Professional Documents
Culture Documents
2 Gadya 10th Londan Nagara Lesson Notes
2 Gadya 10th Londan Nagara Lesson Notes
com
ಲೇಖಕರ ಪರಿಚಯ :
ಡಾ.ವಿ.ಕೃ.ಗೋಕಾಕ್ ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ . ವಿನಾಯಕ ಕೃಷ್ಣ ಗೋಕಾಕ ( ಕ್ರಿಶ .೧೯೦೯ )
ಇವರು ಹಾವೇರಿ ಜಿಲ್ಲೆಯ ಸವಣೂರಿನವರು . ವಿ.ಕೃ.ಗೋಕಾಕ ಅವರು ಸಮುದ್ರಗೀತೆಗಳು , ಪಯಣ , ಉಗಮ , ಇಷ್ಟೊಡು ,
ಸಮರಸವೇ ಜೀವನ , ಭಾರತ ಸಿಂಧುರಶ್ಮಿ ಮೊದಲಾದ ಕೃತಿಗಳನನ್ನು ರಚಿಸಿದ್ದಾರೆ . ಇವರ ' ದ್ಯಾವಾ ಪೃಥಿವೀ ' ಕೃತಿಗೆ ಕೇಂದ್ರ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ . ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ , ಬೆಂಗಳೂರು
ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ , ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ , ಭಾರತ ಸರ್ಕಾರ ಪದ್ಮಶ್ರೀ : ಮುಂತಾದ
ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ .
ಉ : " ಚೇರಿಂಗ್ ಕ್ರಾಸ್ ' ಎಂಬುದು ಅಂಗ್ಲ ಸಾಮಾಜ್ಯದ ವೈಭವ ಕಂಡುಬರುವ ಓಣಿಯಾಗಿದೆ .
ಉ : ' ವೂಲವರ್ಥ ' ಎಂಬ ಸ್ಟೇಷನರಿ ಅಂಗಡಿಯಲ್ಲಿ ಬೂಟು , ಕಾಲುಚೀಲ , ಚಣ್ಣ , ಸಾಬೂನು , ಔಷಧ , ಮಸ್ತಕ , ಆಡಿಗೆಯ
ಪಾತ್ರೆ , ಇಲೆಕ್ಟಿಕ್ ದೀಪದ ಸಾಮಾನು , ಫೋಟೋ , ಅಡವಿಯ ಹೂವು , ಯುದ್ಧಸಾಮಗ್ರಿ ಎಲ್ಲವೂ ಇಲ್ಲಿ ದೊರೆಯುತ್ತವೆ .
ಉ : ಲಂಡನ್ನಿನ ಯಾವುದಾದರೊಂದು ದೊಡ್ಡ ಅಂಗಡಿಗೆ ಹೋದರೆ ಅಲ್ಲಿಯ ಟೈಪಿಸ್ ಕಾರಕೂನ , ಒಬ್ಬ ಹೆಣ್ಣು ಮಗಳು ,
ಸಿನಿಮಾ ಗೃಹದಲ್ಲಿ ನಿಮ್ಮ ಜಾಗವನ್ನು ಹುಡುಕಿಕೊಡುವವರು ಹೆಣ್ಣು ಕಾಲೇಜಿನಲ್ಲಿ ಸಹ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ
ಸಿಪಾಯಿಣಿಯರನ್ನು ಇಟ್ಟಿದ್ದಾರೆ !
ಉ : ಪೊಯೆಟ್ ಕಾರ್ನರ್ ನಲ್ಲಿ ಕಿಪ್ಲಿಂಗ್ , ಹಾರ್ಡಿ , ಮ್ಯಾಕಾಲೆ , ಜಾನ್ಸನ್ , ಗೋಲ್ಡ್ಸ್ಟಿಕ್, ಡ್ರಾಯ್ಡನ್ , ಬೆನ್ಜಾನ್ಸನ್ ,
ವರ್ಡ್ಸ್ವರ್ತ್ , ಮೊದಲಾದ ಕವಿಗಳ ಸಮಾಧಿಗಳಿವೆ .
2. ' ವೆಸ್ಟ್ ಮಿನ್ಸ್ಟರ್ಅಭೆ ' ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ ವಿವರಿಸಿ ,
ಉ : ' ವೆಸ್ಟ್ ಮಿನ್ಸ್ಟರ್ಅಜೆ ' ಎಂಬ ಪ್ರಾರ್ಥನಾ ಮಂದಿರ ಕನಿಷ್ಟ ಒಂದು ಸಾವಿರ ವರ್ಷದಷ್ಟು ಪುರಾತನವಾದ ಮಂದಿರ ,
ಕೆಲವೊಂದು ಭಾಗಗಳ ದುರಸ್ತಿಯನ್ನು ಬಿಟ್ಟರೆ ಇಂದಿಗೂ ಅಚ್ಚಳಿಯದೆ ಉಳಿದಿದೆ . ಇಲ್ಲಿ ಸಂತ , ಸಾರ್ವಭೌಮರು ಮಲಗಿರುವರು ;
ಕವಿಪುಂಗವರು ಒರಗಿರುವರು . ಸತ್ತವರ ಸ್ಮಾರಕವೆಂದು ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ
ಇರಲಾರದು . " Mortality behold and fear What a litt'r of tombs is here . " ( ಮರ್ತ್ಯತ್ವವೇ ಎಷ್ಟು
ಗೋರಿಗುಂಪುಗಳಿವೆ ನೋಡಿ ಅಂಜು ) ಎಂದು ೩೦೦ ವರ್ಷಗಳ ಹಿಂದೆ ಬ್ಯೂಮಾಂಟ್ ಎಂಬ ಕವಿಯು ಹಾಡಿದನು , ಗೋಲ್ಡ್ಸ್ಟಿತ್
ಹಾಗು ಎಡಿಸನ್ ಎಂಬ ಪ್ರಖ್ಯಾತ ಸಾಹಿತಿಗಳು Visit to West Minster Abbey . ( ವೆಸ್ಟ್ಮಿನ್ಸ್ಟರ್ ಅಬೆಯ ಸಂದರ್ಶನ )
ಎಂಬ ವಿಷಯದ ಮೇಲೆ ಉತ್ತಮವಾದ ನಿಬಂಧಗಳನ್ನು ಬರೆದಿದ್ದಾರೆ . ಇಂದಿಗೂ ಇದು ಕಬ್ಬಿಗರ ಸ್ಫೂರ್ತಿಯ ತವರುಮನೆಯಾಗಿದೆ
. ಹೊರಗಿನಿಂದ ಉತ್ತಮವಾಗಿ ಶೃಂಗರಿಸಲಾಗಿದ್ದು ಒಳಗೆ ಕಟ್ಟಡವು ಭವ್ಯವಾಗಿದೆ . ಅಲ್ಲಿ ಸಾಗುವ ಹಾದಿಯ ಎಡಬಲಕ್ಕೆ
ರಾಜಕಾರಣ ಚತುರರ ಶಿಲಾಮೂರ್ತಿಗಳಿವೆ . ಅಲ್ಲಿ Earl of Chatham ( ಅರ್ಲ್ ಆಫ್ ಚಾಟ್ಹಾಂ ) ಗ್ಯಾಡ್ಸ್ಟನ್ , ಮಾಲ್ಟ್
ಡಿಸ್ರೇಲಿ ಮೊದಲಾದವರ ಪ್ರತಿಮೆಗಳಿವೆ . ಪಾದ್ರಿಯ ಆಸನದ ಕಡೆಗೆ ಉತ್ತಮವಾದ ಕೆತ್ತನೆಯ ಕೆಲಸವು ಕಣ್ಣಗೆ ಬಿತ್ತು ,
ಬಂಗಾರದ ಬಣ್ಣವನ್ನು ಅದಕ್ಕೆ ಕೊಟ್ಟಿದ್ದರು .
ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ. ಗೋಕಾಕ ಆವರ ' ಸಮುದ್ರದಾಚೆಯಿಂದ ' ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ '
ಲಂಡನ್ ನಗರ ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಲಂಡನ್ ನಗರದ ಬೀದಿಯಲ್ಲಿ ಲಕ್ಷಾನುಲಕ್ಷ ಜನರು
ಸ್ವಾರಸ್ಯ : ಸಮಯಕ್ಕೆ ಬಹಳ ಪ್ರಾಮುಖ್ಯತೆ ಇದೆ . ಅದರಲ್ಲೂ ವಿದೇಶಗಳಲ್ಲಿ ಸಮಯವೇ ಹಣ ಎಂಬ ಮಾತು ಅಕ್ಷರಶಃ
ನಿಜವಾಗಿದೆ ಎಂಬ ಮಾತು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ.ಗೋಕಾಕ ಅವರ ' ಸಮುದ್ರದಾಚೆಯಿಂದ ' ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ '
ಲಂಡನ್ ನಗರ ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ ; ಲಂಡನ್ ನಗರ ಪ್ರವಾಸ ಕಥನದ ಕೊನೆಯಲ್ಲಿ
ಪ್ರವಾಸದ ಶೈಕ್ಷಣಿಕ ಮಹತ್ವವನ್ನು ತಿಳಿಸುವ ಸಂದರ್ಭದಲ್ಲಿ ಪ್ರವಾಸದಿಂದ ತಮ್ಮ ಮನಸ್ಸು ವಿಕಾಸಹೊಂದಿ , ದೃಷ್ಟಿಕೋನ
ವಿಶಾಲವಾದ ಬಗ್ಗೆ ' ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ' ಎಂದು ಬೇಕನ್ ಹೇಳಿದ ಮಾತನ್ನು ಇಲ್ಲಿ ಲೇಖಕರು
ಉದಾಹರಿಸಿದ್ದಾರೆ .
ಸ್ವಾರಸ್ಯ : ' ದೇಶ ಸುತ್ತು ಕೋಶ ಓದು ' ಎಂಬ ಮಾತಿನಂತೆ ಪರಿಪೂರ್ಣ ಶಿಕ್ಷಣಕ್ಕೆ ಪ್ರವಾಸ ಅತಿ ಮುಖ್ಯ . ಆದ್ದರಿಂದ ಈ ಮಾತು
ಪ್ರವಾಸದ ಮಹತ್ವವನ್ನು ತಿಳಿಸುತ್ತದೆ .
3. “ ಯಾರನ್ನು ತುಳಿದರೇನು ! ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೆ ! ಮಣ್ಣು ಮಣ್ಣು ! "
ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ.ಗೋಕಾಕ ಅವರ ' ಸಮುದ್ರದಾಚೆಯಿಂದ ' ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ '
ಲಂಡನ್ ನಗರ ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ' ವೆಸ್ಟ್ ಮಿನ್ಸ್ಟರ್ಅಬೆ ' ಎಂಬ ಪಾರ್ಥನಾ
ಮಂದಿರದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಕವಿಗಳ , ಸಾರ್ವಭೌಮರ ನೆನಪಿಗಾಗಿ ಕಲ್ಲುಹಾಸುಗಳನ್ನು ಇಟ್ಟಿದ್ದು ಅವುಗಳ ಮೇಲೆ
ನಡೆದು ಹೋಗಬೇಕಾಗಿತ್ತು . ಅವುಗಳ ಬಳಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಲೇಖಕರು " ಯಾರನ್ನು ತುಳಿದರೇನು ? ಎಲ್ಲಿ
ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೆ ಮಣ್ಣು , ಮಣ್ಣು ! ಎಂದು ಮನಸ್ಸಿಗೆ ಬಂದಂತೆ ಮನುಷ್ಯನು ನಡೆಯಹತ್ತುತ್ತಾನೆ " ಎಂದು
ಹೇಳಿದ್ದಾರೆ .
ಸ್ವಾರಸ್ಯ : ಸಾಧಕರ ಮಾರ್ಗದಲ್ಲಿ ನಡೆವಾಗ ಮಾನವನ್ನು ದಿಕ್ಕುತಪ್ಪಿದಂತಾದಾಗ “ ಎಲ್ಲವೂ ಅಷ್ಟೇ ! ಬರಿಯ ಮಣ್ಣು " ಎಂದು
ಮನಸ್ಸಿನಲ್ಲಿ ಮೂಡುತ್ತದೆ . ನಶ್ವರವಾಗಿ ಕಾಣುತ್ತದೆ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
” ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ. ಗೋಕಾಕ ಅವರ ' ಸಮುದ್ರದಾಚೆಯಿಂದ ' ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ
ಲಂಡನ್ ನಗರ ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಲೇಖಕರು ಲಂಡನ್ ನಗರದ ಬೀದಿಬೀದಿಯಲ್ಲೂ
ಇತಿಹಾಸ ಪ್ರಸಿದ್ಧ ಪುರುಷರ ಪ್ರತಿಮೆಗಳನ್ನು ನೋಡಿ ' ತಮ್ಮ ದೇಶಕ್ಕಾಗಿ ಜೀವನವನ್ನು ಲೆಕ್ಕಿಸದೆ ದುಡಿದವರು ನಿಂತು ಕೈಯೆತ್ತಿ “
ನಿಮ್ಮ ದೇಶದ ಗೌರವವನ್ನು ಕಾಯಿರಿ ! ಇದು ದೊಡ್ಡದಾದ ರಾಷ್ಟ್ರ " ಎಂದು ಹೇಳುತ್ತಿರುವಂತೆ ತೋರುತ್ತದೆ ' ಎಂದು ಈ
ಸಂದರ್ಭದಲ್ಲಿ ಹೇಳಿದ್ದಾರೆ .
ಭಾಷಾ ಚಟುವಟಿಕೆ
ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ ,