬೇಕು. |
[0 ಶುಂಠಿ ರಸಕ್ಕೆ ಜೇನುತುಪ್ಪ ಸೇರಿಸಿ ಅರ್ಧ ಗಂಟೆಗೊಮ್ಮೆ ಕುಡಿದಲ್ಲಿ
ವಾಂತಿ ನಿಲ್ಲುವುದು.
೧0 ನೆಗಡಿಯಾದಾಗ ಹಸಿಶುಂಠಿಯ ರಸಕ್ಕೆ ಬೆಲ್ಲ ಸೇರಿಸಿ ಸೇವಿಸಬೇಕು.
ಮಲಬದ್ದತೆಯಿರುವಾಗ ರಾತ್ರಿ ಹೊತ್ತು ಮಲಗುವ ಮೊದಲು ಎರಡು ಚಮಚ
ಶುಂಠಿ ರಸಕ್ಕೆ ಜೇನು ಸೇರಿಸಿ ಸೇವಿಸಬೇಕು.
೧0 ಆಮದ ತೊಂದರೆಯಿರುವಾಗ ಶುಂಠಿಯ ರಸಕ್ಕೆ ಹರಳೆಣ್ಣೆ ಸೇರಿಸಿ
ಸೇವಿಸಬೇಕು.
೧0 ಶುಂಠಿ ಮತ್ತು ಕೊತ್ತಂಬರಿ ಬೀಜವನ್ನು ಪುಡಿಮಾಡಿ ನೀರಿನಲ್ಲಿ ಕುದಿಸಿ
' ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಹಸಿವೆ ಚೆನ್ನಾಗಿ ಆಗುತ್ತದೆ.
ಶುಂಠಿಯು ಕ್ರಿಮಿಹರವಾಗಿಯೂ ಕೆಲಸಮಾಡುತ್ತದೆ. ಹಸಿಶುಂಠಿಯು ಮೂತ್ರವನ್ನು
ಹೆಚ್ಚಿಸುವುದು.
೧ ಶುಂಠಿಯು ಹೃದ್ರೋಗ, ಪಾಂಡುರೋಗ, ಆನೆಕಾಲು ರೋಗ
(Elephantiasis)ದಲ್ಲಿಯೂ ಉಪಯುಕ್ತ.
96 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು
79. ಹಿಪ್ಪಲಿ
ಸಂಸ್ಕ ತ-ಪಿಪ್ಪಲಿ ಮರಾಠಿ-ಪಿಂಪಳೀ ಹಿಂದಿ-ಪೀಪಲ್
ತೆಲುಗು-ಏಪುಲ ತಮಿಳು-ಟಿಪ್ಪಿಲಿ
ಫಲ ಮತ್ತು ಬೇರು ಹಿಪ್ಪಲಿಯ ಉಪಯುಕ್ತ ಭಾಗಗಳು. ಗಜಹಿಪ್ಪಲಿ
ಮತ್ತು ಸಣ್ಣ ಹಿಪ್ಪಲಿಗಳನ್ನು ಔಷಧದಲ್ಲಿ ಉಪಯೋಗಿಸಲಾಗುವುದು. ಇದು
ಕಟುರಸ ಹೊಂದಿದ್ದು ಉಷ್ಣವೀರ್ಯವುಳ್ಳದ್ದಾಗಿದೆ.
ಉಪಯೋಗಗಳು:
[0 ಮೂಲವ್ಯಾಧಿಯಿಂದ ಬಳಲುವವರು ಹಿಪ್ಪಲಿ ಚೂರ್ಣವನ್ನು ರಾತ್ರಿ
ಮಲಗುವ ಸಮಯದಲ್ಲಿ ಮಜ್ಜಿಗೆಯೊಡನೆ ಸೇವಿಸುವುದು ಉತ್ತಮ. ಜ್ವರವಿದ್ದಾಗ
ಹಿಪ್ಪಲಿ ಚೂರ್ಣವನ್ನು ಜೇನುತುಪ್ಪದೊಡನೆ ಸೇವಿಸಬೇಕು. ಇದರಿಂದ ಕೆಮ್ಮು,
ಉಸಿರಾಟದ ತೊಂದರೆಯೂ ನಿವಾರಣೆಯಾಗುತ್ತವೆ. ಹಿಪ್ಪಲಿಯ ಚೂರ್ಣವನ್ನು
ಕಲ್ಲುಸಕ್ಕರೆಯ ಪುಡಿ ಹಾಗೂ ತುಪ್ಪ ಸೇರಿಸಿ ಸೇವಿಸಿದಲ್ಲಿ ಆಮ್ಲಪಿತ್ತದ ನಿವಾರಣೆ .
ಸಾಧ್ಯ.
೧ ಕುಷ್ಟರೋಗದ ತಡೆಗೆ ಹಿಪ್ಪಲಿ ಚೂರ್ಣವನ್ನು ಸಕ್ಕರೆ, ತುಪ್ಪದೊಂದಿಗೆ
ಸೇವಿಸಬೇಕು. |
೧ ಅಶಕ್ತತೆಯಿರುವವರಿಗೆ ಹಾಲು, ಸಕ್ಕರೆಯೊಡನೆ ಬೆರೆಸಿದ ಹಿಪ್ಪಲಿಪುಡಿ
ಒಳ್ಳೆಯದು.
೧ ಪಿತ್ತವಿಕಾರ, ತಲೆಸುತ್ತು ಇರುವಾಗ ಹಸಿ ಹಿಪ್ಪಲಿಯನ್ನು ಜೇನುತುಪ್ಪ
ದೊಂದಿಗೆ ಸೇವಿಸಬೇಕು.
೧ ಹಿಪ್ಪಲಿ ರಸಾಯನ ಅಂದರೆ ದಿನಕ್ಕೆ ಒಂದೊಂದು ಹಿಪ್ಪಲಿಯನ್ನು
ಹೆಚ್ಚಿಸುತ್ತ ಹೋಗಿ ನಂತರ ಕಡಿಮೆ ಮಾಡುತ್ತ ಬರಬೇಕು. ಈ ಹಿಪ್ಪಲಿ
ರಸಾಯನವು ಕೆಮ್ಮು, ದಮ್ಮು, ಕ್ಷಯರೋಗಿಗಳಿಗೆ ಬಹಳ ಒಳ್ಳೆಯದು.
೧ ಇದು ಹೃದಯಕ್ಕೆ ಹಿತಕಾರಿ. ಕ್ರಿಮಿಹರ, ಜೀರ್ಣಶಕ್ತಿ ಹೆಚ್ಚಿಸುತ್ತದೆ.
ಅಪಸ್ಮಾರ, ಕಾಲರಾ, ಬೆನ್ನುನೋವು ಹಾಗೂ ಇತರ ವಾತರೋಗಗಳಲ್ಲಿಯೂ
ಉಪಯುಕ್ತ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 97
2. ನ್ಯೂಟ್ರಟಜೆ ಸ್ು ಡೆ
ಸಾ ಹಚ ಮತ್ತು ಗೋ ಮಣ್ಯಂ
£2 ಸುಶ್ರು ತ ಸಂಹಿತೆ
4. ಚರಕ ಸಂಹಿತೆ 5, ಅಜ್ಟಾಂಗ ಸಂಗ್ರಹ
ಔಷಧೀಯ ಗುಣವುಳ್ಳ
ಉಪಯುಕ್ತ ಸೊಪ್ಪು - ತರಕಾರಿಗಳು
- ಡಾ॥ ವಸುಂಧರಾ ಭೂಪತಿ
ಹರಿವೆ ಸೊಪ್ಪು, ಮೆಂತ್ಯೆ ಸೊಪ್ಪು, ಸಬ್ಬ ಸಿಗೆ ಸೊಪ್ಪು, ಪುದೀನಾ ಸೊಪ್ಪು,
ನುಗ್ಗೆ ಸೊಪ್ಪು, ಕರಿಬೇವಿನ ಸೊಪ್ಪು, ರಾಜಗೀರ ಸೊಪ್ಪುಗಳಲ್ಲಿ ದೊರೆಯುವ
ಸುಣ್ಣದಂಶ ಮತ್ತು ಕಬ್ಬಿಣದಂಶಗಳು ರಕ್ತದಲ್ಲಿ ಹಿಮೊಗ್ಲೋಬಿನ್ ಅಂಶದ ಹೆಚ್ಚಳ,
ಹಲ್ಲು ಹಾಗೂ ಎಲುಬಿನ ಬೆಳವಣಿಗೆಯಲ್ಲಿ "ಮುಖ್ಯ ಪಾತ್ರ ವಹಿಸುತ್ತವೆ. «ಬಿ
ಗುಂಪಿಗೆ ಸೇರಿದ ರೈಬೋಫ್ಲಾಮಿನ್ ಎಂಬ ಜೀವಸತ್ವವು ಹಸಿರು ಸೊಪು ಎಗಳಲ್ಲಿ
ಹೆಚ್ಚಾಗಿ ದೊರೆಯುತ್ತದೆ. “ಎ” ಜೀವಸತ್ವವು ಹಳದಿ, ಕೇಸರಿ ಬಣ್ಣದ ತರಕಾರಿ
ಗಳಲ್ಲದೆ ಗಜ್ಜರಿ, ಕುಂಬಳಕಾಯಿ, ರಾಜಗೀರ, ಮೂಲಂಗಿ, ಬಸಳಸೊಪ್ಪುಗಳಲ್ಲಿ
ಅಧಿಕವಾಗಿರುತ್ತದೆ. “ಎ'' ಜೀವಸತ್ವ ಅಂಧತ್ವ ನಿವಾರಣೆಗೆ ಅತಿ ಮುಖ್ಯ. ನಾರಿನ
ಅಂಶ ಇರುವ ತರಕಾರಿಗಳನ್ನು ಬಳಸುವುದರಿಂದ ಅಧಿಕ ರಕ್ತದ ಒತ್ತಡ (ಬ್ಲಡ್
ಪ್ರೆಷರ್) ಹತೋಟಿಗೆ ತರಬಹುದು. ಸೌತೇಕಾಯಿ, ನಿಂಬೆಹಣ್ಣು, ಹಾಗಲಕಾಯಿ
ಬಳಕೆ ಸಿಹಿ ಮೂತ್ರರೋಗಿಗಳಿಗೆ ಒಳ್ಳೆಯದು.
ಇದು ಸೊಪು ಕ ತರಕಾರಿಗಳಲ್ಲಿ ಔಷಧೀಯ ಗುಣವುಳ್ಳ
ಅಂಶವನ್ನು ಪರಿಚಯಿಸುವ ಒಂದು ಉಪಪಯುಕ್ತ ಕೃತಿ. ಜೆ
| “ಬಿ.ಎಂ ಕೋಮಲ
ಸಾ ಕ ಪ್ರಕಾಶಕಿ