Professional Documents
Culture Documents
ಶಿಕ್ಷಣದಲ್ಲಿ ಲಿಂಗ ಸಮಸ್ಯೆಗಳು
ಶಿಕ್ಷಣದಲ್ಲಿ ಲಿಂಗ ಸಮಸ್ಯೆಗಳು
18 ಮತ್ತು 19ನೇ ಶತಮಾನಗಳಲ್ಲಿ ಚಾಲ್ತಿಯಲ್ಲಿದ್ದ ಕೆಲವು ಸಾಮಾಜಿಕ ಅನಿಷ್ಟಗಳೆಂದರೆ ಹೆಣ್ಣು ಶಿಶು ಹತ್ಯೆ, ವರದಕ್ಷಿಣೆ
ಪದ್ಧತಿ, ಬಾಲ್ಯವಿವಾಹ, ಸತಿಪದ್ಧತಿ, ಕೇಶಮಂಡನೆ, ದೇವದಾಸಿ, ಪರ್ದಾಪದ್ಧತಿ ಇತ್ಯಾದಿ.
ಶಿಕ್ಷಣ: 19ನೇ ಶತಮಾನದಲ್ಲಿ ಹಿಂದೂ ಸಮಾಜವು ಧಾರ್ಮಿಕ ಮೂಢನಂಬಿಕೆಗಳಿಂದ ಬಳಲುತ್ತಿದ್ದು, ಹಿಂದೂ ಧರ್ಮ
ಗ್ರಂಥಗಳು ಹೆಣ್ಣುಮಕ್ಕಳ ಶಿಕ್ಷಣವನ್ನು ಅನುಮೋದಿಸಲಿಲ್ಲ.
ಶಿಕ್ಷಣದ ಮೇಲೆ ಚಾರ್ಲ್ಸ್ ವುಡ್ ನ ವರದಿಯು ಸ್ತ್ರೀ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿತು. ವಿಶಾಲ ದೃಷ್ಟಿಕೋನದಲ್ಲಿ ಮಹಿಳೆಯ
ಶಿಕ್ಷಣವು ಸಮಾಜದಲ್ಲಿ ಮಹಿಳೆಯರ ಸ್ಥಿತಿಗಳನ್ನು ಸುಧಾರಿಸುವ ಸಾಮಾನ್ಯ ಅಭಿಯಾನದ ಒಂದು ಭಾಗವಾಯಿತು.
ಕ್ರಿಶ್ಚಿಯನ್ ಮಿಷನರಿಗಳು 1819ರಲ್ಲಿ ಕಲ್ಕತ್ತಾದಲ್ಲಿ ಮಹಿಳಾ ಬಾಲಾಪರಾಧಿ ಸಮಾಜವನ್ನು ಮೊದಲ ಬಾರಿಗೆ
ಸ್ಥಾಪಿಸಿದವು. 1856ರಲ್ಲಿ ಜಾರಿಗೊಳಿಸಿದ ಕಾನೂನು ವಿಧವಾ ಪುನರ್ ವಿವಾಹಕ್ಕೆ ಅನುಮತಿ ನೀಡಿತು. ಇದನ್ನು ಕಾಯಿದೆ
XV ಎಂದೂ ಕರೆಯುವರು.1860ರಲ್ಲಿ ಅಂಗೀಕರಿಸಲ್ಪಟ್ಟ ಕಾನೂನಿನಿಂದ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 10ಕ್ಕೆ
ಏರಿಸಲಾಯಿತು. 1872ರಲ್ಲಿ ಜಾರಿಯಾದ ಕಾನೂನು ಅಂತರ್ಜಾತಿ ವಿವಾಹ ಮತ್ತು ಅಂತರ್ ಧರ್ಮೀಯ ವಿವಾಹಕ್ಕೆ
ಅನುಮತಿ ನೀಡಿತು. 1891ರಲ್ಲಿ ಜಾರಿಯಾದ ಮತ್ತೊಂದು ಕಾನೂನು ಬಾಲ್ಯವಿವಾಹವನ್ನು ನಿಷೇಧಿಸುವ ಉದ್ದೇಶ
ಹೊಂದಿತ್ತು. ಬಾಲ್ಯವಿವಾಹವನ್ನು ತಡೆಗಟ್ಟಲು ಶಾರದಾ ಕಾಯ್ದೆಯನ್ನು 1929ರಲ್ಲಿ ಅಂಗೀಕರಿಸಲಾಯಿತು. ಈ ಕಾಯ್ದೆಯು
ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 14ಕ್ಕೆ ಮತ್ತು ಗಂಡು ಮಕ್ಕಳ ವಯಸ್ಸನ್ನು 18ಕ್ಕೆ ಹೆಚ್ಚಿಸಿತು. ನಂತರ 1949ರಲ್ಲಿ
ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 15ಕ್ಕೆ ಹೆಚ್ಚಿಸಲಾಯಿತು. 1978ರಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ಮದುವೆಯ
ವಯಸ್ಸನ್ನು ಕ್ರಮವಾಗಿ 18 ಮತ್ತು 21 ವರ್ಷಗಳಿಗೆ ಹೆಚ್ಚಿಸಲಾಯಿತು.ಕೆಲವು ಸುಧಾರಕರನ್ನು ಬ್ರಿಟಿಷ್ ಅಧಿಕಾರಿಗಳು
ಪ್ರತ್ಯಕ್ಷವಾಗಿ / ಪರೋಕ್ಷವಾಗಿ ಬೆಂಬಲಿಸಿದರೆ, ಇನ್ನೂ ಕೆಲವು ಸುಧಾರಕರು ಬ್ರಿಟಿಷ್ ಸರ್ಕಾರ ರೂಪಿಸಿದ ಸುಧಾರಣಾ
ಕ್ರಮಗಳು ಮತ್ತು ನಿಬಂಧನೆಗಳನ್ನು ಬೆಂಬಲಿಸಿದರು.
ಸಾವಿತ್ರಿಬಾಯಿ ಫುಲೆ
ಸಾವಿತ್ರಿಬಾಯಿ ಫುಲೆ ಭಾರತೀಯ ಸಾಮಾಜಿಕ ಸುಧಾರಕಿ, ಶಿಕ್ಷಣ ತಜ್ಞೆ ಮತ್ತು ಮಹಾರಾಷ್ಟ್ರದ ಕವಯಿತ್ರಿ. ಅವರನ್ನು
ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಪರಿಗಣಿಸಲಾಗಿದೆ. ಪತಿ ಜ್ಯೋತಿರಾವ್ ಫುಲೆ ಜೊತೆಗೆ ಭಾರತದಲ್ಲಿ ಮಹಿಳೆಯರ
ಹಕ್ಕುಗಳನ್ನು ಸುಧಾರಿಸುವಲ್ಲಿ ಅವರು ಪಾತ್ರ ವಹಿಸಿದ್ದಾರೆ. ಅವರನ್ನು ಸ್ತ್ರೀವಾದದ ತಾಯಿಯೆಂದು ಪರಿಗಣಿಸಲಾಗಿದೆ.
ಸಾವಿತ್ರಿಬಾಯಿ ಮತ್ತು ಅವರ ಪತಿ ಜ್ಯೋತಿಬಾ 1848ರಲ್ಲಿ ಪುಣೆಯ ಭೀಡೆವಾಡದಲ್ಲಿ ಮೊದಲ ಭಾರತೀಯ ಬಾಲಕಿಯರ
ಶಾಲೆಯನ್ನು ಸ್ಥಾಪಿಸಿದರು. ಅವರು ಜಾತಿ ಮತ್ತು ಲಿಂಗವನ್ನು ಆಧರಿಸಿದ ಜನರ ತಾರತಮ್ಯ ಮತ್ತು ಅನುಚಿತ ವರ್ತನೆಯನ್ನು
ರದ್ದುಗೊಳಿಸಲು ಕೆಲಸ ಮಾಡಿದರು. ಅವರನ್ನು ಮಹಾರಾಷ್ಟ್ರದ ಸಾಮಾಜಿಕ ಸುಧಾರಣಾ ಚಳುವಳಿಯ ಪ್ರಮುಖ ವ್ಯಕ್ತಿಯೆಂದು
ಪರಿಗಣಿಸಲಾಗಿದೆ.
ಸಾವಿತ್ರಿಬಾಯಿ ಫುಲೆಯವರು ಒಂದು ಶ್ರೀಮಂತ ರೈತ ಕುಟುಂಬದಲ್ಲಿ ಜನವರಿ 03,1831ರಲ್ಲಿ ಸತಾರ ಜಿಲ್ಲೆಯ
ನೈಗಾನ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಖಂಡೋಜಿ ನವ್ಸೆ ಪಾಟೀಲ್ ಮತ್ತು ಲಕ್ಷ್ಮೀಬಾಯಿ ಅವರ ತಂದೆ ತಾಯಿಗಳು.
ಅವರು ಒಂಭತ್ತರ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಜ್ಯೋತಿಬಾ ಫುಲೆಯನ್ನು ವಿವಾಹವಾದರು.
ಸಾವಿತ್ರಿಬಾಯಿ ಕವಯಿತ್ರಿಯೂ ಆಗಿದ್ದು ಮರಾಠಿ ಕಾವ್ಯದ ಪ್ರವರ್ತಕರೆಂದು ಪರಿಗಣಿಸಲ್ಪಟ್ಟಿದ್ದರು. ಜ್ಯೋತಿರಾವ್
ಫುಲೆಯವರ ಸಮಾಜ ಸುಧಾರಣಾ ಸಂಸ್ಥೆಗೆ ಸೇರಲು ಕೆಲವು ಮಹಿಳಾ ಶಿಕ್ಷಕರ ಅಗತ್ಯವಿತ್ತು. ಆದ್ದರಿಂದ ಅವರು ತಮ್ಮ ಪತ್ನಿಗೆ
ಶಿಕ್ಷಕಿಯಾಗಲು ಬೋಧಿಸಿದರು ಮತ್ತು ತರಬೇತಿ ನೀಡಿದರು. ಅವರನ್ನು ತರಬೇತಿ ಶಾಲೆಗೆ ಸೇರಿಸಿದರು. ಅದರಲ್ಲಿ ಅವರು
ಯಶಸ್ವಿಯಾಗಿ ತೇರ್ಗಡೆಯಾದರು. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ,1848ರಲ್ಲಿ ಪುಣೆಯಲ್ಲಿ
ಬಾಲಕಿಯರಿಗಾಗಿ ಒಂದು ಶಾಲೆಯನ್ನು ತೆರೆದರು. ಆರಂಭದಲ್ಲಿ ಒಂಭತ್ತು ಹುಡುಗಿಯರು ವಿದ್ಯಾರ್ಥಿಗಳಾಗಿ ದಾಖಲಾದರು
ಮತ್ತು ಅವರು ವಿವಿಧ ಜಾತಿಗಳಿಗೆ ಸೇರಿದವರಾಗಿದ್ದರು.
1852ರಲ್ಲಿ ಅವರು ಅಸ್ಪೃಶ್ಯ ಹುಡುಗಿಯರಿಗಾಗಿ ಶಾಲೆಯನ್ನು ತೆರೆದರು. ಸಮಾಜದ ಎಲ್ಲಾ ವಿರೋಧಗಳ ನಡುವೆಯೂ
ಬಾಲಕಿಯರಿಗೆ ಬೋಧಿಸುವುದನ್ನು ಸಾವಿತ್ರಿಬಾಯಿ ಮುಂದುವರೆಸಿದರು. ಸಾವಿತ್ರಿಬಾಯಿ ಫುಲೆಯವರು ತಮ್ಮ ಶಾಲೆಗೆ
ಹೋಗುವಾಗ ಜೊತೆಯಲ್ಲಿ ಒಂದು ಹೆಚ್ಚುವರಿ ಸೀರೆಯನ್ನು ಕೊಂಡೊಯ್ಯುತ್ತಿದ್ದರು. ಏಕೆಂದರೆ ಅವರು ಮೇಲ್ವರ್ಗದ
ಮಹಿಳೆಯರಿಂದ ಕಲ್ಲು, ಸಗಣಿಯಿಂದ ಹಲ್ಲೆಗೆ ಒಳಗಾಗುತ್ತಿದ್ದುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಲ್ಪಡುತ್ತಿದ್ದರು. ಫುಲೆ
ದಂಪತಿಗಳು ಕೆಳವರ್ಗಕ್ಕೆ ಸೇರಿದ್ದರಿಂದ ಮೇಲ್ವರ್ಗದವರಿಂದ ತಾವು ವಿರೋಧವನ್ನು ಎದುರಿಸಬೇಕಾಯಿತು. ಶೂದ್ರ
ಸಮುದಾಯದವರಿಗೆ ಸಾವಿರಾರು ವರ್ಷಗಳಿಂದ ಶಿಕ್ಷಣ ನಿರಾಕರಿಸಲಾಗಿತ್ತು. ಈ ಕಾರಣಕ್ಕಾಗಿ ಅನೇಕ ಬ್ರಾಹ್ಮಣರು ಫುಲೆ
ದಂಪತಿಗಳ ಕೆಲಸವನ್ನು ವಿರೋಧಿಸಿದರು ಮತ್ತು ದುಷ್ಟರೆಂದು ಹಣೆಪಟ್ಟಿ ಕಟ್ಟಿದರು. ಈ ಘಟನೆಗಳಿಂದ ಸಾವಿತ್ರಿಬಾಯಿ ಫುಲೆ
ಆತ್ಮಸ್ಥೈರ್ಯವನ್ನು ಕಳೆದುಕೊಂಡರು. ಆದರೆ ಪತಿಯ ಬೆಂಬಲದಿಂದಾಗಿ ತಮ್ಮ ಕಾರ್ಯವನ್ನು ಮುಂದುವರಿಸಿದರು.
ನಿಧಾನವಾಗಿ ಮತ್ತು ಕ್ರಮೇಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅಂತಿಮವಾಗಿ, ಬ್ರಿಟಿಷ್ ಸರ್ಕಾರವು
ಸಾವಿತ್ರಿಬಾಯಿ ಫುಲೆಯವರನ್ನು ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಿತು. ಒಮ್ಮೆ ಜ್ಯೋತಿಬಾ ಫುಲೆ ಗರ್ಭಿಣಿ ವಿಧವೆ
ಮಹಿಳೆಯನ್ನು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ತಪ್ಪಿಸಿದರು ಮತ್ತು ಮಗು ಜನಿಸಿದ ಮೇಲೆ ತನ್ನ ಹೆಸರನ್ನು ನೀಡುವುದಾಗಿ
ಭರವಸೆ ನೀಡಿದರು. ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಫುಲೆ ಆ ಮಗುವನ್ನು ದತ್ತು ತೆಗೆದುಕೊಂಡು ಅವನಿಗೆ
ಯಶವಂತರಾವ್ ಎಂದು ಹೆಸರಿಟ್ಟರು. ಅವನು ಬೆಳೆದು ವೈದ್ಯನಾದನು. ಈ ಘಟನೆಯು ದಂಪತಿಗಳು ಸಮಾಜದಲ್ಲಿನ
ವಿಧವೆಯರಿಗೆ ಸೇವೆ ಸಲ್ಲಿಸಲು ಗಂಭೀರ ಕ್ರಮಗಳನ್ನು ಕೈಗೊಳುವಂತೆ ಮಾಡಿತು.
1852ರಲ್ಲಿ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಅವರನ್ನು ಶಿಕ್ಷಣ ಕ್ಷೇತ್ರದಲ್ಲಿನ ಅಸಾಮಾನ್ಯ ಸೇವೆಗಾಗಿ ಸನ್ಮಾನಿಸಿತು.
ಅವರ ಕವಿತೆಗಳ 2 ಪುಸ್ತಕಗಳು (ಕಾವ್ಯಾ ಫುಲೆ ಮತ್ತು ಭವನ್ ಕಾಶಿ ಶುಭೋದ್ ರತ್ನಾಕರ್) ಮರಣೋತ್ತರವಾಗಿ
ಪ್ರಕಟವಾದವು. ಮಹಿಳಾ ಸಾಮಾಜಿಕ ಸುಧಾರಕರನ್ನು ಗುರ್ತಿಸಲು ಮಹಾರಾಷ್ಟ್ರ ಸರ್ಕಾರವು ಅವರ ಹೆಸರಿನಲ್ಲಿ
ಪ್ರಶಸ್ತಿಯನ್ನು ಸ್ಥಾಪಿಸಿದೆ. 2015ರಲ್ಲಿ ಪುಣೆ ವಿಶ್ವವಿದ್ಯಾಲಯವು ಅವರ ಗೌರವಾರ್ಥವಾಗಿ ಸಾವಿತ್ರಿಬಾಯಿ ಫುಲೆ ಪುಣೆ
ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು. ಮಾರ್ಚ್ 10,1998ರಂದು ಫುಲೆ ಗೌರವಾರ್ಥವಾಗಿ ಅಂಚೆ ಚೀಟಿ
ಬಿಡುಗಡೆ ಮಾಡಿತು.
😷
● ವಿಧಿ 15(1) ನಿರ್ದಿಷ್ಟವಾಗಿ ಲಿಂಗಾಧಾರಿತ ತಾರತಮ್ಯವನ್ನು ನಿಷೇಧಿಸುತ್ತದೆ.
● ವಿಧಿ 15(3) ಮಹಿಳೆಯರ ಪರವಾಗಿ ದೃಢವಾ ದ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯಕ್ಕೆ ಅಧಿಕಾರ ನೀಡುತ್ತದೆ.
● 16ನೇ ವಿಧಿ ಯಾವುದೇ ನಾಗರಿಕರಿಗೆ ಉದ್ಯೋಗ (ಅ) ನೇಮಕಾತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಮಾನತೆಯ
ಅವಕಾಶವನ್ನು ಒದಗಿಸುತ್ತದೆ.
● ವಿಧಿ 39(D) ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಒದಗಿಸುತ್ತದೆ.
● ವಿಧಿ 42 ನ್ಯಾಯಯುತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳನ್ನು ಸುರಕ್ಷಿತಗೊಳಿಸಲು ಮತ್ತು ಮಾತೃತ್ವ
ಪರಿಹಾರಕ್ಕಾಗಿ ರಾಜ್ಯವು ನಿಬಂಧನೆಗಳನ್ನು ಒದಗಿಸುತ್ತದೆ.
ಮೂಲಭೂತ ಕರ್ತವ್ಯಗಳು - ಮೂಲಭೂತ ಕರ್ತವ್ಯಗಳನ್ನು IV-A ಭಾಗದಲ್ಲಿ ಸಂರಕ್ಷಿಸಲಾಗಿದೆ ಮತ್ತು ಭಾರತದ ಜನರು
ಅನುಸರಿಸಬೇಕಾದ ಸಕಾರಾತ್ಮಕ ಕರ್ತವ್ಯಗಳಾಗಿವೆ.ಇದು ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಕರ್ತವ್ಯವನ್ನು
ಒಳಗೊಂಡಿದೆ.
● ವಿಧಿ 51(A) ಭಾರತದ ಎಲ್ಲಾ ಜನರಲ್ಲಿ ಸಾಮರಸ್ಯ ಮತ್ತು ಸಾಮಾನ್ಯ ಸಹೋದರತ್ವದ ಮನೋಭಾವವನ್ನು
ಉತ್ತೇಜಿಸಲು ಮತ್ತು ಮಹಿಳೆಯರ ಘನತೆಗೆ ಅವಹೇಳನಕಾರಿ ಅಭ್ಯಾಸಗಳನ್ನು ತ್ಯಜಿಸಲು ದೇಶದ ನಾಗರಿಕರನ್ನು
ನಿರೀಕ್ಷಿಸಲಾಗುತ್ತದೆ.
● ಸಮಾನ ಸಂಭಾವನೆ ಕಾಯ್ದೆ,1976 - ಮಹಿಳೆಯರು ಮತ್ತು ಪುರುಷರಿಗೆ (ಕಾರ್ಮಿಕರು) ಸಮಾನ ಸಂಭಾವನೆ
ಪಾವತಿಸಲು ಮತ್ತು ತಾರತಮ್ಯವನ್ನು ತಡೆಗಟ್ಟಲು ಉದ್ದೇಶಿಸಿದೆ.
● ವರದಕ್ಷಿಣೆ ನಿಷೇಧ ಕಾಯ್ದೆ,1961 - ವರದಕ್ಷಿಣೆ ಕೊಡುವುದನ್ನು (ಅ) ತೆಗೆದುಕೊಳ್ಳುವುದನ್ನು ನಿಷೇಧಿಸುವ ಕಾಯ್ದೆ.
ಇದು ಜಮ್ಮು-ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಅನ್ವಯಿಸುತ್ತದೆ.
● ಮಾತೃತ್ವ ಪ್ರಯೋಜನ ಕಾಯ್ದೆ,1961 - ಮಗುವಿನ ಜನನದ ಮೊದಲು ಮತ್ತು ನಂತರದ ಕೆಲವು ಅವಧಿಗಳಲ್ಲಿ
ಕೆಲವು ಸಂಸ್ಥೆಗಳಲ್ಲಿ ಮಹಿಳೆಯರ ಉದ್ಯೋಗವನ್ನು ನಿಯಂತ್ರಿಸುವ ಮತ್ತು ಮಾತೃತ್ವ ಲಾಭ ಹಾಗೂ ಇತರ
ಸೌಲಭ್ಯಗಳನ್ನು ಒದಗಿಸುವ ಕಾಯ್ದೆ.
● ಬಾಲ್ಯವಿವಾಹ ನಿಷೇದ ಕಾಯ್ದೆ,2006 - ಬಾಲ್ಯವಿವಾಹ ತಡೆಗಟ್ಟುವುದು ಈ ಕಾಯ್ದೆಯ ಉದ್ದೇಶವಾಗಿದೆ.
● ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ ಮತ್ತು ರಕ್ಷಣೆ) ಕಾಯ್ದೆ, 2013.