Professional Documents
Culture Documents
ಶ್ರೀ ಪುರಂದರದಾಸರು
ಶ್ರೀ ಪುರಂದರದಾಸರು
ಶ್ರೀನಿವಾಸ ನಾಯಕ. ಆಗರ್ಭ ಶ್ರೀಮಂತರ ಕುಟುಂಬದಲ್ಲಿ ಜನಿಸಿದ ಇವರನ್ನು ‘ನವಕೋಟಿ ನಾರಾಯಣ’ ಎಂದೇ ಖ್ಯಾತರಾಗಿದ್ದರು.
ದಾಸ ಪರಂಪರೆಯಲ್ಲಿ ಪದಗಳನ್ನು ರಚಿಸುತಿದ್ದ ಶ್ರೀ ಪುರಂದರದಾಸರು ತಮ್ಮ ಜೀವಿತಾವಧಿಯಲ್ಲಿ ಐದು ಲಕ್ಷ ಹಾಡುಗಳನ್ನು ರಚನೆ
ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; 4,75,000 ಹಾಡುಗಳನ್ನು ರಚಸಿ ಪೌಷ ಕೃಷ್ಣ ಅಮಾವಾಸ್ಯೆಯಂದು ತಮ್ಮ ಅವತಾರ
ಮುಗಿಸಿದರು; ಮುಂದೆ ಅವರ ಮಗ ಮಧ್ವಪತಿದಾಸರು ಉಳಿದ 25,000 ಹಾಡುಗಳನ್ನು ರಚನೆ ಮಾಡಿದರು ಎಂದು
ಹೇಳಲಾಗುತ್ತಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರನ್ನು 'ದಾಸರೆಂದರೆ
ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ.
ಉದರವೈರಾಗ್ಯವಿದು ನಮ್ಮ
ಪದುಮನಾಭನಲ್ಲಿ ಲೇಶಭಕುತಿ ಇಲ್ಲ || ಪ ||
ಕಂಚುಗಾರನಾ ಬಿಡಾರದಿಂದಲಿ
ಕಂಚು ಹಿತ್ತಾಳೆಯ ಪ್ರತಿಮೆಯ ನೆರಹಿ
ಮಿಂಚಬೇಕೆಂದು ಬಹುಜ್ಯೋತಿಗಳನೆ ಹಚ್ಚಿ
ವಂಚಕತನದಲಿ ಪೂಜೆಯ ಮಾಳ್ಪುದು || ೩ ||