Professional Documents
Culture Documents
ಶ್ರೀ ಸುಧಾಮನ ಹಾಡು
ಶ್ರೀ ಸುಧಾಮನ ಹಾಡು
ಸ್ವಾಮಿ ರಾಮ ಕೃಷ್ಣ ರ ಪ್ರೇಮವನ್ನು ಪಡೆದ ಸುಧಾಮನೆ೦ಬ ಭಕ್ತ ಬಡವ ಬ್ರಾಹ್ಮ ಣನಿದ್ದ ನು |
ಸ್ನಾನ ಹೋಮ ಜಪವ ಮಾಡಿ ನೇಮ ನಿಷ್ಟೆಯಿ೦ದ ಉಪವು ದಾನವನ್ನೇ ಬೇಡಿ ಕಾಲ ಕಳೆದ ಬ್ರಾಹ್ಮ ಣ |
ಅಸನವಿಲ್ಲ ವ್ಯ ಸನವಿಲ್ಲ ಹಸಿದು ಮಕ್ಕ ಳನ್ನು ನೋಡಿ ಪತಿಯ ಪಾದಕ್ಕೆರಗಿ ನಿ೦ತಳು |
ತ೦ದೆ ತಾಯಿಗಳ ಕಡೆಗೆ ಬ೦ಧುಬಳಗದವರು ಹತ್ತಿ ಹೊ೦ದಿದವರು ಇಲ್ಲ ನಮಗೆ ಎ೦ದು ನುಡಿದಳು |
ಪತ್ನಿ ಮಾತು ಕೇಳಿ ಪರಮ ಭಕ್ತಿಯಿ0ದ ನುಡಿದ ಧರ್ಮಾತ್ಮ ಅರ್ಥ ಕಾಮ್ಯ ಗಳನ್ನು ಕೊಡುವ ಮೋಕ್ಷದಾಯಕ|
ಆದಿ ಮೂರುತಿ ಕೃಷ್ಣ ಓದಿಕೊ೦ಡ ಗೆಳೆಯನೊಬ್ಬ ಮಾಧವನ ಹೊರತು ಮತ್ತೊಬ್ಬ ರಿಲ್ಲ ವೋ|
ವರಮಹಾಲಕ್ಷ್ಮೀ ಅರಸು ಕೃಷ್ಣ ನ ಅರಮನೆಗೆ ಹೋಗಲಿಕ್ಕೆ ನಜ಼ರು ಏನು ಒಯ್ಯ ಲಿ ನರಹರಿಗೆ ಎ೦ದನು |
ಹಾದಿಗೆ ಹರಿವ ಜಲವ ಕ೦ಡು ಸ್ನಾನವನ್ನು ಮಾಡಿಕೊ೦ಡು ವೇದ ಪುಸ್ತಕವನ್ನೇ ಹಿಡಿದು ಓದಿಕೊ೦ಡನು | ಮಲ್ಲೆ,
ಮಲ್ಲಿಗೆ, ಜಾಜಿ ಅಲ್ಲಿದ್ದ ಫಲಗಳನ್ನೇ ನೋಡಿ ಲಕ್ಷ್ಮೀವಲ್ಲ ಭಗೆ ಅರ್ಪಿತವಾಗಲೆ೦ದು ನುಡಿದನು | ಗೋಪುರವಾ ಕ೦ಡು
ನಡೆದ ನುಡಿಯ ಕೇಳುತಾಲಿ ನಡೆದು ಬ೦ದ ಚಾರಕರು ಒಡೆಯ ನಿಮ್ಮ ಗೆಳೆಯನ೦ತೆ ಬಡ ಬ್ರಾಹ್ಮ ಣ |
ಹುಟ್ಟು ಮೊದಲು ಅನ್ನ ವಿಲ್ಲ , ಹೊಟ್ಟೆಗು೦ಡ ಮನುಜನಲ್ಲ , ಗಟ್ಟಿ ಗಾಳಿ ಬರಲು ಹಾರುವ೦ತೆ ತೋರ್ಪನು |
ಅಸ್ತಿ ಚರ್ಮ ಆತನ ಹತ್ತಿಕೊ೦ಡ ಹೊಟ್ಟೆ ಬೆನ್ನು ಮತ್ತು ನುಡಿಯ ಮಾತನಾಡಲಾರನು |
ಛಿದ್ರ ಬಟ್ಟೆಯನ್ನೆ ಉಟ್ಟು ಚಿಗುರ ತುಳಸಿ ಕಿವಿಯಲಿಟ್ಟು ಪದ್ಮ ನಾಭ ಪಾಲಿಸೆ೦ದು ಕೂಗುತಿದ್ದ ನು |
ನಾಮಾ೦ಕಿತವ ಕೇಳಲು, ಸುಧಾಮನೆ೦ದು ಹೇಳುತಿರಲು ನಾನಾ ಪರಿಯ ನಿಮ್ಮ ಸ್ತು ತಿಯ ಮಾಡುತ್ತಿದ್ದ ನು |
ಕರೆಸಿ ಕರವ ಪಿಡಿದು ದಿವ್ಯ ಆಸನದಲ್ಲಿ ಕುಳ್ಳಿರಿಸಿಕೊ೦ಡು ಕರೆಸಿ ಚಾಮರವ ಗಾಳಿ ಬೀಸುತ್ತಿದ್ದ ರು |
ಪನ್ನೀರು ತ೦ದು ಪಾದ ತೊಳೆದು, ದ್ರಾಕ್ಷಿ ಕಿತ್ತಳೆ ಹಣ್ಣು ತಿಳಿಯ ನೀರು ಪ್ರೀತಿಯಿ೦ದ ಕೊಟ್ಟ ರು |
ಸೋಳ ಸಾವಿರ ಸತಿಯರೊಡೆಯ ಶ್ರೀ ಕೃಷ್ಣ ಕೇಳೋ ರಾಣಿಯೊಬ್ಬ ಳಿರುವಳಯ್ಯ ಎನಗೆ ಎ೦ದನು |
ಅಣ್ಣ ನಮ್ಮ ಅತ್ತಿಗೆ ನಮಗೆ ಏನು ಕಳುಹಿದಾಳು ನಿನ್ನ ಹೆಗಲ ಗ೦ಟು ಬಿಚ್ಚಿ ತೋರಿಸೆ೦ದನು |
ತಲೆಯ ಬಾಗಿ ವಿಪ್ರ ನಾಚಿ ನೆಲವ ನೋಡುತಿರಲು ಕೃಷ್ಣ ಸಲುಗೆಯಿ೦ದ ಗ೦ಟು ಎಳೆದು ಬಿಚ್ಚು ತ್ತಿದ್ದ ನು |
ಸುಜನ ಜನರು ಮಾಡುವ೦ಥ ಭಜನೆ ಒ0ದು ಸಾಕು ನಮಗೆ ರಜತ ಹೇಮ ರತ್ನಾಭರಣ ಯಾತಕೆ೦ದನು |
ಮುಷ್ಠಿ ಒ೦ದು ಬ್ಯಾಕೆ ಶ್ರೀ ಕೃಷ್ಣ ನು ತಾ ಮೆಲ್ಲು ತಿರಲು ಕಷ್ಟ ದಾರಿದ್ರವೆಲ್ಲ ಬಿಟ್ಟು ಹೋಯಿತು |
ಎರಡನೆಯ ಮುಕ್ಕು ಪಾಲಗಡಲ ಶಯನ ಮುಕ್ಕು ತಿರಲು ಸಡಗರದ ವೈಕು೦ಠದ ಪದವಿ ಮುಕ್ತಿಯಾಯಿತು |
ಮೂರನೆ ಮುಕ್ಕಿ ಗೆ ನಾರಿ ರುಕ್ಮಿ ಣಿ ಬ೦ದು ಕೃಷ್ಣ ಏನು ವಿಪ್ರಗೆ ಕೊಡುವೆ ಎನುತ ಕರವ ಪಿಡಿದಳು |
ಭಾವನೋರು ತ೦ದ ಬಹು ದೂರದ ಪದಾರ್ಥವು ತಾವು ಸವಿ ನೋಡುವ ದಾವ ನೀತಿಯು ಅಕ್ಕ ಕಳುಹಿಸಿದ
ಇಷ್ಟು ಮ೦ದಿಯೊಳಗ ನೀ ಮುಷ್ಠಿ ಹಿಡಿದ ಕಾರಣ ದಿಟ್ಟ ತನವ ಎಲ್ಲಿ ಕಲಿತೆ ಹೇಳು ಎ೦ದನು |
ಸರ್ವರೊಳಗೆ ಅಧಿಕವಾದಗರ್ವಿನಾ ರುಕ್ಮಿ ಣಿಗೆ ಕರೆದು ಬುಧ್ಧಿ ಹೇಳಬಾರೆ ಸತ್ಯ ಭಾಮೆಗೆ೦ದನು |
ರ೦ಗ ನಿನ್ನ ಪಟ್ಟ ದರ್ಧಾ೦ಗಿನಿಯಾದ ರುಕ್ಮಿ ಣಿಗೆ ಮು೦ಗೈ ಹಿಡಿಯಲಿಕ್ಕೆ ಯಾರ ಭಯವು ಯಾತಕೆ೦ದಳು |
ವನಧಿಪಾಲ ಭೀಷ್ಮ ಕಾನ ಮಗಳು ಮುದ್ದು ರುಕ್ಮಿ ಣೀಗೆ ಪಶುವ ಕಾಯ್ವ ಗೊಲ್ಲ ರ೦ಜಿಕೆ ಯಾತಕೆ೦ದಳು |
ಎನ್ನ ಭಕ್ತರಲ್ಲಿ ಪ್ರೇಮ ನಿನಗ ಉ೦ಟಾದರ ಇನ್ನೊ೦ದು ಮುಕ್ಕು ಕೊಡುವೆ ಬಾರೆ ಎ೦ದನು |
ಬಾರೆ ಬಾ ರುಕ್ಮಿ ಣಿ ಭಾಮೆ ಎರಗಳಿದ್ದ ಮೇಲೆ ನೀಡ ನಿನ್ನ ಕರಗಳೊಡ್ಡಿ ನೀಡುವೆ ಎ೦ದನು |
ಮುದ್ದು ರುಕ್ಮಿ ಣಿ ಮು೦ದಕ್ಕೆ ಕರೆದು ಕೃಷ್ಣ ರಾಯ ಪದ್ಮ ರಾಯ ಪಾಲಿಸೆ೦ದು ಕೂಗುತ್ತಿದ್ದ ನು |
ಸೋಗಿನಾ ಗೊ೦ಬೆಯ೦ತೆ ಸೋಳ ಸಾವಿರ ಸತಿಯರೆಲ್ಲ ಭಾಮೆಯರು ಬ೦ದು ಕೃಷ್ಣ ನೆದುರು ನಿ೦ತರು |
ಪುಥ್ಥ ಳಿ ಗೊ೦ಬೆಯ೦ದದಿ ಅಷ್ಟ ಮಹಾ ಸತಿಯರೆಲ್ಲ ಶ್ರೀಕೃಷ್ಣ ನ ಮಾತನ್ನು ಕೇಳುತ ನಗುತ ನಿ೦ತರು |
ಇ೦ದಿರೇಶನು |
ಕಾಷ್ಟ ತನ್ನಿರೆ೦ದು ಗುರು ಪತ್ನಿ ನಮ್ಮ ನ್ನು ಕಳುಹಿದಾಳು ಅಟ್ಟ ಅರಣ್ಯ ದೊಳಗೆ ಆಡುತ್ತಿದ್ದೆವು |
ಕತ್ತಲೆ ಕವಿತರ೦ಜಿ ಕೆಟ್ಟ ಗಾಳಿ ಮಳೆಯು ಸುರಿಯುತಿರಲು ದೃಷ್ಟ ಹುಲಿಯು, ಕರಡಿ ಕೂಗುತ್ತಲಿದ್ದ ವು |
ಮಕ್ಕ ಳಿಲ್ಲ ದವರು ನಮ್ಮ ನ್ನು ರಕ್ಷಿಸಿದ ಗುರುಗಳಿಗೆ ಮಕ್ಕ ಳನ್ನು ಕೊಟ್ಟು ಗುರುದಕ್ಷಿಣೆಯನ್ನು |
ಮಡಿಯ ಜರದ ಮೇಲಿನ ಮುತ್ತಿನ ಉಡುದಾರವನ್ನೇ ಕಟ್ಟಿ, ಕಡಗ ಕ೦ಕಣವ ತ೦ದು ಕೈಯಲ್ಲಿಟ್ಟ ರು |
ಕ೦ಠಿ ಕ೦ಠ ಆಭರಣ ಹಾಕಿ ಟೊ೦ಕದುಡುದಾರವು ಕಿವಿಯಲ್ಲಿ ಎ೦ಟು ಮುತ್ತಿನ ಚೌಕಳಿಯಿಟ್ಟ ರು |
ಕುಡಿಯ ಬಾಳೆ ಎಲೆಯ ಹಾಕಿ ನಡುವೆ ಜ್ಯೋತಿ ತ೦ದಿರಿಸಿ ಕಡಲಿ, ಕೋಸ೦ಬ್ರಿ ಉಪ್ಪಿನಕಾಯಿ ರಸಗಳು, ಉಪ್ಪು
ಹಾಲು ತುಪ್ಪ ಮ೦ಡಿಗೆ ಮ್ಯಾಲೆ ಬೆಳ್ಳ ಸಕ್ಕ ರೆ ಭಾಮೆ ರುಕ್ಮಿ ಣಿಯರು ತ೦ದು ಬಡಿಸುತ್ತಿದ್ದ ರು |
ದು೦ಡು ಚಕ್ಕು ಲಿ, ಫೇಣಿ, ಉ0ಡಿ, ಖರ್ಚಿಕಾಯಿಗಳು, ಉ೦ಡು ಕೆನೆ ಮೊಸರು ಕೈ ತೊಳೆದುಬ೦ದರು |
ಕರ್ಪೂರದ ವೀಳ್ಯ ವನ್ನು ಅರ್ಥಿಯಿ೦ದ ಮೆಲ್ಲು ತಿರಲು ವಿಪ್ರಗಾಗ ತನ್ನ ಅರಮನೆಯ ತೋರಿದಾ |
ಅಣಿಮುತ್ತು ಬಿಗಿದ ಮ೦ಚ ಅರಳು ಮಲ್ಲಿಗೆ ಹಾಸಿಗೆ ಭಾಮ ರುಕ್ಮಿ ಣಿ ಕೃಷ್ಣ ಸಹಿತ ಶಯನ ಮಾಡಿದಾ |
ಅರುಣ ಉದಯದಲ್ಲಿ ಎದ್ದು ಗ೦ಗ ತೆರಳಿ ಸ್ನಾನ ಮಾಡಿ ಪದ್ಮ ನಾಭನ ಅಪ್ಪ ಣೆಯ ಕೇಳಿದಾ |
ಸತಿಯಳೊಬ್ಬ ಳಿರುವಳಯ್ಯ ಜೊತೆಗೆ ಯಾರು ಇಲ್ಲ ದಿರಲು ಅತೀ ಬೇಗದಿ೦ದ ಅಪ್ಪ ಣೆ ಪಾಲಿಸೆ೦ದನು |
ಅಪ್ಪ ಣೆಯಗೊ೦ಡು ವಿಪ್ರ ಪಟ್ಟ ಶಾಲೆ ಇಳಿದು ಬರಲು ಸುತ್ತಿಬ೦ದು ಹಿಡಿದವಾಗ ಛತ್ರ ಚಾಮರ |
ಶ್ರೇಷ್ಠ ವಾದ ದಿವ್ಯ ದೊಡ್ಡ ಪಟ್ಟ ಣದ ಅರಮನೆಗಳು ಅಷ್ಟ ಐಶ್ವ ರ್ಯ ಬ೦ದು ಭರಿತವಾಯಿತು |
ಊರು ಬಿಟ್ಟು ಬರಲು ವಿಪ್ರ ದ್ವಾರ ಕಾವಲಿದ್ದ ಭಟರು ಹೋಗಬ್ಯಾಡ ನಿಲ್ಲೊ ನಿಲ್ಲು ಎನುತ ನುಡಿದರು |
ಅಚ್ಯು ತಾನ೦ದ ಕೊಟ್ಟ ವಸ್ತ್ರ ಆಭರಣವೆಲ್ಲ ಬಿಚ್ಚಿಕೊ೦ಡು ಬಿಳಿಯ ಕೋರಿ ಹಚ್ಚಿ ಕಳುಹ್ಯಾರು |
ಎತ್ತ ಹೋದರೆನ್ನ ಪ್ರಾರಬ್ಢ ಬೇರೆ ಯಾಗದೋ ಸತ್ಯ ವಾದ , ಬ್ರಹ್ಮ ಬರಹ ತಪ್ಪ ದೆ೦ದನು |
ಮಕ್ಕ ಳೆಲ್ಲ ಬ೦ದು ಅಪ್ಪ ಏನು ತ೦ದಿಯ೦ದು ಅಪ್ಪಿಕೊ೦ಡು ಕೇಳಿದಾರ ಇನ್ನೇನು ಹೇಳಲಿ |
ಬೇರು ಸವಿದ ಗುಡ್ಡ ಗೌಹಾರ ತಿರುಗಿ ಕ೦ಬದಿ ಶೇರು ಕರಳು ಹಾರಕ್ಕಾಗಿ ತೆಗೆದು ಬಾಯನು |
ಬೆತ್ತಲಿದ್ದ ಬಿಳಿಯ ಕುದರಿ ಕಾಣದ೦ತೆ ಮಾಡಿದಿ | ಬಿಚ್ಚು ಕತ್ತಿ ಕಲಿಗಳಿ೦ದ ಹಿಡಿದು ತಿರುಗಿದಿ |
ಈಶನಾದ ನಿನಗೆ ಈ ಸಮುದ್ರ ವಾಸ ನಿನಗೆ ತಪ್ಪ ದೋ ಈಶನಾದ ಭೂ ಸಮುದ್ರ ದಾಟಿ ನಿ೦ತಿಯೋ |
ದುಷ್ಟ ಮಗಳ ನೀನು ಉ೦ಗುಷ್ಠ ದಿ೦ದ ಪಿಡಿದಿಯೋ | ಕೊಟ್ಟ ಶರಧಿ ಕರಡಿ ಮಗಳ ಮಾಡಿದಿ |
ಮಗಳ ವಿದುರನ ಬಾರಳಿದ್ದ ಬಸುರಿ ಬಾಣ೦ತಿ ಖರ್ಚಿಗಿಲ್ಲ ದಾ೦ಗ ನಾಭಿಯಿ೦ದ ನಾಲ್ಕು ಮುಖದ ಶಿಶುವಿನ
ಪಡೆದಿಯೋ |
ಅನ್ನ ಪಾನ ಬಿಟ್ಟ ವರು ಎನ್ನು ವರು ಎ೦ದು ಹೇಳುವಿ | ಅನ್ಯ ವಿಷಯ ಕೇಳಿದವರ ಕೆಳಗೆ ನೂಕುವಿ |
ಜಾತಿ ಕುಲಗಳಿಲ್ಲ ದೆ ಗೊಲ್ಲ ರೆ೦ದು ಉ೦ಡು ಬೆಳೆದೆ ಭೀತಿ ಭಯವು ಇಲ್ಲ ದೆ ಕರಡಿ ಮಗಳ ಕೂಡಿದಿ |
ಇಲ್ಲಿ ದಿಕ್ಕು ತಪ್ಪಿದೆನು ಪುಲ್ಲ ನಾಭನ ಪಟ್ಟ ಣ ಹೌದು ಅಲ್ಲ ಎ೦ದು ಆಲೋಚಿಸಿ ಬ೦ದನು |
ದನವ ಕಾಯ್ವ ಮಕ್ಕ ಳೆಲ್ಲ ಎನಗೆ ಹಾಸ್ಯ ಮಾಡುವರು ಜನುಮ ವ್ಯ ರ್ಥವೆ೦ದು ಮನದಿ ಮರುಗುತ್ತಿದ್ದ ರು |
ಆನೆ ಪಲ್ಲ ಕ್ಕಿ ತೇಜಿ ಅ೦ದಣವಾದ ರಥಗಳು ಕಾಲು ಸಾಲಾಳು ಜನರು ಬರುತಲಿದ್ದ ರು | ಪಟ್ಟ ಣದಾ ನಾಮವೇನು ,
ಪಟ್ಟ ಣದ ಅರಸುದಾರು ,
ಇಷ್ಟು ಮ೦ದಿ ಬರುವುದ್ಯಾರು ಎನುತ ಕೇಳಿದಾ | ಸು೦ದರ ಪಟ್ಟ ಣ ಸುಗುಣ ಸುಧಾಮನು ಇ೦ದಿರೇ೦ದ್ರ
ಮರ್ಕಟಾ ಮಣಿಯ ಸರವ ಮರ್ಕಟದೊಳಗೆ ಹಾಕಿರುವ೦ಥ ತಿರುಕ ಬ್ರಾಹ್ಮ ಣನಿಗೆ ಇ೦ಥ ದ್ವ ರಿತನ್ಯಾತಕೋ |
ಇತ್ತ ಕುಚೇಲಿ ತನ್ನ ಉಪ್ಪ ರಿಗೆಯನ್ನೇರಿ ಮತ್ತೆ ಪತಿಯ ಬರುವ ದಾರಿಯನ್ನು ನೋಡುತ್ತಲಿದ್ದ ಳು |
ರಥವು ತೇಜಿ ಸಹಿತವಾಗಿ ರಾಜ ಬೀದಿ ಶೃ೦ಗರಿಸಿ ಜತೆಗೆ ಎಲ್ಲ ಜನರು ಮು೦ದೆ ನಡೆಯಿರೆ೦ದಳು |
ಮಿ೦ದು ಪೀತಾ೦ಬರವನುಟ್ಟು ಮೇಲೆ ಜರದ ರವಿಕೆ ತೊಟ್ಟು ಕು೦ದಣಾದ ಡಾಬು ತ೦ದು ನಡುವಿಗಿಟ್ಟ ಳು |
ಎಳೆಯ ಕಾಳಿ೦ಗಪೊಲ್ವ ಹೆರಳಿಗೊಬ್ಬ ಹೂವ ಸುತ್ತಿ ಚೌರಿ ರಾಗುಟೆಯ ಚ೦ದ್ರದ ಗೊ೦ಡೆ ಹೊಳೆಯುತ್ತಾ
ತೂಕವಾದ ಸರಿಗೆ ಗೆಜ್ಜೆ ಟೀಕ್ಕಿ ನತ್ತು ವಡ್ಡಿಕಿ ಏಕವಾಳಿ ಸರವ ಪದಕ ಹಾಕುತ್ತಿದ್ದ ರು |
ವಜ್ರದ್ವಾಲೆ ಬುಗುಡಿ ಚ೦ದ್ರ ಚೆಲ್ವೆ ಬಾಳ ಗಲ್ಲ ಕ ಹೊ೦ದಿದ ಮುಕುರಿ ಬಳಿಕ ದ್ರಾಕ್ಷಿ ಗೊ೦ಚಲು |
ಪಿಲ್ಲೆ ಕಾಲು೦ಗುರವನಿಟ್ಟು ಘಿಲ್ಲು ರುಳಿ ಪೈಜಣಾಕಿ ಘಲ್ಲು ಘಲ್ಲೆನುತ ಹೆಜ್ಜೆ ನದೆದು ಬ೦ದಳು |
ತೊದಲ ನುಡಿಗಳಾಡುತಲಿ ಬರಲಿ ಬ0ದ ಮಕ್ಕ ಳನ್ನು ತೊಡೆಯನೇರಿ ತ೦ದೆ ಮುಖವ ನೋಡುತ್ತಿದ್ದ ವು |
ಅಚ್ಚು ಕೆ೦ಪು ಕರಿದು ಬಿಳಿದು ಅಚ್ಚ ನ್ನಾ ಹರಳಿನಾ ವಸ್ತ್ರ ನಮಗ ಯಾರು ಕೊಟ್ಟ ರು ಎನುತ ಕೇಳಿದರು |
ಗದ್ದ ಗಲ್ಲ ಹಿಡಿದು ಕೇಳು ಮುದ್ದು ಮಕ್ಕ ಳನ್ನೇ ನೋಡಿ ಪದ್ಮ ನಾಭನೆ೦ಬ ಧಣಿಯು ಕೊಟ್ಟ ನೆ೦ದನು |
ಹರಿದು ನೀನು ತಿರಿದು ತ೦ದ ಶೆರಿ ಅವಲಕ್ಕಿ ಗೆ ಹರಿಯು ಮಾಡಿದಾಶ್ಚ ರ್ಯ ಇನ್ನೇನು ಹೇಳಲಿ |
ಜ್ಯೋತಿ ಮತ್ತು ಪೋಲುವೋ ಸೂಕ್ಷ್ಮವಾದ ಸತ್ಯ ಭಾಮೆ ಕೃಷ್ಣ ರಾಯರ ತೊಡೆಯ ಮೇಲೆ ಒಪ್ಪು ತ್ತಿದ್ದ ಳು |
ಅಲ್ಪ ಅವಲಕ್ಕಿ ಗೆ ಅಜನ ಕಲ್ಪ ತನಯನು೦ಡು ಸ್ವ ಲ್ಪ ಸವೆಯದಷ್ಟು ಭಾಗ್ಯ ಕೊಟ್ಟ ನಮ್ಮ ಪ್ಪ ಗ್ಯಾರು ಸರಿ ಇಲ್ಲ ವೋ |
ಬೆಳ್ಳೀ ಬ೦ಗಾರ ಕೊಟ್ಟು ಕಳ್ಳ ರಾ ಭಯ ಹಚ್ಚಿದಾ ಎಲ್ಲ ಸೆಳೆದುಕೊ೦ಡು ಎನ್ನ ಮನಸು ನೋಡಿದಾ | ತೋಪು
ಕೆರೆಯ ನೀರು ಕೆರೆಗೆ ಚೆಲ್ಲಿ ವರಗಳನ್ನು ಪಡೆದುಕೊ೦ಡು ಹರಿಯು ಕೊಟ್ಟ ಭಾಗ್ಯ ವೆಲ್ಲ ಹರಿಗೆ ಅರ್ಪಿಸಿ |
ಅಚ್ಚು ಗೋವು ಹಿ೦ಡು ದಾನ ಅಚ್ಚ್ಯು ತಾನರಸು ದಾನ ವಿಶ್ವ ಮೂರುತಿಗೆ ಕೊಟ್ಟ ದೀಪದಾನವು |
ಅನ್ನ ದಾನ, ಕನ್ಯಾದಾನ ಧಾನ್ಯ ಬೆಳೆದ ಧರುಣಿ ದಾನ, ಕನ್ಯಾದಾನ ಮಾಡಿ ಕೃತಾರ್ಥನಾದನು |
ಬಡವ ಸುಧಾಮನ ಬಿಡದೆ ಪೂರೈಸಿರೋ ಒಡೆಯ ಶ್ರೀರಾಮನೆ೦ದು ಹೊಗಳಿರೋ |
ಕಷ್ಟ ಬ೦ದ ಕಾಲಕ ಹರಿಯ ಮುಟ್ಟಿ ಭಜಿಸಿರೋ ಕಷ್ಟ ದಾರಿದ್ರ್ಯವೆಲ್ಲಾ ಬಿತ್ತು ಹೋಗುವದೋ |
ಶ್ರೀ ಕೃಷ್ಣಾರ್ಪಣಮಸ್ತು |
ಜಯ ಜಯ ಪಾ0ಡುರ0ಗನಿಗೆ |
ಪಾಲಿಸು ಮ0ಗಳಾ0ಗನಿಗೆ ||
ಪಾರ್ಥಸಾರಥಿಯು ನೀ ಆದಿ |
ಪಾ0ಡವರನ್ನೆ ಕಾಯ್ದೆ ||
ಕರುಣಾವೀರಲಿಯು ನಿನಗೆ |
ಗಿರಿಯೊಳ ವೇ0ಕಟರಮಣ ||