You are on page 1of 21

ತವಸ್ಸುಲ್ — 1

68

‫الحركة النصيحة اإلسالمية‬


ANNASEEHA ISLAMIC MOVEMENT
SURATKAL, MANGALORE - 575014
ತವಸ್ಸುಲ್ — 2

ತವಸ್ಸುಲ್ ಎಂದರೇನು?

ಉದ್ದೇಶಿತ ಗುರಿಗೆ ತಲುಪಿಸುವ ಮಾರ್ಗವನ್ನು ಅಥವಾ


ಉದ್ದೇಶಿತ ಗುರಿಗೆ ಹತ್ತಿರವಾಗುವುದನ್ನು ಭಾಷಾರ್ಥದಲ್ಲಿ
‘ತವಸ್ಸುಲ್’ ಎಂದು ಹೇಳುತ್ತಾರೆ. ಹತ್ತಿರವಾಗುವುದು,
ಸಮೀಪವಾಗುವುದು ಇದರ ಅರ್ಥಗಳಾಗಿವೆ.

ಅಲ್ಲಾಹನಿಗೆ ಸಮೀಪಗೊಳಿಸುತ್ತದೆಯೆಂದು ಧಾರ್ಮಿಕ-


ವಾಗಿ ರುಜುವಾತಾದ ಯಾವುದಾದರೂ ಮಾರ್ಗವನ್ನು
ಸ್ವೀಕರಿಸಿ ಅಲ್ಲಾಹನಿಗೆ ಸಮೀಪವಾಗುವುದನ್ನು ಧಾರ್ಮಿಕ
ಪರಿಭಾಷೆಯಲ್ಲಿ ‘ತವಸ್ಸುಲ್’ ಎಂದು ಕರೆಯಲಾಗುತ್ತದೆ.
ಅಲ್ಲಾಹನ ಪ್ರೀತಿಗೆ ಪಾತ್ರವಾಗಲು ಯಾವುದಾದರೂ
ಇಬಾದತ್ತನ್ನು ನಿರ್ವಹಿಸುವುದು, ಅಲ್ಲಾಹನ ಬಳಿ ಉನ್ನತ
ದರ್ಜೆ ಪಡೆಯಲು, ಬಯಸಿದ ಕಾರ್ಯ ನೆರವೇರಲು,
ಲಾಭ ಪಡೆಯಲು, ಹಾನಿ ನಿವಾರಿಸಲು ಅಥವಾ ಐಹಿಕ
ಮತ್ತು ಪಾರತ್ರಿಕವಾದ ಯಾವುದಾದರೂ ಉದ್ದೇಶವನ್ನು
ತವಸ್ಸುಲ್ — 3

ಈಡೇರಿಸಿಕೊಳ್ಳಲು ಪ್ರವಾದಿಯವರು(ಸ) ತ�ೋರಿಸಿಕೊಟ್ಟ


ಯಾವುದಾದರೂ ಮಾರ್ಗವನ್ನು ಸ್ವೀಕರಿಸುವುದನ್ನು
‘ತವಸ್ಸುಲ್’ ಎನ್ನಲ ಾಗುತ್ತದೆ. ಒಟ್ಟಿನಲ್ಲಿ ತವಸ್ಸುಲ್
ಮಾಡುವುದು ಧಾರ್ಮಿಕವಾಗಿ ಅಂಗೀಕರಿಸಲಾದ
ಯಾವುದಾದರೂ ಕಾರ್ಯದ ಮೂಲಕವಾಗಿರಬೇಕಾ-
ದುದು ಅಗತ್ಯ.

ತವಸ್ಸುಲ್‌ನ ಷರತ್ತುಗಳು

ತವಸ್ಸುಲ್ ಯಶಸ್ವಿಯಾಗಲು ಈ ಕೆಳಗಿನ ಮೂರು


ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

1. ತವಸ್ಸುಲ್ ಮಾಡುವ ವ್ಯಕ್ತಿ ಸತ್ಯವಿಶ್ವಾಸಿಯಾ-


ಗಿರಬೇಕು. ಸತ್ಯವಿಶ್ವಾಸಿಗಳಲ್ಲದವರ ತವ-
ಸ್ಸುಲ್ ಸ್ವೀಕಾರವಲ್ಲ. ಅದೇ ರೀತಿ ತವಸ್ಸುಲ್
ಮಾಡುವವನು ತನ್ನ ತವಸ್ಸುಲ್‌ನ ಮೂಲಕ
ಅಲ್ಲಾಹನ ಸಾಮೀಪ್ಯವನ್ನು ಬಯಸಬೇಕು.
ತವಸ್ಸುಲ್ — 4

ಅಲ್ಲಾಹು ನಿಷಿದ್ಧಗೊಳಿಸಿದ ಅಥವಾ ವಿರ�ೋ-


ಧಿಸಿದ ಕಾರ್ಯವನ್ನು ಸಾಧಿಸುವುದಕ್ಕಾಗಿ
ತವಸ್ಸುಲ್ ಮಾಡಬಾರದು.

2. ತವಸ್ಸುಲ್ ಮಾಡುವುದು ಅಲ್ಲಾಹನಿಗೆ


ಸಮೀಪವಾಗಲು ಅಲ್ಲಾಹು ಅನುಮತಿ
ನೀಡಿದ ಕಾರ್ಯದ ಮೂಲಕವಾಗಿರಬೇಕು.

3. ತವಸ್ಸುಲ್ ಮಾಡಲಾಗುವ ಸತ್ಕರ್ಮವು


ಧರ್ಮದಲ್ಲಿ ಅಂಗೀಕೃತವಾಗಿದ್ದು ಪ್ರವ ಾದಿ-
ಯವರ(ಸ) ಸುನ್ನತ್ನ
ತಿ ಪ್ರಕ ಾರವಾಗಿರಬೇಕು.
ಅದರಲ್ಲಿ ಸೇರ್ಪಡೆಯೋ ಕಡಿತವೋ
ಮಾಡಬಾರದು. ಅದನ್ನು ನಿರ್ವಹಿಸಲು
ಹೇಳಿದ ಸ್ಥಳ ಮತ್ತು ಸಮಯವಲ್ಲದೆ ಬೇರೆ
ಸ್ಥಳ ಸಮಯದಲ್ಲಿ ನಿರ್ವಹಿಸಬಾರದು.
ತವಸ್ಸುಲ್ — 5

ತವಸ್ಸುಲ್‌ನ ವಿಧಗಳು

ತವಸ್ಸುಲನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.

1. ಧಾರ್ಮಿಕವಾಗಿ ಅಂಗೀಕೃತ ತವಸ್ಸುಲ್

2. ಧಾರ್ಮಿಕವಾಗಿ ತಿರಸ್ಕೃತ ತವಸ್ಸುಲ್

ಧಾರ್ಮಿಕವಾಗಿ ಅಂಗೀಕೃತ ತವಸ್ಸುಲ್

ಅಲ್ಲಾಹು ಪ್ರೀತಿಸುವ ಮತ್ತು ಅಲ್ಲಾಹನಿಗೆ ತೃಪ್ತಿ ನೀಡುವ


ಕಡ್ಡಾಯ ಅಥವಾ ಐಚ್ಛಿಕ ಆರಾಧನೆಗಳ ಮೂಲಕ
ಅಲ್ಲಾಹನಿಗೆ ಸಮೀಪವಾಗುವುದನ್ನು ‘ಅಂಗೀಕೃತ
ತವಸ್ಸುಲ್’ ಎನ್ನಲ ಾಗುತ್ತದೆ. ಅದು ಮಾತು, ಕೆಲಸ,
ವಿಶ್ವಾಸ ಯಾವುದೂ ಆಗಿರಬಹುದು.

ಇದರಲ್ಲಿ ಮೂರು ವಿಧಗಳಿವೆ.

1. ಅಲ್ಲಾಹನ ಹೆಸರು ಮತ್ತು ಗುಣವಿಶೇಷಣಗಳ


ತವಸ್ಸುಲ್ — 6

ಮೂಲಕ ತವಸ್ಸುಲ್ ಮಾಡುವುದು. ಇದು


ಅತ್ಯುತಮ
್ತ ವಾದ ಮತ್ತು ಅತಿಶ್ರೇಷ್ಠವ ಾದ
ತವಸ್ಸುಲ್.

ಅಲ್ಲಾಹು ಹೇಳುತ್ತಾನೆ: “ಅತ್ಯುತಮ


್ತ ವಾದ
ಹೆಸರುಗಳು ಅಲ್ಲಾಹನದ್ದಾಗಿವೆ. ಆದ್ದರಿಂದ
ಅವುಗಳ ಮೂಲಕ ಅವನೊಡನೆ ಪ್ರಾರ್ಥಿಸಿ-
ರಿ.” (ಕುರ್‌ಆನ್ 7:180)

ಅಲ್ಲಾಹನ ಹೆಸರು ಹೇಳಿ ಅವನಲ್ಲಿ


ಪ್ರಾರ್ಥಿಸುವಾಗ ಈ ತವಸ್ಸುಲ್ ಉಂಟಾಗು-
ತ್ತದೆ. ಉದಾಹರಣೆಗೆ, ಓ ರಹ್ಮಾನ್ ಆಗಿರುವ
ಅಲ್ಲಾಹನೇ, ನನಗೆ ಕರುಣೆ ತ�ೋರು, ಓ
ಗಫೂರ್ ಆಗಿರುವ ಅಲ್ಲಾಹನೇ, ನನ್ನ
ಪಾಪವನ್ನು ಕ್ಷಮಿಸು ಎಂದು ಹೇಳುವುದು.
ಇದು ಕುರ್‌ಆನ್ ಮತ್ತು ಸುನ್ನತ್ನ
ತಿ ಲ್ಲಿ
ತವಸ್ಸುಲ್ — 7

ದೃಢೀಕೃತವಾದ ತವಸ್ಸುಲ್ ಆಗಿದ್ದು ಪ್ರವ ಾ-


ದಿಯವರು(ಸ) ಮತ್ತು ಸಹಾಬಿಗಳು ಇದನ್ನು
ನಿರ್ವಹಿಸಿದ್ದಾರೆ.

2. ತಾನು ಮಾಡಿದ ಯಾವುದಾದರೂ


ಸತ್ಕರ್ಮವನ್ನು ಮುಂದಿಟ್ಟು ತವಸ್ಸುಲ್
ಮಾಡುವುದು. ಉದಾಹರಣೆಗೆ, ಓ ಅಲ್ಲಾಹ್
ನಿನ್ನಲ್ಲಿ ನನಗಿರುವ ವಿಶ್ವಾಸದ ಮೂಲಕ
ನಾನು ನಿನ್ನಲ್ಲಿ ಪ್ರಾರ್ಥಿಸುತ್ತೇನೆ ಎಂದು
ಹೇಳುವುದು, ಓ ಅಲ್ಲಾಹ್ ನಿನ್ನ ಪ್ರವ ಾದಿಯ-
ಲ್ಲಿ ನನಗಿರುವ ಪ್ರೀತಿಯ ಮೂಲಕ ನಾನು
ನಿನ್ನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳುವುದು
ಇತ್ಯಾದಿ. ಅದೇ ರೀತಿ ನಮಾಝ್, ಉಪವಾಸ,
ಕುರ್‌ಆನ್ ಪಾರಾಯಣ, ದಾನಧರ್ಮ,
ಅಲ್ಲಾಹು ಆದೇಶಿಸಿದ ಕಾರ್ಯವನ್ನು
ಮಾಡುವುದು, ಅಲ್ಲಾಹು ವಿರ�ೋಧಿಸಿದ ಕಾ-
ತವಸ್ಸುಲ್ — 8

ರ್ಯದಿಂದ ದೂರವಾಗುವುದು ಮುಂತಾದ


ಯಾವುದೇ ಸತ್ಕರ್ಮವನ್ನು ಮುಂದಿಟ್ಟು
ಅಲ್ಲಾಹನಲ್ಲಿ ಪ್ರಾರ್ಥಿಸುವುದು. ಗುಹೆಯಲ್ಲಿ
ಸಿಲುಕಿದ ಮೂವರು ತಮ್ಮ ಸತ್ಕರ್ಮಗಳನ್ನು
ಮುಂದಿಟ್ಟು ಅಲ್ಲಾಹನಲ್ಲಿ ಪ್ರಾರ್ಥಿಸಿದಾಗ
ಗುಹೆಯ ಬಾಗಿಲು ತೆರೆದು ಅವರು ಅಲ್ಲಿಂದ
ಪಾರಾದ ಘಟನೆ ಇದಕ್ಕೊಂದು ಉತ್ತಮ
ಉದಾಹರಣೆಯಾಗಿದೆ.

3. ಸಜ್ಜನರ ‘ಪ್ರಾರ್ಥನೆಯ’ ಮೂಲಕ ತವಸ್ಸುಲ್


ಮಾಡುವುದು. ಅಂದರೆ ಒಬ್ಬ ಸಜ್ಜನ ವ್ಯಕ್ಯ
ತಿ
ಬಳಿಗೆ ಹ�ೋಗಿ ತನಗ�ೋಸ್ಕರ ಅಲ್ಲಾಹನಲ್ಲಿ
ಪ್ರಾರ್ಥಿಸಬೇಕೆಂದು ವಿನಂತಿಸುವುದು. ಇದು
ಕುರ್‌ಆನ್ ಮತ್ತು ಸುನ್ನತ್ನ
ತಿ ಲ್ಲಿ ದೃಢೀಕೃತ-
ವಾದ ತವಸ್ಸುಲ್ ಆಗಿದೆ.

ಸತ್ಯವಿಶ್ವಾಸಿಗಳ ಪ್ರಾರ್ಥನೆಯನ್ನು ಉಲ್ಲೇಖಿಸಿ


ತವಸ್ಸುಲ್ — 9

ಅಲ್ಲಾಹು ಹೇಳುತ್ತಾನೆ: “ಅವರ ನಂತರ


ಬಂದವರು ಹೇಳುತ್ತಾರೆ, ಓ ನಮ್ಮ ರಬ್ಬೇ,
ನಮಗೂ ನಮಗಿಂತ ಮುಂಚೆ ಸತ್ಯವಿಶ್ವಾ-
ಸದೊಂದಿಗೆ ಮುಂಚೂಣಿಯಲ್ಲಿರುವರಿಗೂ
ಕ್ಷಮಿಸು.” (ಕುರ್‌ಆನ್ 56:10)

ಪ್ರವ ಾದಿ(ಸ) ಹೇಳುತ್ತಾರೆ, “ಒಬ್ಬ ಸತ್ಯವಿ-


ಶ್ವಾಸಿ ತನ್ನ ಸಹ�ೋದರನ ಅನುಪಸ್ಥಿತಿಯಲ್ಲಿ
ಅವನಿಗಾಗಿ ಪ್ರಾರ್ಥಿಸುವ ಪ್ರಾರ್ಥನೆಯನ್ನು
ಅಲ್ಲಾಹು ಸ್ವೀಕರಿಸುತ್ತಾನೆ.” (ಮುಸ್ಲಿಂ)

ಅದೇ ರೀತಿ ಬರಗಾಲವುಂಟಾದಾಗ ಉಮ-


ರ್(ರ) ರವರು ಅಬ್ಬಾಸ್(ರ) ರವರ ಬಳಿಗೆ
ಹ�ೋಗಿ ಅವರಲ್ಲಿ ಪ್ರಾರ್ಥಿಸಲು ವಿನಂತಿಸಿದ
ಘಟನೆ ಇದಕ್ಕೆ ಉದಾಹರಣೆಯಾಗಿದೆ. ಓ
ಅಲ್ಲಾಹ್, ನಾವು ಪ್ರವ ಾದಿಯವರನ್ನು(ಸ)
ತವಸ್ಸುಲ್ ಮಾಡಿ ಪ್ರಾರ್ಥಿಸಿದಾಗ ನೀನು
ತವಸ್ಸುಲ್ — 10

ನಮಗೆ ಮಳೆ ಸುರಿಸುತ್ತಿದ್ದೆ. ಈಗ ನಾವು


ಪ್ರವ ಾದಿಯವರ(ಸ) ಚಿಕ್ಕಪ್ಪರನ್ನು ತವಸ್ಸುಲ್
ಮಾಡಿ ಪ್ರಾರ್ಥಿಸುತ್ತಿದದೇ್ ವೆ. ನಮಗೆ ಮಳೆ
ಸುರಿಸು ಎಂದು ಉಮರ್(ರ) ಪ್ರಾರ್ಥಿಸು-
ತ್ತಿದರ
್ದ ು. ಅಂದರೆ ಪ್ರವ ಾದಿಯವರು(ಸ)
ಬದುಕಿದ್ದಾಗ ನಾವು ಅವರ ಪ್ರಾರ್ಥನೆಯ
ಮೂಲಕ ನಿನ್ನಲ್ಲಿ ಪ್ರಾರ್ಥಿಸುತ್ತಿದ್ದೆವು. ಈಗ
ಪ್ರವ ಾದಿಯವರು(ಸ) ಬದುಕಿಲ್ಲ. ಆದ್ದರಿಂದ
ನಾವು ಅವರ ಚಿಕ್ಕಪ್ಪ ಅಬ್ಬಾಸ್(ರ)
ರವರ ಪ್ರಾರ್ಥನೆಯ ಮೂಲಕ ನಿನ್ನಲ್ಲಿ
ಪ್ರಾರ್ಥಿಸುತ್ತಿದದೇ್ ವೆ ಎಂದು ಉಮರ್(ರ)
ಪ್ರಾರ್ಥಿಸುತ್ತಿದರ
್ದ ು.

ಈ ಮೂರು ವಿಧಗಳ ತವಸ್ಸುಲನ್ನು ಇಸ್ಲಾಂ ಅಂಗೀಕರಿಸಿ-


ದೆ. ಇವುಗಳ ಹೊರತಾದ ತವಸ್ಸುಲ್‌ಗಳು ತಿರಸ್ಕೃತ ಮತ್ತು
ನಿಷಿದ್ಧವಾಗಿವೆ.
ತವಸ್ಸುಲ್ — 11

ತಿರಸ್ಕೃತ ಮತ್ತು ನಿಷಿದ್ಧ ತವಸ್ಸುಲ್

ಅಲ್ಲಾಹು ಪ್ರೀತಿಸದ ಮತ್ತು ಅಲ್ಲಾಹನಿಗೆ ಇಷ್ಟವಿಲ್ಲದ


ಕಾರ್ಯಗಳ ಮೂಲಕ ತವಸ್ಸುಲ್ ಮಾಡುವುದನ್ನು
‘ತಿರಸ್ಕೃತ ಅಥವಾ ನಿಷಿದ್ಧ ತವಸ್ಸುಲ್’ ಎನ್ನಲ ಾಗುತ್ತದೆ.

ಇದರಲ್ಲಿ ಪ್ರಮುಖವಾಗಿ ಮೂರು ವಿಧಗಳಿವೆ.

1. ಹಕ್ಕ್ (ಹಕ್ಕು), ಜಾಹ್ (ಸ್ಥಾನಮಾನ)


ಗಳ ಮೂಲಕ ತವಸ್ಸುಲ್ ಮಾಡುವುದು.
ಅಂದರೆ ಒಬ್ಬ ವ್ಯಕ್ಯ
ತಿ ಹಕ್ಕ್, ಜಾಹ್‌ಗಳನ್ನು
ಮುಂದಿಟ್ಟು ಅಲ್ಲಾಹನಲ್ಲಿ ಪ್ರಾರ್ಥಿಸುವುದು.
ಉದಾಹರಣೆಗೆ, ಓ ಅಲ್ಲಾಹ್ ಇಂತಿಂತಹವನ
ಹಕ್ಕ್, ಜಾಹ್‌ಗಳ ಮೂಲಕ ನಾನು ಕೇಳು-
ತ್ತಿದದೇ್ ನೆ, ನನ್ನ ಬಯಕೆಯನ್ನು ಈಡೇರಿಸು,
ಅಥವಾ ನನ್ನ ಕಷ್ಟವನ್ನು ನಿವಾರಿಸು ಎಂದು
ಹೇಳುವುದು. ಇದು ತಿರಸ್ಕೃತ ಮತ್ತು ನಿಷಿದ್ಧ
ತವಸ್ಸುಲ್ — 12

ತವಸ್ಸುಲ್ ಆಗಿದೆ. ಇದಕ್ಕೆ ಕುರ್‌ಆನ್ ಅಥವಾ


ಸುನ್ನತ್ನ
ತಿ ಲ್ಲಿ ಯಾವುದೇ ಪುರಾವೆಯಿಲ್ಲ.
ಅಲ್ಲಾಹನ ಹೆಸರು, ಗುಣವಿಶೇಷಣಗಳ
ಮೂಲಕ ಪ್ರಾರ್ಥಿಸಬೇಕೆಂದು ಇಸ್ಲಾಂ
ಹೇಳಿದೆಯೇ ವಿನಾ ಸಜ್ಜನರ ಹಕ್ಕ್ ಜಾಹ್‌ಗಳ
ಮೂಲಕ ಪ್ರಾರ್ಥಿಸಬೇಕೆಂದು ಹೇಳಿಲ್ಲ.

ಸೃಷ್ಟಿಗಳ ಸ್ಥಾನಮಾನ ಎಷ್ಟೇ ಉನ್ನತವಾ-


ಗಿದ್ದರೂ ಅವರು ಅಲ್ಲಾಹನ ಸೃಷ್ಟಿಗಳೇ
ಆಗಿದ್ದಾರೆ. ಅವರು ಮಲಕ್‌ಗಳಾಗಿದ್ದರೂ ಪ್ರ-
ವಾದಿಗಳಾಗಿದ್ದರೂ ಸಹ ಅವರು ಅಲ್ಲಾಹನ
ದಾಸರೇ ಆಗಿದ್ದಾರೆ. ಅವರ ಸ್ಥಾನಮಾನಗಳ-
ನ್ನು ಹೇಳಿದರೆ ಕಾರ್ಯವನ್ನು ನೆರವೇರಿಸಿ-
ಕೊಡಬೇಕಾದ ನಿರ್ಬಂಧ ಅಲ್ಲಾಹನಿಗಿಲ್ಲ.
ಅಂತಹ ಯಾವುದೇ ಹಕ್ಕು, ಸ್ಥಾನಮಾನಗಳು
ಸೃಷ್ಟಿಗಳಿಗಿಲ್ಲ. ಸೃಷ್ಟಿಗಳೆಲ್ಲರೂ ಅಲ್ಲಾಹನನ್ನು
ತವಸ್ಸುಲ್ — 13

ಅವಲಂಬಿಸುವವರು. ಅಲ್ಲಾಹು ಯಾರನ್ನೂ


ಅವಲಂಬಿಸದೆ ಸ್ವಯಂ ಅಸ್ತಿತ್ವದಲ್ಲಿರುವ-
ವನು. ಸೃಷ್ಟಿಗಳ ಸ್ಥಾನಮಾನವನ್ನು ಹೇಳಿ
ಅಲ್ಲಾಹನಲ್ಲಿ ಪ್ರಾರ್ಥಿಸುವುದನ್ನು ಇಸ್ಲಾಂ
ವಿರ�ೋಧಿಸುತ್ತದೆ. ಈ ತವಸ್ಸುಲ್ ತಿರಸ್ಕೃತವೂ
ನಿಷಿದ್ಧವೂ ಆಗಿದೆ.

2. ಸಜ್ಜನರಲ್ಲಿ ಪ್ರಾರ್ಥಿಸುವುದು, ಸಹಾಯ


ಕೇಳುವುದು ಮತ್ತು ಅವರ ಹೆಸರಲ್ಲಿ ಹರಕೆ
ಹೊರುವುದು. ಇದರ ಮೂಲಕ ಅಲ್ಲಾಹನ
ಸಾಮೀಪ್ಯವನ್ನು ಪಡೆಯಲು ಬಯಸುವುದು.
ಅಥವಾ ಕಷ್ಟಗಳು ನಿವಾರಣೆಯಾಗಲು
ಬಯಸುವುದು. ಇದು ಕೂಡ ತಿರಸ್ಕೃತ ಮತ್ತು
ನಿಷಿದ್ಧ ತವಸ್ಸುಲ್ ಆಗಿದೆ. ಪ್ರಾರ್ಥಿಸಬೇ-
ಕಾದುದು ಅಲ್ಲಾಹನಲ್ಲಿ ಮಾತ್ರ. ಏಕೆಂದರೆ
ಪ್ರಾರ್ಥನೆ ಆರಾಧನೆಯಾಗಿದೆ. ಆರಾಧನೆಗ-
ತವಸ್ಸುಲ್ — 14

ಳನ್ನು ಅಲ್ಲಾಹನಿಗೆ ಮಾತ್ರ ಸಲ್ಲಿಸಬೇಕಾಗಿದೆ.


ಅಲ್ಲಾಹು ಅಲ್ಲದವರಿಗೆ ಆರಾಧನೆಗಳನ್ನು
ಸಲ್ಲಿಸುವುದು ನಿಷಿದ್ಧವ ಾಗಿದೆ. ಅದು ಅಕ್ಷಮ್ಯ
ಅಪರಾಧವಾಗಿದ್ದು ಅದನ್ನು ಮಾಡುವವರು
ಶಾಶ್ವತವಾಗಿ ನರಕವಾಸಿಗಳಾಗುತ್ತಾರೆ.

ಪ್ರಾರ್ಥನೆಗಳನ್ನು ಸ್ವೀಕರಿಸುವ ಅರ್ಹತೆ-


ಯಿರುವುದು ಅಲ್ಲಾಹನಿಗೆ ಮಾತ್ರ. ಅದು
ಅಲ್ಲಾಹನ ಗುಣವಿಶೇಷಣವಾಗಿದೆ. ಅವನು
ಪ್ರಾರ್ಥನೆಗಳನ್ನು ಸ್ವೀಕರಿಸುತ್ತಾನೆ ಮತ್ತು
ಉತ್ತರಿಸುತ್ತಾನೆ. ಕಷ್ಟಗಳನ್ನು ನಿವಾರಿಸುವ
ಶಕ್ತಿಯಿರುವುದು ಅಲ್ಲಾಹನಿಗೆ ಮಾತ್ರ.
ಅಲ್ಲಾಹು ಅಲ್ಲದವರಿಗೆ ಆ ಶಕ್ತಿಯಿಲ್ಲ.
ಅವರಿಗೆ ಆ ಅರ್ಹತೆಯೂ ಇಲ್ಲ. ಮರಣ-
ಹೊಂದಿದವರೊಂದಿಗೆ ಪ್ರಾರ್ಥಿಸುವುದು
ಮಹಾ ಅಪರಾಧವಾಗಿದ್ದು ಇಸ್ಲಾಂ ಅದನ್ನು
ತವಸ್ಸುಲ್ — 15

ಅಕ್ಷಮ್ಯವೆಂದು ಹೇಳಿದೆ.

ಅಲ್ಲಾಹು ಹೇಳುತ್ತಾನೆ: “ನೀವು ಅವರೊಡನೆ


ಪ್ರಾರ್ಥಿಸಿದರೆ ಅವರು ನಿಮ್ಮ ಪ್ರಾರ್ಥನೆಯ-
ನ್ನು ಕೇಳುವುದಿಲ್ಲ. ಇನ್ನು ಕೇಳಿದರೂ ಅವರು
ಉತ್ತರಿಸುವುದಿಲ್ಲ. ಪುನರುತ್ಥಾನ ದಿನ ಅವರು
ನಿಮ್ಮ ಈ ಸಹಭಾಗಿತ್ವವನ್ನು (ಶಿರ್ಕ್) ನಿಷೇಧಿ-
ಸುತ್ತಾರೆ. ಸೂಕ್ಷ್ಮಜ್ಞಾನಿಯಾದ ಅಲ್ಲಾಹನಂತೆ
ನಿಮಗೆ ವಿಷಯಗಳನ್ನು ತಿಳಿಸಿಕೊಡುವವರು
ಯಾರೂ ಇಲ್ಲ.” (ಕುರ್‌ಆನ್ 35:14)

ಮಕ್ಕಾ ಮುಶ್ರಿಕರು ಅಲ್ಲಾಹು ಅಲ್ಲದವರಲ್ಲಿ


ಪ್ರಾರ್ಥಿಸುತ್ತಿದರ
್ದ ು. ಇದರ ಬಗ್ಗೆ ಅವರಲ್ಲಿ
ಕೇಳಿದರೆ ಅವರು ನಮ್ಮನ್ನು ಅಲ್ಲಾಹನಿಗೆ
ಸಮೀಪಗೊಳಿಸುತ್ತಾರೆ. ಆದ್ದರಿಂದ ನಾವು
ಅವರಲ್ಲಿ ಪ್ರಾರ್ಥಿಸುತ್ತೇವೆ ಎನ್ನುತ್ದ
ತಿ ರ
್ದ ು.
ಆದರೆ ಇವರ ಈ ವಾದವನ್ನು ಕುರ್‌ಆನ್
ತವಸ್ಸುಲ್ — 16

ಉಗ್ರವ ಾಗಿ ಖಂಡಿಸಿದೆ.

ಅಲ್ಲಾಹು ಹೇಳುತ್ತಾನೆ. “ಅಲ್ಲಾಹನ


ಹೊರತು ಇತರರನ್ನು ತಮ್ಮ ರಕ್ಷಕರನ್ನಾಗಿ
ಮಾಡಿಕೊಂಡವರು ಹೇಳುತ್ತಾರೆ, ನಾವು
ಇವರನ್ನು ಆರಾಧಿಸುವುದು ಇವರು ನಮ್ಮನ್ನು
ಅಲ್ಲಾಹನಿಗೆ ಸಮೀಪಗೊಳಿಸುತ್ತಾರೆ ಎಂಬ
ನಂಬಿಕೆಯಿಂದಾಗಿದೆ.” (ಕುರ್‌ಆನ್ 39:3)

“ಅಲ್ಲಾಹನನ್ನು ಬಿಟ್ಟು ತಮಗೆ ಯಾವುದೇ


ಹಾನಿಯೋ ಲಾಭವೋ ಉಂಟುಮಾಡದ-
ವರನ್ನು ಅವರು ಆರಾಧಿಸುತ್ತಿದ ್ದಾರೆ. (ಅದರ
ಬಗ್ಗೆ ಅವರೊಡನೆ ಕೇಳಿದರೆ) ಇವರು ನಮಗೆ
ಅಲ್ಲಾಹನ ಬಳಿ ಶಿಫಾರಸ್ಸು ಮಾಡುತ್ತಾ-
ರೆಂದು ಅವರು ಹೇಳುತ್ತಾರೆ.” (ಕುರ್‌ಆನ್
10:18)
ತವಸ್ಸುಲ್ — 17

ಅದೇ ರೀತಿ ಕಷ್ಟಗಳು ನಿವಾರಣೆಯಾಗಲು


ಅಲ್ಲಾಹು ಅಲ್ಲದವರ ಹೆಸರಲ್ಲಿ ಹರಕೆ
ಹೊರುವುದು. ಇದು ಕೂಡ ಇಸ್ಲಾಂ
ವಿರ�ೋಧಿಸಿದ ಕಾರ್ಯವಾಗಿದೆ. ಅಲ್ಲಾಹು
ಅಲ್ಲದವರ ಹೆಸರಲ್ಲಿ ಹರಕೆ ಹೊರುವುದ-
ರಿಂದ ಅಲ್ಲಾಹನ ಸಾಮೀಪ್ಯ ಸಿಗುವುದಿಲ್ಲ.
ಬದಲಾಗಿ ಇದು ಅಲ್ಲಾಹನಿಗೆ ಇಷ್ಟವಿಲ್ಲದ
ಕಾರ್ಯವಾಗಿದೆ. ಹರಕೆ ಹೊರಬೇಕಾದುದು
ಅಲ್ಲಾಹನಿಗೆ ಮಾತ್ರ. ಅಲ್ಲಾಹು ಅಲ್ಲದವರಿಗೆ,
ಅದು ಪ್ರವ ಾದಿಗಳಾಗಿರಲಿ, ಸಜ್ಜನರಾಗಿರಲಿ,
ಮಹಾತ್ಮರ ಾಗಿರಲಿ, ಯಾರೇ ಆದರೂ ಅವರ
ಹೆಸರಲ್ಲಿ ಹರಕೆ ಹೊರುವುದು ನಿಷಿದ್ಧವ ಾ-
ಗಿದೆ. ಗ�ೋರಿಗಳಿಗೆ, ದರ್ಗಾಗಳಿಗೆ ಹರಕೆ
ಹೊರುವುದು ನಿಷಿದ್ಧವ ಾಗಿದೆ.

ತಮ್ಮ ದೇವರುಗಳಿಗೆ ಹರಕೆ ಹೊರುತ್ತಿದ್ದ


ತವಸ್ಸುಲ್ — 18

ಮಕ್ಕಾ ಮುಶ್ರಿಕ್‌ಗಳ ಬಗ್ಗೆ ಅಲ್ಲಾಹು


ಹೇಳುತ್ತಾನೆ.

“ಅಲ್ಲಾಹು ಸೃಷ್ಟಿಸಿದ ಕೃಷಿ ಮತ್ತು ಜಾನು-


ವಾರುಗಳಲ್ಲಿ ಅವರು ಅಲ್ಲಾಹನಿಗೆ ಒಂದು
ಪಾಲನ್ನು ಇಟ್ಟು ಅವರ ವಾದ ಪ್ರಕ ಾರ
ಇದು ಅಲ್ಲಾಹನಿಗೆ ಮತ್ತು ಇದು ನಮ್ಮ
ಸಹಭಾಗಿಗಳಿಗೆ (ದೇವರುಗಳಿಗೆ) ಎಂದು
ಹೇಳುತ್ತಾರೆ. ಆದರೆ ವಾಸ್ತವವಾಗಿ ಅವರು
ಅವರ ಸಹಭಾಗಿಗಳಿಗೆ (ದೇವರುಗಳಿಗೆ)
ಇಟ್ಟ ಪಾಲು ಅಲ್ಲಾಹನಿಗೆ ತಲುಪುವುದಿಲ್ಲ.
ಆದರೆ ಅವರು ಅಲ್ಲಾಹನಿಗೆ ಇಟ್ಟ ಪಾಲು
ಅವರ ಸಹಭಾಗಿಗಳಿಗೆ ತಲುಪುತ್ತದೆ. ಅವರು
ನೀಡುವ ತೀರ್ಪು ಬಹಳ ಕೆಟ್ಟದ ಾಗಿದೆ.”
(ಕುರ್‌ಆನ್ 6:136)

ಪ್ರಾರ್ಥನೆಯಂತೆಯೇ ಹರಕೆ ಕೂಡ ಒಂದು


ತವಸ್ಸುಲ್ — 19

ಆರಾಧನೆಯಾಗಿದೆ. ಆರಾಧನೆಗಳನ್ನು
ಅಲ್ಲಾಹನಿಗೆ ಮಾತ್ರ ಅರ್ಪಿಸಬೇಕಾಗಿದೆ.
ಆರಾಧನೆಗಳನ್ನು ಅಲ್ಲಾಹು ಅಲ್ಲದವರಿಗೆ
ಅರ್ಪಿಸುವುದು ಶಿರ್ಕ್ ಆಗಿದ್ದು ಅದು
ಅಲ್ಲಾಹು ಕ್ಷಮಿಸದ ಮಹಾ ಅಪರಾಧ-
ವಾಗಿದೆ.

3. ಅಲ್ಲಾಹು ಅಲ್ಲದವರ ಹೆಸರಲ್ಲಿ ಬಲಿ


ನೀಡುವುದು. ಅಲ್ಲಾಹು ಅಲ್ಲದವರ ಹೆಸರಲ್ಲಿ
ಬಲಿ ನೀಡುವುದನ್ನು ಇಸ್ಲಾಂ ವಿರ�ೋಧಿಸಿದೆ.
ಇದರ ಮೂಲಕ ಅಲ್ಲಾಹನ ಸಾಮೀಪ್ಯ
ಪಡೆಯಲು ಸಾಧ್ಯವಿಲ್ಲ. ಇಷ್ಟಾರ್ಥ ಸಿದ್ಧಿಯಾ-
ಗಲು, ಕಷ್ಟ ನಿವಾರಣೆಯಾಗಲು ಅಲ್ಲಾಹು
ಅಲ್ಲದವರಿಗೆ ಬಲಿ ನೀಡುವುದು ಅಕ್ಷಮ್ಯ
ಅಪರಾಧವಾಗಿದೆ. ಬಲಿ ನೀಡಬೇಕಾದುದು
ಅಲ್ಲಾಹನ ಹೆಸರಲ್ಲಿ ಮಾತ್ರ. ಬಲಿ ಒಂದು
ತವಸ್ಸುಲ್ — 20

ಆರಾಧನಾ ಕರ್ಮವಾಗಿದ್ದು ಅದು ಅಲ್ಲಾಹ-


ನಿಗೆ ಮಾತ್ರ ಸಲ್ಲತಕ್ಕದ್ದಾಗಿದೆ.

ಒಟ್ಟಿನಲ್ಲಿ, ಅಲ್ಲಾಹು ಅಂಗೀಕರಿಸಿದ ತವಸ್ಸುಲ್ ಮೂರು


ವಿಧಗಳಲ್ಲಿರುವ ತವಸ್ಸುಲ್ ಮಾತ್ರ. ಒಂದು, ಅಲ್ಲಾಹನ
ಹೆಸರು ಮತ್ತು ಗುಣವಿಶೇಷಣಗಳನ್ನು ಮುಂದಿಟ್ಟು
ಅವನಲ್ಲಿ ಪ್ರಾರ್ಥಿಸುವುದು. ಎರಡು, ಸತ್ಕರ್ಮವನ್ನು
ಮುಂದಿಟ್ಟು ಅಲ್ಲಾಹನಲ್ಲಿ ಪ್ರಾರ್ಥಿಸುವುದು. ಮೂರು,
ಸಜ್ಜನರಲ್ಲಿ ಪ್ರಾರ್ಥಿಸುವಂತೆ ವಿನಂತಿ ಮಾಡುವುದು.
ಈ ಮೂರು ರೀತಿಯ ತವಸ್ಸುಲ್ ಇಸ್ಲಾಂ ಧರ್ಮದಲ್ಲಿ
ಅಂಗೀಕೃತವಾಗಿದ್ದು ಕುರ್‌ಆನ್ ಮತ್ತು ಸುನ್ನತ್ನ
ತಿ ಲ್ಲಿ
ಇದಕ್ಕೆ ಸ್ಪಷ್ಟ ಪುರಾವೆಗಳಿವೆ. ಇದರ ಹೊರತಾದ ಇತರ
ತವಸ್ಸುಲ್‌ಗಳಿಗೆ ಇಸ್ಲಾಂ ಧರ್ಮದಲ್ಲಿ ಯಾವುದೇ
ಪುರಾವೆಯಿಲ್ಲ. ಅವುಗಳಲ್ಲಿ ಕೆಲವು ಶಿರ್ಕ್ ಆಗಿದ್ದರೆ ಇನ್ನು
ಕೆಲವು ಬಿದ್‌ಅತ್ ಆಗಿವೆ. ಮುಸಲ್ಮಾನರು ಅವುಗಳನ್ನು
ತೊರೆಯಬೇಕಾದುದು ಕಡ್ಡಾಯವಾಗಿದೆ.
ತವಸ್ಸುಲ್ — 21

JAMIYATHE AHLE HADEES, MANGALORE


‫مســجد المسلمين‬
Sponsored by
UM

ON

UKF
TI
AR

K
A

HA
TEE U ND
JA FO

UMAR KHATHEEJA
FOUNDATION
PHONE-SQUARE 8722695551

You might also like